ಕೇರಳಕ್ಕೆ ಭಾರೀ ಪ್ರಮಾಣದ ಮದ್ಯ ಸಾಗಾಣೆ: ಇಬ್ಬರ ಬಂಧನ
ಕೊಡಗು

ಕೇರಳಕ್ಕೆ ಭಾರೀ ಪ್ರಮಾಣದ ಮದ್ಯ ಸಾಗಾಣೆ: ಇಬ್ಬರ ಬಂಧನ

April 3, 2019

ಮಡಿಕೇರಿ: ಕೊಡಗು ಜಿಲ್ಲೆಯ ಮೂಲಕ ಕೇರಳ ರಾಜ್ಯಕ್ಕೆ ಸಾಗಾಟ ಮಾಡ ಲಾಗುತ್ತಿದ್ದ ಭಾರೀ ಪ್ರಮಾಣದ ಅಕ್ರಮ ಮದ್ಯವನ್ನು ಕೊಡಗು ಜಿಲ್ಲಾ ಅಬಕಾರಿ ಇಲಾಖೆ ಸಿನಿಮೀಯ ಮಾದರಿಯಲ್ಲಿ ಪತ್ತೆ ಹಚ್ಚಿದ್ದು ಮದ್ಯ, ವಾಹನ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಲಾರಿ ಚಾಲಕ ಶಂಕರ ಪೂಜಾರಿ, ಕ್ಲೀನರ್ ರಾಜೇಶ್ ಬಂಧಿತರು. ವಶಕ್ಕೆ ಪಡೆಯ ಲಾದ ಮದ್ಯ ಮತ್ತು ವಾಹನದ ಒಟ್ಟು ಮೌಲ್ಯ 28 ಲಕ್ಷ ರೂ.ಗಳಾಗಿದೆ. ಗಂಭೀರ ಪ್ರಕರಣ ದಾಖಲಿಸಿಕೊಂಡು ಮದ್ಯ ಸಾಗಾ ಟದ ಹಿಂದಿರುವ ಕಾಣದ ಕೈಗಳಿಗಾಗಿ ತನಿಖೆಯನ್ನು ಚುರುಕುಗೊಳಿಸಲಾಗಿದೆ. ಈ ಅಕ್ರಮ ಮದ್ಯವನ್ನು ಮಹಾರಾಷ್ಟ್ರ, ಬೆಂಗಳೂರು, ಮೈಸೂರು, ಪೆರುಂಬಾಡಿ ಮಾರ್ಗವಾಗಿ ಕೇರಳದ ವಯನಾಡು ಕಡೆಗೆ ಸಾಗಾಟ ಮಾಡಲು ಯತ್ನಿಸಿರುವ ಬಗ್ಗೆ ಅಬಕಾರಿ ಇಲಾಖೆ ಶಂಕೆ ವ್ಯಕ್ತಪಡಿಸಿದೆ.

ಘಟನೆ ವಿವರ: ಚುನಾವಣೆ ನೀತಿ ಸಂಹಿತೆ ಜಾರಿಯಾದ ದಿನದಿಂದಲೇ ಜಿಲ್ಲೆಯಾ ದ್ಯಂತ ಹೈಅಲರ್ಟ್ ಆಗಿದ್ದ ಅಬಕಾರಿ ಇಲಾಖೆ ಜಿಲ್ಲೆಯಲ್ಲಿ 14 ಚೆಕ್‍ಪೋಸ್ಟ್ ಗಳನ್ನು ತೆರೆದು ಚುನಾವಣಾ ಅಕ್ರಮಗಳ ಬಗ್ಗೆ ಹದ್ದಿನ ಕಣ್ಣಿಟ್ಟಿತ್ತು. ಕಾಸರಗೋಡು, ವಯನಾಡು, ಕಣ್ಣೂರು ಗಡಿಗಳಲ್ಲಿ ಕಟ್ಟೆ ಚ್ಚರ ವಹಿಸಲಾಗಿತ್ತು. ಈ ನಡುವೆಯೇ, ಬೆಂಗಳೂರುವಿನಿಂದ ಕೊಡಗು ಜಿಲ್ಲೆಯ ಮೂಲಕ ಲಾರಿಯಲ್ಲಿ ಭಾರೀ ಪ್ರಮಾಣದ ಅಕ್ರಮ ಮದ್ಯ ಸಾಗಿಸುವ ಬಗ್ಗೆ ಕೊಡಗು ಅಬಕಾರಿ ಇಲಾಖೆಗೆ ಕಳೆದ 1 ವಾರದ ಹಿಂದೆಯೇ ವಿಶ್ವಾಸನೀಯ ಮೂಲಗ ಳಿಂದ ಖಚಿತ ಮಾಹಿತಿ ದೊರಕಿತ್ತು.

ಎಂದಿನಂತೆ ಅಬಕಾರಿ ಅಧಿಕಾರಿಗಳು ಏ.2ರ ಬೆಳಗ್ಗೆ ವಿರಾಜಪೇಟೆ ಸಮೀಪದ ಪೆರುಂಬಾಡಿ ಚೆಕ್‍ಪೋಸ್ಟ್ ಮೂಲಕ ಕೇರಳ ಮತ್ತು ಕೊಡಗು ಜಿಲ್ಲೆಗೆ ಹೋಗಿ ಬರುತ್ತಿರುವ ಪ್ರತಿ ವಾಹನಗಳನ್ನು ತಪಾ ಸಣೆ ಮಾಡುತ್ತಿದ್ದರು. ಈ ಸಂದರ್ಭ ಮಹಾ ರಾಷ್ಟ್ರ ರಾಜ್ಯದ ನೋಂದಣಿ ಹೊಂದಿದ ಅಶೋಕ್ ಲೈಲ್ಯಾಂಡ್ ಕಂಪೆನಿಯ 6 ಚಕ್ರದ ಲಾರಿ(ಎಂ.ಹೆಚ್.13-ಸಿ.ಯು. 4292) ಮೈಸೂರಿನಿಂದ ಪೆರುಂಬಾಡಿ ಚೆಕ್‍ಪೋಸ್ಟ್ ಮೂಲಕ ಕೇರಳದ ಕಡೆಗೆ ತೆರಳಲು ಬಂದಿತು. ಈ ಲಾರಿಯ ಎರಡೂ ಬದಿಗಳಲ್ಲಿ ಪ್ರತಿಷ್ಠಿತ ಪಾರ್ಸಲ್ ಸಂಸ್ಥೆ ಯಾದ ವಿ.ಆರ್.ಎಲ್.ನ ಬೋರ್ಡ್ ಮತ್ತು ಲಾರಿಯ ಮುಂಭಾಗ ವಿ.ಆರ್.ಎಲ್. ಸ್ಟಿಕ್ಕರ್ ಕೂಡ ಅಳವಡಿಸಲಾಗಿತ್ತು. ಲಾರಿಯ ಹಿಂದಿನ ಬಾಗಿಲನ್ನು ತೆರೆದ ಅಬಕಾರಿ ಅಧಿಕಾರಿಗಳು ಅದರಲ್ಲಿ ಹಗುರ-ಭಾರದ ಕೊರಿಯಾರ್ ಬಾಕ್ಸ್‍ಗಳು ಇರುವುದನ್ನು ಗಮನಿಸಿ, ಲಾರಿಯು ಮುಂದೆ ಹೋಗಲು ಬಿಟ್ಟರು. ಆದರೆ, ಹೊರಡುವ ಸಂದರ್ಭ ಲಾರಿಯು ಅತ್ಯಧಿಕ ಭಾರ ಹೊತ್ತಿರುವಂತೆ ಲಾರಿಯ ಚಕ್ರ ಮತ್ತು ಅದರ ಸೆಟ್ಟ್‍ಪ್ಲೇಟ್ ಗಳು ಅದುಮಿಕೊಂಡಿದ್ದವು.

ಇದರಿಂದ ಸಂಶಯಗೊಂಡ ಅಬಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮತ್ತೆ ಲಾರಿಯನ್ನು ತಡೆದು, ಲಾರಿಯ ಒಳಗಿದ್ದ ಕೊರಿಯರ್ ವಸ್ತುಗಳನ್ನು ಹೊರಗೆಳೆದು ಇಂಚಿಂಚು ಪರಿಶೀಲನೆ ಮಾಡಲು ಮುಂದಾ ಗುತ್ತಿದ್ದಂತೆ ಲಾರಿಯಲ್ಲಿದ್ದವರು ಆತಂಕ ಕ್ಕೊಳದಾದಂತೆ ಕಂಡು ಬಂದರು. ಈ ಸಂದರ್ಭ ಲಾರಿಯ ಒಳಭಾಗದಲ್ಲಿ ಪ್ರತ್ಯೇಕ ಕಪಾಟು ರೀತಿಯಲ್ಲಿ ನೆಟ್ಟ್‍ಬೋಲ್ಟ್‍ಗಳ ಸಹಾಯ ದಿಂದ ಭದ್ರವಾಗಿ ಬಾಗಿಲುಗಳನ್ನು ಅಳ ವಡಿಸಿರುವುದು ಪತ್ತೆಯಾಗಿದೆ. ಬಳಿಕ ಆ ಕಪಾಟನ್ನು ತೆರೆದು ನೋಡಿದಾಗ ಲಕ್ಷಾಂ ತರ ಮೌಲ್ಯದ ವಿವಿಧ ಬ್ರ್ಯಾಂಡ್‍ಗಳ 250 ಬಾಕ್ಸ್‍ಗಳಷ್ಟು ಮದ್ಯವಿರುವುದನ್ನು ಕಂಡು ಅಬಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಗಳು ಬೆಚ್ಚಿ ಬಿದ್ದಿದ್ದಾರೆ. ಈ ಮದ್ಯವನ್ನು ಪರಿಶೀಲನೆ ನಡೆಸಿದ ಸಂದರ್ಭ ಅವು ಗಳೆಲ್ಲ ಮಹಾರಾಷ್ಟ್ರದಲ್ಲಿ ತಯಾರಾಗಿದ್ದು, ಪ್ರತಿ ಬಾಕ್ಸ್ ಮತ್ತು ಬಾಟಲಿಗಳ ಮೇಲೆ “ಗೋವಾದಲ್ಲಿ ಮಾರಾಟಕ್ಕೆ ಮಾತ್ರ” ಎಂದು ನಮೂದಿಸಿರುವುದು ಪತ್ತೆ ಯಾಗಿದೆ. ಲಾರಿಯ ಚಾಲಕ ಶಂಕರ ಪೂಜಾರಿ ಮತ್ತು ಕ್ಲೀನರ್ ರಾಜೇಶ್ ಎಂಬುವರನ್ನು ವಶಕ್ಕೆ ಪಡೆದಿರುವ ಅಬಕಾರಿ ಅಧಿಕಾರಿಗಳು, ಗಂಭೀರ ಪ್ರಕ ರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.

Translate »