ಸೇವಾ ಕಾರ್ಯದ ಮೂಲಕ ಸಮಾಜ ಸೇವಕ ಸುಜಿತ್‍ಕುಮಾರ್ ಹುಟ್ಟುಹಬ್ಬ ಸರಳ ಆಚರಣೆ
ಮೈಸೂರು

ಸೇವಾ ಕಾರ್ಯದ ಮೂಲಕ ಸಮಾಜ ಸೇವಕ ಸುಜಿತ್‍ಕುಮಾರ್ ಹುಟ್ಟುಹಬ್ಬ ಸರಳ ಆಚರಣೆ

January 23, 2020

ಮೈಸೂರು,ಜ.22-ನಗರದ ಮೈಸೂರು ಸ್ನೇಹಜೀವಿ ಬಳಗ ಹಾಗೂ ಮಂಡಿ ಲಷ್ಕರ್ ಮೊಹಲ್ಲಾ ಗೆಳೆಯರ ಬಳಗದ ವತಿಯಿಂದ ಸಮಾಜ ಸೇವಕ ಹೆಚ್.ಎಸ್. ಸುಜಿತ್‍ಕುಮಾರ್ ಹುಟ್ಟುಹಬ್ಬವನ್ನು ವಿವಿಧ ಸೇವಾ ಕಾರ್ಯಗಳ ಮೂಲಕ ಇಂದು (ಜ.22) ಆಚರಿಸಲಾಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಇನ್ಫೋಸಿಸ್‍ನ ಪ್ರಾಜೆಕ್ಟ್ ಅಧಿ ಕಾರಿ ಅಮರ್, ನಿಸ್ವಾರ್ಥ ಸೇವೆಯೇ ಮನುಷ್ಯನಿಗೆ ನಿಜವಾದ ಆತ್ಮತೃಪ್ತಿ. ಸೇವೆ ಮಾಡಬೇಕಾದರೆ ಯಾವುದೇ ರೀತಿಯಾ ದಂತಹ ಮುಜುಗರವಿರಬಾರದು. ಮನ ಸಾರೆ ಮಾಡಿದಾಗ ಸಂತೋಷದೊಂದಿಗೆ ನೆಮ್ಮದಿ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷವೂ ಕೂಡ ಸಮಾಜ ಸೇವಕ ಹೆಚ್.ಎಸ್.ಸುಜಿತ್ ಕುಮಾರ್ ಹುಟ್ಟು ಹಬ್ಬವನ್ನು ಸಮಾಜಮುಖಿ ಕೆಲಸಗಳೊಂ ದಿಗೆ ಆಚರಿಸುತ್ತಿರುವುದು ಅರ್ಥಪೂರ್ಣ ಎಂದು ತಿಳಿಸಿ, ಕಳೆದ ವರ್ಷವೂ ಇದೇ ರೀತಿ ಸರಳವಾಗಿ ಹುಟ್ಟುಹಬ್ಬವನ್ನು ಆಚ ರಿಸಿ, ಕೊಡಗಿನ ನೆರೆ ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಬಳಗವು ನೆರವಾಗಿರುವು ದನ್ನು ಸ್ಮರಿಸಿದರು.

Social worker Sujith Kumar's birthday is a simple celebration through service-1

ಇದೇ ಸಂದರ್ಭದಲ್ಲಿ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿ ಸಮುದಾಯಕ್ಕೆ ಲೇಖನ ಸಾಮಗ್ರಿಗಳನ್ನು ವಿತರಿಸಿ, ಆರ್ಥಿಕ ನೆರವನ್ನು ನೀಡಲಾಯಿತು. ಈ ಸಂದರ್ಭ ದಲ್ಲಿ ಬಳಗದ ಹೆಚ್.ಹರೀಶ್‍ಕುಮಾರ್, ಸತ್ಯನಾರಾಯಣ್, ಕೃಷ್ಣಮೂರ್ತಿ, ಮಂಜು ನಾಥ್, ವಕೀಲ ಹರೀಶ್‍ಗೌಡ ಮತ್ತಿತ ರರು ಉಪಸ್ಥಿತರಿದ್ದರು.

Translate »