ರೆವಿನ್ಯೂ ಇನ್ಸ್‍ಪೆಕ್ಟರ್ ಸಮಾನ ಪೊಲೀಸ್ ಪೇದೆಗಳಿಗೆ ವೇತನ
ಮೈಸೂರು

ರೆವಿನ್ಯೂ ಇನ್ಸ್‍ಪೆಕ್ಟರ್ ಸಮಾನ ಪೊಲೀಸ್ ಪೇದೆಗಳಿಗೆ ವೇತನ

September 13, 2018

ಬೆಂಗಳೂರು:  ಪೊಲೀಸ್ ಕಾನ್‍ಸ್ಟೆಬಲ್‍ಗಳ ವೇತನವನ್ನು ರೆವಿನ್ಯೂ ಇನ್ಸ್‍ಪೆಕ್ಟರ್ (ಕಂದಾಯ ಇಲಾಖೆಯ ನಿರೀಕ್ಷಕರ) ಹುದ್ದೆಗೆ ಸರಿಸಮಾನವಾಗಿ ನಿಗದಿ ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದ್ದು, ಆರನೇ ವೇತನ ಆಯೋಗ ಜಾರಿ ವೇಳೆ ಇದು ಅನುಷ್ಠಾನಕ್ಕೆ ಬರಲಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಭರವಸೆ ನೀಡಿದರು.

ನಗರ ಪೊಲೀಸ್ ಆಯುಕ್ತರ ಕಚೇರಿಯ ಲ್ಲಿಂದು ಹಿರಿಯ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2016ರಲ್ಲಿ ರಚಿಸಲಾ ಗಿದ್ದ ಹಿರಿಯ ಪೊಲೀಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ಸಮಿತಿ ವರದಿ ಆಧರಿಸಿ ವೇತನ ಪರಿಷ್ಕರಣೆಗೆ ಶಿಫಾರಸು ಮಾಡಲಾಗಿದೆ. ಸಮಿತಿ ವರದಿಗೂ ಮುನ್ನವೇ ಪೊಲೀಸರಿಗೆ 2 ಸಾವಿರ ರೂ.ಗಳ ಭತ್ಯೆಯನ್ನು ನೀಡ ಲಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ 1.06 ಲಕ್ಷ ಪೊಲೀಸ್ ಹುದ್ದೆ ಗಳಿಗೆ ಮಂಜೂರಾತಿ ನೀಡಿದ್ದು, 75 ಸಾವಿರ ಕಾನ್‍ಸ್ಟೆಬಲ್‍ಗಳು ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ನಗರ ಆಯುಕ್ತಾಲಯಕ್ಕೆ 24,875 ಹುದ್ದೆಗಳು ಮಂಜೂರಾಗಿದ್ದು, 18,331 ಮಂದಿ ಕೆಲಸ ಮಾಡುತ್ತಿದ್ದಾರೆ. 6,500 ಹುದ್ದೆಗಳು ಖಾಲಿ ಇವೆ. ಅದರಲ್ಲಿ ಒಂದೂವರೆ ಸಾವಿರ ಕಾನ್‍ಸ್ಟೆಬಲ್‍ಗಳ ಹುದ್ದೆಗೆ ನೇಮಕಾತಿಯಾಗಿ ತರಬೇತಿಯಲ್ಲಿದ್ದು,
ಇನ್ನೇನು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಪೊಲೀಸ್ ವಸತಿ ಗೃಹಗಳಿಗೆ 2,872 ಕೋಟಿ ಖರ್ಚು ಮಾಡಿ, ಮೂರು ಹಂತಗಳಲ್ಲಿ ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತಿದೆ. ಜೊತೆಗೆ ಬಿಡಿಎ ನಿರ್ಮಿಸಿರುವ 2 ಸಾವಿರ ಫ್ಲಾಟ್ ಖರೀದಿ ಮಾಡಿ ಪೊಲೀಸ್ ಸಿಬ್ಬಂದಿಗೆ ನೀಡಲಾಗುವುದು. ಕಾನೂನು ಸುವ್ಯವಸ್ಥೆ ರಕ್ಷಣೆಗೆ ಹೊಸ ಗಸ್ತು ವ್ಯವಸ್ಥೆ ರೂಪಿಸಲಾಗಿದೆ. ಅದರ ಪ್ರಕಾರ ಆಯಾ ಗಸ್ತಿನ ವ್ಯಾಪ್ತಿಯಲ್ಲಿ ವಾಸವಿರುವವರ ಸಂಪೂರ್ಣ ಮಾಹಿತಿಯನ್ನು ಕಾನ್‍ಸ್ಟೆಬಲ್‍ಗಳು ಇಟ್ಟುಕೊಳ್ಳಬೇಕು. ಈಗಾಗಲೇ ಬಲೇರಿಯಾ, ಇರಾನಿ ಗ್ಯಾಂಗ್‍ಗಳನ್ನು ಪೊಲೀಸರು ಬಂಧಿಸಿ ಜೈಲಿನಲ್ಲಿರಿ ಸಿದ್ದಾರೆ. ಕಳ್ಳತನ ಪ್ರಕರಣ ನಿಯಂತ್ರಿಸಲಾಗಿದೆ. 107 ಮಂದಿ ವಿದೇಶಿ ಪ್ರಜೆಗಳು ಅಕ್ರಮವಾಗಿ ಬರುತ್ತಿದ್ದು, ಅವರನ್ನು ಗಡಿಪಾರು ಮಾಡಲು ಕೇಂದ್ರ ವಿದೇಶಾಂಗ ಸಚಿವಾಲಯದ ಅನುಮತಿ ಕೇಳಲಾಗಿದೆ. ವಿದೇಶಿ ಪ್ರಜೆಗಳ ಪೈಕಿ ಕೆಲವರು ಮಾದಕ ವಸ್ತುಗಳ ಸಾಗಾಣಿಕೆಯಲ್ಲೂ ಬಂಧಿತರಾಗಿದ್ದಾರೆ ಎಂದು ಹೇಳಿದರು.

ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ. 2006ರಲ್ಲಿ 23 ಲಕ್ಷ ವಾಹನಗಳು ನೋಂದಣಿಯಾಗಿದ್ದವು. 2018ರ ಜೂನ್ ವೇಳೆಗೆ 75,66,109 ನೋಂದಣಿಯಾಗಿವೆ. ಹೀಗಾಗಿ 10 ವರ್ಷದಲ್ಲಿ ವಾಹನಗಳ ನೋಂದಣಿ ಸಂಖ್ಯೆ ತೀವ್ರವಾಗಿ ಹೆಚ್ಚಾಗಿದೆ. 37 ಕಡೆ ಹೈಡೆಫನೇಷನ್ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಇನ್ನೂ 300 ಕಡೆ ಈ ರೀತಿ ಕ್ಯಾಮರಾ ಅಳವಡಿಸಲಾಗುವುದು. ಸಂಚಾರಿ ಪೊಲೀಸರ ಜೊತೆ ಸಾರ್ವಜನಿಕರು ಅನಗತ್ಯವಾಗಿ ಜಗಳ ಮಾಡುವುದನ್ನು ಸಾಕ್ಷಿ ಸಮೇತ ಕೋರ್ಟ್‍ಗೆ ಹಾಜರುಪಡಿಸಲು ಈಗಾಗಲೇ 50 ಮಂದಿ ಪೊಲೀಸರಿಗೆ ಬಾಡಿ ಕ್ಯಾಮರಾಗಳನ್ನು ಒದಗಿಸಲಾಗಿದೆ. ಎಲ್ಲಾ ಕಾನ್‍ಸ್ಟೆಬಲ್‍ಗಳಿಗೂ ಈ ಕ್ಯಾಮರಾಗಳನ್ನು ನೀಡಲಾಗುವುದು. ಮದ್ಯಪಾನಿಗಳ ತಪಾಸಣೆಗೆ 356 ಆಲ್ಕೋಹಾಲಿಕ್ ಮೀಟರ್ ಗಳನ್ನು ನೀಡಿದ್ದೇವೆ. ದಂಡ ವಿಧಿಸಲು 625 ಎನ್‍ಫೆÇೀರ್ಸ್‍ಮೆಂಟ್ ಎಕ್ಯೂಪ್‍ಮೆಂಟ್ ಗಳನ್ನು ನೀಡಲಾಗಿದೆ ಎಂದು ಹೇಳಿದರು. ಮಾದಕ ವಸ್ತುಗಳ ನಿಯಂತ್ರಣದಡಿ ಕಳೆದ ವರ್ಷ 354 ಪ್ರಕರಣಗಳನ್ನು ದಾಖಲಿಸಲಾಗಿತ್ತು. ಈ ವರ್ಷ 108 ಪ್ರಕರಣಗಳನ್ನು ದಾಖಲಿಸಿದ್ದೇವೆ. ಒಟ್ಟು 587 ಕೆಜಿ ಗಾಂಜಾ, 15 ಇತರೆ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. 298 ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಮಾದಕ ವಸ್ತು ಸಾಗಾಣಿಕೆದಾರರು, ಸರಗಳ್ಳರ ಮೇಲೂ ಗೂಂಡಾ ಕಾಯ್ದೆ ಬಳಸಲಾಗುತ್ತಿದೆ. ಬೆಂಗಳೂರಿನಲ್ಲಿ ಈವರೆಗೂ 14 ಮಂದಿ ವಿರುದ್ಧ ಗೂಂಡಾ ಕಾಯ್ದೆ ಜಾರಿ ಮಾಡಲಾಗಿದೆ. ಇನ್ನು ಮುಂದೆ ಯಾವುದೇ ಅಪರಾಧ ಪ್ರಕರಣಗಳು ನಡೆದರೂ ಆಯಾ ವಿಭಾಗದ ಎಸಿಪಿ, ಡಿಸಿಪಿಗಳನ್ನೇ ಹೊಣೆ ಮಾಡಲಾಗುವುದು ಎಂದು ಹೇಳಿದರು. ಸೈಬರ್ ಕ್ರೈಂಗಳನ್ನು ನಿಭಾಯಿಸುವ ವಿಷಯದಲ್ಲಿ ಕರ್ನಾಟಕ ದೇಶದ ಎಲ್ಲಾ ರಾಜ್ಯಗಳಿಗಿಂತಲೂ ಮುಂದಿದೆ. ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಜರ್ಮನಿಯ ತಜ್ಞರಿಂದ ತರಬೇತಿ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದು, ಅಪರಾಧ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಪರಮೇಶ್ವರ್ ಸಮರ್ಥಿಸಿಕೊಂಡರು.

Translate »