ವಿಶ್ವಾಸ ಮತಯಾಚನೆ ಮುನ್ನ ಎಲ್ಲಾ ಶಾಸಕರ ಮನವೊಲಿಕೆ
ಮೈಸೂರು

ವಿಶ್ವಾಸ ಮತಯಾಚನೆ ಮುನ್ನ ಎಲ್ಲಾ ಶಾಸಕರ ಮನವೊಲಿಕೆ

July 15, 2019

ಬೆಂಗಳೂರು, ಜು.14- ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ವಿಶ್ವಾಸ ಮತಯಾಚನೆ ಮುನ್ನ ಎಲ್ಲಾ ಶಾಸ ಕರನ್ನು ಮನವೊಲಿ ಸಲಾಗುವುದು ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.

ಪ್ರತಿಯೊಬ್ಬರನ್ನು ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ. ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಮುಂಬೈನಲ್ಲಿ ರುವ ಎಲ್ಲಾ ಅತೃಪ್ತ ಶಾಸಕರು ಬೆಂಗಳೂ ರಿಗೆ ವಾಪಾಸ್ ಆಗಲಿದ್ದಾರೆ. ರಾಮ ಲಿಂಗಾರೆಡ್ಡಿ ಅವರೊಂದಿಗೆ ಸಂಪರ್ಕ ದಲ್ಲಿರುವುದಾಗಿ ತಿಳಿಸಿದರು. ಹೊಸ ಕೋಟೆ ಶಾಸಕ ಎಂಟಿಬಿ ನಾಗರಾಜ್ ಹಾಗೂ ಚಿಕ್ಕಬಳ್ಳಾಪುರ ಶಾಸಕ ಸುಧಾ ಕರ್ ಪಕ್ಷಕ್ಕೆ ವಾಪಾಸ್ ಆಗಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಸುಧಾ ಕರ್ ಬಗ್ಗೆ ಮಾತನಾಡುವುದಿಲ್ಲ. ರಾಜೀ ನಾಮೆ ಹಿಂತೆಗೆದುಕೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ. ನಾಗರಾಜ್ ಹಾಗೂ ಸುಧಾ ಕರ್ ಒಟ್ಟಿಗೆ ನಿರ್ಧಾರ ಕೈಗೊಂಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿಯೇ ಉಳಿಯುವು ದಾಗಿ ಎಂಟಿಬಿ ನಾಗರಾಜ್ ನಿರ್ಧರಿಸಿ ದ್ದಾರೆ. ಸುಧಾಕರ್ ಹಾಗೂ ಎಂಟಿಬಿ ನಾಗರಾಜ್ ಒಟ್ಟಿಗೆ ರಾಜೀನಾಮೆ ಯನ್ನು ಹಿಂಪಡೆಯಲಿದ್ದಾರೆ ಎಂದರು.

Translate »