‘ಮಂಡ್ಯದ ಗಂಡು’ ಅಂಬಿಗೆ ಭಾವಪೂರ್ಣ ಶ್ರದ್ಧಾಂಜಲಿ
ಮಂಡ್ಯ

‘ಮಂಡ್ಯದ ಗಂಡು’ ಅಂಬಿಗೆ ಭಾವಪೂರ್ಣ ಶ್ರದ್ಧಾಂಜಲಿ

November 26, 2018

ಮಂಡ್ಯ : ಮಂಡ್ಯದ ಗಂಡು, ಚಿತ್ರ ನಟ, ರೆಬೆಲ್‍ಸ್ಟಾರ್ ಹಾಗೂ ಮಾಜಿ ಸಚಿವ ಅಂಬರೀಶ್ ನಿಧನಕ್ಕೆ ಅವರ ಅಭಿಮಾನಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ಜಿಲ್ಲಾದ್ಯಂತ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಮಂಡ್ಯ, ಮದ್ದೂರು, ಮಳವಳ್ಳಿ, ನಾಗಮಂಗಲ, ಕೆ.ಆರ್.ಪೇಟೆ, ಶ್ರೀರಂಗಪಟ್ಟಣ, ಪಾಂಡವ ಪುರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಅಂಬರೀಶ್ ನಿಧನಕ್ಕೆ ಜಿಲ್ಲೆಯ ಜನರು ಹಾಗೂ ಅಂಬಿ ಅಭಿಮಾನಿಗಳು ಅಂಬರೀಶ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂ ಜಲಿ ಸಲ್ಲಿಸಿರುವ ಬಗ್ಗೆ ವರದಿಯಾಗಿದೆ.

ಕೆ.ಆರ್.ಪೇಟೆ: ರೆಬೆಲ್‍ಸ್ಟಾರ್ ಅಂಬರೀಶ್ ನಿಧನಕ್ಕೆ ಪಟ್ಟಣ ಹಾಗೂ ತಾಲೂಕಿನ ವಿವಿಧೆಡೆ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿದರು.

ನಾರ್ಗೋನಹಳ್ಳಿ: ತಾಲೂಕಿನ ನಾರ್ಗೋ ನಹಳ್ಳಿಯ ಅಂಬರೀಶ್ ಅಭಿಮಾನಿಗಳ ಸಂಘದ ವತಿಯಿಂದ 20 ಅಡಿ ಎತ್ತರದ ಅಂಬರೀಶ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಅಗಲಿದ ನಾಯಕನ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ಸುಧಾಕರ್, ಎಸ್‍ಡಿಎಂಸಿ ಮಾಜಿ ಅಧ್ಯಕ್ಷ ನಂದೀಶ್, ಅಭಿಮಾನಿ ಬಳಗದ ಮುಖಂಡರಾದ ಕೆ.ವಿ.ದಿವಾಕರ್, ನಂಜುಂಡೇಗೌಡ, ಎನ್.ಜೆ.ಮಂಜು, ನರಸಿಂಹಮೂರ್ತಿ, ಎನ್.ಜಿ.ಮಂಜು, ಎನ್.ಬಿ.ನಂಜುಂಡಯ್ಯ, ಸ್ವಾಮಿ, ಕಿಶೋರ್, ಸಾಯಿಕುಮಾರ್, ರಾಮ ಚಂದ್ರು ಮತ್ತಿತರರಿದ್ದರು.

ಜಯ ಕರ್ನಾಟಕ ಸಂಘಟನೆ: ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ತಾಲೂಕು ಜಯ ಕರ್ನಾಟಕ ಸಂಘಟನೆ ವತಿ ಯಿಂದ ಅಂಬರೀಶ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಅಂಬರೀಶ್ ಅಭಿಮಾನಿಗಳ ಸಂಘದ ಗೌರವಾಧ್ಯಕ್ಷ ಕೆ.ಬಿ.ರವಿಕುಮಾರ್, ತಾಲೂಕು ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಕೆ.ಎಸ್.ಕುಮಾರ್, ಜಿಲ್ಲಾ ಘಟಕದ ಉಪಾಧ್ಯಕ್ಷ ಎಸ್.ವಿ.ವಿನಯ್, ತಾಲೂಕು ಉಪಾಧ್ಯಕ್ಷ ಎಸ್.ರವಿ, ನಟರಾಜ್, ನಗರ ಘಟಕದ ಅಧ್ಯಕ್ಷ ಮದನ್‍ಗೌಡ, ಸೋಮ ಶೇಖರ್, ಆನಂದ್, ವರುಣ್ ಸೇರಿದಂತೆ ನೂರಾರು ಅಂಬರೀಷ್ ಅಭಿಮಾನಿಗಳು ಹಾಗೂ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಅಂಬರೀಶ್‍ಗೆ ಗೌರವ ನಮನ ಸಲ್ಲಿಸಿದರು.

ಗೆಳೆಯರ ಬಳಗ: ಪಟ್ಟಣದ ಹಾಸ್ಟೆಲ್ ಬಿಲ್ಡಿಂಗ್ ವರ್ತಕರ ಸಂಘ ಹಾಗೂ ಅಂಬ ರೀಶ್ ಗೆಳೆಯರ ಬಳಗದ ವತಿಯಿಂದ ಅಂಬ ರೀಶ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ವರ್ತಕರ ಸಂಘದ ರಮೇಶ್, ಅಂಬರೀಶ್ ಗೆಳೆಯರ ಬಳಗದ ಬಿ.ಎ.ಮಂಜುನಾಥ್, ಡಿ.ಪ್ರೇಮಕುಮಾರ್, ಶಿಕ್ಷಕ ನಾಗೇಶ್, ಕೆ.ಎಸ್.ಸತೀಶ್ ಮತ್ತಿತರರು ಅಂಬರೀಶ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಅಲ್ಲದೇ ಸಂತೇಬಾಚಹಳ್ಳಿ, ಹರಿಹರಪುರ, ದಡದಹಳ್ಳಿ, ಕಿಕ್ಕೇರಿ, ಬೂಕನಕೆರೆ ಸೇರಿದಂತೆ ತಾಲೂಕಿನ ಬಹುತೇಕ ಎಲ್ಲಾ ಗ್ರಾಮಗಳಲ್ಲಿಯೂ ಅಭಿಮಾನಿಗಳು ಅಂಬರೀಶ್ ಭಾವಚಿತ್ರವನಿಟ್ಟು ಶ್ರದ್ಧಾಂ ಜಲಿ ಸಲ್ಲಿಸಿ, ಕಂಬನಿ ಮಿಡಿದರು.

Translate »