ಮೈಸೂರು: ಮೈಸೂರು ನಗರ ಈ ಬಾರಿಯೂ ಸ್ವಚ್ಛತೆಯಲ್ಲಿ 3ನೇ ಸ್ಥಾನ ಗಳಿಸಿರುವುದು ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಪ್ರಥಮ ಸ್ಥಾನಕ್ಕೇರಲು ಶ್ರಮಿಸಲಾಗುವುದು ಎಂದು ಮೇಯರ್ ಪುಷ್ಪಲತಾ ಜಗನ್ನಾಥ್ ತಿಳಿಸಿದರು. ನಗರಪಾಲಿಕೆ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2014-15ನೇ ಸಾಲಿನಿಂದ ಸ್ವಚ್ಛ ನಗರ ಪ್ರಶಸ್ತಿ ನೀಡಲಾಗುತ್ತಿದ್ದು, ಸತತ 2 ಬಾರಿ ಸ್ವಚ್ಛತೆಯಲ್ಲಿ ಪ್ರಥಮ ಸ್ಥಾನ, 2016-17ನೇ ಸಾಲಿನಲ್ಲಿ 5 ಹಾಗೂ 2017- 18ನೇ ಸಾಲಿನಲ್ಲಿ 8ನೇ ಸ್ಥಾನಕ್ಕೆ ಕುಸಿತ ಕಂಡಿತ್ತು. ಇಂದು…
ಮೈಸೂರು ಮಹಾನಗರ ಪಾಲಿಕೆಯಿಂದ 5.20 ಕೋಟಿ ರೂ. ಉಳಿತಾಯ ಬಜೆಟ್ ಮಂಡನೆ
February 27, 2019ಮೈಸೂರು: ಸಂಪನ್ಮೂಲ ಕ್ರೋಢೀಕರಣ, ಹೊಸ ಅಭಿವೃದ್ಧಿ ಯೋಜನೆಗಳಿಗೆ ಆದ್ಯತೆ ನೀಡುವುದರೊಂದಿಗೆ ಮೈಸೂರು ಮಹಾ ನಗರ ಪಾಲಿಕೆಯು 2019-20ನೇ ಸಾಲಿಗೆ 5.20 ಕೋಟಿ ರೂ.ಗಳ ಉಳಿತಾಯ ಬಜೆಟ್ ಮಂಡಿಸಿದೆ. ಮೈಸೂರು ಮಹಾನಗರ ಪಾಲಿಕೆ ಕೌನ್ಸಿಲ್ ಸಭಾಂಗಣದಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೆರಿಗೆ ನಿರ್ಧಾರಣಾ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಅವರು 2019-20ನೇ ಸಾಲಿನ ಆಯ-ವ್ಯಯವನ್ನು ಮಂಗಳವಾರ ಮಂಡಿಸಿದರು. ಪ್ರಾರಂಭ ಶಿಲ್ಕು 14,369.37 ಲಕ್ಷ ರೂ. ಹಾಗೂ 63,656.47 ಲಕ್ಷ ರೂ….
ಕಡೆಗೂ ಫೆ.28ಕ್ಕೆ ಪಾಲಿಕೆ ಬಜೆಟ್ ಸಭೆ ನಿಗದಿ
February 22, 2019ಅಷ್ಟರೊಳಗೆ ಲೋಕಸಭೆ ಚುನಾವಣೆ ಘೋಷಣೆಯಾದರೆ ಆಯವ್ಯಯ ಮಂಡನೆ ರದ್ದು ಮೈಸೂರು: ಪದೇ ಪದೆ ಮುಂದೂಡುತ್ತಾ ಬಂದಿದ್ದ 2019-20ನೇ ಸಾಲಿನ ಬಜೆಟ್ ಸಭೆಯನ್ನು ಕಡೆಗೂ ಫೆಬ್ರವರಿ 28ಕ್ಕೆ ಮೈಸೂರು ಮಹಾನಗರ ಪಾಲಿಕೆ ನಿಗದಿಗೊಳಿಸಿದೆ. ಇಂದು ಮಧ್ಯಾಹ್ನ ಬಜೆಟ್ ಮಂಡನಾ ದಿನಾಂಕವನ್ನು ಫೆಬ್ರವರಿ 28ರಂದು ಬೆಳಿಗ್ಗೆ 11 ಗಂಟೆಗೆ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ನಡೆಸಲು ನಿಗದಿಗೊಳಿಸಲಾಗಿದ್ದು, ಎಲ್ಲಾ 65 ಮಂದಿ ಕಾರ್ಪೊರೇಟರ್ ಗಳಿಗೂ ಸಭೆಯ ತಿಳುವಳಿಕೆ ನೋಟೀಸ್ ನೀಡಲಾಗುತ್ತಿದೆ. ಅಂದು ಮೇಯರ್ ಪುಷ್ಪಲತಾ ಜಗನ್ನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ…
ಮೈಸೂರು ಪಾಲಿಕೆ ಕಮಿಷ್ನರ್ ಶಿಲ್ಪಾನಾಗ್ ಅಧಿಕಾರ ಸ್ವೀಕಾರ
February 18, 2019ಮೈಸೂರು: ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಿ ಶಿಲ್ಪಾ ನಾಗ್ ಅವರು ಇಂದು (ಭಾನುವಾರ) ಅಧಿಕಾರ ವಹಿಸಿಕೊಂಡರು. ‘ಕಾಲೇಜು ಶಿಕ್ಷಣ ಇಲಾಖೆ ಮುಖ್ಯ ಆಡಳಿತಾಧಿಕಾರಿಯಾಗಿ ವರ್ಗಾವಣೆ ಗೊಂಡಿರುವ ಕೆ.ಹೆಚ್. ಜಗದೀಶ್ ಅವರು ಭಾನುವಾರ ಮಧ್ಯಾಹ್ನ 1 ಗಂಟೆ ವೇಳೆಗೆ ಸಯ್ಯಾಜಿರಾವ್ ರಸ್ತೆಯಲ್ಲಿರುವ ಮೈಸೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ನೂತನ ಆಯುಕ್ತರಿಗೆ ಅಧಿಕಾರ ವಹಿಸಿ ಕೊಟ್ಟು ಶುಭ ಕೋರಿದರು. ಅಧಿಕಾರ ಸ್ವೀಕರಿಸಿದ ನಂತರ ‘ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಶಿಲ್ಪಾ ನಾಗ್ ಅವರು, ಚುನಾವಣಾ ಆಯೋಗದ ನಿರ್ದೇಶನದಂತೆ ತಾವು ಇಂದು ಅಧಿಕಾರ…
ಎಂಜಿ ರಸ್ತೆ ಕಾಮಗಾರಿಯಲ್ಲಿ 1.40 ಕೋಟಿ ಅವ್ಯವಹಾರ: ಏಕಾಏಕಿ ಆರ್ಟಿಓ ಕಚೇರಿ ಹಿಂಭಾಗದ ರಸ್ತೆ ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆದಾರ
February 14, 2019ಮೈಸೂರು: ಎಂಜಿ ರಸ್ತೆ ಕಾಮಗಾರಿಗೆ ಡಬಲ್ ಬಿಲ್ಲಿಂಗ್ ಮಾಡಿ 1.40 ಕೋಟಿ ರೂ. ಹಣ ಗುಳುಂ ಮಾಡಿದ ಆರೋಪಕ್ಕೆ ಗುರಿಯಾಗಿರುವ ಗುತ್ತಿಗೆದಾರ ಸಿ.ಕರೀಗೌಡ, ಇಂದು ಏಕಾಏಕಿ ಆರ್ಟಿಓ ಕಚೇರಿ ಹಿಂಭಾಗದ ರಸ್ತೆ ಕಾಮಗಾರಿ ಕೈಗೊಂಡಿದ್ದು, ಹಲವು ಅನುಮಾನಕ್ಕೆ ಆಸ್ಪದ ನೀಡಿತು. ಮೈಸೂರು ಮಹಾನಗರಪಾಲಿಕೆ ಕೌನ್ಸಿಲ್ ಸಭೆಯಲ್ಲಿ 1.40 ಕೋಟಿ ರೂ. ಹಗರಣ ಬಯಲಾಗುತ್ತಿದ್ದಂತೆಯೇ ರಾತ್ರೋರಾತ್ರಿ ಎಂಜಿ ರಸ್ತೆಗೆ ರಿಫ್ಲೆಕ್ಟಿಂಗ್ ಸ್ಟಡ್ಗಳನ್ನು ಅಳವಡಿಸಿದ್ದ ಗುತ್ತಿಗೆ ದಾರರು, ಸತ್ಯಶೋಧನಾ ಸಮಿತಿ ತನಿಖೆ ಆರಂಭಿಸುತ್ತಿದ್ದಂತೆಯೇ ಇಂದು ಬೆಳಿಗ್ಗೆ ಎಂಜಿ ರಸ್ತೆಗೆ ಸಂಪರ್ಕ…
ಡಾಂಬರ್ ಹಾಕಿದ ರಸ್ತೆಗೆ ಮತ್ತೆ ಜಲ್ಲಿ ಚೆಲ್ಲಿ 52 ಲಕ್ಷ ಬಿಲ್ ಮಾಡಿದರು…!!
February 13, 2019ಮೈಸೂರು: ಡಾಂಬರೀ ಕರಣವಾಗಿದ್ದ ಮಹಾತ್ಮ ಗಾಂಧಿ (ಎಂಜಿ) ರಸ್ತೆಗೆ ಜಲ್ಲಿ ಹಾಕಿದ್ದೇವೆಂದು 52 ಲಕ್ಷ ರೂ. ಬಿಲ್ ಮಾಡಿ, ಹಣ ಪಡೆದಿರುವುದು ಸತ್ಯಶೋಧನಾ ಸಮಿತಿ ಸದಸ್ಯರ ಮುಂದೆ ಬಯಲಾಗಿದೆ. ಮೈಸೂರಿನ ಎಂಜಿ ರಸ್ತೆ ಡಬಲ್ ಕಾಮಗಾರಿ ಹೆಸರಲ್ಲಿ ನಡೆದಿದೆ ಎನ್ನಲಾದ 1.40 ಕೋಟಿ ರೂ. ಅವ್ಯವ ಹಾರದ ತನಿಖೆ ಆರಂಭಿಸಿರುವ ಮೇಯರ್ ಪುಷ್ಪಲತಾ ಜಗನ್ನಾಥ್ ನೇತೃತ್ವದ ಸಮಿತಿ, ಇಂದೂ ಸಹ ಪಾಲಿಕೆ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಸಭೆ ನಡೆಸಿ ಮೂಲ ಕಡತದ ದಾಖಲೆಗಳನ್ನು ಪರಿಶೀಲಿಸಿದಾಗ ಈಗಾ ಗಲೇ…
ಮೈಸೂರಿನ ಎಂ.ಜಿ.ರಸ್ತೆ ಅಭಿವೃದ್ಧಿ ಕಾಮಗಾರಿ – 1.40 ಕೋಟಿ ರೂ. ಅವ್ಯವಹಾರ : ಸತ್ಯ ಶೋಧನಾ ಸಮಿತಿಯಿಂದ ತನಿಖೆ ಆರಂಭ
February 12, 2019ಮೈಸೂರು: ಮೈಸೂರಿನ ಎಂ.ಜಿ.ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ 1.40 ಕೋಟಿ ರೂ. ಅವ್ಯವಹಾರ ಪ್ರಕರಣ ಸಂಬಂಧ ಪಾಲಿ ಕೆಯ ಸತ್ಯಶೋಧನಾ ಸಮಿತಿ ಸದಸ್ಯರು ತನಿಖೆ ಆರಂಭಿಸಿದ್ದಾರೆ. ಸಯ್ಯಾಜಿರಾವ್ ರಸ್ತೆಯ ಮೈಸೂರು ಮಹಾನಗರ ಪಾಲಿಕೆ ಪ್ರಧಾನ ಕಚೇರಿಯ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಇಂದು ಸಭೆ ನಡೆಸಿದ ಸಮಿತಿ ಅಧ್ಯಕ್ಷರಾದ ಮೇಯರ್ ಪುಷ್ಪಲತಾ ಜಗನ್ನಾಥ್ ಹಾಗೂ ಸದಸ್ಯರು, ದೂರುದಾರರಾದ ಕಾರ್ಪೊರೇಟರ್ ಬಿ.ವಿ. ಮಂಜುನಾಥ್ ಅವರಿಂದ ಆರೋಪಗಳ ಬಗ್ಗೆ ವಿವರಣೆ ಪಡೆದು ದಾಖಲಿಸಿಕೊಂಡರು. ಈ ಕುರಿತು ಸಭೆಗೆ ಸಮಗ್ರ ಮಾಹಿತಿ…
ಕೋಟ್ಯಾಂತರ ಅವ್ಯವಹಾರಕ್ಕೆ ಆಸ್ಪದ ಪಾಲಿಕೆ ಇಂಜಿನಿಯರ್ಗಳ ವರ್ಗಾವಣೆ
February 1, 2019ಮೈಸೂರು: ಮೈಸೂರು ನಗರಪಾಲಿಕೆ ವಲಯ ಕಚೇರಿ-1ರ ಆಯುಕ್ತ ವಿ.ಸುನೀಲ್ ಬಾಬು ಹಾಗೂ ಕಿರಿಯ ಇಂಜಿನಿಯರ್ ಎಂ.ಎನ್.ಮೋಹನ ಕುಮಾರಿ ಅವರನ್ನು ವರ್ಗಾವಣೆ ಮಾಡಿ, ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಆದೇಶಿಸಿದ್ದಾರೆ. ಸುನೀಲ್ ಬಾಬು ಅವರನ್ನು ನರ್ಮ್ ವಿಭಾಗದ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಹಾಗೂ ಮೋಹನ ಕುಮಾರಿಯನ್ನು ಸೂಯೇಜ್ ಫಾರಂ ಹಾಗೂ ರಾಯನ ಕೆರೆಯಲ್ಲಿನ ಮಲಿನ ನೀರು ಶುದ್ಧೀಕರಣ ಘಟಕ(ಎಸ್ಟಿಪಿ) ನಿರ್ವಹಣೆ ಮತ್ತು ಮೇಲ್ವಿಚಾರಣೆ ಹುದ್ದೆಗಳಿಗೆ ವರ್ಗಾವಣೆ ಮಾಡಲಾಗಿದ್ದು, ವಲಯ ಕಚೇರಿ-8ರ ಆಯುಕ್ತ ಕೆ.ಕುಬೇರಪ್ಪ ಅವರಿಗೆ ವಲಯ ಕಚೇರಿ-1ರ ಕಾರ್ಯಬಾರವನ್ನೂ…
ಒಂದೇ ಕಾಮಗಾರಿಗೆ ಎರಡು ಬಿಲ್: 1.40 ಕೋಟಿ ಗುಳುಂ
January 30, 2019ಮೈಸೂರು: ಒಂದೇ ಕಾಮಗಾರಿಗೆ 2 ಬಾರಿ ಬಿಲ್ ನೀಡುವ ಮೂಲಕ 1.40 ಕೋಟಿ ರೂ. ಭ್ರಷ್ಟಾಚಾರ ನಡೆಸಿರುವ ಸಂಗತಿ ಮೈಸೂರು ನಗರಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಬಯಲಾಗಿದೆ. ನಗರಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣ ದಲ್ಲಿ ಮಂಗಳವಾರ ಮೇಯರ್ ಪುಷ್ಪಲತಾ ಜಗನ್ನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಒಂದೇ ಕಾಮಗಾರಿಗೆ 2 ಬಾರಿ ಬೋಗಸ್ ಬಿಲ್ ನೀಡಿ, 1.40 ಕೋಟಿ ರೂ. ಭ್ರಷ್ಟಾಚಾರ ನಡೆಸಿರುವ ಆರೋಪದಡಿ ವಲಯ ಕಚೇರಿ-1ರ ಸಹಾಯಕ ಆಯುಕ್ತ ಸುನಿಲ್ ಬಾಬು ಹಾಗೂ ಕಿರಿಯ ಇಂಜಿನಿಯರ್ ಮೋಹನ್…
ಮೈಸೂರಿನ ಸ್ವಚ್ಛತೆಗೆ ಕಂಟಕವಾಗಿರುವ ಪಿಜಿಗಳು…
January 9, 2019ಮೈಸೂರು: ಈಗಾಗಲೇ ಸ್ವಚ್ಛ ಸರ್ವೇಕ್ಷಣೆ ಆರಂಭವಾಗಿದೆ. ಮೈಸೂರು ಮತ್ತೆ ದೇಶದ ಪ್ರಥಮ ಸ್ವಚ್ಛ ನಗರವಾಗಿ ವಿಜೃಂಭಿಸಬೇಕೆಂಬ ಆಶಯ ಪ್ರತಿಯೊಬ್ಬರಲ್ಲೂ ಇದೆ. ಹಾಗಾಗಿ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಸಹಕರಿಸಲು ಸಾರ್ವಜನಿಕರು ಮುಂದಾಗಿದ್ದಾರೆ. ಆದರೆ ನಗರದಲ್ಲಿರುವ ಪೇಯಿಂಗ್ ಗೆಸ್ಟ್(ಪಿಜಿ) ವಸತಿ ಗೃಹಗಳು ಸ್ವಚ್ಛತೆಗೆ ಕಂಟಕವಾಗಿವೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ. ಮೈಸೂರಿನಲ್ಲಿ ಪಿಜಿ ವಸತಿ ಗೃಹಗಳು ನಾಯಿ ಕೊಡೆ ಗಳಂತೆ ಹಬ್ಬಿವೆ. ಶಿಕ್ಷಣಕ್ಕಾಗಿ ದೂರದ ಊರುಗಳಿಂದ ಬರುವವರು, ಉದ್ಯೋಗಸ್ಥರ ವಾಸ್ತವ್ಯಕ್ಕೆ ಆರಂಭವಾದ ಪಿಜಿಗಳ ಉದ್ದೇಶ ಪ್ರಸ್ತುತ ವಿಸ್ತಾರವಾಗಿದೆ. ವಿದ್ಯಾರ್ಥಿ…