ಬಿಜೆಪಿಗಿಂತ ಹೆಚ್ಚಿನ ಶಾಸಕರನ್ನು ಹೊಂದಿದ್ದೇವೆ
ಮೈಸೂರು

ಬಿಜೆಪಿಗಿಂತ ಹೆಚ್ಚಿನ ಶಾಸಕರನ್ನು ಹೊಂದಿದ್ದೇವೆ

July 15, 2019

ಬೆಂಗಳೂರು, ಜು.14- ಬಿಜೆಪಿಗಿಂತ ಹೆಚ್ಚಿನ ಸಂಖ್ಯೆಯನ್ನು ನಾವು ಹೊಂದಿದ್ದು, ಮೈತ್ರಿ ಸರ್ಕಾರ ಸುಭದ್ರವಾಗಿ ಇರಲಿದೆ ಎಂದು ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಹೇಳಿದ್ದಾರೆ. ಪ್ರಸ್ತುತ ರಾಜಕೀಯ ಪರಿಸ್ಥಿತಿ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದಕ್ಕೆ ಪ್ರತಿಷ್ಠೆ ಅಥವಾ ಸಂಘರ್ಷ ಕಾರಣವಲ್ಲ, ಅದು ದುರಾಸೆಯಿಂದ ನಡೆಯು ತ್ತಿದೆ. ಜೆಡಿಎಸ್‍ನಿಂದ ರಾಜೀನಾಮೆ ನೀಡಿರುವ ಹೆಚ್.ವಿಶ್ವನಾಥ್ ಹಾಗೂ ಕೆ.ಸುಧಾಕರ್ ಅವರಿಗೆ ಹೆಚ್ಚು ಹಣ ಮಾಡಬೇಕೆಂಬ ದುರಾಸೆಯಿದೆ. ಕೊನೆಯ ಉಸಿರು ಇರುವವರೆಗೂ ಗೌರವಯುತ ಶಾಸಕನಾಗಿರಲು ಇಷ್ಟಪಡುತ್ತೇನೆ. ಅನೇಕ ಶಾಸಕರು ಶಾಪಿಂಗ್ ಶಾಸಕರಾಗಿದ್ದಾರೆ ಎಂದರು.

ತಮಗೆ ಬೇಕಾದ ಅಧಿಕಾರಿಗಳನ್ನು ಪಡೆಯಲು ಸಾಧ್ಯವಾಗದಿರುವುದು ಅನೇಕ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. ಆಡಳಿತಾತ್ಮಕ ತೊಂದರೆಯಾದರೆ ಯಾರನ್ನ ದೂಷಿಸುವುದು? ಯಾವುದೇ ಆಡಳಿತದಲ್ಲಿ ಶಾಸಕರ ಆದ್ಯತೆ ಮೇರೆಗೆ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಮುಖ್ಯಮಂತ್ರಿ ನಿಯೋಜಿಸುತ್ತಾರೆಯೇ ಎಂದು ಪ್ರಶ್ನಿಸಿ ದರು. ಸಿದ್ದರಾಮಯ್ಯ ಹಾಗೂ ಸಿಎಂ ಕುಮಾರಸ್ವಾಮಿ ನಡುವೆ ಯಾವುದೇ ಭಿನ್ನಾಭಿ ಪ್ರಾಯವಿಲ್ಲ, ಅವರ ನಡುವೆ ವೈಯಕ್ತಿಕವಾಗಿ ಉತ್ತಮ ಸಂಬಂಧವಿದೆ. ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಈಶ್ವ ರಪ್ಪ ನಡುವಿನ ಭೇಟಿ ಒಂದು ಅವಕಾಶವಾಗಿತ್ತು. ಅದಕ್ಕಿಂತ ಹೆಚ್ಚು ಏನೂ ಇಲ್ಲ ಎಂದರು. ಇಂತಹ ರಾಜಕೀಯದಲ್ಲಿ ಆತ್ಮಗೌರವ ಇರುವಂತಹ ಯಾವುದೇ ಶಾಸಕರೂ ಖುಷಿಯಿಂದ ಇರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

 

Translate »