2 ಲಕ್ಷ ಮೌಲ್ಯದ ಮರ ವಶ; ಓರ್ವನ ಬಂಧನ
ಕೊಡಗು

2 ಲಕ್ಷ ಮೌಲ್ಯದ ಮರ ವಶ; ಓರ್ವನ ಬಂಧನ

July 21, 2018

ಗೋಣಿಕೊಪ್ಪಲು: ಅರಣ್ಯದಲ್ಲಿ ಮರ ಕಡಿದು ಸಾಗಾಟ ಮಾಡುತ್ತಿದ್ದ ಆರೋಪದಡಿ ಕೊಂಡಿದ್ದಾರೆ. ತಿತಿಮತಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಒಬ್ಬ ಆರೋಪಿಯನ್ನು ಬಂಧಿಸಿ, 2 ಲಕ್ಷ ಮೌಲ್ಯದ ಮಾಲು ವಶ ಪಡಿಸಿಕೊಂಡಿದ್ದಾರೆ. ಚೆನ್ನಂಗೊಲ್ಲಿಯ ಮುಕ್ತಾರ್ (37) ಬಂಧಿತ ಆರೋಪಿ. ಆರೋಪಿಯನ್ನು ಪೊನ್ನಂ ಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಖಚಿತ ಮಾಹಿತಿಯಂತೆ ಶುಕ್ರವಾರ ಮುಂಜಾನೆ 6 ಗಂಟೆ ಸುಮಾ ರಿಗೆ ದಾಳಿ ನಡೆಸಿರುವ ಅರಣ್ಯ ಇಲಾಖೆ ತಂಡ ತಾರಿಕಟ್ಟೆ ಅರಣ್ಯ ದಿಂದ ಮರ ಕಡಿದು ಸಾಗಾಟ ಮಾಡುತ್ತಿದ್ದ ಸಂದರ್ಭ ವಶ ಪಡಿಸಿಕೊಳ್ಳಲಾಗಿದೆ. ಮಾರುತಿ ಓಮ್ನಿ ವ್ಯಾನ್‍ಗೆ ಬೀಟೆ ಹಾಗೂ ತೇಗದ ಮರದ ತುಂಡುಗಳನ್ನು ತುಂಬಿ ಸಾಗಾಟಕ್ಕೆ ಮುಂದಾಗಿದ್ದರು. ದಾಳಿ ಸಂದರ್ಭ ಉಳಿದ ಆರೋಪಿಗಳು ತಪ್ಪಿಸಿಕೊಂಡಿದ್ದು, ಚಾಲಕ ಮುಕ್ತಾರ್ ವಶಕ್ಕೆ ಪಡೆದುಕೊಳ್ಳಲಾಗಿದೆ. 8 ಮರದ ತುಂಡುಗಳು ಹಾಗೂ ವಾಹನ ಸೇರಿದಂತೆ 2 ಲಕ್ಷದ ಮೌಲ್ಯದ ಮಾಲು ವಶಕ್ಕೆ ಪಡೆಯ ಲಾಗಿದೆ. ಉಳಿದ ಆರೋಪಿಗಳಿಗೆ ಬಲೆ ಬೀಸಲಾಗಿದೆ.

ತಿತಿಮತಿ ವಲಯ ಪ್ರಭಾರ ವಲಯಾಧಿಕಾರಿ ಶಿವಶಂಕರ್ ನೇತೃತ್ವದಲ್ಲಿ ವನಪಾಲಕ ಗಣಪತಿ, ಸಿಬ್ಬಂದಿಗಳಾದ ದೇವರಾಜು, ಪೊನ್ನಣ್ಣ, ಸಿದ್ದ, ಸಂಜು ಸಂತೋಷ್, ದಾದು ಪಾಲ್ಗೊಂಡಿದ್ದರು.

Translate »