ಮುಕ್ತ, ನ್ಯಾಯ ಸಮ್ಮತ ಚುನಾವಣೆ ಭಾರೀ ಸವಾಲು
ಮೈಸೂರು

ಮುಕ್ತ, ನ್ಯಾಯ ಸಮ್ಮತ ಚುನಾವಣೆ ಭಾರೀ ಸವಾಲು

March 17, 2019

ನವದೆಹಲಿ: ಹಣದ ದುರ್ಬಳಕೆಯಿಂದ ಭಾರತೀಯ ಪ್ರಜಾಪ್ರಭುತ್ವದಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸುವುದು ಭಾರೀ ಸವಾಲಿನ ಕೆಲಸವಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುನಾವಣಾ ಗುಪ್ತಚರಕ್ಕೆ ಸಂಬಂಧಿಸಿದ ಬಹು ಇಲಾಖೆಗಳ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಮಾಡುವ ವೆಚ್ಚಕ್ಕೆ ಸಂಬಂಧಿಸಿದಂತೆ ವಿಸ್ತೃತ ಮಾರ್ಗಸೂತ್ರವನ್ನು ಹೊರಡಿಸ ಲಾಗಿದೆ ಎಂದು ಅವರು ತಿಳಿಸಿದರು. ವೆಚ್ಚದ ಮೇಲ್ವಿಚಾರಣಾ ವ್ಯವಸ್ಥೆಯು ಪ್ರಬಲವಾಗಿದೆ ಮತ್ತು ಯಶಸ್ಸಿನ ಚುನಾವಣೆಗಳಲ್ಲಿ ನಮ್ಮ ಜಾರಿ ತಂಡಗಳು ಬೃಹತ್ ಪ್ರಮಾಣದಲ್ಲಿ ವಸ್ತು, ನಗದನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಸುನೀಲ್ ಅರೋರಾ ತಿಳಿಸಿದರು. ತೆರಿಗೆ ಮಂಡಳಿಯ ಮುಖ್ಯಸ್ಥರು,ಕಾನೂನು ಜಾರಿ ಏಜೆನ್ಸಿಗಳು, ಕೇಂದ್ರೀಯ ಪ್ಯಾರಾಮಿಲಿಟರಿ ಪಡೆಗಳು ಹಾಗೂ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಸೂಚನೆ ಗಳ ಅನುಷ್ಠಾನಕ್ಕೆ ವಿವಿಧ ಖರ್ಚಿನ ಮೇಲ್ವಿಚಾರಣಾ ತಂಡಗಳು ಮತ್ತು ಜಾರಿಗೊಳಿಸುವ ಏಜೆನ್ಸಿಗಳ ನಡುವೆ ಸಹಕಾರ ಅಗತ್ಯವಿರುತ್ತದೆ ಎಂದು ಚುನಾ ವಣಾ ಆಯುಕ್ತ ಅಶೋಕ್ ಲಾವಾಸ ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಚುನಾವಣೆ ಸಂದರ್ಭಗಳಲ್ಲಿ ಹಣ ಬಳಕೆ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟುವ ಸಲುವಾಗಿ ಸಾಮೂಹಿಕ ಕಾರ್ಯನೀತಿಯನ್ನು ಅಭಿ ವೃದ್ಧಿಗೊಳಿಸಲಾಗಿದೆ ಎಂದು ಚುನಾವಣಾ ಆಯುಕ್ತ ಸುಶೀಲ್ ಚಂದ್ರ ತಿಳಿಸಿದರು.

Translate »