ಜಾಗೃತಿ ಮೂಡಿಸುವಲ್ಲಿ ಎಲ್ಲಾ ಇಲಾಖೆಗಳು ಕೈಜೋಡಿಸಿ: ಡಿಸಿ
ಮೈಸೂರು

ಜಾಗೃತಿ ಮೂಡಿಸುವಲ್ಲಿ ಎಲ್ಲಾ ಇಲಾಖೆಗಳು ಕೈಜೋಡಿಸಿ: ಡಿಸಿ

May 19, 2019

ಮೈಸೂರು: ಗೂಡ್ಸ್ ವಾಹನ ಗಳಲ್ಲಿ ಪ್ರಯಾಣಿಸುವುದರಿಂದ ಆಗುವ ತೊಂದರೆಗಳು ಮತ್ತು ಕಾನೂನು ಪ್ರಕಾರ ಅಪರಾಧವೆಂದು ಜಿಲ್ಲಾ ಕಾರ್ಮಿಕ ಇಲಾಖೆಯು ಅನೇಕ ಗಾರ್ಮೆಂಟ್ಸ್ ಹಾಗೂ ಕಾರ್ಖಾನೆ ಗಳಲ್ಲಿ ಜಾಗೃತಿ ಮೂಡಿಸುತ್ತಿದೆ. ಅದೇ ರೀತಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಸಹಾ ಜಾಗೃತಿ ಮೂಡಿಸುವಲ್ಲಿ ಕೈ ಜೋಡಿ ಸಬೇಕು ಎಂದು ಜಿಲ್ಲಾಧಿಕಾರಿ ಅಭಿ ರಾಮ್ ಜಿ.ಶಂಕರ್ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣ ದಲ್ಲಿ ಶನಿವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರು ಹಾಗೂ ಗಾರ್ಮೆಂಟ್ಸ್‍ಗೆ ಹೋಗುವ ಮಹಿಳಾ ಕಾರ್ಮಿ ಕರು ಯಾವ ಭಾಗಗಳಲ್ಲಿ ಹೆಚ್ಚು ಪ್ರಯಾ ಣಿಸುತ್ತಾರೋ ಆ ಭಾಗಗಳಲ್ಲಿ ಹೆÉಚ್ಚು ಬಸ್ ಸೌಲಭ್ಯ ಒದಗಿಸಬೇಕು ಮತ್ತು ಬೆಂಗಳೂ ರಿನಲ್ಲಿ ಕಾರ್ಮಿಕರಿಗೆ ಬಸ್ ಪಾಸ್ ನೀಡ ಲಾಗುತ್ತಿದ್ದು ಅದು ಮೈಸೂರು ಜಿಲ್ಲೆ ಯಲ್ಲೂ ನೀಡಲು ಕಾರ್ಮಿಕ ಇಲಾಖೆ ಹಾಗೂ ಸಾರಿಗೆ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದರು.

ಸರಕು ಸಾಗಾಣಿಕೆ ವಾಹನಗಳಲ್ಲಿ ಸಾರ್ವ ಜನಿಕರು ಪ್ರಯಾಣಿಸುವುದು ಕಾನೂನು ಬಾಹಿರವಾಗಿದ್ದು ಆದಷ್ಟು ಜಾಗೃತಿ ಮೂಡಿ ಸಬೇಕು ಮತ್ತು ಅನೇಕ ಸಾರ್ವಜನಿಕ ಸ್ಥಳ ಗಳಲ್ಲಿ ಜಾಹೀರಾತು ಫಲಕಗಳ ಮೂಲಕ ಜಾಗೃತಿ ಮೂಡಿಸಲು ರಸ್ತೆ ಸುರಕ್ಷತಾ ಸಮಿತಿಯು ಕ್ರಮ ವಹಿಸಬೇಕು ಎಂದರು.

ನಗರದ ಅನೇಕ ಕಡೆಗಳಲ್ಲಿ ಅಪಘಾತ ವಾಗುತ್ತಿದ್ದು ಅದನ್ನು ತಡೆಗಟ್ಟಲು ಪೆÇಲೀಸ್ ಇಲಾಖೆ ಸೂಕ್ತ ಕ್ರಮವಹಿಸಬೇಕು ಹಾಗೂ ಟ್ರಾಫಿಕ್‍ಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಬೇಕು ಮತ್ತು ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯವಾಗಿರಬೇಕು. ನಗರದ ಹೊರಭಾಗದಲ್ಲಿ ಹೆಲ್ಮೆಟ್ ಧರಿಸದೇ ಪ್ರಯಾ ಣಿಸುವವರು ಅನೇಕರು ಇದ್ದಾರೆ. ಹಾಗಾಗಿ ಪೆÇಲೀಸ್ ಇಲಾಖೆ ಎಲ್ಲಾ ಕಡೆ ಅಧಿಕಾರಿ ಗಳನ್ನು ನಿಯೋಜಿಸಬೇಕು ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ ದೇವ ಮಾನೆ ಮಾತನಾಡಿ, ಹಳ್ಳಿಗಳಲ್ಲಿ ಗೂಡ್ಸ್ ವಾಹನ ಪ್ರಯಾಣಿಕರು ಹೆಚ್ಚು ಕಂಡುಬರು ತ್ತಾರೆ. ಅವರಿಗೆ ಕಾನೂನು ಅರಿವು ಮೂಡಿ ಸಬೇಕು ಹಾಗೂ ಶಾಲೆ ವಾಹನಗಳಲ್ಲಿ ಮಕ್ಕಳು ಒಂದು ವಾಹನದಲ್ಲಿ ಎಷ್ಟು ಪ್ರಯಾಣಿಸ ಬೇಕು ಹಾಗೂ ಡ್ರೈವರ್ ಎಷ್ಟು ವೇಗದಲ್ಲಿ ಚಲಾಯಿಸಬೇಕು ಮತ್ತು ವಾಹನ ಯಾವ ಹಂತದಲ್ಲಿರಬೇಕು ಎಂಬುದನ್ನು ಎಲ್ಲಾ ಶಾಲೆಗಳಿಗೂ ಮಾಹಿತಿ ನೀಡಿ ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಆದೇಶಿಸಿ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಎಎಸ್‍ಪಿ ಪಿ.ಸ್ನೇಹಾ, ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಭುಸ್ವಾಮಿ ಹಾಗೂ ಜಿಲ್ಲೆಯ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

 

Translate »