ಮೈಸೂರು, ಫೆ.6(ಪಿಎಂ)- ತಾವು ಶಾಸಕ ರಾಗಿದ್ದ ಅವಧಿಯಲ್ಲಿ ಕೊಳಚೆ ನಿರ್ಮೂ ಲನಾ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ಯೋಜನೆ ಸೇರಿ ಮಂಜೂರು ಮಾಡಿ ಸಿದ್ದ ಒಟ್ಟು 5,296 ಮನೆಗಳ ಕಾಮಗಾರಿ ಆರಂಭವಾಗದಂತೆ ಹಾಲಿ ಶಾಸಕ ಎಸ್.ಎ. ರಾಮದಾಸ್ ತಡೆಯೊಡ್ಡಿದ್ದಾರೆ ಎಂದು ಆರೋ ಪಿಸಿದ ಮಾಜಿ ಶಾಸಕ ಎಂ.ಕೆ.ಸೋಮ ಶೇಖರ್, ಇದನ್ನು ಖಂಡಿಸಿ ಫೆ.7ರಂದು ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸತತ 4 ವರ್ಷ ಗಳು ಶ್ರಮವಹಿಸಿ ಮುಡಾದಿಂದ ಜಮೀನು ಪಡೆದು ಮಳಲವಾಡಿಯಲ್ಲಿ 1,344, ವಿಶ್ವೇ ಶ್ವರನಗರದಲ್ಲಿ 868 ಮನೆ ಸೇರಿದಂತೆ ನಗರ ದಲ್ಲಿ ಒಟ್ಟು 2,212 ಮನೆಗಳನ್ನು ನಿರ್ಮಿ ಸಲು ಕೊಳಚೆ ನಿರ್ಮೂಲನೆ ಮಂಡಳಿ ಯಿಂದ ಹಣ ಬಿಡುಗಡೆ ಮಾಡಿಸಿದ್ದೇನೆ. ಈ ಕಾಮಗಾರಿಗೆ ಟೆಂಡರ್ ಕೂಡ ಆಗಿದೆ. ಆದರೆ ಹಾಲಿ ಶಾಸಕ ಎಸ್.ಎ.ರಾಮ ದಾಸ್ ಗುತ್ತಿಗೆದಾರರನ್ನು ಕೆಲಸ ಮಾಡದಂತೆ ತಡೆ ಯುತ್ತಿದ್ದಾರೆ ಎಂದು ಆಪಾದಿಸಿದರು.
ರಾಜೀವ್ ಗಾಂಧಿ ವಸತಿ ಯೋಜನೆ ಯಡಿ ಲಲಿತಾದ್ರಿಪುರದಲ್ಲಿ 1,440 ಹಾಗೂ ಗೊರೂರಿನಲ್ಲಿ 1,644 ಮನೆಗಳ ನಿರ್ಮಾಣ ಸೇರಿದಂತೆ ಒಟ್ಟು 3,084 ಮನೆಗಳ ನಿರ್ಮಾಣಕ್ಕಾಗಿ 18 ಕೋಟಿ ರೂ. ಒಂದೂವರೆ ವರ್ಷದ ಹಿಂದೆಯೇ ಮಂಜೂರಾಗಿದೆ. ಆದರೆ ಇದಕ್ಕೂ ಹಾಲಿ ಶಾಸಕರು ತಡೆ ಹಾಕಿರುವ ಹಿನ್ನೆಲೆಯಲ್ಲಿ ಮಂಜೂರಾದ ಹಣ ಜಿಲ್ಲಾಧಿಕಾರಿಗಳ ಖಾತೆಯಲ್ಲೇ ಕೊಳೆಯುವಂತಾಗಿದೆ ಎಂದು ಅವರು ದೂರಿದರು.
ಮೈಸೂರು ಡಿಸಿ ಕಚೇರಿ ಎದುರು ಶುಕ್ರ ವಾರ ಬೆಳಿಗ್ಗೆ 10.30ಕ್ಕೆ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇದಕ್ಕೂ ಜಗ್ಗದಿದ್ದರೆ ಹಂತಹಂತವಾಗಿ ಹೋರಾಟ ತೀವ್ರಗೊಳಿಸ ಲಾಗುವುದು ಎಂದು ಎಚ್ಚರಿಸಿದರು. ಪಾಲಿಕೆ ಸದಸ್ಯ ಲೋಕೇಶ್ ಪಿಯಾ, ಮಾಜಿ ಸದಸ್ಯ ಸುನೀಲ್, ಮುಖಂಡರಾದ ಗುಣಶೇಖರ್, ವಿಶ್ವನಾಥ್ ಸುದ್ದಿಗೋಷ್ಠಿಯಲ್ಲಿದ್ದರು.