ನೆರೆ ಸಂತ್ರಸ್ತರ ನೆರವಿನಲ್ಲೂ ರಾಜಕೀಯ? ನೈಜ ಸಂತ್ರಸ್ತರಿಗೆ ನೆರವು ನೀಡಲು ಮನವಿ
ಕೊಡಗು

ನೆರೆ ಸಂತ್ರಸ್ತರ ನೆರವಿನಲ್ಲೂ ರಾಜಕೀಯ? ನೈಜ ಸಂತ್ರಸ್ತರಿಗೆ ನೆರವು ನೀಡಲು ಮನವಿ

December 15, 2018

ಮಡಿಕೇರಿ: ಕೊಡಗು ಜಿಲ್ಲೆ ಯಲ್ಲಿ ಮಹಾಮಳೆಯಿಂದ ಹಾನಿ ಸಂಭ ವಿಸಿ ನಾಲ್ಕು ತಿಂಗಳುಗಳೇ ಕಳೆದಿದ್ದರೂ ಸಂತ್ರಸ್ತರಿಗೆ ಸರಿಯಾದ ರೀತಿಯಲ್ಲಿ ಪರಿ ಹಾರ ಕಾರ್ಯಗಳು ನಡೆಯುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿದೆ.

ಸರ್ಕಾರದ ಸೌಲಭ್ಯದಿಂದ ವಂಚಿತರಾಗಿ ರುವ ಅನೇಕ ಮಂದಿ ಸಂತ್ರಸ್ತರು ಕಚೇರಿ ಯಿಂದ ಕಚೇರಿಗೆ ಇಂದಿಗೂ ಅಲೆದಾಡು ತ್ತಲೇ ಇದ್ದಾರೆ. ಮಕ್ಕಂದೂರು ಗ್ರಾಪಂ ವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಹಾನಿಯಾಗಿದ್ದರೂ ಈ ಭಾಗದ ಗ್ರಾಮ ಸ್ಥರ ಸಂಕಷ್ಟಕ್ಕೆ ಸೂಕ್ತ ಸ್ಪಂದನೆ ದೊರೆಯು ತ್ತಿಲ್ಲ ಎನ್ನುವ ಅಸಮಾಧಾನವಿದೆ.

ಮೊದಲ ಹಂತದಲ್ಲಿ ಸಂತ್ರಸ್ತರ ಪಟ್ಟಿ ಯಲ್ಲಿದ್ದ ನೊಂದ ಗ್ರಾಮಸ್ಥರ ಹೆಸರನ್ನು ನಂತರದ ದಿನಗಳಲ್ಲಿ ಕೈ ಬಿಡಲಾಗಿದೆ. ಇದರಿಂದ ಅತಂತ್ರ ಪರಿಸ್ಥಿತಿಯನ್ನು ಎದುರಿಸು ತ್ತಿರುವ ಸಂತ್ರಸ್ತರು ಇಂದು ಜಿಲ್ಲಾಧಿಕಾರಿ ಹಾಗೂ ಮಡಿಕೇರಿ ತಹಶೀಲ್ದಾರ್ ಅವ ರಿಗೆ ಮನವಿ ಪತ್ರ ಸಲ್ಲಿಸಿ ಸರ್ಕಾರ ನೀಡುವ ವಸತಿ ಸೌಲಭ್ಯವನ್ನು ನಮಗೂ ನೀಡಬೇ ಕೆಂದು ಮನವಿ ಮಾಡಿದರು.

ಮಕ್ಕಂದೂರು ಗ್ರಾಪಂ ವ್ಯಾಪ್ತಿಗೆ ಒಳಪಡುವ ಮುಕ್ಕೋಡ್ಲು, ಆವಂಡಿ, ಮೇಘತ್ತಾಳು, ಹೊದಕಾನ ಗ್ರಾಮ ಸ್ಥರು ಮೊದಲು ತಹಶೀಲ್ದಾರ್ ಕುಸುಮ ಅವರಿಗೆ ಮನವಿ ಸಲ್ಲಿಸಿದರು. ನಂತರ ಜಿಲ್ಲಾ ಧಿಕಾರಿಗಳ ಕಚೇರಿಗೆ ತೆರಳಿ ಸಂತ್ರಸ್ತರ ಪಟ್ಟಿಗೆ ಸಂಕಷ್ಟದಲ್ಲಿರುವ ಗ್ರಾಮಸ್ಥರ ಹೆಸರನ್ನು ಸೇರಿಸಬೇಕು ಮತ್ತು ಸರ್ಕಾರ ನೀಡುವ ಮನೆ ಯನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿದರು. ಬೇಡಿಕೆ ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿ ದರು. ಮಕ್ಕಂದೂರು ಗ್ರಾಪಂ ವ್ಯಾಪ್ತಿಯ ಬಹುತೇಕ ಎಲ್ಲಾ ಗ್ರಾಮಗಳು ಹಾನಿಗೊ ಳಗಾಗಿದ್ದು, ಗ್ರಾಮಸ್ಥರು ನೋವಿನ ದಿನ ಗಳನ್ನು ಕಳೆಯುತ್ತಿದ್ದಾರೆ. ಪಿಡಿಒ, ಆರ್‍ಐ ಹಾಗೂ ಸಹಾಯಕ ಗ್ರಾಮ ಲೆಕ್ಕಿಗರು ರಾಜ ಕೀಯ ಪಕ್ಷಗಳ ಪ್ರಭಾವಕ್ಕೆ ಮಣಿದು ನೈಜ ಸಂತ್ರಸ್ತರನ್ನು ಕಡೆಗಣಿಸಿದ್ದಾರೆ, ಅಲ್ಲದೆ ಸಂತ್ರ ಸ್ತರ ಪಟ್ಟಿಯಿಂದ ಹೆಸರು ತೆಗೆದಿದ್ದಾರೆ ಎಂದು ಬಹುತೇಕ ಗ್ರಾಮಸ್ಥರು ಆರೋಪಿಸಿದರು.

ಒಂದೇ ಕುಟುಂಬದ 5-6 ಮಂದಿಗೆ ಮನೆಯನ್ನು ಮಂಜೂರು ಮಾಡಿರುವ ಬಗ್ಗೆ ಮಾಹಿತಿ ಇದ್ದು, ಕರ್ತವ್ಯ ಲೋಪ ವೆಸಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ಪರಿಹಾರ ಕಾರ್ಯಗಳ ನಿರ್ವಹಣೆಗೆ ನಿಯೋಜಿಸಬೇಕು. ಒಬ್ಬ ಸಂತ್ರಸ್ತ ಕೂಡ ಸರ್ಕಾರದ ಸೌಲಭ್ಯದಿಂದ ವಂಚಿತ ನಾಗದಂತೆ ಜಿಲ್ಲಾಡಳಿತ ಅಗತ್ಯ ಕ್ರಮ ಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ ದರು. ಮುಂದಿನ ಒಂದು ತಿಂಗಳೊಳಗೆ ನೈಜ ಫಲಾನುಭವಿಗಳ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ ಹೋರಾಟವನ್ನು ತೀವ್ರ ಗೊಳಿಸುವುದಾಗಿ ಎಚ್ಚರಿಕೆ ನೀಡಿದರು. ಮನವಿ ಸಲ್ಲಿಸುವ ಸಂದರ್ಭ ಮುಕ್ಕೋಡ್ಲು, ಆವಂಡಿ, ಮೇಘತ್ತಾಳು, ಹೊದಕಾನ ಗ್ರಾಮಸ್ಥರು ಹಾಜರಿದ್ದರು. ಗ್ರಾಮಸ್ಥರ ದೂರನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅಧಿ ಕಾರಿಗಳು ಭರವಸೆ ನೀಡಿದರು.

Translate »