ಮೈಸೂರು: ಮನಸ್ಸಿನಲ್ಲಿ ಮೂಡಿದ ಭಾವನೆಗೆ ಕುಂಚದ ಮೂಲಕ ಚಿತ್ರರೂಪ ನೀಡುವುದು ಕಷ್ಟಕರ ವಾದರೂ ಆ ಕಷ್ಟದ ಕೆಲಸಕ್ಕೆ ಇಷ್ಟದ ಲೇಪನಕೊಡುವವರೇ ಚಿತ್ರ ಕಲಾವಿದರು. ಇತರ ಸನ್ನಿವೇಶ, ಸಂಗತಿಗಳು ಇವರ ಕೈಯ್ಯಲ್ಲಿ ಅದ್ಭುತ ಕಲಾಕೃತಿಯಾಗಿ ಮೂಡುತ್ತವೆ. ತಮ್ಮ ಕಲಾ ನೈಪುಣ್ಯತೆಯಿಂದ ಎಲ್ಲರ ಮನಗೆದ್ದ ಮೈಸೂರಿನ ಶ್ರೀಪರಮಹಂಸ ವಿದ್ಯಾನಿಕೇತನ ಶಾಲೆಯ ಶಿಕ್ಷಕ ನಾಗ ರಾಜ್ ಕೂಡ ಒಬ್ಬರು.ಇವರು ತಮ್ಮ ಕಲಾಪ್ರತಿಭೆಯಿಂದ ಜ.11 ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಗೆ ಆಯ್ಕೆಯಾ ಗಿದ್ದು, ತಮ್ಮ ಕಲೆಯನ್ನು ಅನಾವರಣ ಗೊಳಿಸಲು…
ಸ್ವಚ್ಛತೆ ಸಂದೇಶದೊಂದಿಗೆ ಪ್ರಮುಖ ಮಾಹಿತಿ ಒಳಗೊಂಡ ಕ್ಯಾಲೆಂಡರ್ ಬಿಡುಗಡೆ
January 4, 2019ಮೈಸೂರು: ಸ್ವಚ್ಛತೆಯ ಸಂದೇಶ ದೊಂದಿಗೆ ಹಲವು ಮಾಹಿತಿ ಹೊಂದಿರುವ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ನ ವಿಶಿಷ್ಟ ಕ್ಯಾಲೆಂಡರ್ ಅನ್ನು ಗುರು ವಾರ ಪೌರಕಾರ್ಮಿಕರಿಂದ ಬಿಡುಗಡೆ ಮಾಡಿಸಲಾಯಿತು. ಮೈಸೂರಿನ ಚಾಮುಂಡಿಪುರಂನ ತಗಡೂರು ರಾಮ ಚಂದ್ರರಾವ್ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಸಮಾ ರಂಭದಲ್ಲಿ 2019ರ ಸಾಲಿನ ವಿಶಿಷ್ಟ ಕ್ಯಾಲೆಂಡರ್ ಅನ್ನು ಪೌರಕಾರ್ಮಿಕರು ಬಿಡುಗಡೆಗೊಳಿಸಿದರು. ಹಸಿ ಮತ್ತು ಒಣ ಕಸಗಳ ವಿಧಗಳು ಹಾಗೂ ಅವುಗಳ ವಿಂಗಡಿಸುವುದ ರಿಂದ ಆಗುವ ಪ್ರಯೋಜನಗಳ ಬಗ್ಗೆ ವಿವರ ಹೊಂದಿ ರುವ ಕ್ಯಾಲೆಂಡರ್ ಇದಾಗಿದೆ. ಇದರೊಂದಿಗೆ ಮೈಸೂರು ಮಹಾನಗರ ಪಾಲಿಕೆಯ…
ಇಂದಿನಿಂದ ಸ್ವಚ್ಛ ಸರ್ವೇಕ್ಷಣೆ ಆರಂಭ
January 4, 2019ಮೈಸೂರಿಗೆ ಯಾವುದೇ ಸಂದರ್ಭ ಬರಬಹುದು ತಂಡ ಮೈಸೂರು: ನಗರಗಳ ಸ್ವಚ್ಛತೆ ನಿರ್ವಹಣೆಯನ್ನು ಓರೆಹಚ್ಚಿ, ಪ್ರೋತ್ಸಾಹಿಸುವ ಸ್ವಚ್ಛ ಸರ್ವೇಕ್ಷಣೆ ನಾಳೆ (ಜ.4) ಆರಂಭವಾಗಲಿದ್ದು, ಮೈಸೂರು ಮತ್ತೆ ಪ್ರಥಮ ಸ್ಥಾನಕ್ಕೇರಲು ಸಜ್ಜಾಗಬೇಕಿದೆ. ಈ ಬಾರಿ ರಾಷ್ಟ್ರದ 4237 ನಗರಗಳಲ್ಲಿ ಸ್ವಚ್ಛ ಸರ್ವೇಕ್ಷಣೆ ನಡೆಯ ಲಿದ್ದು, ಸುಮಾರು 40 ಕೋಟಿಗೂ ಹೆಚ್ಚು ಸಾರ್ವಜನಿಕರ ಸ್ವಚ್ಛ ಜ್ಞಾನದ ಪರೀಕ್ಷೆಯೂ ಆಗಲಿದೆ. ಈ ನಿಟ್ಟಿನಲ್ಲಿ ಕೇಂದ್ರದ ಸ್ವಚ್ಛ ಸರ್ವೇಕ್ಷಣಾ ತಂಡ ಮೈಸೂರಿಗೆ ಆಗಮಿಸುವುದು ಯಾವಾಗ? ಎಂಬುದು ತಿಳಿದಿಲ್ಲ. ಆದರೆ ಇಂದೇ ಬಂದರೂ ಅವರಿಗೆ ಸ್ವಚ್ಛ…
ವಿಶೇಷಚೇತನ ಮಕ್ಕಳಿಗೆ ಅಗತ್ಯ ಸಲಕರಣೆ ವಿತರಿಸಿದ ಶಾಸಕ ರಾಮದಾಸ್
January 4, 2019ಮೈಸೂರು: ಸರ್ವ ಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ವತಿ ಯಿಂದ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು, ವಿಶೇಷಚೇತನ ಮಕ್ಕಳಿಗೆ ಅಗತ್ಯ ಸಾಧನಗಳನ್ನು ವಿತರಿಸಿದರು. ಮೈಸೂರಿನ ಕುವೆಂಪುನಗರದಲ್ಲಿರುವ ಕಾವೇರಿ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಗುರುವಾರ ಎಸ್ಎಸ್ಎಲ್ಸಿ ಫಲಿತಾಂಶ ದಲ್ಲಿ ಸಾಧನೆ ಕುರಿತು ಸರ್ಕಾರಿ, ಅನು ದಾನಿತ ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳ ಮುಖ್ಯೋಪಾದ್ಯಾಯ ರೊಂದಿಗೆ ಸಂವಾದ ನಡೆಸಿದ ನಂತರ ರಾವiದಾಸ್, ಮೆದುಳಿನ ನಿಶದ್ವತೆ, ಬಹು ವಿಕಲತೆ, ಶ್ರವಣದೋಷ, ಅಲ್ಪ ದೃಷ್ಟಿ ದೋಷ,…
ಆರ್ಟಿಸಿ, ಪ್ರಮಾಣ ಪತ್ರಗಳ ಶುಲ್ಕ ದಿಢೀರ್ ಏರಿಕೆ
January 4, 2019ಮೈಸೂರು: ರೈತರು ಹಾಗೂ ಮಧ್ಯಮ ವರ್ಗದ ಜನರ ಮೇಲೆ ರಾಜ್ಯ ಸರ್ಕಾರ ಹೊಸ ವರ್ಷದ ಉಡುಗೊರೆಯಾಗಿ `ಹೊರೆ’ ಯೊಂದನ್ನು ಸದ್ದಿಲ್ಲದೆ ಹೇರಿದೆ. ಆರ್ಟಿಸಿ ಸೇರಿದಂತೆ ವಿವಿಧ ಪ್ರಮಾಣ ಪತ್ರಗಳ ಶುಲ್ಕ ವನ್ನು ದಿಢೀರ್ ಹೆಚ್ಚಳ ಮಾಡುವ ಮೂಲಕ ರೈತರ ಕೆಂಗಣ್ಣಿಗೆ ಗುರಿಯಾಗಿದೆ. ರೈತರಿಗೆ ನಾಡ ಕಚೇರಿ ಹಾಗೂ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ನೀಡುತ್ತಿದ್ದ 35 ಸೇವೆಗಳ ಶುಲ್ಕವನ್ನು ಜ.1ರಿಂದ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಇದು ಬಡ, ಮಧ್ಯಮ ಹಾಗೂ ರೈತಾಪಿ ವರ್ಗದ ಅಸಮಾಧಾನಕ್ಕೆ…
ಎಐಸಿಸಿ ವಕ್ತಾರರಾಗಿ ಐಶ್ವರ್ಯಾ ಮಹದೇವ್ ನೇಮಕ ಇವರು ಮಾಜಿ ಶಾಸಕ ದಿ.ಮಂಚನಹಳ್ಳಿ ಮಹದೇವ್ ಪುತ್ರಿ
January 4, 2019ಮೈಸೂರು: ಕೆ.ಆರ್.ನಗರ ಮಾಜಿ ಶಾಸಕ ದಿವಂಗತ ಮಂಚನಹಳ್ಳಿ ಮಹದೇವ್ ಅವರ ಪುತ್ರಿ ಐಶ್ವರ್ಯಾ ಮಹದೇವ್ ಅವರು ಎಐಸಿಸಿ ವಕ್ತಾರರಾಗಿ ನೇಮಕಗೊಂಡಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸೂಚನೆಯಂತೆ ಈ ನೇಮಕ ಮಾಡಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಐಶ್ವರ್ಯಾ ಮಹದೇವ್ ಅವರಿಗೆ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಕೈತಪ್ಪಿತ್ತು. ಹೀಗಾಗಿ ಅವರಿಗೆ ಪಕ್ಷದಲ್ಲಿ ಉನ್ನತ ಸ್ಥಾನ ಕಲ್ಪಿಸುವ ಭÀರವಸೆ ಯನ್ನು ಅಂದು ಸಿದ್ದರಾಮಯ್ಯ ನೀಡಿದ್ದರು. ಅದರಂತೆ ಈಗ ಐಶ್ವರ್ಯಾ ಮಹದೇವ್ ಎಐಸಿಸಿ ವಕ್ತಾರರಾಗಿ ನೇಮಕಗೊಂಡಿ ದ್ದಾರೆ. ಇತ್ತೀಚೆಗಷ್ಟೆ…
ನೇಣು ಬಿಗಿದುಕೊಂಡು ಅರುಣಾಚಲ ಪ್ರದೇಶ ವಿದ್ಯಾರ್ಥಿನಿ ಆತ್ಮಹತ್ಯೆ
January 4, 2019ಮೈಸೂರು: ಮೈಸೂರಿ ನಲ್ಲಿ ವ್ಯಾಸಂಗ ಮಾಡುತ್ತಿದ್ದ ಅರುಣಾಚಲ ಪ್ರದೇಶದ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಮೈಸೂರಿನ ಬನ್ನಿಮಂಟಪದ ಶ್ರೀಶಿವ ರಾತ್ರೀಶ್ವರ ನಗರದಲ್ಲಿ ರೂಮ್ವೊಂದನ್ನು ಬಾಡಿಗೆಗೆ ಪಡೆದು ವಾಸಿಸುತ್ತಿದ್ದ ಅರುಣಾ ಚಲ ಪ್ರದೇಶ ನಿವಾಸಿ ಲೂಮಾ ಡ್ರೀಮಾ (22) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಯಾಗಿದ್ದಾರೆ. ಬನ್ನಿಮಂಟಪದ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದ ಲೂಮಾ, ಸ್ನೇಹಿತ ರೊಂದಿಗೆ ನೆಲೆಸಿದ್ದರು. ಬುಧವಾರ ರಾತ್ರಿ ಮನೆಯಲ್ಲಿ ಒಬ್ಬರೇ ಇದ್ದಾಗ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ….
ಮೈಸೂರನ್ನು ಕ್ಷಯ ಮುಕ್ತ ಜಿಲ್ಲೆಯನ್ನಾಗಿಸಲು ಕರೆ
January 4, 2019ಮೈಸೂರು: 2ನೇ ಸುತ್ತಿನ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನವನ್ನು ಜನವರಿ 12ರವರೆಗೆ ಮೈಸೂರು ಜಿಲ್ಲಾ ದ್ಯಂತ ಹಮ್ಮಿಕೊಂಡಿದ್ದು, ಮೈಸೂರನ್ನು ಕ್ಷಯ ಮುಕ್ತ ಜಿಲ್ಲೆಯನ್ನಾಗಿಸಲು ಪಣ ತೊಟ್ಟಿದ್ದೇವೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ರವಿ ತಿಳಿಸಿದ್ದಾರೆ. ಮೈಸೂರು ಜಿಲ್ಲಾದ್ಯಂತ ಜ.2ರಿಂದ ಆರಂಭವಾಗಿದೆ. “ಕ್ಷಯರೋಗವನ್ನು ಶತ್ರು ವನ್ನಾಗಿಸಿ, ರೋಗಿಯನ್ನು ಮಿತ್ರರಂತೆ ಕಾಣಿರಿ” ಎಂಬ ಘೋಷಣೆಯೊಂದಿಗೆ ಕ್ರಿಯಾ ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನ ಹಮ್ಮಿ ಕೊಳ್ಳಲಾಗಿದೆ ಎಂದು ತಿಳಿಸಿದರು. ಕ್ಷಯ ರೋಗಿಗಳ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಮನೆ ಮನೆಗೆ…
ಖಾಸಗಿ ಬಸ್ ಡಿಕ್ಕಿ: ಪಾದಚಾರಿ ಸಾವು
January 4, 2019ಮೈಸೂರು: ಖಾಸಗಿ ಬಸ್ ಡಿಕ್ಕಿಯಾಗಿ ಪಾದಚಾರಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೈಸೂರು-ಟಿ. ನರಸೀಪುರ ರಸ್ತೆಯ ದುದ್ದಗೆರೆ ಕ್ರಾಸ್ನಲ್ಲಿ ಗುರುವಾರ ಸಂಜೆ ನಡೆದಿದೆ. ಮೈಸೂರು ತಾಲೂಕು ವರುಣಾ ಹೋಬಳಿ ಪುಟ್ಟೇಗೌಡನಹುಂಡಿ ನಿವಾಸಿ ಶಿವರಾಜಪ್ಪ ಎಂಬುವರ ಪುತ್ರ ಮಹದೇವಪ್ಪ(55) ಮೃತಪಟ್ಟವರಾಗಿದ್ದಾರೆ. ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಮೈಸೂರಿನಿಂದ ಟಿ.ನರಸೀಪುರ ಕಡೆಗೆ ವೇಗವಾಗಿ ತೆರಳುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಇದರಿಂದ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿರುವು ದಾಗಿ ಪೆÇಲೀಸರು ತಿಳಿಸಿದ್ದಾರೆ. ಈ ಸಂಬಂಧ ವರುಣಾ ಠಾಣೆ ಪೊಲೀಸರು…
ಮೈಸೂರು ರಾಜೀವ್ನಗರದಲ್ಲಿ ಅತಿಕ್ರಮಣವಾಗಿದ್ದ 17 ಕೋಟಿ ಮೌಲ್ಯದ ಸರ್ಕಾರಿ ಭೂಮಿ ತೆರವು
January 3, 2019ಮೈಸೂರು: ಸರ್ಕಾರಿ ಆಸ್ತಿ ಕಬಳಿಸಿರುವವರ ವಿರುದ್ಧ ಸಮರ ಸಾರಿರುವ ಮೈಸೂರು ಜಿಲ್ಲಾಡಳಿತ, ಬುಧವಾರ ಬೆಳಿಗ್ಗೆ ಮೈಸೂರಿನ ರಾಜೀವ್ನಗರದಲ್ಲಿನ ಕ್ಯಾತಮಾರನಹಳ್ಳಿ ಸರ್ವೆ ನಂ 84ರ 17 ಕೋಟಿ ರೂ. ಮೌಲ್ಯದ 1.30 ಎಕರೆ ಸರ್ಕಾರಿ ಭೂಮಿಯನ್ನು ವಶಕ್ಕೆ ತೆಗೆದುಕೊಂಡಿದೆ. ಈ ಭೂಮಿಯನ್ನು ನಾಲ್ಕೈದು ಮಂದಿ ಕಬಳಿಸಲು, ಕಾಂಪೌಂಡ್ ಹಾಗೂ ಮಳಿಗೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದರು. ಕಳೆದ ನಾಲ್ಕು ದಿನದ ಹಿಂದೆ ಕಂದಾಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರಲ್ಲದೆ, ಮಳಿಗೆ ಹಾಗೂ ಕಾಂಪೌಂಡ್ ಕಾಮಗಾರಿ ಮುಂದುವರಿಸದಂತೆ ಎಚ್ಚರಿಸಿದ್ದರು. ಆದರೂ ಅಧಿಕಾರಿಗಳ…