ಜೂ.27ರಂದು ಸಂಸ್ಕøತಿ ಚಿಂತಕ ಡಾ.ಗುಬ್ಬಿಗೂಡು ರಮೇಶ್ ಅವರ `ಸಾಮಾನ್ಯನೊಬ್ಬನ ಸ್ವಗತ’ ಕೃತಿ ಬಿಡುಗಡೆ
ಮೈಸೂರು

ಜೂ.27ರಂದು ಸಂಸ್ಕøತಿ ಚಿಂತಕ ಡಾ.ಗುಬ್ಬಿಗೂಡು ರಮೇಶ್ ಅವರ `ಸಾಮಾನ್ಯನೊಬ್ಬನ ಸ್ವಗತ’ ಕೃತಿ ಬಿಡುಗಡೆ

June 25, 2019

ಮೈಸೂರು, ಜೂ.24- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ಹಾಗೂ ಮಹಿಮಾ ಪ್ರಕಾಶನ ಸಹಯೋಗದಲ್ಲಿ ಸಂಸ್ಕøತಿ ಚಿಂತಕ, ಅಂಕಣಕಾರ ಡಾ. ಗುಬ್ಬಿ ಗೂಡು ರಮೇಶ್ ಅವರ `ಸಾಮಾನ್ಯನೊಬ್ಬನ ಸ್ವಗತ’ ಅಂಕಣ ಬರಹಗಳ ಸಂಕಲನದ ಕೃತಿ ಲೋಕಾರ್ಪಣೆ ಸಮಾರಂಭವನ್ನು ಜೂ.27 ರಂದು ಸಂಜೆ 4.30 ಗಂಟೆಗೆ ಕಲಾ ಮಂದಿ ರದ ಕಿರುರಂಗಮಂದಿರ ಆವರಣದಲ್ಲಿ ಆಯೋಜಿಸಲಾಗಿದೆ. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಎ.ಎಚ್. ವಿಶ್ವನಾಥ್ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಸಂಗೀತ ನಿರ್ದೇಶಕ ಡಾ. ಹಂಸಲೇಖ ಪ್ರಥಮ ಕೃತಿಯನ್ನು ಸ್ವೀಕಾರ ಮಾಡಲಿದ್ದಾರೆ. `ಮೈಸೂರು ಮಿತ್ರ’ ದಿನ ಪತ್ರಿಕೆ ಪ್ರಧಾನ ಸಂಪಾದಕರಾದ ಕೆ.ಬಿ.ಗಣಪತಿ ಅಧ್ಯಕ್ಷತೆ ವಹಿಸುವರು. ಅಂಕಣಕಾರ ಜೋತಿ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಎಲ್.ನಾಗೇಂದ್ರ ಆಗಮಿಸ ಲಿದ್ದು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಪ್ರಾಸ್ತಾವಿಕ ನುಡಿ ಗಳನ್ನಾಡುವರು. ಮಹಿಮಾ ಪ್ರಕಾಶನದ ಪ್ರಕಾಶಕ ಕೆ.ವಿ.ಶ್ರೀನಿವಾಸ್ ಉಪಸ್ಥಿತರಿರುವರು.

Translate »