ಮೇಜರ್ ಎಸ್.ವಿ.ವಿವೇಕ್‍ಗೆ ಪದೋನ್ನತಿ
ಕೊಡಗು

ಮೇಜರ್ ಎಸ್.ವಿ.ವಿವೇಕ್‍ಗೆ ಪದೋನ್ನತಿ

January 26, 2019

ಮಡಿಕೇರಿ: ಕೊಡಗು ಮೂಲದ ಮೇಜರ್ ಎಸ್.ವಿ. ವಿವೇಕ್ ಅವರು ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಹುದ್ದೆಗೆ ಪದೋನ್ನತಿ ಪಡೆದಿದ್ದಾರೆ.

ವಿರಾಜಪೇಟೆ ಬಳಿಯ ಕುಕ್ಲೂರು ಗ್ರಾಮ ನಿವಾಸಿ, ಮಡಿ ಕೇರಿಯ ಆರ್ಮಿ ಕ್ಯಾಂಟೀನ್‍ನ ವ್ಯವಸ್ಥಾಪಕರಾಗಿದ್ದ ಮೇಜರ್ ಎಸ್.ಕೆ. ವೆಂಕಟಗಿರಿ ಮತ್ತು ವನಜಾಕ್ಷಿ ದಂಪತಿ ಪುತ್ರರಾಗಿರುವ ವಿವೇಕ್ ಭಾರತೀಯ ಸೇನಾ ಪಡೆಯ ವೈಮಾನಿಕ ದಳದಲ್ಲಿ 13 ವರ್ಷಗಳಿಂದ ಕರ್ತವ್ಯ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಸೇನಾ ಕಾರ್ಯಕ್ರಮದಲ್ಲಿ ವಿವೇಕ್ ಅವರಿಗೆ ಲೆಫ್ಟಿನೆಂಟ್ ಕರ್ನಲ್ ಪದೋನ್ನತಿಯ ರ್ಯಾಂಕ್ ಪ್ರದಾನ ಮಾಡಲಾಯಿತು.

ಲೆಫ್ಟಿನೆಂಟ್ ಕರ್ನಲ್ ವಿವೇಕ್ ಸೇನಾ ಪಡೆಯ ವೈಮಾನಿಕ ದಳದಲ್ಲಿ ರುದ್ರ ಹೆಲಿಕಾಪ್ಟರ್ ಚಲಾಯಿಸುತ್ತಿದ್ದು, ಇತ್ತೀಚಿಗೆ ದೆಹಲಿಯಲ್ಲಿ ನಡೆದ ಸೇನಾ ದಿನಾಚರಣೆಯ ಸಂದರ್ಭ ವಿವೇಕ್ ಚಲಾಯಿಸಿದ್ದ ರುದ್ರ ಹೆಲಿಕಾಪ್ಟರ್ ಹಾರಾಟದ ಪ್ರಾತಕ್ಷಿಕೆಯಲ್ಲಿ ರುದ್ರ ಕಾರ್ಯವೈಖರಿ ಸೇನಾಧಿಕಾರಿಗಳ ಅಪಾರ ಪ್ರಶಂಸೆಗೆ ಕಾರಣವಾಗಿತ್ತು.

Translate »