ಮೈಸೂರು,ಡಿ.9(ಆರ್ಕೆಬಿ)- ಹನುಮ ಜಯಂತಿ ಅಂಗವಾಗಿ ಗಂಗೋತ್ರಿ ಬಡಾ ವಣೆಯ ಆಂಜನೇಯಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ 29ನೇ ವರ್ಷದ ಹನುಮ ಜಯಂತ್ಯುತ್ಸವದ ಅಂಗವಾಗಿ ಭಾನುವಾರ ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಹನು ಮನ ಪ್ರತಿಮೆಯ ಬೃಹತ್ ಶೋಭಾಯಾತ್ರೆ ವಿಜೃಂಭಣೆಯಿಂದ ನಡೆಯಿತು. ಅಲಂಕೃತ ರಥದಲ್ಲಿ ಹನುಮನ ಪ್ರತಿಮೆ ಯನ್ನು ಭಕ್ತಿ ಭಾವದಿಂದ ಕೊಂಡೊಯ್ಯ ಲಾಯಿತು. ಅರಮನೆ ಕೋಟೆ ಆಂಜ ನೇಯಸ್ವಾಮಿ ದೇವಾಲಯದ ಆವರಣ ದಲ್ಲಿ ಶಾಸಕ ಎಸ್.ಎ.ರಾಮದಾಸ್ ಅವರು ನಂದಿ ಧ್ವಜಕ್ಕೆ ಹಾಗೂ ಹನುಮನ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಶೋಭಾಯಾತ್ರೆಗೆ…
ಅಂಕ ಗಳಿಕೆ ಹಿಂದೆ ಬಿದ್ದು ಮಾಕ್ರ್ಸ್ ವಾದಿಗಳಾಗಬೇಡಿ, ಕಲೆಯಲ್ಲೂ ಪರಿಣತಿ ಸಾಧಿಸಿ
December 10, 2019ಮೈಸೂರು,ಡಿ.9(ಪಿಎಂ)-ಅಂಕ ಗಳಿಕೆ ಹಿಂದೆ ಬಿದ್ದು ಕೇವಲ ಮಾಕ್ರ್ಸ್ ವಾದಿ ಗಳಾಗಬೇಡಿ (ಅಂಕ ಗಳಿಕೆ). ಓದಿನೊಂದಿಗೆ ಯಾವುದಾದರೂ ಒಂದು ಕಲೆಯಲ್ಲೂ ಪರಿಣತಿ ಸಾಧಿಸಿ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರ ಸ್ಕøತ ಹಿರಿಯ ರಂಗಕರ್ಮಿ ಡಾ.ಹೆಚ್.ಕೆ. ರಾಮನಾಥ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಮೈಸೂರಿನ ಸರಸ್ವತಿಪುರಂನ ಜೆಎಸ್ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂ ಗಣದಲ್ಲಿ ಜೆಎಸ್ಎಸ್ ಕಲಾಮಂಟಪದ ವತಿಯಿಂದ ಹಮ್ಮಿಕೊಂಡಿರುವ ಜೆಎಸ್ಎಸ್ ರಂಗೋತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಿಸ್ತು, ಶ್ರದ್ಧೆ ಹಾಗೂ ಅರ್ಪಣಾ ಮನೋಭಾವ ಮೈಗೂಡಿಸಿಕೊಳ್ಳಬೇಕು. ಎ.ವಿ.ವರದಾಚಾರ್…
ಸಾಧಕ ಬಾಲ ಪ್ರತಿಭೆಗಳಿಗೆ ಪ್ರಶಸ್ತಿ ಪ್ರದಾನ
December 10, 2019ಮೈಸೂರು,ಡಿ.9(ಆರ್ಕೆಬಿ)-ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಾಲ ಪ್ರತಿಭೆ ಗಳಿಗೆ ಭಾನುವಾರ ಮೈಸೂರು ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನದ ವತಿ ಯಿಂದ ಮೈಸೂರಿನ ರೋಟರಿ ಶಾಲಾ ಸಭಾಂ ಗಣದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋ ತ್ಸವ, ಮಕ್ಕಳ ದಿನಾಚರಣೆ ಮತ್ತು ಮಕ್ಕಳ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧಕರಾದ ಧ್ಯುತಿ (ಅದ್ಭುತ ಸ್ಮರಣ ಶಕ್ತಿ), ನಾದಶ್ರೀ ಆರ್. ಭಟ್ (ಗಾಯನ), ಮನಿಷ್ ಪಟೇಲ್ (ಕಿಕ್ ಬಾಕ್ಸಿಂಗ್), ಎಂ.ಶಿವಾನಿ (ಪಾಶ್ಚಿ ಮಾತ್ಯ ನೃತ್ಯ), ಸಿ.ಸ್ಕಂದ, ಆರ್.ಟಿ.ಆದಿತ್ಯ…
ವಿದ್ವಾಂಸರ ಕೊರತೆ ಮುಂದುವರೆದರೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮುಚ್ಚುವ ಸ್ಥಿತಿ
December 10, 2019ಮೈಸೂರು,ಡಿ.9(ಆರ್ಕೆಬಿ)-ಮೈಸೂ ರಿನ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ವಿದ್ವಾಂಸರ ಕೊರತೆ ಇದ್ದು, ಇನ್ನೆರಡು ವರ್ಷದಲ್ಲಿ ಸಂಸ್ಥೆಗೆ ವಿದ್ವಾಂ ಸರು ಬರದಿದ್ದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯನ್ನೇ ಮುಚ್ಚಬೇಕಾಗಬಹುದು ಎಂದು ಮೈಸೂರು ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಇಂದಿಲ್ಲಿ ಬೇಸರದಿಂದ ನುಡಿದರು. ಮೈಸೂರಿನ ಕುವೆಂಪು ಕನ್ನಡ ಅಧ್ಯ ಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣ ದಲ್ಲಿ ಮೈಸೂರು ವಿವಿ ಶ್ರೀ ಬಸವ ಸಾಮಾ ಜಿಕ ಪರಿಷ್ಕರಣೆ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ ಹಾಗೂ ಕುವೆಂಪು ಕನ್ನಡ ಅಧ್ಯಯನ…
`ಕನ್ನಡ ಭಾಷಾ ಅಸ್ಮಿತೆ’ ಕಾಪಾಡುವಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪಾತ್ರ ಬಹುಮುಖ್ಯ
December 10, 2019ಮೈಸೂರು, ಡಿ.9(ಎಸ್ಪಿಎನ್)-ದೇಶದ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿನ ಜ್ಞಾನ ಸಂಪತ್ತಿಗೆ ಸರಿ ಸಮಾನನಾಗಿ `ಕನ್ನಡ ಭಾಷಾ ಅಸ್ಮಿತೆ’ಯನ್ನು ಕಾಪಾಡಿಕೊಳ್ಳುವಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪಾತ್ರ ಬಹಳ ಮುಖ್ಯವಾದುದು ಎಂದು ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಅಭಿಪ್ರಾಯಪಟ್ಟರು. ಮೈಸೂರು ವಿವಿ ಮಾನಸಗಂಗೋತ್ರಿ ಆವರಣದಲ್ಲಿರುವ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಮೈಸೂರು ವಿವಿ ಶ್ರೀ ಬಸವ ಸಾಮಾಜಿಕ ಪರಿಷ್ಕರಣೆ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ ಹಾಗೂ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ಬಸವಣ್ಣ ಕುರಿತಾದ ರಾಜ್ಯ…
ಯುವ ಜನತೆಗೆ ತಂಬಾಕು ದುಷ್ಪರಿಣಾಮದ ಅರಿವು
December 10, 2019ಮೈಸೂರು, ಡಿ.9(ಪಿಎಂ)- ಮೈಸೂ ರಿನ ಎಸ್ಬಿಆರ್ಆರ್ ಮಹಾಜನ ಪಿಯು ಕಾಲೇಜಿನ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ತಂಬಾಕು ಸೇವನೆಯ ದುಷ್ಪರಿಣಾಗಳನ್ನು ಸಂಪನ್ಮೂಲ ವ್ಯಕ್ತಿಗಳು ಅನಾವರಣಗೊಳಿಸಿದರು. ರಾಷ್ಟ್ರೀಯ ಸೇವಾ ಯೋಜನೆ ಕೋಶ, ಪದವಿ ಪೂರ್ವ ಶಿಕ್ಷಣ ಇಲಾಖೆ, ನವ ದೆಹಲಿಯ ಸಂಬಂಧ್ ಹೆಲ್ತ್ ಫೌಂಡೇ ಶನ್ ಸಂಯುಕ್ತಾಶ್ರಯದಲ್ಲಿ `ಜೀವನಕ್ಕಾಗಿ ಸಂಕಲ್ಪ: ತಂಬಾಕು ಮುಕ್ತ ಯುವ ಜನತೆ ನಿರ್ಮಾಣದ ಅಭಿಯಾನ’ ಶೀರ್ಷಿಕೆಯಡಿ ನಡೆದ ಒಂದು ದಿನದ ಕಾರ್ಯಾಗಾರ ದಲ್ಲಿ ಹಲವು ಸಂಪನ್ಮೂಲ ವ್ಯಕ್ತಿಗಳು ತಂಬಾಕಿನ ಕರಾಳತೆಯನ್ನು ವಿವರಿಸಿದರು. ಮೈಸೂರು, ಚಾಮರಾಜನಗರ, ಮಂಡ್ಯ…
ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ತ್ವರಿತ ನ್ಯಾಯದಾನ ಅಗತ್ಯ
December 10, 2019ಮೈಸೂರು,ಡಿ.9(ಪಿಎಂ)-ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಭಾಗಿಯಾಗುವ ಜನಪ್ರತಿನಿಧಿ ಗಳು ಹಾಗೂ ಪ್ರಭಾವಿಗಳ ವಿರುದ್ಧ ಕಠಿಣ ಕ್ರಮವಾಗ ಬೇಕು… ಪ್ರಕೃತಿ ವಿಕೋಪದಂತೆಯೇ ಮಾನಸಿಕ ವಿಕೃತಿಯೂ ವಿಕೋಪಕ್ಕೆ ಹೋಗುತ್ತಿದೆ… ಕಾನೂನು ಬಲವಾಗಿದ್ದರೂ ಅನುಷ್ಠಾನದ ಹಂತದಲ್ಲಿ ವಿಫಲವಾಗಿ ರುವುದು ಅಪರಾಧಿಗಳ ರಕ್ಷಣೆಗೆ ಕಾರಣವಾಗಿದೆ… ಮೈಸೂರಿನ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದ ಆಲದ ಮರದ ಆವರಣದಲ್ಲಿ `ಸ್ತ್ರೀ ಶೋಷಣೆ ಮುಕ್ತ ಸಮಾಜ ನಿರ್ಮಾಣ ವೇದಿಕೆ’ ವತಿಯಿಂದ ಹಮ್ಮಿಕೊಂಡಿದ್ದ `ಅತ್ಯಾಚಾರ ತಡೆಗೆ ಪರಿಹಾರ ಏನು? ದೇಶದ ವಿದ್ಯಮಾನ ಕುರಿತು ಮುಕ್ತ ಚರ್ಚೆ’ ಕಾರ್ಯಕ್ರಮದಲ್ಲಿ…
ಹನುಮ ಜಯಂತಿ: ರಂಜಿಸಿದ ಪೊಲೀಸ್ ವಾದ್ಯಗೋಷ್ಠಿ
December 10, 2019ಮೈಸೂರು, ಡಿ.9(ಎಸ್ಪಿಎನ್)- `ಹನುಮ ಜಯಂತಿ’ ಅಂಗವಾಗಿ ಕರ್ನಾ ಟಕ ಪೊಲೀಸ್ ವಾದ್ಯ ವೃಂದದ ಕಲಾ ವಿದರು ಸೋಮವಾರ ನಡೆಸಿಕೊಟ್ಟ `ವಾದ್ಯಗೋಷಿ’್ಠ ಮೈಸೂರಿನ ಹನುಮ ಭಕ್ತರ ಮನರಂಜಿಸಿತು. ಮೈಸೂರು ಅರಮನೆ ಕೋಟೆ ಆಂಜ ನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಶ್ರೀ ಹನುಮ ಜಯಂತಿ ಅಂಗವಾಗಿ ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಆಯೋಜಿಸಿರುವ (ಡಿ.9ರಿಂದಡಿ.23ರವರೆಗೆ) ವಿವಿಧ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಈ ವಾದ್ಯ ಗೋಷ್ಠಿ ನಡೆಸಿಕೊಟ್ಟರು. ಈ ವಾದ್ಯಗೋಷ್ಠಿಯಲ್ಲಿ ಹನುಮನ ಕುರಿತು ಭಕ್ತಿ ಗೀತೆಗಳನ್ನು ಹಿಂದೂಸ್ಥಾನಿ ಶೈಲಿಯಲ್ಲಿ ನುಡಿಸಿ…
ಮೈಸೂರು ಟೆನ್ನಿಸ್ ಕ್ಲಬ್ ಸುವರ್ಣ ಮಹೋತ್ಸವ
December 10, 2019ಮೈಸೂರು,ಡಿ.9-ಮೈಸೂರು ಟೆನ್ನಿಸ್ ಕ್ಲಬ್ (ಎಂಟಿಸಿ), ಟೆನ್ನಿಸ್ ಆಟವನ್ನು ಪ್ರೋತ್ಸಾಹಿಸುವ ಹಾಗೂ ಉತ್ತೇ ಜಿಸುವ ದೇಶದ ಪ್ರಾಥಮಿಕ ಟೆನ್ನಿಸ್ ಕ್ಲಬ್ಗಳಲ್ಲಿ ಒಂದಾಗಿದ್ದು, 1969 ರಲ್ಲಿ ಸ್ಥಾಪಿತವಾಯಿತು. ಈ ಸಂಸ್ಥೆಯು ತನ್ನ ಸುವರ್ಣ ಮಹೋತ್ಸವವನ್ನು ಮೈಸೂರು ಟೆನ್ನಿಸ್ ಕ್ಲಬ್ ಆವರಣದಲ್ಲಿ ಭಾನುವಾರ ಸಂಜೆ ಆಚರಿಸಿಕೊಂಡಿತು. ಮೈಸೂರು ಟೆನ್ನಿಸ್ ಕ್ಲಬ್ ಹಲವಾರು ಪ್ರತಿಭಾನ್ವಿತ ಟೆನ್ನಿಸ್ ಆಟಗಾರರನ್ನು ರೂಪಿಸಿದ್ದು, ಅವರು ದೇಶ ವನ್ನು ವಿವಿಧ ಹಂತಗಳಲ್ಲಿ ಪ್ರತಿನಿಧಿಸಿದ್ದಾರೆ. ಮೈಸೂರು ಟೆನ್ನಿಸ್ ಕ್ಲಬ್ ಅನ್ನು ಟೆನ್ನಿಸ್ ಪ್ರಿಯ ರಾದ ಎಂ.ಹೆಚ್.ರಾಜಾರಾವ್, ಪಿ. ಪಟ್ಟಾಭಿ ರಾಮಯ್ಯ,…
ಕ್ರಿಸ್ತನ ಜನನದ ಸಂದೇಶ ಸಾರುವ ಕೆರೋಲ್ ಗಾಯನ ಸ್ಪರ್ಧೆ
December 10, 2019ಮೈಸೂರು, ಡಿ.9(ಆರ್ಕೆಬಿ)- ಶಾಂತಿದೂತ ಕ್ರಿಸ್ತನ ಪ್ರೀತಿ ಮತ್ತು ಸಹನೆಯ ಸಂಕೇತವಾಗಿ ಜಾತಿ, ಮತ, ಭಾಷೆ ಭೇದವಿಲ್ಲದೆ ಕ್ರಿಸ್ತನ ಜನನದ ಸಂದೇಶವನ್ನು ಎಲ್ಲೆಡೆ ಸಾರುವ ಕೆರೋಲ್ ಗಾಯನ ಸ್ಪರ್ಧೆ ಮೈಸೂರಿನ ಟೆರಿಷಿಯನ್ ಕಾಲೇಜಿನಲ್ಲಿ ನಡೆಯಿತು. ಕಾರ್ಮೆಲ್ ಕ್ಯಾಥೊಲಿಕ್ ಅಸೋಸಿಯೇಷನ್ ವತಿ ಯಿಂದ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ಕನ್ನಡ, ಇಂಗ್ಲಿಷ್, ಕೊಂಕಣಿ, ಮಲಯಾಳಂ, ತಮಿಳು, ಹಿಂದಿ ಸೇರಿದಂತೆ ವಿವಿಧ ಭಾಷೆಗಳ ಕೆರೋಲ್ ಗೀತೆಗಳನ್ನು ನೂರಾರು ಮಕ್ಕಳು ಹಾಡಿ ರಂಜಿಸಿದರು. ಶಿಶುವಿಹಾರ, ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢ, ಕಾಲೇಜು ವಿದ್ಯಾರ್ಥಿಗಳು, ಧಾರ್ಮಿಕ ತಂಡ…










