ವಿದ್ಯುತ್ ಸ್ಪರ್ಶದಿಂದ ಕಾರ್ಮಿಕ ಸಾವು
ಕೊಡಗು

ವಿದ್ಯುತ್ ಸ್ಪರ್ಶದಿಂದ ಕಾರ್ಮಿಕ ಸಾವು

August 2, 2018

ಗೋಣಿಕೊಪ್ಪಲು: ಮನೆ ಕೆಲಸ ಮಾಡುತ್ತಿದ್ದ ಸಂದರ್ಭ ವಿದ್ಯುತ್ ತಂತಿಗೆ ಕಬ್ಬಿಣದ ಕಂಬಿ ತಗುಲಿ ಕಾರ್ಮಿಕ ಸಾವನಪ್ಪಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ರಾಯಚೂರುವಿನ ವರುಣಕೋಡು ಗ್ರಾಮದ ಯಮನೂರು (25) ಮೃತ ಕಾರ್ಮಿಕ.

ಮನೆ ನಿರ್ಮಾಣ ಸಂಧರ್ಭ ಕಬ್ಬಿಣದ ಕಂಬಿ ಮೇಲೆತ್ತುವಾಗ ಘಟನೆ ನಡೆದಿದೆ. ಸ್ಥಳಕ್ಕೆ ಸೆಸ್ಕ್ ಜೆಇ ಕೃಷ್ಣಕುಮಾರ್, ಪೊಲೀಸ್ ವೃತ್ತ ನಿರೀಕ್ಷಕ ದಿವಾಕರ್ ಬೇಟಿ ನೀಡಿ ಪರಿ ಶೀಲನೆ ನಡೆಸಿದರು. ಪಟ್ಟಣದ ಉಮಾಮಹೇಶ್ವರಿ ದೇವಸ್ತಾನದ ಎದುರಿನಲ್ಲಿ ರಾಧ ಕೃಷ್ಣ ಎಂಬುವವರಿಗೆ ಸೇರಿದ ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದಾಗ ಘಟನೆ ನಡೆದಿದೆ. ಮನೆ ಹೊರಗೆ ಕಬ್ಬಿಣದ ಕಂಬಿಯ ಕೆಲಸ ಮಾಡುತ್ತಿದ್ದರು. ಕಂಬಿಯನ್ನು ಮೇಲೆತ್ತುವಾಗ ಕಂಬಿ ಮೇಲೆ ಹಾದು ಹೋಗಿದ್ದ 11 ಕೆ. ವಿ. ವಿದ್ಯುತ್ ತಂತಿಗೆ ಸ್ಪರ್ಶಿಸಿದೆ. ಈ ಸ್ಥಳದಲ್ಲಿಯೆ ಸಾವನಪ್ಪಿದ್ದಾರೆ.

ಮನೆ ಸಮೀಪ ನೆಲದಿಂದ ಕೇವಲ 20 ಅಡಿಗಳಷ್ಟು ಎತ್ತರದಲ್ಲಿ 11 ಕೆ. ವಿ. ವಿದ್ಯುತ್ ತಂತಿ ಹಾದು ಹೋಗಿರುವುದರಿಂದ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಎತ್ತರದಲ್ಲಿ ತಂತಿ ಹಾದು ಹೋಗಿದ್ದರೆ ಘಟನೆ ನಡೆಯುತ್ತಿರಲಿಲ್ಲ. ಸ್ಥಳೀಯ ಗ್ರಾಮ ಪಂಚಾಯ್ತಿ ಈ ಬಗ್ಗೆ ಗಮನ ಹರಿಸಿಲ್ಲ. ಮನೆ ಕಟ್ಟಲು ಅನುಮತಿ ನೀಡುವಾಗ ಪರಿಶಿಲನೆ ನಡೆಸಬೇಕಿತ್ತು ಎಂಬ ಆರೋಪ ವ್ಯಕ್ತವಾಗಿದೆ. ಶವವನ್ನು ಗೋಣಿಕೊಪ್ಪ ಸಮುದಾಯ ಕೇಂದ್ರದ ಶವಗಾರದಲ್ಲಿ ಇಡಲಾಗಿದೆ. ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

Translate »