ಅಂಗನವಾಡಿಗೆ ನುಗ್ಗಿ ಅಕ್ಕಿ, ಬೇಳೆ, ಗ್ಯಾಸ್ ಸಿಲಿಂಡರ್ ಕದ್ದರು!
ಮಂಡ್ಯ

ಅಂಗನವಾಡಿಗೆ ನುಗ್ಗಿ ಅಕ್ಕಿ, ಬೇಳೆ, ಗ್ಯಾಸ್ ಸಿಲಿಂಡರ್ ಕದ್ದರು!

April 29, 2019

ಶ್ರೀರಂಗಪಟ್ಟಣ: ಅಂಗನ ವಾಡಿ ಬಾಗಿಲು ಬೀಗ ಮುರಿದು ಕಳವು ಮಾಡಿರುವ ಘಟನೆ ಪಾಂಡವಪುರ ತಾಲ್ಲೂಕಿನ ಡಿಂಕಾ ಗ್ರಾಮದಲ್ಲಿ ಕಳೆದ ಗುರುವಾರ ತಡರಾತ್ರಿ ನಡೆದಿದೆ

ಅಂಗನವಾಡಿಯ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಗ್ಯಾಸ್ ಸಿಲಿಂಡರ್, ಅಕ್ಕಿ, ಬೇಳೆ, ಹೆಸರುಕಾಳು, ಎಣ್ಣೆ ಸೇರಿದಂತೆ ದಿನಸಿ ಸಾಮಗ್ರಿಗಳನ್ನು ಕಳ್ಳತನ ಮಾಡಿಕೊಂಡು ಪರಾರಿ ಯಾಗಿದ್ದಾರೆ. ಬೆಳಗಿನ ಜಾವ ಅಕ್ಕಪಕ್ಕದ ಮನೆಯವರು ಅಂಗನವಾಡಿಯ ಬಾಗಿಲು ತೆರೆದಿದ್ದನ್ನು ನೋಡಿ ಗಾಬರಿಗೊಂಡಿ ದ್ದಾರೆ. ತಕ್ಷಣ ಅಂಗನವಾಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಹಾಯಕಿಗೆ ದೂರವಾಣಿ ಮೂಲಕ ವಿಚಾರವನ್ನು ತಿಳಿಸಿದ್ದಾರೆ.

ಅಂಗನವಾಡಿ ಸಹಾಯಕಿ ಪದ್ಮಮ್ಮ ಬಂದು ನೋಡಿದಾಗ, ಸಿಲಿಂಡರ್, ಅಕ್ಕಿ, ಬೇಳೆ ಕಾಳುಗಳು,ಹೆಸರು ಕಾಳು, ಎಣ್ಣೆ ಸೇರಿದಂತೆ ಹಲವು ವಸ್ತುಗಳನ್ನು ಖದೀಮರು ಕದ್ದೊಯ್ದಿರುವುದು ಗೊತ್ತಾಗಿದೆ.

ಪಾಂಡವಪುರ ತಾಲೂಕಿನಲ್ಲಿ ಈ ರೀತಿಯ ಕಳ್ಳತನ ಘಟನೆಗಳು ದಿನೇ ದಿನೇ ಹೆಚ್ಚುತ್ತಿದ್ದು ತಕ್ಷಣ ಕಳ್ಳರನ್ನು ಪತ್ತೆ ಹಚ್ಚಬೇಕು ಎಂದು ಕೆಆರ್‍ಎಸ್ ಪೆÇಲೀರಿಗೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.ಈ ಸಂಬಂಧ ಕೆಆರ್‍ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »