ಪೊನ್ನಂಪೇಟೆಯಲ್ಲಿ ವಸತಿ ನಿಲಯಾಧಿಕಾರಿಗಳ ಕುಂದು ಕೊರತೆ ಸಭೆ
ಕೊಡಗು

ಪೊನ್ನಂಪೇಟೆಯಲ್ಲಿ ವಸತಿ ನಿಲಯಾಧಿಕಾರಿಗಳ ಕುಂದು ಕೊರತೆ ಸಭೆ

January 6, 2019

ಮಕ್ಕಳು ಸೌಲಭ್ಯಗಳಿಂದ ವಂಚಿತರಾಗದಂತೆ ಎಚ್ಚರ ವಹಿಸಿ
ಗೋಣಿಕೊಪ್ಪಲು: ವಸತಿ ನಿಲ ಯದಲ್ಲಿರುವ ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗದಂತೆ ಅಧಿ ಕಾರಿಗಳು ಎಚ್ಚರವಹಿಸುವಂತೆ ಕೊಡಗು ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಚಿಯಕ್‍ಪೂವಂಡ ಬೋಪಣ್ಣ ಅಧಿಕಾರಿಗಳಿಗೆ ಸೂಚಿಸಿದರು.

ಪೊನ್ನಂಪೇಟೆ ತಾಲೂಕು ಪಂಚಾಯ್ತಿ ಸಾಮಥ್ರ್ಯ ಸೌಧದ ಸಭಾಂಗಣದಲ್ಲಿ ಆಯೋ ಜನೆಗೊಂಡಿದ್ದ ಸಮಗ್ರ ಗಿರಿಜನ ಅಭಿ ವೃದ್ದಿ ಯೋಜನೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟದ ಇಲಾಖಾಧಿಕಾರಿಗಳ, ವಸತಿ ನಿಲಯಗಳ ಮೇಲ್ವೀಚಾರಕರು, ಆಶ್ರಮ ಶಾಲೆಯ ಶಿಕ್ಷಕರು,ಅಡುಗೆಯವರ ಕುಂದು ಕೊರತೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂ ಕಿನಲ್ಲಿರುವ ವಸತಿ ನಿಲಯಗಳ ಸಮಸ್ಯೆ ಗಳ ಬಗ್ಗೆ ಸಮಗ್ರವಾಗಿ ಮಾಹಿತಿ ಪಡೆ ದರು. ಮಾರ್ಚ್ ಅಂತ್ಯದೊಳಗೆ ಸರ್ಕಾರ ಬಿಡುಗಡೆ ಮಾಡಿರುವ ಅನುದಾನಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು.ಕಾಮಗಾರಿ ನಡೆಯುವ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಗುಣಮಟ್ಟದ ಬಗ್ಗೆ ಎಚ್ಚರ ವಹಿಸಬೇಕು. ವಿದ್ಯಾರ್ಥಿಗಳಿಗೆ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿಗೆ ತೊಂದರೆ ಆಗದಂತೆ ಈಗಿಂದಲೇ ಕ್ರಮಕ್ಕೆ ಮುಂದಾಗ ಬೇಕು. ಮುಂದಿನ ಪರೀಕ್ಷೆಯಲ್ಲಿ ವಸತಿ ನಿಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಗರಿಷ್ಠ ಅಂಕದಲ್ಲಿ ತೇರ್ಗಡೆ ಹೊಂದಲು ಗಣಿತ,ವಿಜ್ಞಾನ ವಿಷಯದಲ್ಲಿ ವಿಶೇಷ ತರಗತಿಗಳನ್ನು ಅನುಭವಿ ಶಿಕ್ಷ ಕರುಗಳಿಂದ ಮಾಡಿಸಬೇಕು. ವಿದ್ಯಾರ್ಥಿ ಗಳು ಅನುತ್ತೀರ್ಣಗೊಂಡಲ್ಲಿ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದೆಂದು ಎಚ್ಚರಿಸಿದರು.
ನಿಲಯದಲ್ಲಿರುವ ವಿದ್ಯಾರ್ಥಿನಿಯರ ಬಗ್ಗೆ ವಾರ್ಡನ್‍ಗಳು ಹೆಚ್ಚಿನ ನಿಗಾ ವಹಿಸ ಬೇಕು. ನಿಲಯದಿಂದ ಹೊರ ಹೋಗುವ ಸಂದರ್ಭ ವಿದ್ಯಾರ್ಥಿನಿಯ ಪೋಷಕರ ಅನುಮತಿಯಿಲ್ಲದೆ ನಿಲಯದಿಂದ ಹೊರ ಕಳುಹಿಸದಂತೆ ನಿರ್ದೇಶನ ನೀಡಿದರು.

ಪೊನ್ನಂಪೇಟೆ ಸ್ಮಶಾನ ಸಮೀಪವಿರುವ ವಸತಿ ನಿಲಯವನ್ನು ಬೇರೆಡೆಗೆ ಮುಂದಿನ ಸಾಲಿನಿಂದ ಬದಲಾಯಿಸಲು ಅಧಿಕಾರಿ ಗಳು ಅಧ್ಯಕ್ಷರಿಗೆ ಮನವಿ ಮಾಡಿದರು.
ತಾಲೂಕಿನಲ್ಲಿರುವ ಅಂಬೇಡ್ಕರ್ ಭವನ ಗಳಿಗೆ ಸುಣ್ಣ, ಬಣ್ಣ ಬಳಿದು ಸಾರ್ವಜನಿ ಕರ ಅನುಕೂಲಕ್ಕಾಗಿ ನೀಡಬೇಕೆಂದು ಸೂಚನೆ ನೀಡಿದ ಇವರು ವಸತಿ ನಿಲಯದ ಮಕ್ಕ ಳನ್ನು ತಯಾರು ಮಾಡಿ ಮೊರಾರ್ಜಿ ಶಾಲೆ, ನವೋದಯ ಶಾಲೆಗಳಿಗೆ ಸೇರಿಸುವಂತ ಕೆಲಸದಲ್ಲಿ ಶಿಕ್ಷಕರು ಹೆಚ್ಚಿನ ನಿಗಾವಹಿಸ ಬೇಕೆಂದು ಅಧ್ಯಕ್ಷ ಬೋಪಣ್ಣ ಶಿಕ್ಷಕರಿಗೆ ನಿರ್ದೇಶನ ನೀಡಿದರು.

ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ ಜಾತಿ ದೃಢೀಕರಣ ಪತ್ರ, ಆದಾಯ ದೃಢೀ ಕರಣ ಪತ್ರ ಹಾಗೂ ಆಧಾರ್ ಕಾರ್ಡ್ ಖುದ್ದಾಗಿ ಮಾಡಿಕೊಡಲು ವಸತಿ ನಿಲಯದ ಮೇಲ್ವೀ ಚಾರಕರು ವಿಶೇಷ ಕಾಳಜಿ ವಹಿಸಬೇಕು ಅಗತ್ಯವಿದ್ದಲ್ಲಿ ಕಂದಾಯ ಇಲಾಖೆ ಅಧಿ ಕಾರಿಗಳಿಗೆ ಸೂಚನೆ ನೀಡುತ್ತೇನೆಂದು ಬೋಪಣ್ಣ ಹೇಳಿದರು.

ವಸತಿ ನಿಲಯದ ಖಾಲಿ ಜಾಗಗಳಲ್ಲಿ ಅಡುಗೆಯವರು,ವಿದ್ಯಾರ್ಥಿಗಳು,ಶ್ರಮದಾನ ಮಾಡುವ ಮೂಲಕ ಕೈತೋಟ ಮಾಡಿ ಅಗತ್ಯವಿರುವ ತರಕಾರಿ ಬೆಳೆಗಳನ್ನು ಬೆಳೆಸ ಬೇಕು. ಅಗತ್ಯ ಬೀಜ ಪೂರೈಕೆ ಮಾಡ ಲಾಗುವುದು ಎಂದರು.

ಆಶ್ರಮ ಶಾಲೆಗಳಲ್ಲಿ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳ ಶಿಕ್ಷಣ ಮಟ್ಟ ಸುಧಾರಣೆ ಕಂಡಿಲ್ಲ. ಶಿಕ್ಷಕರು ಇಂತಹ ಮಕ್ಕಳನ್ನು ತಮ್ಮ ಮಕ್ಕಳೆಂದು ಭಾವಿಸಿ ಹೆಚ್ಚಿನ ಶಿಕ್ಷಣವನ್ನು ನೀಡುವ ಮೂಲಕ ಇವರ ಮುಂದಿನ ಭವಿಷ್ಯಕ್ಕೆ ಮಾರ್ಗದರ್ಶಕರಾಗಬೇಕೆಂದು ಶಿಕ್ಷಕರಲ್ಲಿ ಮನವಿ ಮಾಡಿದರು.

ಸಮಗ್ರ ಗಿರಿಜನ ಅಭಿವೃದ್ದಿ ಯೋಜ ನೆಯ ಜಿಲ್ಲಾ ಯೋಜನ ಸಮನ್ವಯ ಅಧಿ ಕಾರಿ ಶಿವಕುಮಾರ್ ಮಾತನಾಡಿ, ವಸತಿ ನಿಲಯಗಳಲ್ಲಿ ಹಲವಾರು ಬದಲಾವಣೆ ಗಳು ಕಂಡಿವೆ. ಮುಂದಿನ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆದು ತೇರ್ಗ ಡೆಯಾಗುವುದೇ ನಮ್ಮ ಮುಂದಿರುವ ದೊಡ್ಡ ಸವಾಲು. ಮುಂದಿನ ಶೈಕ್ಞಣಿಕ ಸಾಲಿನಿಂದ ಶಿಕ್ಷಕರಿಗೆ ವಿಶೇಷ ತರಗತಿ, ತರಬೇತಿ ಗಳನ್ನು ನೀಡುವ ಮೂಲಕ ನಿಲಯದಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಶಿಕ್ಷಣ ಮಟ್ಟವನ್ನು ಸುಧಾರಣೆ ಮಾಡಲು ಪ್ರಯತ್ನ ಮಾಡಲಾಗುವುದು.

ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾ ಣಾಧಿಕಾರಿ ಚಂದ್ರಶೇಖರ್ ಮಾತನಾಡಿ, ಆಶ್ರಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಂಟಿತಗೊಳ್ಳುತ್ತಿದೆ ಈ ಬಗ್ಗೆ ಮುಂದಿನ ಸಾಲಿನಿಂದ ಶಿಕ್ಷಣ ಇಲಾಖೆಯ ಸಹಕಾರ ಪಡೆದು ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿ ಸುವ ಪ್ರಯತ್ನ ಮಾಡಲಾಗುವುದು ಕೊರ ತೆಯಿರುವ ಮೇಲ್ವಿಚಾರಕರ ಹುದ್ದೆಗಳಿಗೆ ನಿವೃತ್ತ ಶಿಕ್ಷಕರು ನೇಮಕಗೊಂಡಿದ್ದಾರೆ ಎಂದರು. ತಾಲೂಕು ಸಮಾಜ ಕಲ್ಯಾಣಾ ಧಿಕಾರಿ ಪ್ರೀತಿ ಚಿಕ್ಕಮಾದಯ್ಯ ಮಾತನಾಡಿ ಪರಿಶಿಷ್ಟರ ಅಭಿವೃದ್ದಿಗೆ ಇಲಾಖೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಿದ್ಯಾರ್ಥಿ ನಿಲಯಗಳಲ್ಲಿರುವ ವಿದ್ಯಾರ್ಥಿ ಗಳಿಗೆ ಹೆಚ್ಚಿನ ಶಿಸ್ತಿಗೆ ಒತ್ತು ನೀಡಲಾಗಿದೆ. ಸಾಕಷ್ಟು ಬದಲಾವಣೆ ಕಂಡಿವೆ ಎಂದರು. ಹಿಂದುಳಿದ ಕಲ್ಯಾಣ ಇಲಾಖೆಯ ವಿಸ್ತರ ಣಾಧಿಕಾರಿಗಳಾದ ಕವಿತಾ ಮಾತನಾಡಿ, ನಿಲಯದಲ್ಲಿರುವ ಅಡುಗೆಯವರನ್ನು ಸರ್ಕಾ ರದ ಸುತ್ತೋಲೆಯಂತೆ ಫೆಬ್ರವರಿ ತಿಂಗಳಿ ನಲ್ಲಿ ಕರ್ತವ್ಯದಿಂದ ಬಿಡುಗಡೆ ಮಾಡಲಾಗು ವುದು. ಮುಂದಿನ ಆದೇಶದ ನಂತರ ಅವರನ್ನು ಉದ್ಯೋಗಕ್ಕೆ ಸೇರಿಸಿಕೊಳ್ಳಲಾಗು ವುದು ಎಂದು ಅಧ್ಯಕ್ಷರ ಗಮನ ಸೆಳೆದರು.

ಇಂತಹ ನೌಕರರಿಗೆ ಅಗತ್ಯ ವೇತನಗಳನ್ನು ನಿಗದಿತ ಸಮಯದಲ್ಲಿ ನೀಡಿ ಕಳುಹಿಸುವ ಬಗ್ಗೆ ಕ್ರಮ ಕೈಗೊ ಳ್ಳಬೇಕೆಂದು ಸೂಚಿಸಿದರು. ಗಿರಿಜನ ಕಲ್ಯಾಣ ವಿಸ್ತರಣಾಧಿಕಾರಿಯಾದ ನವೀನ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಹೆಚ್.ಜಿ. ಮಂಜುನಾಥ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು. ಸಮಾಜ ಕಲ್ಯಾಣಾಧಿಕಾರಿ ಪ್ರೀತಿ ಸ್ವಾಗತಿ ಸಿದರು. ಪರಿಶಿಷ್ಟ ವರ್ಗಗಳ ಕಲ್ಯಾಣಾ ಧಿಕಾರಿ ಚಂದ್ರಶೇಖರ್ ವಂದಿಸಿದರು.

Translate »