ಜೈನ ಮುನಿ ರಾಷ್ಟ್ರಸಂತ್ ಪ್ರವರ್ತಕ್ ಶ್ರೀ ರೂಪ್‍ಮುನೀಜಿ ಮಹಾರಾಜ್ ನಿಧನ
ಮೈಸೂರು

ಜೈನ ಮುನಿ ರಾಷ್ಟ್ರಸಂತ್ ಪ್ರವರ್ತಕ್ ಶ್ರೀ ರೂಪ್‍ಮುನೀಜಿ ಮಹಾರಾಜ್ ನಿಧನ

August 19, 2018

ಮೈಸೂರು:  ಜೈನ ಮುನಿ, ರಾಷ್ಟ್ರಸಂತ ಹಾಗೂ ಸ್ಥಾನಕವಾಸಿ ಜೈನ ಶ್ರಮನ್ ಸಂಘದ ಪ್ರವರ್ತಕರಾದ ಶ್ರೀ ರೂಪ್‍ಮುನೀಜಿ ಮಹಾರಾಜ್ `ರಜತ್’ ಅವರು ನಿನ್ನೆ ಮಧ್ಯರಾತ್ರಿ ಗುಜರಾತ್‍ನ ಅಹಮದಾಬಾದ್‍ನಲ್ಲಿ ನಿಧನರಾದರು. ಅವರು ಹಲವರು ದಿನಗಳಿಂದ ಅನಾರೋಗ್ಯಪೀಡಿತರಾಗಿದ್ದರು.

ರೂಪ್‍ಮುನೀಜಿ ಅವರಿಗೆ 94 ವರ್ಷ ವಯಸ್ಸಾಗಿತ್ತು. ಚಿಕ್ಕ ವಯಸ್ಸಿನಲ್ಲಿಯೇ ದೀಕ್ಷೆ ಪಡೆದುಕೊಂಡ ಇವರು ಸುದೀರ್ಘವಾಗಿ ಆಧ್ಯಾತ್ಮಿಕ ಚಟುವಟಿಕೆಯಲ್ಲಿ ತೊಡಗಿದ್ದರು. ಯುವಾಚಾರ್ಯ ಮರುಧರ್ ಕೇಸರಿ ಶ್ರೀ ಮಿಶ್ರಿಮಾಲಜೀ ಮಹಾರಾಜ್ ಅವರ ಶಿಷ್ಯರಾದ ಇವರು ಶ್ರಮಣ್ ಸಂಘದ ಕೋರ್ ಕಮಿಟಿಯ ಸದಸ್ಯರಲ್ಲಿ ಒಬ್ಬರಾಗಿದ್ದರು.

ರಾಜಸ್ಥಾನದ ಪಾಲಿ ಜಿಲ್ಲೆಯ ಜೈತರನ್‍ನಲ್ಲಿ ಮೃತರ ಪಾರ್ಥಿವ ಶರೀರವನ್ನು ಭಕ್ತಾದಿಗಳ ಅಂತಿಮ ದರ್ಶನಕ್ಕಾಗಿ ನಾಳೆ (ಆ. 19 ರಂದು) ಮಧ್ಯಾಹ್ನ 1 ಗಂಟೆಯವರೆಗೆ ಇಡಲಾಗುವುದು. ಮೃತರ ಅಂತ್ಯಕ್ರಿಯೆ ಮಧ್ಯಾಹ್ನ 1.30 ಗಂಟೆಗೆ ಜೈತರನ್‍ನ ಪವನ್ ಧಾಮದಲ್ಲಿ ನೆರವೇರಲಿದೆ.

ಮೃತರ ನಿಧನಕ್ಕೆ ಆ. 20 ರಂದು ಬೆಳಿಗ್ಗೆ 9 ಗಂಟೆಗೆ ಮೈಸೂರಿನ ಹಳ್ಳದಕೇರಿಯಲ್ಲಿರುವ ಶ್ರೀ ಸ್ಥಾನಕವಾಸಿ ಜೈನ್ ಭವನದಲ್ಲಿ ಸಂತಾಪ ಸಭೆ ನಡೆಯಲಿದೆ. ಡಾ. ಶ್ರೀ ಸಮಕಿತ್‍ಮುನೀಜಿ ಮಾತನಾಡಲಿದ್ದಾರೆ.

Translate »