ಸ್ವತಂತ್ರ ತನಿಖೆಗೆ ಒಪ್ಪಿದ ಸುಪ್ರೀಂ
ಮೈಸೂರು

ಸ್ವತಂತ್ರ ತನಿಖೆಗೆ ಒಪ್ಪಿದ ಸುಪ್ರೀಂ

December 12, 2019

ನವದೆಹಲಿ: ಇಡೀ ದೇಶವೇ ಬೆಚ್ಚಿ ಬೀಳುವಂತೆ ಮಾಡಿದ್ದ ಹೈದರಾಬಾದ್ ‘ದಿಶಾ’ ಪ್ರಕರಣದ ನಾಲ್ವರು ಆರೋಪಿಗಳ ಎನ್ ಕೌಂಟರ್ ಪ್ರಕರಣ ಇದೀಗ ಟ್ವಿಸ್ಟ್ ಪಡೆ ದಿದೆ. ಎನ್‍ಕೌಂಟರ್ ಕುರಿತು ಕೂಲಂಕುಷ ತನಿಖೆಗೆ ಸುಪ್ರೀಂಕೋರ್ಟ್ ಮುಂದಾಗಿದೆ.

ಹೈದರಾಬಾದ್ ಪಶುವೈದ್ಯೆ ಅತ್ಯಾ ಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳು ಡಿ.6ರಂದು ಸೈಬರಾ ಬಾದ್ ಪೆÇಲೀಸರು ನಡೆಸಿದ ಎನ್ ಕೌಂಟರ್‍ನಲ್ಲಿ ಬಲಿಯಾಗಿದ್ದರು. ಈ ಕುರಿತು ಸ್ವತಂತ್ರ ತನಿಖೆಗೆ ಒತ್ತಾಯಿಸಿ ಜಿ.ಎಸ್.ಮಣಿ ಎಂಬು ವವರು ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಬುಧವಾರ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಎನ್‍ಕೌಂಟರ್ ಕುರಿತು ಸ್ವತಂತ್ರ ತನಿಖೆಗೆ ಸಮ್ಮತಿ ನೀಡಿದೆ. ಪ್ರಕರಣದ ತನಿಖೆಗೆ ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ನೇಮಕ ಮಾಡುವ ಕುರಿತು ಪ್ರಸ್ತಾವನೆ ಇಟ್ಟಿದೆ. ಹೈದರಾಬಾದ್ ಎನ್‍ಕೌಂಟರ್ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ನೇಮಕ ಸಂಬಂಧ ಗುರುವಾರ ಆದೇಶ ನೀಡಲಿದೆ. ಇವರು ದೆಹಲಿಯಿಂದಲೇ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಮುಖ್ಯನ್ಯಾಯ ಮೂರ್ತಿ ಎಸ್.ಎ.ಬೊಬ್ಡೆ ಹೇಳಿದ್ದಾರೆ. ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಯುವಲ್ಲಿ ಪೆÇಲೀಸರು ವಿಫಲರಾಗು ತ್ತಿದ್ದಾರೆ. ಹೀಗಾಗಿ ಸಾರ್ವಜನಿಕರ ಪೆÇಲೀಸರ ಕುರಿತು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಸಾರ್ವಜನಿಕರ ದೃಷ್ಟಿಯನ್ನು ಬೇರೆಡೆ ತಿರುಗಿಸುವ ಸಲುವಾಗಿ ನಕಲಿ ಎನ್‍ಕೌಂಟರ್ ಮಾಡಲಾಗಿದೆ. ಈ ಕುರಿತು ಸ್ವತಂತ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿ ವಕೀಲ ಜಿ.ಎಸ್.ಮಣಿ ಎಂಬುವವರು ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.

Translate »