ಮೈಸೂರು: ಮೆಡಿಕಲ್ ಸೀಟು ಕೊಡಿಸುವುದಾಗಿ ಲಕ್ಷ ರೂ.ಪಡೆದು ವಂಚಿಸಿದ್ದ ವ್ಯಕ್ತಿಯನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.
ಅಹಮದಾಬಾದ್ನ ಮಹೇಶ್ ಕುಮಾರ್ ಪಟೇಲ್(46) ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಿಜಯನಗರ ರೈಲ್ವೆ ಬಡಾವಣೆ ನಿವಾಸಿ ವಿಪುಲ್ ಪಾಂಡೆ ಅವರ ಪುತ್ರ ಪಿಯುಸಿ ವ್ಯಾಸಂಗ ಮುಗಿಸಿದ್ದು, ಎಂಬಿಬಿಎಸ್ಗೆ ಸೇರಿಸಲು ಅನ್ಲೈನ್ ನಲ್ಲಿ ಕಾಲೇಜುಗಳ ಹುಡುಕಾಟ ನಡೆಸಿದ್ದರು. ಈ ವೇಳೆ ಮಹೇಶ್ ಕುಮಾರ್ ಪಟೇಲ್ ಪರಿಚಯವಾಗಿತ್ತು. ನಂತರದಲ್ಲಿ ಆತ ನಾನು ಪರ್ಫೆಕ್ಟ್ ಕೆರೀರ್ ಗೈಡ್ ಸಂಸ್ಥೆ ನಡೆಸು ತ್ತಿದ್ದು, ನಿಮ್ಮ ಮಗನಿಗೆ ಕಸ್ತೂರಿ ಬಾ, ಮಣಿಪಾಲ್ ಮೆಡಿಕಲ್ ಕಾಲೇಜ್ನಲ್ಲಿ ಸೀಟ್ ಕೊಡಿಸುತ್ತೇನೆಂದು ನಂಬಿಸಿ ಲಕ್ಷ ರೂ.ಗಳನ್ನು ಅಕೌಂಟ್ಗೆ ಹಾಕಿಸಿಕೊಂಡು ವಂಚಿಸಿದ್ದ. ಈ ಕುರಿತು ವಿಪುಲ್ ಪಾಂಡೆ ವಿಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನಿಖೆ ಕೈಗೊಂಡ ಪೊಲೀಸರು, ಶುಕ್ರವಾರ ಅಹಮಮದಾಬಾದ್ನಲ್ಲಿ ಆರೋಪಿ ಮಹೇಶ್ ಕುಮಾರ್ ಪಟೇಲ್ನನ್ನು ಬಂಧಿಸಿ, ವಿಮಾನದಲ್ಲಿ ಕರೆದುಕೊಂಡು ಬಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.