Tag: MCC

ಪಾಲಿಕೆಯಿಂದ ಚರಂಡಿ ನಿರ್ಮಿಸುವ ವೇಳೆ ಮನೆ ಗೋಡೆ ಕುಸಿತ
ಮೈಸೂರು

ಪಾಲಿಕೆಯಿಂದ ಚರಂಡಿ ನಿರ್ಮಿಸುವ ವೇಳೆ ಮನೆ ಗೋಡೆ ಕುಸಿತ

December 18, 2019

ಮೈಸೂರು,ಡಿ.17(ಆರ್‍ಕೆ)-ಬಾಕ್ಸ್ ಡ್ರೈನ್ ನಿರ್ಮಿಸಲು ಜೆಸಿಬಿಯಿಂದ ಕಾಮಗಾರಿ ನಡೆಸುತ್ತಿದ್ದಾಗ ಹಳೇ ಹೆಂಚಿನ ಮನೆಯ ಗೋಡೆಯೊಂದು ಕುಸಿದ ಘಟನೆ ಮೈಸೂರಿನ ತಿಲಕ್‍ನಗರದಲ್ಲಿ ಕಳೆದ ಮಂಗಳವಾರ ಸಂಭವಿಸಿದೆ. ತಿಲಕ್‍ನಗರದ 7ನೇ ಮೇನ್‍ನಲ್ಲಿರುವ ಜಿ. ಸಾವಿತ್ರಿ ಎಂಬುವರಿಗೆ ಸೇರಿದ 3360ನೇ ಸಂಖ್ಯೆಯ ಮನೆ ಹೊರಭಾಗದ ಗೋಡೆ ಡಿಸೆಂಬರ್ 10 ರಂದು ಮುಂಜಾನೆ 2.30 ಗಂಟೆ ವೇಳೆಗೆ ಕುಸಿದಿದೆ. ಮನೆಯಲ್ಲಿ ಸಾವಿತ್ರಿ, ಅವರ ತಂದೆ ಗೋವಿಂದ ಹಾಗೂ ತಾಯಿ ರೇಣುಕಾ ಅವರು ವಾಸವಾಗಿದ್ದರಾದರೂ, ಅದೃಷ್ಟವಶಾತ್ ಅವರು ಅಪಾಯದಿಂದ ಪಾರಾಗಿದ್ದಾರೆ. ಸೋಮವಾರ ಮೈಸೂರು ಮಹಾನಗರ ಪಾಲಿಕೆಯಿಂದ…

ಸದ್ಯದಲ್ಲೇ ಮೇಯರ್, ಉಪ ಮೇಯರ್ ಚುನಾವಣಾ ದಿನಾಂಕ ಪ್ರಕಟ
ಮೈಸೂರು

ಸದ್ಯದಲ್ಲೇ ಮೇಯರ್, ಉಪ ಮೇಯರ್ ಚುನಾವಣಾ ದಿನಾಂಕ ಪ್ರಕಟ

December 11, 2019

ಮೈಸೂರು, ಡಿ.10(ಆರ್‍ಕೆಬಿ)- ಹಾಲಿ ಮೇಯರ್, ಉಪ ಮೇಯರ್ ಒಂದು ವರ್ಷದ ಅವದಿ ನ.16ಕ್ಕೇ ಮುಗಿದಿದ್ದರೂ ವಿಧಾನಸಭಾ ಉಪ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮೈಸೂರು ಮಹಾನಗರಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ ಮುಂದೂಡಿಕೆ ಯಾಗಿತ್ತು. ಮೇಯರ್ ಪುಷ್ಪಲತಾ ಜಗನ್ನಾಥ್, ಉಪಮೇಯರ್ ಶಫೀ ಆಹಮದ್ ತಮ್ಮ ಸ್ಥಾನದಲ್ಲಿ ಮುಂದುವರಿಯಲು ಅವಕಾಶ ಸಿಕ್ಕಿದ್ದು, ಈಗ ಉಪ ಚುನಾವಣೆ ಮುಗಿದಿದೆ. ಸದ್ಯದಲ್ಲೇ ಮೇಯರ್, ಉಪ ಮೇಯರ್ ಆಯ್ಕೆಗೆ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಈಗ ಉಪ ಚುನಾವಣೆಗಳು ಮುಗಿದು ಫಲಿತಾಂಶವೂ ಹೊರ…

ಸದ್ಯ ಆಯುಕ್ತರ ನಿವಾಸದೆದುರಿನ ರಸ್ತೆ ಗುಂಡಿ ಮುಚ್ಚಿದ ಪಾಲಿಕೆ ಅಧಿಕಾರಿಗಳು
ಮೈಸೂರು

ಸದ್ಯ ಆಯುಕ್ತರ ನಿವಾಸದೆದುರಿನ ರಸ್ತೆ ಗುಂಡಿ ಮುಚ್ಚಿದ ಪಾಲಿಕೆ ಅಧಿಕಾರಿಗಳು

November 15, 2019

ಮೈಸೂರು, ನ.14(ಆರ್‍ಕೆ)- ಯಾದವಗಿರಿಯ ಪಾಲಿಕೆ ಆಯುಕ್ತರ ನಿವಾಸದೆದುರು ರಸ್ತೆಯಲ್ಲಿನ ಗುಂಡಿಗಳನ್ನು ಅಧಿಕಾರಿಗಳು ಕೊನೆಗೂ ಮುಚ್ಚಿಸಿದ್ದಾರೆ. ಕೆಆರ್‍ಎಸ್ ರಸ್ತೆ ಯಿಂದ ಯಾದವಗಿರಿಯಲ್ಲಿ ಎ.ರಾಮಣ್ಣ ಸರ್ಕಲ್‍ಗೆ ಹೋಗುವ ರಸ್ತೆಯಲ್ಲಿರುವ ವಾಣಿ ವಿಲಾಸ ವಾಟರ್‍ವಕ್ರ್ಸ್ ಪಕ್ಕದ ನಗರಪಾಲಿಕೆ ಆಯುಕ್ತರ ನಿವಾಸ(ಬಂಗಲೆ)ದ ಗೇಟ್ ಎದುರೇ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದವು. ಪ್ರತೀ ದಿನ ಪಾಲಿಕೆ ಆಡಳಿತ ಮುಖ್ಯಸ್ಥರೂ ಆದ ಆಯುಕ್ತರು ಕಂಡರೂ, ಗುಂಡಿ ಮುಚ್ಚಿಸುವ ಗೋಜಿಗೆ ಹೋಗಿರಲಿಲ್ಲ. ಸಾರ್ವಜನಿ ಕರು ಈ ಬಗ್ಗೆ ತೀವ್ರ ಟೀಕೆ ಮಾಡಿದ್ದರಲ್ಲದೆ, ಆಯುಕ್ತರ ಮನೆ ಮುಂದಿನ ಗುಂಡಿ ಮುಚ್ಚಲಾಗದ…

6 ತಿಂಗಳಿಂದ ಕೆಟ್ಟು ನಿಂತ ಪಾಲಿಕೆ ಲಿಫ್ಟ್
ಮೈಸೂರು

6 ತಿಂಗಳಿಂದ ಕೆಟ್ಟು ನಿಂತ ಪಾಲಿಕೆ ಲಿಫ್ಟ್

November 15, 2019

ಮೈಸೂರು, ನ.14(ಆರ್‍ಕೆ)- ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮೈಸೂರು ಮಹಾನಗರ ಪಾಲಿಕೆ ಪ್ರಧಾನ ಕಚೇರಿಯ ಲಿಫ್ಟ್ ಕಳೆದ 6 ತಿಂಗಳಿಂದ ಕೆಟ್ಟು ನಿಂತಿದೆ. ರಸ್ತೆ, ನೀರು, ಒಳಚರಂಡಿ, ಸ್ವಚ್ಛತೆ ಯಂತಹ ಮೂಲ ಸೌಕರ್ಯ ಒದಗಿಸಿ ಮೈಸೂರು ನಗರವನ್ನು ನಿರ್ವಹಣೆ ಮಾಡುವ ಜವಾಬ್ದಾರಿ ಹೊತ್ತಿರುವ ಪಾಲಿಕೆ ಅಧಿಕಾರಿಗಳು ಕರ್ತವ್ಯ ಮರೆತಿರುವುದರಿಂದ ನಗರದಾದ್ಯಂತ ರಸ್ತೆಗಳು ಗುಂಡಿ ಬಿದ್ದು ಸಾರ್ವಜನಿಕರು ಓಡಾಡಲು ಪರಿತಪಿಸುವಂತಾಗಿದೆ. ಹಲವು ಸೇವೆಗಳಿಗಾಗಿ ಬರುವ ಹಿರಿಯ ನಾಗರಿಕರು, ಅಂಗವಿಕ ಲರು, ಅಶಕ್ತರಿಗೆ ಮೊದಲ ಮಹಡಿಗೆ ಹೋಗಲು ಅನುಕೂಲವಾಗ ಲೆಂದು ಸಯ್ಯಾಜಿರಾವ್ ರಸ್ತೆಯಲ್ಲಿರುವ…

ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಒಂದು ವರ್ಷ ಕಾಲ ರಜೆ
ಮೈಸೂರು

ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಒಂದು ವರ್ಷ ಕಾಲ ರಜೆ

August 1, 2019

ಮುಡಾ ಆಯುಕ್ತ ಪಿ.ಎಸ್.ಕಾಂತರಾಜ್‍ಗೆ ಹೆಚ್ಚುವರಿ ಹೊಣೆ ಮೈಸೂರು: ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಸಿ.ಟಿ. ಶಿಲ್ಪಾನಾಗ್ ಅವ ರಿಗೆ 365 ದಿನ ಗಳ ಶಿಶು ಪಾಲನಾ ರಜೆ ಮಂಜೂರು ಮಾಡಲಾಗಿದೆ. ಅಖಿಲ ಭಾರತ ಸೇವಾ (ರಜಾ) ನಿಯಮಗಳು, 1955ರ ನಿಯಮ 18 (ಡಿ) ಅನ್ವಯ 2019ರ ಜುಲೈ 26ರಿಂದ 2020ರ ಜುಲೈ 24ರ ವರೆಗೆ ಒಟ್ಟು 365 ದಿನಗಳ ಶಿಶು ಪಾಲನಾ ರಜೆ ಮಂಜೂರು ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧೀನ ಕಾರ್ಯದರ್ಶಿ ಶಕುಂತಲಾ…

ಮೈಸೂರು ನಗರಪಾಲಿಕೆಯ ಅನುದಾನ ಹಂಚಿಕೆ ಬಗ್ಗೆಅಸಮಾಧಾನ: ಡಿಸಿಗೆ ಸಂಸದ ಪ್ರತಾಪ್ ಸಿಂಹ ಪತ್ರ
ಮೈಸೂರು

ಮೈಸೂರು ನಗರಪಾಲಿಕೆಯ ಅನುದಾನ ಹಂಚಿಕೆ ಬಗ್ಗೆಅಸಮಾಧಾನ: ಡಿಸಿಗೆ ಸಂಸದ ಪ್ರತಾಪ್ ಸಿಂಹ ಪತ್ರ

July 16, 2019

ಮೈಸೂರು,ಜು.15-ಮೈಸೂರು ಮಹಾ ನಗರಪಾಲಿಕೆಯಲ್ಲಿ ವಿವಿಧ ಯೋಜನೆಗಳ ಅನುದಾನವನ್ನು ಅವೈಜ್ಞಾನಿಕವಾಗಿ ಬಳ ಸುತ್ತಿರುವುದು ಮಾತ್ರವಲ್ಲದೇ, ವಾರ್ಡ್ ಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. 14ನೇ ಹಣಕಾಸು ಆಯೋಗದ ಅನು ದಾನದಲ್ಲಿ ಹೆಚ್ಚಿನ ಅನುದಾನವನ್ನು ಕುಡಿ ಯುವ ನೀರಿಗೆ ನೀಡಬೇಕಾಗಿದ್ದು, ಅದಕ್ಕಾಗಿ ಶೇ.20ರಷ್ಟು ಅನುದಾನ ಮೀಸ ಲಿಡುವ ಬದಲು ಕೇವಲ ಶೇ. 13ರಷ್ಟು ಮೀಸಲಿಡಲಾಗಿದೆ. ಕಬಿನಿಯಿಂದ ಬರುವ ಬಿದರುಗೂಡು ನೀರು ಸಂಗ್ರಹಾಗಾರದಲ್ಲಿ ಪ್ರತಿನಿತ್ಯ 82 ರಿಂದ 85…

ಮೈಸೂರು ನಗರಪಾಲಿಕೆ ಇಂಜಿನಿಯರ್‍ಗಳಾದ ಸುನಿಲ್ ಬಾಬು, ಮೋಹನಕುಮಾರಿ ಅಮಾನತು
ಮೈಸೂರು

ಮೈಸೂರು ನಗರಪಾಲಿಕೆ ಇಂಜಿನಿಯರ್‍ಗಳಾದ ಸುನಿಲ್ ಬಾಬು, ಮೋಹನಕುಮಾರಿ ಅಮಾನತು

June 5, 2019

– ಎಸ್.ಟಿ. ರವಿಕುಮಾರ್ ಮೈಸೂರು: ಮೈಸೂರಿನ ಪ್ರತಿ ಷ್ಠಿತ ಮಹಾತ್ಮ ಗಾಂಧಿ ರಸ್ತೆ ಕಾಮಗಾರಿ ಯಲ್ಲಿ ನಕಲಿ ಬಿಲ್ ತಯಾರಿಸಿ 1.40 ಕೋಟಿ ರೂ. ದುರುಪಯೋಗಪಡಿಸಿಕೊಂಡ ಆರೋಪ ಎದುರಿಸುತ್ತಿರುವ ಮೈಸೂರು ಮಹಾನಗರ ಪಾಲಿಕೆ ಅಸಿಸ್ಟೆಂಟ್ ಎಗ್ಸಿ ಕ್ಯುಟಿವ್ ಇಂಜಿನಿಯರ್ ಸುನಿಲ್ ಬಾಬು ಹಾಗೂ ಕಿರಿಯ ಇಂಜಿನಿಯರ್ ಎಂ.ವಿ. ಮೋಹನ ಕುಮಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಈ ಸಂಬಂಧ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ(ಮಹಾನಗರ ಪಾಲಿಕೆ-2) ನಾಗರಾಜ ಅವರು ಜೂನ್ 1 ರಂದು ಆದೇಶ (ಸಂಖ್ಯೆ : ನಇ 62…

ಮೈಸೂರಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ
ಮೈಸೂರು

ಮೈಸೂರಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ

April 30, 2019

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಶೇ.17ರಷ್ಟು ಮಳೆ ಕೊರತೆ ಉಂಟಾಗಿ ದ್ದರೂ, ತೀವ್ರ ತೆರನಾದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿಲ್ಲ. ಕೆಲವೆಡೆ ಸ್ವಲ್ಪ ಪ್ರಮಾಣದಲ್ಲಿ ಸಮಸ್ಯೆ ತಲೆದೋರಿದ್ದು, ಅದನ್ನು ಸಮರ್ಪಕವಾಗಿ ನಿಭಾ ಯಿಸುವಂತೆ ಸೂಚಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಜಿ. ಕಲ್ಪನಾ ತಿಳಿಸಿದ್ದಾರೆ. ಬರ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡರ ಸೂಚನೆಯಂತೆ ಸೋಮವಾರ ಜಿಲ್ಲಾಧಿ ಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಪತ್ರಕರ್ತ ರೊಂದಿಗೆ…

ಮೈಸೂರಿನ ಎಂಜಿ ರಸ್ತೆ  ಕಾಮಗಾರಿ  1.40 ಕೋಟಿ ರೂ. ಭ್ರಷ್ಟಾಚಾರ ಪ್ರಕರಣ : ಅಧಿಕಾರಿಗಳು, ಗುತ್ತಿಗೆದಾರನ ವಿರುದ್ಧ ಎಸಿಬಿಗೆ ದೂರು
ಮೈಸೂರು

ಮೈಸೂರಿನ ಎಂಜಿ ರಸ್ತೆ ಕಾಮಗಾರಿ 1.40 ಕೋಟಿ ರೂ. ಭ್ರಷ್ಟಾಚಾರ ಪ್ರಕರಣ : ಅಧಿಕಾರಿಗಳು, ಗುತ್ತಿಗೆದಾರನ ವಿರುದ್ಧ ಎಸಿಬಿಗೆ ದೂರು

March 9, 2019

ಮೈಸೂರು: ಮೈಸೂರಿನ ಎಂಜಿ ರಸ್ತೆ ಹಾಗೂ ಫುಟ್‍ಪಾತ್ ಅಭಿ ವೃದ್ಧಿ ಕಾಮಗಾರಿಯಲ್ಲಿ 1.40 ಕೋಟಿ ರೂ. ಭ್ರಷ್ಟಾಚಾರ ನಡೆದಿರುವುದು ಸತ್ಯ ಶೋಧನಾ ಸಮಿತಿ ವರದಿಯಲ್ಲಿ ದೃಢಪಟ್ಟಿರುವ ಹಿನ್ನೆಲೆ ಯಲ್ಲಿ ಪ್ರಕರಣ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ದೂರು ನೀಡಲು ಶುಕ್ರವಾರ ನಡೆದ ನಗರಪಾಲಿಕೆ ವಿಶೇಷ ಕೌನ್ಸಿಲ್ ಸಭೆ ಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಮೈಸೂರು ನ್ಯಾಯಾಲಯದ ಮುಂಭಾಗ ದಿಂದ ರಾಷ್ಟ್ರೀಯ ಹೆದ್ದಾರಿ 212ರವರೆಗಿನ ಮಹಾತ್ಮ ಗಾಂಧಿ(ಎಂಜಿ) ರಸ್ತೆಯ ಆಯ್ದ ಭಾಗ ಗಳಲ್ಲಿ ರಸ್ತೆ ಹಾಗೂ ಫುಟ್‍ಪಾತ್ ಅಭಿವೃದ್ಧಿ ಕಾಮಗಾರಿಯ…

ಪ್ಲಾಸ್ಟಿಕ್ ತ್ಯಾಜ್ಯ ತಡೆಗೆ ಮೈಸೂರು ಪಾಲಿಕೆ ಹೊಸ ಉಪಾಯ `ಗ್ರೀನ್ ವೆಡ್ಡಿಂಗ್’
ಮೈಸೂರು

ಪ್ಲಾಸ್ಟಿಕ್ ತ್ಯಾಜ್ಯ ತಡೆಗೆ ಮೈಸೂರು ಪಾಲಿಕೆ ಹೊಸ ಉಪಾಯ `ಗ್ರೀನ್ ವೆಡ್ಡಿಂಗ್’

March 8, 2019

ಮೈಸೂರು: ಮೈಸೂರು ನಗರಪಾಲಿಕೆ ವತಿಯಿಂದ `ಗ್ರೀನ್ ವೆಡ್ಡಿಂಗ್’ ವಿನೂತನ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ತಿಳಿಸಿದರು. ನಗರಪಾಲಿಕೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟವನ್ನು ನಿಷೇಧಿಸಿದ್ದರೂ ಮದುವೆ, ಅಪಾರ್ಟ್ ಮೆಂಟ್ ಮತ್ತಿತರ ಕಾಂಪ್ಲೆಕ್ಸ್‍ಗಳಲ್ಲಿ ಹೆಚ್ಚಾಗಿ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಹಾಗಾಗಿ ತ್ಯಾಜ್ಯ ಉತ್ಪತ್ತಿ ಕಡಿಮೆ ಮಾಡುವ ಉದ್ದೇಶದಿಂದ ಪರಿಸರ ಸ್ನೇಹಿ `ಗ್ರೀನ್ ವೆಡ್ಡಿಂಗ್’ಗೆ ಹೆಚ್ಚು ಉತ್ತೇಜನ ನೀಡಲಾಗುತ್ತಿದೆ. ಗ್ರೀನ್ ವೆಡ್ಡಿಂಗ್ ಆದವರಿಗೆ ಪ್ರಮಾಣ ಪತ್ರ ನೀಡಿ ಪ್ರಶಂಸಿಸ ಲಾಗುವುದು ಎಂದು…

1 2 3 4 7
Translate »