ಗರ್ವಾಲೆಯಲ್ಲಿ ರಾಸುಗಳ ಪ್ರದರ್ಶನ, ಆರೋಗ್ಯ ತಪಾಸಣೆ
ಕೊಡಗು

ಗರ್ವಾಲೆಯಲ್ಲಿ ರಾಸುಗಳ ಪ್ರದರ್ಶನ, ಆರೋಗ್ಯ ತಪಾಸಣೆ

January 21, 2019

ಸೋಮವಾರಪೇಟೆ: ಕೊಡಗು ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾ ಯಿತಿ, ಪಶು ವೈದ್ಯ ಆಸ್ಪತ್ರೆ ಹಾಗೂ ಗರ್ವಾಲೆ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯ ದಲ್ಲಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಉತ್ತಮ ರಾಸುಗಳ ಪ್ರದರ್ಶನ ಹಾಗೂ ಪಶು ಆರೋಗ್ಯ ಶಿಬಿರ ನಡೆಯಿತು.

ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಉಪಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಚಾಲನೆ ನೀಡಿದರು. ನಂತರ ಮಾತನಾಡಿ, ರೈತರ ಒಡನಾಡಿಯಾಗಿರುವ ಜಾನುವಾರು ಗಳನ್ನು ಎಲ್ಲ ರೈತರು ಸಂರಕ್ಷಿಸುವ ಕೆಲಸ ಮಾಡಬೇಕಿದೆ. ಕೃಷಿಯೊಂದಿಗೆ ಹೈನುಗಾರಿ ಕೆಯಿಂದಲೂ ಹೆಚ್ಚಿನ ಲಾಭ ಗಳಿಸಲು ಅವಕಾಶವಿದ್ದು, ಉನ್ನತ ತಂತ್ರಜ್ಞಾನ ದೊಂದಿಗೆ ಹೈನುಗಾರಿಕೆ ಮಾಡಬೇಕೆಂದರು.

ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಮಾತನಾಡಿ, ಕಳೆದ ಮಳೆಗಾಲದಲ್ಲಿ ಗರ್ವಾಲೆ ಹಾಗೂ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿ ಯಲ್ಲಿ ಹೆಚ್ಚಿನ ಹಾನಿಯಾಗಿದ್ದು, ಹೆಚ್ಚಿನ ರೈತರು ನಿರಾಶ್ರಿತರಾಗಿದ್ದಾರೆ. ಇವರ ಬದುಕು ಕಟ್ಟಿಕೊಳ್ಳಲು ಸರ್ಕಾರ ನೀಡುತ್ತಿರುವ ಸವಲ ತ್ತುಗಳನ್ನು ಮೊದಲು ನೀಡುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕೆಂದರು.

ಪಶು ವೈದ್ಯಕೀಯ ಇಲಾಖೆಯ ಸಹಾ ಯಕ ನಿರ್ದೇಶಕ ಕೆ.ನಾಗರಾಜ್ ಮಾತನಾಡಿ, ಕುರಿ, ಕೋಳಿ, ಹಂದಿ ಹಾಗೂ ಜಾನುವಾ ರುಗಳನ್ನು ವೈಜ್ಞಾನಿಕವಾಗಿ ಸಾಕುವುದ ರಿಂದ ಅಧಿಕ ಲಾಭದೊಂದಿಗೆ ಕೃಷಿ ಚಟು ವಟಿಕೆಗೆ ಬೇಕಾದ ಗೊಬ್ಬರ ದೊರೆಯ ಲಿದೆ. ಸರ್ಕಾರ ಬಂಜೆ ರಾಸುಗಳ ತಪಾ ಸಣೆ ಮತ್ತು ಚಿಕಿತ್ಸೆ, ರಾಸುಗಳಿಗೆ ಉಚಿತ ಲಿಸಿಕೆ, ಜಂತುಹುಳುಗಳ ನಿವಾರಣೆಗಾಗಿ ಔಷಧಿ ವಿತರಣೆ, ಅನುಪಯುಕ್ತ ಹೋರಿ ಗಳ ಕಸಿ ಮಾಡುವುದು, ಸಾಮಾನ್ಯ ರೋಗ ತಪಾಸಣೆ, ಸಾಕು ನಾಯಿ, ಬೆಕ್ಕುಗಳಿಗೆ ರೇಬಿಸ್ ಲಸಿಕೆ ಹಾಕುವುದು, ಕುರಿ ಮೇಕೆಗಳಿಗೆ ಕರುಳು ಬೇನೆ ಲಸಿಕೆ ಸೇರಿದಂತೆ ಹಲವು ಯೋಜನೆಗಳಿದ್ದು, ರೈತರು ಈ ಯೋಜನೆ ಗಳನ್ನು ಬಳಸಿಕೊಳ್ಳಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗರ್ವಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಂ. ಸುಭಾಷ್ ವಹಿಸಿದ್ದರು. ವೇದಿಕೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷ ಪಳಂಗಪ್ಪ, ಅಭಿವೃದ್ಧಿ ಅಧಿಕಾರಿ ತಮ್ಮಯ್ಯ ಉಪಸ್ಥಿ ತರಿದ್ದರು. ವೈದ್ಯರಾದ ಸಂಜೀವಕು ಮಾರ್, ಶ್ರೀದೇವ್, ಜಾನುವಾರು ಅಭಿ ವೃದ್ಧಿ ಅಧಿಕಾರಿ ಜಯರುದ್ರಯ್ಯ, ಹಿರಿಯ ಪಶು ಪರೀಕ್ಷಕ ಸತ್ತರ್‍ಖಾನ್, ಎನ್.ಟಿ. ವಸಂತ್ ಮತ್ತು ಸಿಬ್ಬಂದಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಇದೇ ಸಂದರ್ಭ ರೈತರಿಗೆ ಪಶು ಆಹಾರ ವಿತರಿಸಲಾಯಿತು.

Translate »