ಶ್ರೀರಂಗಪಟ್ಟಣ, ಜ.1(ವಿನಯ್ ಕಾರೇ ಕುರ)- ಹೊಸ ವರ್ಷದ ಸಂಭ್ರಮಾ ಚರಣೆಯನ್ನು ಮೈಸೂರಿನ ಸಿದ್ಧಾರ್ಥ ನಗರ ಸರ್ಕಾರಿ ಪದವಿ ಪೂರ್ವ ಕಾಲೇ ಜಿನ ವಿದ್ಯಾರ್ಥಿಗಳು ಶ್ರಮದಾನದ ಮೂಲಕ ಸ್ವಚ್ಛತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿನೂತನವಾಗಿ ಆಚರಿಸಿದರು. ತಾಲೂಕಿನ ಕರಿಘಟ್ಟ ಬೆಟ್ಟದಲ್ಲಿ ಪರಿಸರ ಪ್ರೇಮಿ ರಮೇಶ್ ನೆಟ್ಟಿರುವ ಸುಮಾರು 500ಕ್ಕೂ ಹೆಚ್ಚು ಗಿಡಗಳ ಸುತ್ತ ಬೆಳೆದಿರುವ ಕಳೆಯನ್ನು ವಿದ್ಯಾರ್ಥಿಗಳು ತೆರವುಗೊಳಿಸಿ, ಗಿಡಗಳಿಗೆ ನೀರು ಹಾಕಿದರು. ಈ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಪರಿಸರ ಪ್ರೇಮಿ ರಮೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೊಸ…
ಕುವೆಂಪು ಜನ್ಮದಿನಾಚರಣೆ ಅಂಗವಾಗಿ ಅನಿಕೇತನ ಸೇವಾ ಟ್ರಸ್ಟ್ನಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ
January 1, 2020ಮೈಸೂರು,ಡಿ.31(ಆರ್ಕೆಬಿ)- ಕುವೆಂಪು ಜನ್ಮದಿನಾಚರಣೆ ಅಂಗವಾಗಿ ಮೈಸೂರಿನ ಅನಿಕೇತನ ಸೇವಾ ಸಂಸ್ಥೆ ಆಶ್ರಯದಲ್ಲಿ ಮಂಗಳವಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಚಿದಾನಂದ ಗೌಡ, ರಂಗಕರ್ಮಿ ಡಾ.ಹೆಚ್.ಕೆ.ರಾಮ ನಾಥ, ಕಾವಾ ನಿವೃತ್ತ ಡೀನ್ ಪ್ರೊ.ವಿ.ಕೆ. ದೇಶಪಾಂಡೆ, ಯೋಗಪಟು ಖುಷಿ ಅವರನ್ನು ಅಭಿನಂದಿಸಲಾಯಿತು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಮೂವರಿಗೆ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಮಹಾರಾಜ ಕಾಲೇಜು ನಿವೃತ್ತ ಪ್ರಾಂಶು ಪಾಲ ಪ್ರೊ.ಎಂ.ಕೃಷ್ಣೇಗೌಡ ಸನ್ಮಾನಿಸಿದರು. ಬಳಿಕ ಮಾತನಾಡಿದ ಪ್ರೊ.ಎಂ.ಕೃಷ್ಣೇ…
ನೊಂದವರಿಗೆ ನ್ಯಾಯ ದೊರಕಿಸಿಕೊಟ್ಟ ಆತ್ಮತೃಪ್ತಿ ನನಗಿದೆ
January 1, 2020ಮೈಸೂರು,ಡಿ.31(ಆರ್ಕೆಬಿ)- ಮೈಸೂ ರಿನ ಜೆಎಸ್ಎಸ್ ಕಾನೂನು ಕಾಲೇಜಿನಲ್ಲಿ ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಹಾಗೂ ಜೆ.ಎಸ್.ಎಸ್ ಕಾನೂನು ಕಾಲೇಜು ವತಿಯಿಂದ ಮಂಗಳವಾರ ಆಯೋಜಿ ಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಹಿರಿಯ ಅಭಿಯೋಜಕ ಮಹಾಂತಪ್ಪ ಅವರಿಗೆ ಮಾಜಿ ಸಚಿವ ಎ.ಮಂಜು ಆತ್ಮೀಯವಾಗಿ ಸನ್ಮಾನಿಸಿದರು. ಗೌರವ ಸ್ವೀಕರಿಸಿದ ಬಳಿಕ ಮಾತ ನಾಡಿದ ಮಹಾಂತಪ್ಪ, ಮೈಸೂರಿನಲ್ಲಿ 13 ವರ್ಷಗಳ ಕಾಲ ಅಭಿಯೋಜನರಾಗಿ ಸೇವೆ ಸಲ್ಲಿಸಿದ್ದು, ಸಾಧನೆ ಮಾಡದಿ ದ್ದರೂ, ಇಲ್ಲಿನ ಜನರ ಕಷ್ಟಗಳಿಗೆ ಸ್ಪಂದಿಸಿ, ನೊಂದವರ ಪರ ನಿಂತು ನ್ಯಾಯ ದೊರಕಿಸಿ ಕೊಟ್ಟಿದ್ದೆನೆಂಬ…
ಮೈಸೂರು ರಂಗಾಯಣದ ನಿರ್ದೇಶಕರಾಗಿ ಅಡ್ಡಂಡ ಸಿ.ಕಾರ್ಯಪ್ಪ ಅಧಿಕಾರ ಸ್ವೀಕಾರ
January 1, 2020ಮೈಸೂರು, ಡಿ.31(ಪಿಎಂ)- ಪ್ರತಿಷ್ಠಿತ ಮೈಸೂರು ರಂಗಾಯಣದ ನಿರ್ದೇಶಕ ರಾಗಿ ಕೊಡಗಿನ ಹಿರಿಯ ರಂಗಕರ್ಮಿ ಅಡ್ಡಂಡ ಸಿ.ಕಾರ್ಯಪ್ಪ ಮಂಗಳವಾರ ಅಧಿಕಾರ ಸ್ವೀಕರಿಸಿದರು. ರಂಗಾಯಣದ ನಿರ್ದೇಶಕರ ಕಚೇರಿ ಯಲ್ಲಿ ರಂಗಾಯಣದ ಸಂಸ್ಥಾಪಕ ನಿರ್ದೇಶಕ ರಂಗಭೀಷ್ಮ ಬಿ.ವಿ.ಕಾರಂತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಸಂಬಂಧಿಸಿದ ದಾಖಲೆಗಳಿಗೆ ಸಹಿ ಮಾಡುವ ಮೂಲಕ ಅಡ್ಡಂಡ ಸಿ.ಕಾರ್ಯಪ್ಪ ಮೈಸೂರು ರಂಗಾಯಣದ 18ನೇ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು. ಬಳಿಕ ಮಾಧ್ಯಮದವರೊಂದಿಗೆ ಮಾತ ನಾಡಿದ ಅವರು, ಅಂತಾರಾಷ್ಟ್ರೀಯ ಮಟ್ಟದ ರಂಗಕರ್ಮಿ, ರಂಗಭೀಷ್ಮ ಬಿ.ವಿ.ಕಾರಂತರು ಕಟ್ಟಿದ ಈ ಅದ್ಭುತವಾದ ರಂಗಾಯಣದ ನಿರ್ದೇಶಕರಾಗಿ…
ಏಕವ್ಯಕ್ತಿಯಿಂದ ಏನೂ ಮಾಡಲಾಗದು, ಒಟ್ಟಾಗಿ ಕೆಲಸ ಮಾಡೋಣ
January 1, 2020ಮೈಸೂರು, ಡಿ.31(ಪಿಎಂ)- ರಂಗಭೂಮಿ ಎಂಬುದು ಸಮೂಹ ಮಾಧ್ಯಮ. ಇಲ್ಲಿ ಏಕವ್ಯಕ್ತಿಯಿಂದ ಏನೂ ಮಾಡಲಾಗದು. ಏಕವ್ಯಕ್ತಿ ಪ್ರದರ್ಶನದಲ್ಲೂ ಹಲವರು ಕೆಲಸ ಮಾಡಬೇಕು. ಹೀಗಾಗಿ ರಂಗಾ ಯಣದ ಬೆಳವಣಿಗೆಗೆ ನಾವು ಒಟ್ಟಾಗಿ ಪ್ರಾಮಾಣಿಕವಾಗಿ ಕೆಲಸ ಮಾಡೋಣ ಎಂದು ಮೈಸೂರಿನ ರಂಗಾಯಣದ ನೂತನ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ರಂಗಾಯಣದ ಕಲಾವಿದರು ಹಾಗೂ ಸಿಬ್ಬಂದಿಯಲ್ಲಿ ತಿಳಿಸಿದರು. ಮೈಸೂರಿನ ರಂಗಾಯಣದ ಭೂಮಿಗೀತ ಸಭಾಂಗಣದಲ್ಲಿ ಮಂಗಳವಾರ ಅಧಿಕಾರ ವಹಿಸಿಕೊಂಡ ಬಳಿಕ ನಡೆದ ಸರಳ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ರಂಗ ಭೂಮಿ ರಾಜಕೀಯ ಇಲ್ಲವೇ ನಿಗಮ-ಮಂಡಳಿಯಲ್ಲ….
ಬಡವರಿಗೆ ಅಗ್ಗದ ಬೆಲೆಯ ಮದ್ಯ ಮಾರಾಟಕ್ಕೆ ಚಿಂತನೆ
January 1, 2020ಬೆಂಗಳೂರು, ಡಿ.31(ಕೆಎಂಶಿ)-ಬಡವರು ಮತ್ತು ಗ್ರಾಮೀಣ ಜನತೆಗೆ ಕಡಿಮೆ ದರದಲ್ಲಿ ಮದ್ಯ (ಚೀಪ್ ಲಿಕ್ಕರ್) ಮಾರಾಟ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನತೆ ಕಿರಾಣಿ ಅಂಗಡಿಗಳಲ್ಲಿ ಹೆಚ್ಚು ಬೆಲೆ ನೀಡಿ, ಮದ್ಯ ಖರೀದಿಸುವುದನ್ನು ತಪ್ಪಿಸಲು ಪ್ರತಿ ವಿಧಾನಸಭಾ ಶಾಸಕರ ಕ್ಷೇತ್ರಗಳಲ್ಲಿ ಎಂಎಸ್ಐಎಲ್ ಮೂಲಕ ಮದ್ಯದಂಗಡಿ ತೆರೆಯುವುದಾಗಿ ಹೇಳಿದರು. ರಾಜ್ಯಾದ್ಯಂತ ಈಗಾಗಲೇ 765 ಎಂಎಸ್ಐಎಲ್ ಮಳಿಗೆಗಳಿದ್ದು, ಮತ್ತೇ 408 ಮಳಿಗೆಗಳನ್ನು ತೆರೆಯಲು ಅನುವು…
ನಿರಂತರ ರಂಗ ಉತ್ಸವಕ್ಕೆ ತೆರೆ
January 1, 2020ಮೈಸೂರು, ಡಿ.31(ಎಸ್ಪಿಎನ್)- ನಿರಂತರ ಸಾಂಸ್ಕøತಿಕ ಸಂಸ್ಥೆಯಲ್ಲಿ ತೊಡಗಿಸಿಕೊಳ್ಳುವ ಅನೇಕ `ಯುವ ಪ್ರತಿಭೆ’ಗಳಿಗೆ ಕಲಾ ಬದುಕು ರೂಪಿಸುವ ಜೊತೆಗೆ `ಉತ್ತಮ ಕಲಾವಿದ’ರನ್ನು ರೂಪಿಸುವ ದೊಡ್ಡ ಜವಾಬ್ದಾರಿಯನ್ನೇ ವಹಿಸಿಕೊಂಡಿರುವುದು ಅಭಿನಂದನಾರ್ಹ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹನೂರು ಚೆನ್ನಪ್ಪ ಅಭಿಪ್ರಾಯಪಟ್ಟರು. ಮೈಸೂರು ಕಲಾಮಂದಿರ ಆವರಣ ದಲ್ಲಿ ನಿರಂತರ ರಂಗ ಉತ್ಸವದ ಮುಕ್ತಾಯ ಸಮಾರಂಭದಲ್ಲಿ ಅಧ್ಯಕ್ಷ ವಹಿಸಿ ಮಾತ ನಾಡಿದ ಅವರು, ನಮ್ಮನಾಳುವ ಪ್ರಭುತ್ವ ಸಾಮಾಜಿಕ ವ್ಯವಸ್ಥೆಯನ್ನು ಕೆಡವಲು ಪ್ರಯತ್ನಿಸುತ್ತದೆ. ಸಾಂಸ್ಕøತಿಕ ಜಗತ್ತು ಕೆಡವಿದ್ದನ್ನು ಕಟ್ಟಲು ಪ್ರಯತ್ನಿಸುತ್ತದೆ…
ಗ್ರೀನ್ಸ್ ಬಡ್ಸ್ಗೆ ಸೇರಿದ ಆಸ್ತಿ ಹರಾಜು ಮಾಡಿ, ಹೂಡಿಕೆದಾರರಿಗೆ ಹಣ ಮರುಪಾವತಿಗಾಗಿ ಸಿಎಂ ಬಳಿಗೆ ನಿಯೋಗ ತೆರಳಲು ಗ್ರೀನ್ ಬಡ್ಸ್ ಹೂಡಿಕೆದಾರರ ನಿರ್ಧಾರ
January 1, 2020ಮೈಸೂರು, ಡಿ.31(ಎಂಟಿವೈ)-ಗ್ರೀನ್ ಬಡ್ಸ್ ಸಂಸ್ಥೆಗೆ ಠೇವಣಿ ಹೂಡಿರುವ ಗ್ರಾಹಕರಿಗೆ ಹಣ ಪಾವತಿಗೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ನಿಯೋಗ ದೊಂದಿಗೆ ಭೇಟಿ ಮಾಡಲು ಸಂಸ್ಥೆಯ ಏಜೆಂಟರು ನಿರ್ಧರಿಸಿದ್ದಾರೆ. ಹಣ ಮರು ಪಾವತಿಯಾಗದೇ ಇರು ವುದರಿಂದ ಕಂಗೆಟ್ಟಿರುವ ಗ್ರೀನ್ ಬಡ್ಸ್ ಸಂಸ್ಥೆಯ ಏಜೆಂಟರು ಗ್ರಾಹಕರ ಒತ್ತಡ ದಿಂದ ಜರ್ಝರಿತರಾಗಿದ್ದು, ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಮೀಪದ ಉದ್ಯಾ ನವನದಲ್ಲಿ ಪೂರ್ವಭಾವಿ ಸಭೆ ನಡೆಸಿ, ನಿಯೋಗದೊಂದಿಗೆ ಮುಖ್ಯಮಂತ್ರಿ ಗಳನ್ನು ಭೇಟಿ ಮಾಡಿ ಹೂಡಿರುವ ಹಣವನ್ನು ತ್ವರಿತಗತಿಯಲ್ಲಿ ಗ್ರಾಹಕರ ಖಾತೆಗೆ…
ಹೊಸ ವರ್ಷಾಚರಣೆಗೆ ಮೈಸೂರು ನಗರ ಸಜ್ಜು: ಇಂದು ರಾತ್ರಿ 9 ಗಂಟೆಯಿಂದ ತಾವರೆಕಟ್ಟೆ ಮಾರ್ಗದಿಂದ ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರ ವಾಹನ ಪ್ರವೇಶ ನಿಷಿದ್ಧ
December 31, 2019ಮೈಸೂರು,ಡಿ.30(ಆರ್ಕೆ)-2019ನೇ ವರ್ಷಕ್ಕೆ ವಿದಾಯ ಹೇಳಿ 2020ರ ಹೊಸ ವರ್ಷ ಸ್ವಾಗತಕ್ಕೆ ಮೈಸೂರು ನಗರ ಸರ್ವ ರೀತಿಯಲ್ಲೂ ಸಜ್ಜುಗೊಂಡಿದೆ. ಹೋಟೆಲ್ಗಳು, ರೆಸಾರ್ಟ್ಗಳು, ರಿಕ್ರಿಯೇಷನ್ ಕ್ಲಬ್ಗಳು, ವಿವಿಧ ಸಂಘ -ಸಂಸ್ಥೆಗಳ ಆವರಣದಲ್ಲಿ ಹೊಸ ವರ್ಷಾಚರಣೆಗಾಗಿ ವಿಶೇಷ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಔತಣ ಕೂಟ, ದೇಶಿಯ, ಪಾಶ್ಚಿಮಾತ್ಯ ಸಂಗೀತ ಹಾಗೂ ಇನ್ನಿತರೆ ಸಾಂಸ್ಕøತಿಕ ಕಾರ್ಯ ಕ್ರಮಗಳನ್ನು ಏರ್ಪಡಿಸಲಾಗಿದೆ. ಮೈಸೂರಿನ ಪ್ರಮುಖ ಹೋಟೆಲ್ ಗಳಾದ ರ್ಯಾಡಿಸನ್ ಬ್ಲೂ, ಲಲಿತಮಹಲ್ ಪ್ಯಾಲೇಸ್, ಸಂದೇಶ್ ದಿ ಪ್ರಿನ್ಸ್, ರಿಯೋ ಮೆರಿಡಿಯನ್, ಕೋರಂ, ಯಂಗ್ ಐಲ್ಯಾಂಡ್ ರೆಸಾರ್ಟ್, ಲೋಬೋಸ್…
ಸಿಐಐಎಲ್ನಿಂದ ಶೀಘ್ರವೇ ಸಿದ್ಧಿ, ಹಕ್ಕಿಪಿಕ್ಕಿ, ಸೋಲಿಗ ಸಮುದಾಯ ಭಾಷೆಗಳ ಶಬ್ದಕೋಶ-ವ್ಯಾಕರಣ ಪ್ರಕಟಣೆ
December 31, 2019ಮೈಸೂರು, ಡಿ.30(ಪಿಎಂ)- ಅಳಿವಿ ನಂಚಿನಲ್ಲಿರುವ ಸಿದ್ಧಿ, ಹಕ್ಕಿಪಿಕ್ಕಿ ಹಾಗೂ ಸೋಲಿಗ ಸಮುದಾಯ ಭಾಷೆಗಳ ಕುರಿ ತಂತೆ ಶಬ್ದಕೋಶ ಹಾಗೂ ವ್ಯಾಕರಣ ಇತ್ಯಾದಿಗಳನ್ನು ಭಾರತೀಯ ಭಾಷಾ ಸಂಸ್ಥಾನ ಶೀಘ್ರದಲ್ಲಿ ಪ್ರಕಟಿಸಲಿದೆ ಎಂದು ಸಂಸ್ಥಾನದ ನಿರ್ದೇಶಕ ಪ್ರೊ. ಡಿ.ಜಿ. ರಾವ್ ಇಂದಿಲ್ಲಿ ಮಾಹಿತಿ ನೀಡಿದರು. ಮೈಸೂರಿನ ಮಾನಸಗಂಗೋತ್ರಿಯ ಮೈಸೂರು ವಿವಿಯ ವಿಜ್ಞಾನ ಭವನದಲ್ಲಿ ವಿವಿಯ ಕಂಪ್ಯೂಟರ್ ಸೈನ್ಸ್ ವಿಭಾಗ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಭಾಷಾಶಾಸ್ತ್ರ ಅಧ್ಯಯನ ವಿಭಾಗ, ಅಖಿಲ ಭಾರತ ಸಂಶೋಧಕರ ಸಂಘ (ಎಐಆರ್ಎ), ಭಾರತೀಯ ಭಾಷಾ ಸಂಸ್ಥಾನದ…










