ದೇವೇಗೌಡ, ನಿಖಿಲ್ ಸೋಲಿಗೆ ನಮ್ಮ ಪಕ್ಷದವರೇಕಾರಣ: ಜೆಡಿಎಸ್ ನಾಯಕ ಹೊರಟ್ಟಿ
ಮೈಸೂರು

ದೇವೇಗೌಡ, ನಿಖಿಲ್ ಸೋಲಿಗೆ ನಮ್ಮ ಪಕ್ಷದವರೇಕಾರಣ: ಜೆಡಿಎಸ್ ನಾಯಕ ಹೊರಟ್ಟಿ

August 24, 2019

ಹುಬ್ಬಳ್ಳಿ, ಆ.23: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಎಚ್.ಡಿ.ದೇವೇಗೌಡ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಖಿಲ್ ಕುಮರಸ್ವಾಮಿ ಸೋಲಲು ಜೆಡಿಎಸ್ ಪಕ್ಷದ ನಾಯಕರೇ ಕಾರಣ ಎಂದು ಜೆಡಿಎಸ್ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಆರೋ ಪಿಸಿದ್ದಾರೆ. ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಯಾಗಿದ್ದ ಸುಮಲತಾ ಅಂಬರೀಶ್ ವಿರುದ್ಧ ನಮ್ಮ ಪಕ್ಷದ ನಾಯ ಕರೇ ಬಾಯಿಗೆ ಬಂದಂತೆ ಮಾತನಾಡಿದರು. ಇಂತಹ ವರ್ತನೆ ಯಿಂದ ಜನರಿಗೆ ಯಾವ ರೀತಿಯ ಸಂದೇಶ ಹೋಗುತ್ತಿದೆ ಎಂಬುದನ್ನು ಅರ್ಥ ಮಾಡಿ ಕೊಳ್ಳಲಿಲ್ಲ ಎಂದರು. ಸುಮಲತಾ ಗೌಡ್ತಿಯಲ್ಲ, ಗಂಡ ಸತ್ತು ಇನ್ನು ಮೂರು ತಿಂಗಳು ಆಗಿಲ್ಲ ಆಗಲೇ ರಾಜಕೀಯಕ್ಕೆ ಬಂದಿದ್ದಾರೆ ಎಂದೆಲ್ಲ ಬಾಯಿಗೆ ಬಂದಂತೆ ನಮ್ಮ ಪಕ್ಷದ ನಾಯಕರು ಮಾತನಾಡಿದ್ದರಿಂದ, ನಿಖಿಲ್ ಸೋಲುವಂತಾಯಿತು ಎಂದರು. ಅದೇ ರೀತಿ, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸೋಲಿಗೂ ನಮ್ಮ ಪಕ್ಷದ ಮುಖಂಡರೇ ಕಾರಣ. ನನಗೆ ಸಚಿವ ಸ್ಥಾನ ನೀಡಬೇಕಿತ್ತು. ಆದರೆ, ಸಭಾಪತಿ ಸ್ಥಾನ ಕೊಡುತ್ತೇವೆ ಎಂದು ಭರವಸೆ ನೀಡಿದರು. ಆದರೆ, ಯಾವ ಭರ ವಸೆಯನ್ನು ಈಡೇರಿಸಿಲ್ಲ. ನನ್ನಲ್ಲಿ ಸಾಮಥ್ರ್ಯವಿದ್ದರೂ ಅವಕಾಶ ಸಿಗಲಿಲ್ಲ ಎಂದು ಹೊರಟ್ಟಿ ಬೇಸರ ವ್ಯಕ್ತಪಡಿಸಿದರು. ಬಿಜೆಪಿಯವರಿಗೆ ಅಧಿಕಾರ ಹಸ್ತಾಂತರ ಮಾಡದೆ ಜೆಡಿಎಸ್ ನಾಯಕರು ವಚನ ಭ್ರಷ್ಟರಾಗಿದ್ದು ನಿಜ. ಕೊಟ್ಟ ಮಾತಿನಂತೆ ನಡೆದುಕೊಳ್ಳದಿ ರುವುದು ಪಕ್ಷದ ಹಿನ್ನೆಡೆಗೆ ಕಾರಣವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

Translate »