ಮೋದಿ ಮತ್ತೊಮ್ಮೆ ಪ್ರಧಾನಿ: ಮೈಸೂರಲ್ಲಿ ದೇವರಲ್ಲಿ ಪ್ರಾರ್ಥನೆ
ಮೈಸೂರು

ಮೋದಿ ಮತ್ತೊಮ್ಮೆ ಪ್ರಧಾನಿ: ಮೈಸೂರಲ್ಲಿ ದೇವರಲ್ಲಿ ಪ್ರಾರ್ಥನೆ

May 23, 2019

ಮೈಸೂರು: ಡಿಟಿಎಸ್ ಫೌಂಡೇಷನ್ ವತಿಯಿಂದ ರಾಮಾನುಜ ರಸ್ತೆ ಯಲ್ಲಿರುವ ಕಾರ್ಯ ಸಿದ್ಧಿ ಆಂಜನೇಯ ದೇವಸ್ಥಾನದಲ್ಲಿ ಫೌಂಡೇಷನ್ ಅಧ್ಯಕ್ಷ ಡಿ.ಟಿ.ಪ್ರಕಾಶ್ ನೇತೃತ್ವದಲ್ಲಿ ನರೇಂದ್ರ ಮೋದಿಯವರ ಹೆಸರಿನಲ್ಲಿ ವಿಶೇಷಪೂಜೆ ಸಲ್ಲಿಸಿ, ಅವರು ಮತ್ತೊಮ್ಮೆ ಪ್ರಧಾನಮಂತ್ರಿಯಾಗಲಿ ಎಂದು ಪ್ರಾರ್ಥಿಸಲಾಯಿತು.

ಇದೇ ವೇಳೆ ಮಾತನಾಡಿದ ಪ್ರಕಾಶ್, ನರೇಂದ್ರಮೋದಿಯವರ 5 ವರ್ಷದ ಆಡಳಿತ ಜನ ಸಾಮಾನ್ಯರಿಗೆ ಅತ್ಯಂತ ತೃಪ್ತಿದಾಯಕವಾಗಿದ್ದು ಮೋದಿಯವರು ಪ್ರಧಾನ ಮಂತ್ರಿಗಳಾಗಿ ಸುಭದ್ರ ಸರ್ಕಾರ ನೀಡಿ ದೇಶವನ್ನು ಮುನ್ನಡೆಸಿ ನಮ್ಮ ದೇಶವನ್ನು ವಿಶ್ವದಲ್ಲೇ ನಂ.1 ಆಗಿ ಮಾಡುವತ್ತ ಹೆಜ್ಜೆ ಹಾಕಿದ್ದಾರೆ ಅವರಿಗೆ 5 ವರ್ಷ ಸಾಕಾಗುವು ದಿಲ್ಲ ಬದಲಾಗಿ 5 ಬಾರಿ ಪ್ರಧಾನಿಗಳಾಗಲಿ. ಅವರು ಈಗಾಗಲೇ ಜನೌಷಧ, ಉಜ್ವಲ ಯೋಜನೆ, ಮುದ್ರಾಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ, ಅಟಲ್ ಪೆನ್ಷನ್ ಯೋಜನೆ, ಭೀಮಾ ಫಸಲ್, ಹೃದಯದ ಸ್ಟಂಟ್ ಕಡಿಮೆ ಬೆಲೆ ಇನ್ನೂ ಮುಂತಾದ ನೂರಾರು ಜನಕಲ್ಯಾಣ ಯೋಜನೆಗಳನ್ನು ನೀಡಿದ್ದಾರೆ. ಆದ್ದರಿಂದ ನಾವು ಅವರ ಮುಂದಾಳತ್ವವನ್ನು ಮೆಚ್ಚಿಕೊಂಡು ಅವರೇ ಮತ್ತೊಮ್ಮೆ ಪ್ರಧಾನಿಯಾಗಲೀ ಎಂದು ಪೂಜೆಗಳನ್ನು ಸಲ್ಲಿಸಿದ್ದೇವೆ. ನಾಳೆ ಪರಿಸರಕ್ಕೆ ಹಾನಿಕರವಾದ ಪಟಾಕಿ ಹಚ್ಚದೇ ಬರೀ ಸಿಹಿವಿತರಣೆ ಮಾಡಿ, ಸಂಭ್ರಮದಿಂದ ಆಚರಿಸಿ ಎಂದು ತಿಳಿಸಿದರು.

ನಂತರ ಮಾತನಾಡಿದ ಕಡಕೊಳ ಜಗದೀಶ್ ನರೇಂದ್ರ ಮೋದಿಯವರ ವಿಜ ಯೋತ್ಸವಕ್ಕೆ ನಾವೆಲ್ಲಾ ಸಿದ್ಧರಾಗುತ್ತಿದ್ದು ನಾಳೆ ಚಾಮುಂಡಿ ಬೆಟ್ಟದಲ್ಲಿ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸುತ್ತೇವೆ ಎಂದರು. ಇದೇ ಸಂದರ್ಭದಲ್ಲಿ ಜಯಸಿಂಹ ಶ್ರೀಧರ್, ಬಿಜೆಪಿಯ ಆನಂದ್, ಲೋಹಿತ್, ಗೈಡ್ ಚಂದ್ರು, ಕನ್ನಡ ಚಂದ್ರು, ಮೈ ಲಾ ವಿಜಯ ಕುಮಾರ್, ಅಪೂರ್ವ ಸುರೇಶ್ , ಪ್ರಶಾಂತ ಭಾರದ್ವಾಜ್, ಚಕ್ರಪಾಣಿ, ಸುಚೀಂದ್ರ, ಕೌಂಡಿಣ್ಯ ಮುಂತಾದವರು ವಿಶೇಷ ಪೂಜೆಯಲ್ಲಿ ಉಪಸ್ಥಿತರಿದ್ದರು.

Translate »