ಬೆಂಗಳೂರು: ಬಿಡದಿ ಬಳಿ ಇರುವ ಈಗಲ್ಟನ್ ರೆಸಾರ್ಟ್ನಲ್ಲಿ ಕಳೆದ ಮಧ್ಯರಾತ್ರಿ ಕಾಂಗ್ರೆಸ್ ಶಾಸಕರಾದ ಕಂಪ್ಲಿ ಗಣೇಶ್ ಮತ್ತು ಆನಂದ್ ಸಿಂಗ್ ನಡುವೆ ಮಾರಾಮಾರಿ ನಡೆದಿದ್ದು, ಆನಂದ್ ಸಿಂಗ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆದ ನಂತರ ಕಾಂಗ್ರೆಸ್ ಶಾಸಕರನ್ನು ಈಗಲ್ಟನ್ ರೆಸಾರ್ಟ್ಗೆ ಕರೆ ದೊಯ್ಯಲಾಗಿತ್ತು. ಈಗ ಈ ಶಾಸಕರು ಈಗಲ್ಟನ್ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಕಳೆದ ರಾತ್ರಿ 2.30ರ ಸುಮಾರಿನಲ್ಲಿ ಕಂಪ್ಲಿ ಶಾಸಕ ಗಣೇಶ್,…
ಮಧ್ಯಪ್ರದೇಶದ ಐವರು ಕುಖ್ಯಾತ ಅಂತಾರಾಜ್ಯ ಖದೀಮರ ಬಂಧನ
January 21, 2019ಮೈಸೂರು: ಮೈಸೂರಿನ ಸಿಸಿಬಿ ಪೊಲೀಸರು ಐವರು ಕುಖ್ಯಾತ ಅಂತಾ ರಾಜ್ಯ ಮನೆಗಳ್ಳರನ್ನು ಬಂಧಿಸಿ, 28 ಮನೆ ಕಳ್ಳತನ ಪ್ರಕರಣ ಪತ್ತೆ ಹಚ್ಚಿರುವುದಲ್ಲದೇ, 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರೆಲ್ಲರೂ ಮಧ್ಯಪ್ರದೇಶದ ಕುಖ್ಯಾತ ಮನೆಗಳ್ಳರಾಗಿದ್ದು, ಮಧ್ಯಪ್ರದೇಶ ಗುಡ್ಡಗಾಡು ಪ್ರದೇಶದಲ್ಲಿರುವ ಒಂದು ಊರಿನ ಬಹುತೇಕ ಜನರು ಅಪರಾಧ ಹಿನ್ನೆಲೆ ಯವರೇ ಆಗಿದ್ದಾರೆ. ಇವರನ್ನು ಹಿಡಿ ಯಲು ಹೋದ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ತಪ್ಪಿಸಿಕೊಳ್ಳುವ ಪ್ರವೃತ್ತಿ ಯವರೂ ಆಗಿದ್ದು, ಈ ಖದೀಮರನ್ನು ಬಂಧಿಸಿದ…
ಮೈಸೂರು ಅರಮನೆಯಲ್ಲಿ ಆದ್ಯವೀರ್ ನರಸಿಂಹರಾಜ ಒಡೆಯರ್ ಹುಟ್ಟುಹಬ್ಬ ಸಂಭ್ರಮ
January 21, 2019ಮೈಸೂರು: ಮೈಸೂರು ಅರಮನೆಯಲ್ಲಿ ಭಾನುವಾರ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಶಿಕ ಕುಮಾರಿ ಒಡೆಯರ್ ಪುತ್ರ ಆದ್ಯವೀರ್ ನರಸಿಂಹ ರಾಜ ಒಡೆಯರ್ ಅವರ ಮೊದಲ ವರ್ಷದ ಹುಟ್ಟು ಹಬ್ಬವನ್ನು ರಾಜವಂಶಸ್ಥರ ಪ್ರಮುಖರ ಸಮ್ಮುಖದಲ್ಲಿ ಆಚರಿಸಲಾಯಿತು. ಅರಮನೆಯ ಆವರಣದಲ್ಲಿ ಭಾನು ವಾರ ನಡೆದ ಹುಟ್ಟು ಹಬ್ಬ ಕಾರ್ಯ ಕ್ರಮದಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಯದುವೀರ ಕೃಷ್ಣದತ್ತ ಚಾಮ ರಾಜ ಒಡೆಯರ್, ತ್ರಿಶಿಕ ಕುಮಾರಿ ಒಡೆ ಯರ್ ಒಳಗೊಂಡಂತೆ ರಾಜವಂಶಸ್ಥರು ಪಾಲ್ಗೊಂಡಿದ್ದರು. ಆದ್ಯವೀರ್ ಅವರಿಗೆ…
ಗೋಮಾಂಸ ತಿನ್ನುವುದಿಲ್ಲ ಅನ್ನುವವರು ಬೇರೆ ಪ್ರಾಣಿ ಮಾಂಸವನ್ನೂ ತಿನ್ನಬಾರದು : ಡಾ.ಎಸ್.ಎಲ್.ಭೈರಪ್ಪ
January 21, 2019ಮೈಸೂರು: ಗೋ ಮಾಂಸ ತಿನ್ನುವುದಿಲ್ಲ, ತಿನ್ನಬಾರದು ಎನ್ನುವವರು ಬೇರೆ ಯಾವುದೇ ಪ್ರಾಣಿ ಮಾಂಸವನ್ನೂ ತಿನ್ನಬಾರದು ಎಂದು ಸರಸ್ವತಿ ಸಮ್ಮಾನ್ ಪುರಸ್ಕೃತ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅಭಿಪ್ರಾಯಪಟ್ಟರು. ಮೈಸೂರಿನ ಕಲಾಮಂದಿರಲ್ಲಿ ಹಮ್ಮಿಕೊಂಡಿದ್ದ ಡಾ.ಎಸ್.ಎಲ್.ಭೈರಪ್ಪ ಸಾಹಿತ್ಯೋ ತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನನ್ನ ಕಾದಂಬರಿ `ತಬ್ಬಲಿಯು ನೀನಾದೆ ಮಗನೆ’ಯಲ್ಲಿ ಕೇವಲ ಗೋವಿನ ಕಥೆ ಮಾತ್ರ ಹೇಳಿಲ್ಲ. ಅಲ್ಲಿ ಮಾಂಸಾ ಹಾರ ಹಾಗೂ ಸಸ್ಯಾಹಾರ ಪರಿಕಲ್ಪನೆ ಬಗ್ಗೆಯೂ ಹೇಳಿದಿದ್ದೇನೆ ಎಂದು ತಿಳಿಸಿದರು. ಈ ಕಾದಂಬರಿ ಬರೆಯುವ ವೇಳೆಗೆ ಜೈನ ಧರ್ಮದ…
ಗಮನ ಸೆಳೆದ ನಾನಾ ಉತ್ಪನ್ನ ಮತ್ತು ಸೇವೆಗಳ `ಮೈ ಬಿಜ್’ ಪ್ರದರ್ಶನ
January 21, 2019ಮೈಸೂರು: ಮೈಸೂರಿನ ಕೃಷ್ಣಮೂರ್ತಿಪುರಂನ ನಿತ್ಯೋತ್ಸವ ಕನ್ವೆನ್ಷನ್ ಸೆಂಟರ್ನಲ್ಲಿ ಬಿಎನ್ಐ (ಬ್ಯುಸಿ ನೆಸ್ ನೆಟ್ವರ್ಕ್ ಇಂಟರ್ನ್ಯಾಷನಲ್) ಆಶ್ರಯದಲ್ಲಿ ಭಾನುವಾರ `ಮೈ ಬಿಜ್ ಬುಸಿನೆಸ್ ಎಕ್ಸ್ಪೋ-2019’ನಲ್ಲಿ ಮೈ ಬಿಜ್ ಸದಸ್ಯರ ನಾನಾ ಉತ್ಪನ್ನಗಳು ಮತ್ತು ಸೇವೆಗಳ ಪ್ರದರ್ಶನ ನಡೆಯಿತು. ನೆಮ್ಮದಿ’ ಮನೆ ಪರಿಶೀಲನೆ, ಯೋಜ ನೆಯ ಪರಿಶೀಲನೆ ನಡೆಸಿ ಮನೆಯ ಗುಣ ಮಟ್ಟ ಕುರಿತ ವರದಿ ನೀಡುವುದು, ಸೋಲಾರ್ ಪವರ್ ಎನರ್ಜಿ, ಯುಪಿವಿಸಿ ಬಾಗಿಲು, ಕಿಟಕಿಗಳು,ಧಾತೃ’ ನೇಮ್ ಪ್ಲೇಟ್ಸ್, ವಾಲ್ ಪೇಪರ್, ವಾರ್ಡ್ರೋಬ್ ಪ್ರಿಂಟಿಂಗ್, ಗ್ಲಾಸ್ ಪ್ರಿಂಟಿಂಗ್, ಟೈಲ್ಸ್ ಪ್ರಿಂಟಿಂಗ್,…
ಮಾನವನ ಹೊರಗೆ, ಒಳಗೆ ವಿಷ ಪ್ರವಾಹವಾಗುತ್ತಿದೆ
January 21, 2019ಮೈಸೂರು: ಸಮಾ ಜದ ಅವ್ಯವಸ್ಥೆಯ ಸಂಕೇತ ಸುಳವಾಡಿ ಪ್ರಕರಣ. ಪರಿಸರ, ಮಣ್ಣು, ಆಹಾರ ಅಷ್ಟೇ ಅಲ್ಲ ಮಾನವನ ಹೊರಗೆ, ಒಳಗೆ ಎಲ್ಲೆಡೆ ವಿಷ ಪ್ರವಾಹವಾಗುತ್ತಿದೆ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಹೇಳಿದರು. ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಸಾಮಾಜಿಕ ನ್ಯಾಯಪರ ವೇದಿಕೆ ಸಂಯುಕ್ತಾಶ್ರಯದಲ್ಲಿ ನಡೆದ ‘ಈ ಸಾವು ನ್ಯಾಯವೇ’ ಸುಳವಾಡಿ ವಿಷ ಪ್ರಸಾ ದಕ್ಕೆ ಬಲಿಯಾದ ಮುಗ್ಧ ಜೀವಗಳಿಗೆ ಶ್ರದ್ಧಾಂಜಲಿ ಕವಿ ಗೋಷ್ಠಿಯಲ್ಲಿ ಮಾತ ನಾಡಿದ ಅವರು, ಶತಶತಮಾನಗಳಿಂದ ಬೆಳೆದು ಬಂದ…
ಹಾಸ್ಯ ಚಟಾಕಿ ನಡುವೆಯೇ ಎಸ್.ಎಲ್.ಭೈರಪ್ಪ ಗುಣಗಾನ ಮಾಡಿದ ಗಂಗಾವತಿ ಪ್ರಾಣೇಶ್
January 21, 2019ಮೈಸೂರು: ತಮ್ಮ ಹಾಸ್ಯದಾಟಿಯಲ್ಲಿ ಹಲವು ಪ್ರಸಂಗಗ ಳನ್ನು ಅನಾವರಣಗೊಳಿಸಿ ಕಚಗುಳಿ ಇಟ್ಟು ಸಭಿಕರ ಹೊಟ್ಟೆ ಹುಣ್ಣಾಗಿಸಿದ ನಗೆಗಾರ ಗಂಗಾವತಿ ಪ್ರಾಣೇಶ್, ಅಲ್ಲೆಲ್ಲಿ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರ ಮೇರು ವ್ಯಕ್ತಿತ್ವದ ಗುಣಗಾನ ಮಾಡಿದರಲ್ಲದೆ, ದಸರಾ ಮಹೋತ್ಸವ ಉದ್ಘಾಟನೆಗೆ ಅವರಿಗೆ ಅವಕಾಶ ನೀಡದ ಸರ್ಕಾರದ ವಿರುದ್ಧ ಜನಮಾನಸದಲ್ಲಿ ಇರುವ ಕಿಚ್ಚನ್ನೂ ಪ್ರಸ್ತಾಪಿಸಿದರು. ಮೈಸೂರಿನ ಕಲಾಮಂದಿರಲ್ಲಿ ಹಮ್ಮಿ ಕೊಂಡಿದ್ದ ಡಾ.ಎಸ್.ಎಲ್.ಭೈರಪ್ಪ ಸಾಹಿತ್ಯೋತ್ಸವದಲ್ಲಿ ಭಾನುವಾರ ಮಾತ ನಾಡಿದ ಅವರು, ಭೈರಪ್ಪರ ಕೃತಿಗಳ ಬಗ್ಗೆ ಮಾತನಾಡಲು ನಾನು ಶಕ್ತನಲ್ಲ ಎನ್ನುತ್ತಲೇ ಅವರ ಬೃಹತ್…
ಎಸ್.ಎಲ್.ಭೈರಪ್ಪ ಅವರ ಕಾದಂಬರಿಗಳಿಗೆ ಅನ್ವೇಷಣಾ ಶಕ್ತಿ ಇದೆ
January 21, 2019ಮೈಸೂರು: ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರ ಕಾದಂಬರಿ ಗಳಿಗೆ ಅನ್ವೇಷಣಾ ಶಕ್ತಿಯಿದೆ ಎಂದು ರಾಜ ಸ್ಥಾನದ ನಾಟಕಕಾರ, ಕವಿ, ವಿಮರ್ಶಕ ಡಾ. ನಂದಕಿಶೋರ್ ಆಚಾರ್ಯ ಹೇಳಿದರು. ಮೈಸೂರಿನ ಕಲಾಮಂದಿರಲ್ಲಿ ಹಮ್ಮಿ ಕೊಂಡಿದ್ದ ಡಾ.ಎಸ್.ಎಲ್.ಭೈರಪ್ಪ ಸಾಹಿ ತ್ಯೋತ್ಸವದಲ್ಲಿ ಭಾನುವಾರ ಮಾತನಾಡಿದ ಅವರು, ಸಾಹಿತ್ಯ ಜ್ಞಾನಾರ್ಜನೆಯ ಪ್ರಕಾರ. ಲೇಖಕ ಕೂಡ ತಾನು ಸಂಪಾದನೆ ಮಾಡಿದ ಜ್ಞಾನವನ್ನು ಕೃತಿಯ ಮೂಲಕ ಸಮಾಜಕ್ಕೆ ಅನಾವರಣಗೊಳಿಸಬೇಕು. ಸಾಹಿತಿಗಳು ಅನುಭವ, ಸಂವೇದನೆಯನ್ನು ಸಾಹಿತ್ಯದಲ್ಲಿ ಕಟ್ಟಿಕೊಡಬೇಕು. ಇದರಲ್ಲಿ ಭೈರಪ್ಪ ಅವರು ಅಗ್ರಸ್ಥಾನದಲ್ಲಿದ್ದು, ಓದುಗರಿಗೆ ಹತ್ತಿರವಾಗಿ ದ್ದಾರೆ ಎಂದು…
ಐತಿಹಾಸಿಕ ದೇವಾಲಯಗಳ ಜೀರ್ಣೋದ್ಧಾರ ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿ : ಸಚಿವ ಸಾ.ರಾ.ಮಹೇಶ್
January 21, 2019ಮೈಸೂರು: ಐತಿಹಾಸಿಕ ದೇವಾಲಯಗಳ ಜೀರ್ಣೋದ್ಧಾರದ ಜೊತೆಗೆ ಸುತ್ತ ಮುತ್ತಲ ಪ್ರದೇಶವನ್ನು ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿ ಪಡಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದರು. ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಂವಹನ ಪ್ರಕಾಶನ ಸಹ ಯೋಗದಲ್ಲಿ ಜೆಎಲ್ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆ.ಆರ್. ನಗರ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಹೆಚ್.ಆರ್.ಚಂದ್ರ ಕಲಾ ಅಶೋಕ್ ಅವರ `ಕೃಷ್ಣರಾಜನಗರ ತಾಲೂಕಿನ ಗ್ರಾಮ ದೇವತೆಗಳು: ಸಾಂಸ್ಕøತಿಕ ಅಧ್ಯಯನ’ ಸಂಶೋದನಾ ಗ್ರಂಥವನ್ನು ಬಿಡುಗಡೆಗೊಳಿಸಿ ಅವರು…
ಕುರುಬ ಸಮುದಾಯವನ್ನು ಸಂಘಟಿಸಿದ ಕೀರ್ತಿ ಸಿದ್ದರಾಮಯ್ಯರದ್ದು
January 21, 2019ಮೈಸೂರು: ಸಂತ ಭಕ್ತ ಕನಕದಾಸ ಜಯಂತಿಯನ್ನು ನಗರ ದಿಂದ ಗ್ರಾಮೀಣ ಪ್ರದೇಶದವರೆಗೂ ಆಚ ರಿಸುವ ಮೂಲಕ ಕುರುಬ ಸಮುದಾಯ ವನ್ನು ಸಂಘಟಿಸಿದ ಕೀರ್ತಿ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ಮಾಜಿ ಸಚಿವ ಹೆಚ್.ಎಂ. ರೇವಣ್ಣ ಶ್ಲಾಘಿಸಿದ್ದಾರೆ. ಮೈಸೂರಿನ ಸಿದ್ಧಾರ್ಥನಗರದಲ್ಲಿರುವ ಕಾಗಿನೆಲೆ ಶಾಖಾ ಮಠದ ಆವರಣದಲ್ಲಿ ಭಾನುವಾರ `ಕನಕ ಶಕ್ತಿ’ ಮಹಿಳಾ ಕ್ಷೇಮಾ ಭಿವೃದ್ಧಿ ಸಂಘ ಆಯೋಜಿಸಿದ್ದ 531ನೇ ಭಕ್ತ ಕನಕದಾಸರ ಜಯಂತಿ ಮಹೋತ್ಸವ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು,…