ಚನ್ನರಾಯಪಟ್ಟಣ ಕಾಂಗ್ರೆಸ್ ಸಭೆಯಲ್ಲಿ ಮೊಳಗಿದ  ಮೋದಿ ಘೋಷಣೆ… ಬಿಜೆಪಿ ಕರಪತ್ರ ಪ್ರದರ್ಶನ!
ಮೈಸೂರು

ಚನ್ನರಾಯಪಟ್ಟಣ ಕಾಂಗ್ರೆಸ್ ಸಭೆಯಲ್ಲಿ ಮೊಳಗಿದ ಮೋದಿ ಘೋಷಣೆ… ಬಿಜೆಪಿ ಕರಪತ್ರ ಪ್ರದರ್ಶನ!

April 5, 2019

ಹಾಸನ: ಚನ್ನರಾಯಪಟ್ಟಣ ದಲ್ಲಿ ಗುರುವಾರ ನಡೆದ ತಾಲೂಕು ಕಾಂಗ್ರೆಸ್ ಘಟಕದ ಕಾರ್ಯಕರ್ತರ ಸಭೆ ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆ ಕೂಗಿ, ಬಿಜೆಪಿ ಕರಪತ್ರ ಪ್ರದರ್ಶಿಸಿದ ಘಟನೆ ನಡೆಯಿತು. ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ ಅವರ ಭಾಷ ಣಕ್ಕೂ ಅಡ್ಡಿಪಡಿಸಿದ ಕಾರ್ಯಕರ್ತರು, ಜೆಡಿಎಸ್ ಅಭ್ಯರ್ಥಿ ಬೆಂಬಲಿಸಲು ಸಾಧ್ಯ ವಿಲ್ಲ. ನಿಜವಾದ ಕೋಮು ವಾದಿ ಪಕ್ಷ ಜೆಡಿಎಸ್ ಎಂದು ಕೂಗಾಡಿದರು. ಮಂಡ್ಯ ದಲ್ಲಿ ಪಕ್ಷೇತರ ಅಭ್ಯರ್ಥಿಯ ಜಾತಿ ನಿಂದನೆ ಮಾಡಿದವರ ಜೊತೆಗೆ ಹೊಂದಾಣಿಕೆ ಹೇಗೆ ಮಾಡಿಕೊಂಡಿದ್ದೀರಿ? ಎಂದು ಪ್ರಶ್ನಿ ಸಿದ ಮುಖಂಡರಾದ ಸಿ.ಎಸ್.ಜಯರಾಂ, ರಾಜಣ್ಣ, ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಮೋದಿ, ಮೋದಿ ಎಂದು ಘೋಷಣೆ ಕೂಗಿದರು.

ಕೂಡಲೇ ವೇದಿಕೆ ಮೇಲಿದ್ದ ಮುಖಂ ಡರು ಬಿಜೆಪಿ ಪರ ಘೋಷಣೆ ಕೂಗುತ್ತಿದ್ದ ವರನ್ನು ಸಮಾಧಾನಪಡಿ ಸಲು ಯತ್ನಿಸಿ ದರೂ, ಅದು ಸಫಲವಾಗಲಿಲ್ಲ. ಈ ಹಂತ ದಲ್ಲಿ ಇನ್ನೊಂದು ಗುಂಪು ಕಾಂಗ್ರೆಸ್ ಮುಖಂ ಡರ ಪರವಾಗಿ ಘೋಷಣೆ ಕೂಗಲಾ ರಂಭಿಸಿತು. ಈ ವೇಳೆ ಎರಡು ಗುಂಪಿ ನವರು ಪರಸ್ಪರ ಘೋಷಣೆ ಕೂಗಿದರು.

ಸಭೆಯಲ್ಲಿ ಗೊಂದಲ-ಗದ್ದಲ ಏರ್ಪ ಟ್ಟಿತ್ತು. ಸಭೆಯ ಪ್ರಾರಂಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಂ ಮಾತನಾಡಿ, ‘ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಕಾಂಗ್ರೆಸ್ ಕಾರ್ಯಕರ್ತರು ಎದುರಿಸು ತ್ತಿರುವ ಸಮಸ್ಯೆಯನ್ನು ವರಿಷ್ಠರ ಗಮನಕ್ಕೆ ತಂದಿದ್ದೇವೆ. ರಾಷ್ಟ್ರ ಮಟ್ಟದಲ್ಲಿ ಎನ್‍ಡಿಎ, ಯುಪಿಎ ಮೈತ್ರಿ ಕೂಟಗಳು ಅಸ್ತಿತ್ವಕ್ಕೆ ಬಂದಿವೆ. ಯುಪಿಎ ಮೈತ್ರಿಕೂಟದಿಂದ ರಾಹುಲ್‍ಗಾಂಧಿ ಅವರನ್ನು ಪ್ರಧಾನಿ ಮಾಡಬೇಕಿದೆ.

ಕೋಮುವಾದಿಗಳನ್ನು ಅಧಿಕಾರದಿಂದ ದೂರ ಇಡಲು ಮೈತ್ರಿ ಏರ್ಪಟ್ಟಿದೆ’ ಎನ್ನುತ್ತಿದ್ದಂತೆ ಕಾರ್ಯ ಕರ್ತರು ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿ ದರು. ಗದ್ದಲ ಹೆಚ್ಚಾದಾಗ ಶಿವರಾಂ ಭಾಷಣ ಮೊಟಕುಗೊಳಿಸಿದರು.

ವಿಧಾನಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ ಮಾತನಾಡಿ, ‘ಜೆಡಿಎಸ್ ವಿರುದ್ಧ ರಾಜಕಾರಣ ಮಾಡಿಕೊಂಡು ಬಂದಿರುವುದರಿಂದ ಕಾಂಗ್ರೆಸ್ ಕಾರ್ಯ ಕರ್ತರಲ್ಲಿ ಸ್ವಲ್ಪ ಮಟ್ಟಿಗೆ ಅಸಮಾಧಾನ ಇರುವುದು ನಿಜ. ಆದರೆ ಸಭೆಯಲ್ಲಿ ಬಿಜೆಪಿ ಪರ ಘೋಷಣೆ ಕೂಗಿರುವುದು ಬಿಜೆಪಿ ಕಾರ್ಯಕರ್ತರು’ ಎಂದರು. ವೇದಿಕೆಯಲ್ಲಿದ್ದ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಾವ ಗಲ್ ಮಂಜುನಾಥ್, ಹಿರಿಯ ಮುಖಂಡ ರಾದ ಸಿ.ಎಸ್.ಪುಟ್ಟೇಗೌಡ, ಎಚ್.ಕೆ.ಜವರೇ ಗೌಡ, ಜೆ.ಎಂ.ರಾಮಚಂದ್ರ, ಹೆಮ್ಮಿಗೆ ಮೋಹನ್, ಎಂ.ಶಂಕರ್ ಮುಜುಗರಕ್ಕೆ ಒಳಗಾಗಬೇಕಾಯಿತು. ಸಭೆ ಗದ್ದಲ, ಗೊಂದಲದಲ್ಲೇ ಮುಕ್ತಾಯಗೊಂಡಿತು.

Translate »