ಮೈಸೂರು: ಸಿಗರೇಟ್ ಕೊಳ್ಳುವ ನೆಪದಲ್ಲಿ ಗ್ರಾಹಕರ ಸೋಗಿನಲ್ಲಿ ಬಂದ ಖತರ್ನಾಕ್ ಖದೀಮರು, ಅಂಗಡಿಯಲ್ಲಿದ್ದ ಮಹಿಳೆಯ ಕತ್ತಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಹಂಚ್ಯಾಸಾತಗಳ್ಳಿ ಬಿ.ವಲಯದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಇಲ್ಲಿನ ನಿವಾಸಿ ಭಾರತಿ(28) ಸರ ಕಳೆದುಕೊಂಡವರು. ಹಂಚ್ಯಾಸಾತಗಳ್ಳಿ ಬಿ.ವಲಯದ 9ನೇ ಕ್ರಾಸ್ನಲ್ಲಿ ಭಾರತಿ ಎಂಬುವರಿಗೆ ಸೇರಿದ ಚಿಲ್ಲರೆ ಅಂಗಡಿಯಿದ್ದು, ಶುಕ್ರವಾರ ಸಂಜೆ 4.45ರ ವೇಳೆಗೆ ಆಕ್ಟೀವಾ ಸ್ಕೂಟರ್ನಲ್ಲಿ ಬಂದ ಇಬ್ಬರು ಖದೀಮರು, ಸಿಗರೇಟ್ ಕೊಳ್ಳಲು ಅಂಗಡಿಗೆ ತೆರಳಿ ಸಿಗರೇಟ್ ತೆಗೆದುಕೊಂಡು 50 ರೂ….
ಪ್ರತ್ಯೇಕ ಕಳವು ಪ್ರಕರಣ: ಆರೋಪಿಗಳು ಪೊಲೀಸರ ವಶಕ್ಕೆ
January 4, 2019ಮೈಸೂರು: ಎರಡು ಪ್ರತ್ಯೇಕ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೈಸೂರಿನ ದೇವರಾಜ ಠಾಣೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಸಯ್ಯಾಜಿರಾವ್ ರಸ್ತೆಯಲ್ಲಿ ವ್ಯಕ್ತಿಯೊಬ್ಬರ ಪರ್ಸ್ ಕಳ್ಳತನ ಹಾಗೂ ಖಾಸಗಿ ಹೋಟೆಲ್ನಲ್ಲಿ ಗ್ರಾಹಕರೊಬ್ಬರ ಹಣ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿ ದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಸಯ್ಯಾಜಿರಾವ್ ರಸ್ತೆಯಲ್ಲಿ ಇಂದ್ರ ಕೆಫೆ ಹೋಟೆಲ್ ಬಳಿ ಗುರುವಾರ ಬೆಳಿಗ್ಗೆ ಅನುದೀಪ್ ಎಂಬುವರು ಕಾರು ನಿಲ್ಲಿಸಿ, ಕೆಳಗಿಳಿಯುವ ಸಂದರ್ಭದಲ್ಲಿ ಹೋಂಡಾ ಆಕ್ಟೀವಾ ಸ್ಕೂಟರ್ನಲ್ಲಿ ಬಂದ…
87 ತಹಶೀಲ್ದಾರ್ ವರ್ಗಾವಣೆ, 103 ಪರೀಕ್ಷಾರ್ಥ ತಹಶೀಲ್ದಾರ್ಗಳ ಸ್ಥಳ ನಿಯುಕ್ತಿ
January 4, 2019ಮೈಸೂರು: ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ತಹಶೀಲ್ದಾರ್ಗಳ ವರ್ಗಾವರ್ಗಿಯ ಜೊತೆಗೆ ಪರೀಕ್ಷಾರ್ಥ ತಹಶೀಲ್ದಾರ್ಗಳಿಗೆ ಸ್ಥಳ ನಿಯುಕ್ತಿಗೊಳಿಸಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಶಿಷ್ಟಾಚಾರ ತಹಶೀಲ್ದಾರ್ ಎಸ್.ಎನ್.ನರಗುಂದ ಹುಣಸೂರು ತಾಲೂಕಿಗೆ ವರ್ಗಾವಣೆ ಯಾಗಿದ್ದು, ಅವರ ಸ್ಥಳಕ್ಕೆ ಹುಣಸೂರು ತಹಶೀಲ್ದಾರ್ ಮೋಹನ್ ಕುಮಾರ್ ಅವರನ್ನು ನಿಯುಕ್ತಿಗೊಳಿಸಲಾಗಿದೆ. ಮೈಸೂರು ತಾಲೂಕಿನ ಹೆಚ್ಚುವರಿ ತಹಶೀಲ್ದಾರ್ ಹೆಚ್.ಆರ್.ಚಂದ್ರ ಕುಮಾರ್ ಮೈಸೂರು ನಗರಪಾಲಿಕೆ ತಹಶೀಲ್ದಾರ್ ಸ್ಥಾನಕ್ಕೆ, ತಿ.ನರಸೀಪುರ ತಹಶೀಲ್ದಾರ್ ಪರಮೇಶ್ ಜಿಲ್ಲಾಧಿಕಾರಿಗಳ ಕಚೇರಿ ಚುನಾವಣಾ ತಹಶೀಲ್ದಾರ್ ಸ್ಥಾನಕ್ಕೆ, ಪಿರಿಯಾಪಟ್ಟಣ ತಹಶೀಲ್ದಾರ್ ಜೆ.ಮಹೇಶ್…
ಜ.16ರವರೆಗೆ ಇಮ್ಮಡಿ ಮಹದೇವಸ್ವಾಮಿ ಸೇರಿ ನಾಲ್ವರು ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ
January 4, 2019ಕೊಳ್ಳೇಗಾಲ: ಸುಳವಾಡಿ ವಿಷ ಪ್ರಸಾದ ದುರಂತಕ್ಕೆ ಸಂಬಂಧಿ ಸಿದ ನಾಲ್ವರು ಆರೋಪಿಗಳ ನ್ಯಾಯಾಂಗ ಬಂಧನವನ್ನು ಜ.16ರವರೆಗೆ ವಿಸ್ತರಿಸಲಾಗಿದೆ. ಮೈಸೂರು ಕಾರಾಗೃಹದಲ್ಲಿದ್ದ ಆರೋಪಿಗಳಾದ ಸಾಲೂರು ಮಠದ ಕಿರಿಯ ಸ್ವಾಮೀಜಿಯಾಗಿದ್ದ ಇಮ್ಮಡಿ ಮಹದೇವಸ್ವಾಮಿ, ಆತನ ಪ್ರೇಯಸಿ ಅಂಬಿಕಾ, ಆಕೆಯ ಪತಿ ಮಾದೇಶ್ ಮತ್ತು ದೊಡ್ಡಯ್ಯ ಅವರನ್ನು ಗುರುವಾರ ಬೆಳಿಗ್ಗೆ 11.30 ಗಂಟೆ ವೇಳೆಗೆ ಜಿಲ್ಲಾ ಪೆÇಲೀಸರು ಬಿಗಿ ಪೊಲೀಸ್ ಬಂದೋ ಬಸ್ತ್ನೊಂದಿಗೆ ಕೊಳ್ಳೇಗಾಲದ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿ ಗಳ ವಿಚಾರಣೆ ನಡೆಸಿದ ಹಿರಿಯ ಶ್ರೇಣಿ ನ್ಯಾಯಾ ಧೀಶ…
ಕೇರಳ ಬಂದ್: ರಾಜ್ಯ ಸಾರಿಗೆ ಬಸ್ ಸಂಚಾರ ಸಂಜೆವರೆಗೆ ಸ್ಥಗಿತ
January 4, 2019ಮೈಸೂರು: ಶಬರಿ ಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಮಹಿಳೆಯರಿ ಬ್ಬರು ಪ್ರವೇಶಿಸಿದ್ದನ್ನು ಖಂಡಿಸಿ ಕೆಲ ಸಂಘಟನೆ ಗಳು ಕೇರಳ ಬಂದ್ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಗುರುವಾರ ಮೈಸೂರಿನಿಂದ ಕೇರಳಕ್ಕೆ ತೆರಳಬೇಕಾ ಗಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳ ಸಂಚಾರವನ್ನು ಸಂಜೆವರೆಗೂ ತಡೆಹಿಡಿಯಲಾಗಿತ್ತು. ಅಯ್ಯಪ್ಪಸ್ವಾಮಿ ದೇವಾಲಯ ಹಿತರಕ್ಷಣಾ ಸಮಿತಿ ಗುರುವಾರ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಕೇರಳ ಬಂದ್ಗೆ ಕರೆ ನೀಡಿತ್ತು. ಹಾಗಾಗಿ ಮೈಸೂರು ನಗರದಿಂದ ಕೇರಳದ ವಿವಿಧೆಡೆ ತೆರಳಬೇಕಾಗಿದ್ದ ಕರ್ನಾಟಕ ಹಾಗೂ ಕೇರಳ ರಾಜ್ಯ ರಸ್ತೆ ಸಾರಿಗೆ…
ಕೇರಳ ಬಂದ್ ವೇಳೆ ಹಿಂಸಾಚಾರ
January 4, 2019ತಿರುವನಂತಪುರಂ: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಇಬ್ಬರು ಮಹಿಳೆಯರು ಪ್ರವೇಶಿಸಿರುವುದನ್ನು ಖಂಡಿಸಿ ಶಬರಿಮಲೆ ಕರ್ಮ ಸಮಿತಿ ಮತ್ತು ಬಿಜೆಪಿ ಇಂದು ಕರೆ ನೀಡಿದ್ದ ಕೇರಳ ಬಂದ್ ವೇಳೆ ಹಿಂಸಾಚಾರ ನಡೆದಿದೆ. ಪ್ರತಿಭಟನೆ ವೇಳೆ ಕಲ್ಲು ತೂರಾಟದಲ್ಲಿ ಶಬರಿಮಲೆ ಕರ್ಮ ಸಮಿತಿಯ ಕಾರ್ಯಕರ್ತ ಸಾವನ್ನಪ್ಪಿದ್ದು, ಮೂವರು ಬಿಜೆಪಿ ಕಾರ್ಯ ಕರ್ತರು ಇರಿತಕ್ಕೊಳಗಾಗಿದ್ದಾರೆ. 7 ಪೊಲೀಸ್ ವಾಹನಗಳು ಹಾಗೂ 79 ಕೇರಳ ರಾಜ್ಯ ಸಾರಿಗೆ ಬಸ್ಗಳನ್ನು ಧ್ವಂಸಗೊಳಿಸಲಾಗಿದೆ. ತಿರುವನಂತಪುರಂನ ನೆಡುಮಂಗಡವಿನಲ್ಲಿ ದುಷ್ಕರ್ಮಿಗಳು ಬಾಂಬ್ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಯಾವುದೇ ಸಾವು-ನೋವು…
ಅಯ್ಯಪ್ಪಸ್ವಾಮಿ ದೇಗುಲ ಪ್ರವೇಶಕ್ಕೆ ವಿರಾಜಪೇಟೆ ಲಾಡ್ಜ್ ನಲ್ಲಿ ಸಿದ್ಧತೆ ನಡೆಸಿದ್ದ ಬಿಂದು, ಕನಕದುರ್ಗಾ!
January 4, 2019ಮಡಿಕೇರಿ: ಶ್ರೀ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾ ಲಯ ಪ್ರವೇಶಿಸಿ, 800 ವರ್ಷದ ಸಂಪ್ರದಾಯ ಮುರಿದ ಬಿಂದು ಮತ್ತು ಕನಕದುರ್ಗಾ ಈ ಸಾಹಸಕ್ಕೆ ಎರಡು ದಿನಗಳ ಮುಂಚೆ ವಿರಾಜಪೇಟೆಯಲ್ಲಿ ತಂಗಿದ್ದರು ಎಂಬ ಸ್ಫೋಟಕ ಮಾಹಿತಿ ‘ಮೈಸೂರು ಮಿತ್ರ’ನಿಗೆ ಲಭಿಸಿದೆ. ಈ ಇಬ್ಬರೂ ಕೇರಳ ಪೊಲೀಸರ ಜತೆ ವಿರಾಜಪೇಟೆಗೆ ಬಂದು, ಇಲ್ಲಿಯೇ ಶ್ರೀ ಅಯ್ಯಪ್ಪ ದೇವಾಲಯ ಪ್ರವೇಶಕ್ಕೆ ಕಾರ್ಯತಂತ್ರ ರೂಪಿಸಿದ್ದರೆಂದು ತಿಳಿದು ಬಂದಿದೆ. ಕೋಯಕ್ಕೊಡು ನಿವಾಸಿಯೂ ಆದ ಉಪನ್ಯಾಸಕಿ ಮಾತ್ರವಲ್ಲ ದಲಿತ ಹಕ್ಕು ಹೋರಾಟಗಾರ್ತಿ ಬಿಂದು, ತನ್ನೊಂದಿಗೆ ಮಲಪ್ಪುರಂ ನಿವಾಸಿ,…
ಹಗಲು ಬಿರುಬಿಸಿಲು, ರಾತ್ರಿ ಮೈಕೊರೆವ ಚಳಿ…
January 4, 2019ಮೈಸೂರು: ಹಗಲಿನಲ್ಲಿ ಬಿರು ಬಿಸಿಲು, ರಾತ್ರಿಯಲ್ಲಿ ಮೈಕೊರೆಯುವ ಚಳಿ. ಇದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿರುವ ಹವಾಮಾನ. ಉತ್ತರದಿಂದ ದಕ್ಷಿಣಕ್ಕೆ ವಿಪರೀತ ಶೀತಗಾಳಿ ಬೀಸು ತ್ತಿರುವ ಪರಿಣಾಮ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ದಾಖಲೆಯ ಚಳಿ ಉಂಟಾಗಿದೆ. ಹಾಗೆಯೇ ಮೈಸೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲೂ ಚಳಿ ಹೆಚ್ಚಾಗಿದೆ. ಅಲ್ಲದೆ ವಾತಾವರಣದಲ್ಲಿ ಮೋಡ ಗಳು ಇಲ್ಲದಿರುವ ಕಾರಣ ಚಳಿಯ ಪ್ರಮಾಣ ಮತ್ತಷ್ಟು ಜಾಸ್ತಿಯಾಗಿದೆ. ಚಳಿಯಿಂದ ನಡುಗಿರುವ ಜನ, ಸ್ವೆಟರ್, ಟೊಪ್ಪಿ ಇನ್ನಿತರ ರಕ್ಷಣಾ ಪರಿಕರಗಳ ಮೊರೆ ಹೋಗಿದ್ದಾರೆ. ಭಾರತೀಯ ಹವಾಮಾನ…
ಮೈಸೂರಲ್ಲಿ ಬಿಜೆಪಿ, ಹಿಂದೂಪರ ಸಂಘಟನೆಗಳ ಪ್ರತಿಭಟನೆ
January 4, 2019ಮೈಸೂರು: ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಮಹಿಳೆಯರಿಬ್ಬರು ಪ್ರವೇಶ ಮಾಡಿದ್ದನ್ನು ಖಂಡಿಸಿ ಗುರುವಾರ ಕೇರಳದಲ್ಲಿ ಆಕ್ರೋಶ ಭುಗಿಲೆದ್ದಿದ್ದರೆ, ರಾಜ್ಯದ ವಿವಿಧ ಭಾಗ ಗಳಲ್ಲೂ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಮೈಸೂರಿನಲ್ಲೂ ವಿವಿಧ ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯ ಕಹಳೆ ಮೊಳಗಿಸಿದರು. ಕರ್ನಾಟಕ ದಕ್ಷಿಣ ಪ್ರಾಂತದ ಶ್ರೀ ಶಬರಿ ಮಲೆ ಕ್ಷೇತ್ರ ಸಂರಕ್ಷಣಾ ಸಮಿತಿ ನೇತೃತ್ವ ದಲ್ಲಿ ಮೈಸೂರಿನ ಗಾಂಧಿ ಚೌಕದಲ್ಲಿ ಜಮಾಯಿಸಿದ ವಿಶ್ವ ಹಿಂದೂ ಪರಿಷತ್, ಬಿಜೆಪಿ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳ…
ಪ್ರತಿ ತಿಂಗಳ ಮೊದಲ, 3ನೇ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ
January 4, 2019ಮೈಸೂರು: ಮೈಸೂರು ನಾಗರಿಕರ ಆರೋಗ್ಯ ಕಾಪಾ ಡುವ ನಿಟ್ಟಿನಲ್ಲಿ `ಆರೋಗ್ಯ ಮೈಸೂರು’ ಕಾರ್ಯಕ್ರಮದಡಿ ಪ್ರತಿ ತಿಂಗಳ ಮೊದಲ ಮತ್ತು 3ನೇ ಭಾನುವಾರಗಳಂದು ಮೈಸೂರಿನಲ್ಲಿ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮೈಸೂರು ಕೃಷ್ಣರಾಜಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಮೈಸೂರಿನ ಅನೇಕರು ಮಕ್ಕಳಿಂದ ವೃದ್ಧ ರವರೆಗೆ ಅವರಿಗೇ ಅರಿವಿಲ್ಲದೆ ಕಾಡುತ್ತಿ ರುವ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್ ಹಾಗೂ ನಾನಾ ರೋಗಗಳಿಂದ ಮೈಸೂರಿಗರನ್ನು…