ಮರಕ್ಕೆ ನೇಣು ಬಿಗಿದುಕೊಂಡು ವಿವಾಹಿತ ಪ್ರೇಮಿಗಳ ಆತ್ಮಹತ್ಯೆ
ಮೈಸೂರು

ಮರಕ್ಕೆ ನೇಣು ಬಿಗಿದುಕೊಂಡು ವಿವಾಹಿತ ಪ್ರೇಮಿಗಳ ಆತ್ಮಹತ್ಯೆ

February 10, 2019

ಬಿಳಿಕೆರೆ ಹೋಬಳಿ ಚೆಲ್ಲಹಳ್ಳಿಯಲ್ಲಿ ಘಟನೆ
ಮೈಸೂರು: ಜೀವನದಲ್ಲಿ ಜಿಗುಪ್ಸೆಗೊಂಡ ವಿವಾಹಿತ ಪ್ರೇಮಿ ಗಳಿಬ್ಬರು ಮರಕ್ಕೆ ನೇಣು ಬಿಗಿದುಕೊಂಡು ಪ್ರತ್ಯೇಕವಾಗಿ ಆತ್ಮಹತ್ಯೆ ಮಾಡಿಕೊಂಡಿ ರುವ ಘಟನೆ ಬಿಳಿಕೆರೆ ಹೋಬಳಿ ಚೆಲ್ಲಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.

ಗ್ರಾಮದ ಲೇಟ್ ಕೋಡಯ್ಯ ಅವರ ಮಗ ಶಾಂತರಾಜು(35) ಹಾಗೂ ರಾಜು ಅವರ ಪತ್ನಿ ಶ್ರೀಮತಿ ಶಾಂತ (33) ಆತ್ಮಹತ್ಯೆಗೆ ಶರಣಾದವರು. ಒಂದೇ ಗ್ರಾಮದ ನೆರೆಹೊರೆ ನಿವಾಸಿಗಳು ಹಾಗೂ ದೂರದ ಸಂಬಂಧಿಕರೂ ಆದ ಇಬ್ಬರಿಗೂ ಮದುವೆ ಯಾಗಿ ಇಬ್ಬಿಬ್ಬರು ಮಕ್ಕಳಿದ್ದಾರೆ. ಕಳೆದ 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ರಿಂದ ವಿಷಯ ತಿಳಿದ ಎರಡೂ ಕಡೆ ಸಂಬಂಧಿಕರೂ ನ್ಯಾಯ ಪಂಚಾಯ್ತಿ ಮಾಡಿ ಇಬ್ಬರಿಗೂ ಬುದ್ಧಿವಾದ ಹೇಳಿದ್ದರಾದರೂ, ಮತ್ತೆ ಮತ್ತೆ ಸಂಪರ್ಕ ಸಾಧಿಸುತ್ತಿದ್ದರಿಂದ ಬಿಳಿಕೆರೆ ಠಾಣೆಗೂ ದೂರು ನೀಡಲಾಗಿತ್ತು. ಇದರಿಂದ ಬೇಸತ್ತ ಶಾಂತರಾಜು, ಶಾಂತಳ ಜಮೀನಿನ ಮರಕ್ಕೂ, ಶಾಂತ ತಮ್ಮ ಮನೆಯ ಹಿಂದಿನ ಮರಕ್ಕೂ ನೇಣು ಬಿಗಿದುಕೊಂಡು ಗುರುವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಬಿಳಿಕೆರೆ ಠಾಣೆ ಸಬ್‍ಇನ್‍ಸ್ಪೆಕ್ಟರ್ ಮಹದೇವನಾಯ್ಕ ಹಾಗೂ ಸಿಬ್ಬಂದಿ, ಮಹಜರು ನಡೆಸಿದರು. ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದರು. ಘಟನೆ ಯಿಂದ ರೊಚ್ಚಿಗೆದ್ದ ಶಾಂತ ಮನೆ ಕಡೆಯವರು ಶಾಂತರಾಜು ಮನೆ ಮೇಲೆ ದಾಳಿ ನಡೆಸಿ, ಕೆಲ ವಸ್ತುಗಳನ್ನು ಧ್ವಂಸ ಮಾಡಿದ್ದಾರೆಂದು ಆರೋಪಿಸಲಾಗಿದೆ.

Translate »