ಪೇಜಾವರ ಶ್ರೀಗಳು ಶೀಘ್ರ ಗುಣಮುಖರಾಗಲೆಂದು ವಿಶೇಷ ಪೂಜೆ
ಮೈಸೂರು

ಪೇಜಾವರ ಶ್ರೀಗಳು ಶೀಘ್ರ ಗುಣಮುಖರಾಗಲೆಂದು ವಿಶೇಷ ಪೂಜೆ

December 22, 2019

ಮೈಸೂರು,ಡಿ.21(ವೈಡಿಎಸ್)- ಪೇಜಾ ವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆ ಬೇಗ ಗುಣ ಮುಖರಾಗಿ ಬರಲೆಂದು ಮೈಸೂರು ನಗರ ಬ್ರಾಹ್ಮಣ ಸಂಘದ ವತಿಯಿಂದ ಸರಸ್ವತಿ ಪುರಂನ ಶ್ರೀಕೃಷ್ಣಧಾಮದಲ್ಲಿ ವಿಷ್ಣುಸಹಸ್ರ ನಾಮ, ಪಾರಾಯಣ, ಸಾಮೂಹಿಕ ಪ್ರಾರ್ಥನೆ ಮಾಡಿ ವಿಶೇಷಪೂಜೆ ಸಲ್ಲಿಸಲಾಯಿತು.

ನಂತರ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ.ಪ್ರಕಾಶ್ ಮಾತನಾಡಿ, ಪೇಜಾವರ ಶ್ರೀಗಳು ತಮ್ಮ 83ನೇ ಚಾತುರ್ಮಾಸವನ್ನು ಮೈಸೂರಿನಲ್ಲಿ ಹಮ್ಮಿಕೊಂಡಿದ್ದರಿಂದ ಅವರ ಅನುಗ್ರಹ, ಆಶೀರ್ವಾದ ನಗರದ ಜನತೆಗೆ ಸಿಕ್ಕಿದೆ. ಅವರು ಜಾತಿ, ಮತ ಭೇದವಿಲ್ಲದೆ ಯಾರೇ ಕರೆದರೂ ಅವರ ಮನೆಗೆ ತೆರಳಿ ಪೂಜೆ ನೆರವೇರಿಸುತ್ತಿದ್ದರು. ಇದರಿಂದ ಅವರಿಗೆಲ್ಲ ಒಳ್ಳೆಯದೇ ಆಗಿದೆ ಎಂದರು.

ಪೇಜಾವರ ಶ್ರೀಗಳು ಎಲ್ಲಾ ಸನ್ಯಾಸಿಗಳು, ಮಠಾಧೀಶರಂತಲ್ಲ. ಅವರೊಬ್ಬ ದಾರ್ಶ ನಿಕರಾಗಿದ್ದರು. ಸಮಾಜದಲ್ಲಿ ಯಾವುದೇ ಘಟನೆಗಳು ನಡೆದರೂ ಸ್ಥಳಕ್ಕೆ ತೆರಳಿ ಸಮಸ್ಯೆ ಗಳನ್ನು ಬಗೆಹರಿಸುತ್ತಿದ್ದರು. ಹಾಗಾಗಿ ಗಾಯತ್ರಿ ಮಾತೆಯು ಪೇಜಾವರ ಶ್ರೀಗಳಿಗೆ ಆಯಸ್ಸು ಆರೋಗ್ಯ ನೀಡಲಿ. ಬೇಗ ಗುಣಮುಖರಾಗಿ ಬರಲೆಂದು ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು.

ಮಹಿಳಾ ಭಜನಾ ಮಂಡಳಿಯವರು ಪೇಜಾ ವರ ಶ್ರೀಗಳು ಹೇಳಿಕೊಟ್ಟಂತಹ ಕೀರ್ತನೆ, ವಿಷ್ಣು ಸಹಸ್ರನಾಮವನ್ನು ಪಠಿಸಿ, ಸಾಮೂ ಹಿಕ ಪ್ರಾರ್ಥನೆ ಸಲ್ಲಿಸಿದರು. ಬ್ರಾಹ್ಮಣ ಸಂಘದ ಕಾರ್ಯಾಧ್ಯಕ್ಷ ಕೃಷ್ಣದಾಸ್ ಪುರಾಣಿಕ್, ಪ್ರಧಾನ ಕಾರ್ಯದರ್ಶಿ ಅಪೂರ್ವ ಸುರೇಶ್, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಸತ್ಯನಾರಾಯಣ್, ಅಗಸ್ತ್ಯ ಬ್ಯಾಂಕ್ ಅಧ್ಯಕ್ಷ ಪಾರ್ಥಸಾರಥಿ, ಪಾಲಿಕೆ ಸದಸ್ಯ ಮಾ.ವಿ. ರಾಂಪ್ರಸಾದ್, ಎಂ.ಡಿ.ಪಾರ್ಥ ಸಾರಥಿ, ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಚಕ್ರಪಾಣಿ, ಸುಚೀಂದ್ರ, ಪ್ರಶಾಂತ್, ವೀಣಾಡೋಂಗ್ರೆ, ಲತಾ, ಅನುಸೂಯ, ರಾಧಿಕಾ ಮತ್ತಿತರರು ಇದ್ದರು.

Translate »