ಮೈಸೂರು: ವೈದ್ಯರ ವರ್ಗಾವಣೆ ಖಂಡಿಸಿ ಸೌತ್ ವೆಸ್ಟರ್ನ್ ರೈಲ್ವೆ ಮಜ್ದೂರ್ ಯೂನಿಯನ್ ವತಿ ಯಿಂದ ಯಾದವಗಿರಿ ರೈಲ್ವೆ ಆಸ್ಪತ್ರೆ ಬಳಿ ಪ್ರತಿ ಭಟನೆ ನಡೆಸಿದರು. ಗುರುವಾರ ಮಧ್ಯಾಹ್ನ ಆಸ್ಪತ್ರೆ ಬಳಿ ಜಮಾವಣೆಗೊಂಡ ನೂರಾರು ಮಂದಿ ನೌಕರರು, ಕಾರ್ಮಿಕರು, ಡಾ.ಶಿವ ಕುಮಾರ್ ಮತ್ತು ಡಾ.ಶೋಭಾ ಜಗ ನ್ನಾಥ್ ಅವರ ವರ್ಗಾವಣೆ ಖಂಡಿಸಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ಸೌತ್ ವೆಸ್ಟರ್ನ್ ರೈಲ್ವೆ ಮಜ್ದೂರ್ ಯೂನಿ ಯನ್ನ ವಲಯ ಕಾರ್ಯಾಧ್ಯಕ್ಷ ಅರ್ತೂರ್ ಫರ್ನಾಡಿಸ್ ಮಾತನಾಡಿ, ವೈದ್ಯರಾದ ಡಾ. ಶಿವಕುಮಾರ್ ಮತ್ತು ಡಾ.ಶೋಭಾ…
ಹಿಟ್ ಅಂಡ್ ರನ್ ಕೇಸ್ಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಆಟೋ ಚಾಲಕ
May 3, 2019ಮೈಸೂರು: ಹಿಟ್ ಅಂಡ್ ರನ್ ಪ್ರಕ ರಣಕ್ಕೆ ಸಂಬಂಧಿಸಿದಂತೆ ಸೆಲ್ಫೀ ವಿಡಿಯೋ ಮೂಲಕ ಕ್ಷಮೆ ಯಾಚಿಸಿದ ನಂತರ ಆಟೋ ಚಾಲಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಕನಕಗಿರಿ ಯಲ್ಲಿ ಮಂಗಳವಾರ ನಡೆದಿದೆ. ಶಿವಕುಮಾರ್(25) ನೇಣಿಗೆ ಶರಣಾದವರು. ಭಾನುವಾರ ಮಧ್ಯಾಹ್ನ ಊಟಿ ರಸ್ತೆಯ ಜೆಎಸ್ಎಸ್ ಕಾಲೇಜು ಸರ್ಕಲ್ ಬಳಿ ಎಲೆತೋಟದ ರಸ್ತೆಯಲ್ಲಿ ಪಾದ ಚಾರಿಯೊಬ್ಬರಿಗೆ ಡಿಕ್ಕಿ ಹೊಡೆದ ಶಿವಕುಮಾರ್ ಆಟೋ ನಿಲ್ಲಿ ಸದೇ ಪರಾರಿಯಾಗಿದ್ದ. ಗಾಯಗೊಂಡಿದ್ದ ಪಾದಚಾರಿ ಕಡೆ ಯವರು ನೀಡಿದ ದೂರಿನನ್ವಯ ಕೆ.ಆರ್.ಸಂಚಾರ ಠಾಣೆ…
ಪೆಟ್ರೋಲ್ ಬಂಕ್ನಲ್ಲಿ ಡೀಸೆಲ್ ತುಂಬಿಸುವಾಗ ಹೃದಯಾಘಾತದಿಂದ ಕಾರು ಚಾಲಕ ಸಾವು
May 3, 2019ಮೈಸೂರು: ಕಾರಿಗೆ ಡೀಸೆಲ್ ತುಂಬಿಸುತ್ತಿ ದ್ದಾಗ ತೀವ್ರ ಹೃದಯಾಘಾತವಾಗಿ ಚಾಲಕ ಮೃತಪಟ್ಟಿರುವ ಘಟನೆ ಮೈಸೂರಿನ ಬೋಗಾದಿಯಲ್ಲಿ ಬುಧವಾರ ಸಂಭ ವಿಸಿದೆ. ಬೆಂಗಳೂರಿನ ಜೆ.ಸಿ.ನಗರ ನಿವಾಸಿ ಎಂ.ವಿ.ಕೃಷ್ಣ ಕುಮಾರ್ (54) ಸಾವನ್ನಪ್ಪಿದವರು. ಕಾರು ಚಾಲಕರಾದ ಅವರು ಮೈಸೂರಿಗೆ ಬಂದು ಬೋಗಾದಿಯ ರಿಂಗ್ ರೋಡ್ ಜಂಕ್ಷನ್ನಲ್ಲಿರುವ ಪೆಟ್ರೋಲ್ ಬಂಕ್ನಲ್ಲಿ ಕಾರಿಗೆ ಡೀಸೆಲ್ ತುಂಬಿಸುತ್ತಿದ್ದಾಗ ಎದೆ ನೋವು ಕಾಣಿಸಿಕೊಂಡು, ಕುಸಿದರು. ತಕ್ಷಣ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆ ದೊಯ್ಯಲಾಯಿತಾದರೂ, ಮಾರ್ಗ ಮಧ್ಯೆ ಅಸುನೀಗಿದ್ದಾರೆ ಎಂದು ಪರೀಕ್ಷಿಸಿದ ವೈದ್ಯರು ದೃಢಪಡಿಸಿದರು ಎಂದು…
ಹೆಬ್ಬಾಳು ಮನೆಯಲ್ಲಿ 65 ಲಕ್ಷ ರೂ. ಮೌಲ್ಯದ ನಗ-ನಾಣ್ಯ ಕಳವು
May 3, 2019ಮೈಸೂರು:-ಮನೆ ಬೀಗ ಮುರಿದು 65 ಲಕ್ಷ ರೂ. ಮೌಲ್ಯದ ನಗದು ಹಾಗೂ ಚಿನ್ನ-ಬೆಳ್ಳಿ ಆಭರಣ ಕಳವು ಮಾಡಿರುವ ಘಟನೆ ಮೈಸೂರಿನ ಹೆಬ್ಬಾಳಿನಲ್ಲಿ ಏ.27ರಂದು ನಡೆದಿದೆ. ಹೆಬ್ಬಾಳು 1ನೇ ಹಂತದ ಮನೋಹರ್ ಸಿಂಗ್ ಎಂಬು ವರ ಮನೆಯಲ್ಲಿ 464 ಗ್ರಾಂ ಚಿನ್ನದ ಆಭರಣ, 58 ಕೆ.ಜಿ. ಬೆಳ್ಳಿ ಪದಾರ್ಥಗಳು ಹಾಗೂ 1.4 ಲಕ್ಷ ರೂ. ನಗದನ್ನು ಕಳ್ಳರು ದೋಚಿದ್ದಾರೆ. ಪತ್ನಿ ಹಾಗೂ ಮಕ್ಕಳನ್ನು ಕುವೆಂಪುನಗರ ದಲ್ಲಿರುವ ಅತ್ತೆ ಮನೆಗೆ ಬಿಟ್ಟು ಮನೋಹರ್ ಸಿಂಗ್ ಅವರು ಏ.26ರಂದು ರಾಜಸ್ಥಾನ್ಗೆ ವ್ಯಾಪಾರದ…
ಅಪಘಾತದಲ್ಲಿ ಗಾಯಗೊಂಡಿದ್ದ ವೃದ್ಧ ಸಾವು
May 3, 2019ಮೈಸೂರು: ಬೈಕ್ ಡಿಕ್ಕಿ ಹೊಡೆದ ಪರಿಣಾಮ ಗಾಯ ಗೊಂಡಿದ್ದ ವೃದ್ಧ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ಬುಧವಾರ ಸಂಭವಿಸಿದೆ. ಮೈಸೂರಿನ ಮಂಚೇಗೌಡನಕೊಪ್ಪಲು ನಿವಾಸಿ ರಾಮೇಗೌಡ (86) ಸಾವನ್ನಪ್ಪಿ ದವರು. ಮಾ.20ರಂದು ಮಧ್ಯಾಹ್ನ 12.30ಗಂಟೆ ವೇಳೆಗೆ ಜಮೀನಿಗೆ ನಡೆದು ಕೊಂಡು ಹೋಗುತ್ತಿದ್ದಾಗ ಹೆಬ್ಬಾಳಿನ ಶೇಷಾದ್ರಿಪುರಂ ಕಾಲೇಜು ಬಳಿ ರಿಂಗ್ ರಸ್ತೆಯಲ್ಲಿ ದ್ವಿಚಕ್ರವಾಹನವೊಂದು ಡಿಕ್ಕಿ ಹೊಡೆದಿತ್ತು. ಕಾಲಿಗೆ ತೀವ್ರ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದ ರಾಮೇಗೌಡರನ್ನು ಕೆ.ಆರ್.ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾಲಿಗೆ…
ಸರಕು ವಾಹನಗಳಲ್ಲಿ ಜನ ಸಾಗಿಸಿದರೆ ಕ್ರಮ
May 1, 2019ಬೆಂಗಳೂರು: ಸರಕು ಸಾಗಾಣೆ ವಾಹನ ಗಳಲ್ಲಿ ವಿದ್ಯಾರ್ಥಿಗಳು ಹಾಗೂ ಜನರನ್ನು ಕರೆದೊಯ್ಯುವ ವಾಹನಗಳ ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಆದೇಶಿಸಿದೆ. ಇತ್ತೀಚೆಗೆ ಸರಕು ಸಾಗಾಣಿಕೆ ವಾಹನದಲ್ಲಿ ಜನರನ್ನು ಸಾಗಿಸುವ ಸಂದರ್ಭದಲ್ಲಿ ಅಪಘಾತಗಳು ಹೆಚ್ಚಾಗಿ ಸಾವು ನೋವಿಗೆ ಕಾರಣವಾಗಿದೆ. ಹತ್ತು ಹಲವು ಕಾನೂನುಗಳಿದ್ದರೂ, ಇದನ್ನು ಬದಿ ಗೊತ್ತಿ, ಮಾಲೀಕರು ಇಲ್ಲವೆ ಗುತ್ತಿಗೆದಾ ರರು ಸರಕು ಸಾಗಾಣಿಕೆಯಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದಾರೆ. ತಕ್ಷಣವೇ ಇದಕ್ಕೆ ಕಡಿವಾಣ ಹಾಕ ಬೇಕೆಂದು ರಾಜ್ಯದ ಮುಖ್ಯ ಕಾರ್ಯ ದರ್ಶಿಗಳು ಸಾರಿಗೆ ಮತ್ತು ಪೊಲೀಸ್…
ಮೈತ್ರಿ ಸರ್ಕಾರಕ್ಕೆ ಕಂಟಕಪ್ರಾಯವಾಗಿದ್ದ ಕಾಂಗ್ರೆಸ್ ಸಮಾನ ಮನಸ್ಕರ ಸಭೆ ರದ್ದು
April 30, 2019ಬೆಂಗಳೂರು: ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಬಹಿರಂಗವಾಗಿ ಬಂಡಾಯದ ಬಾವುಟ ಹಾರಿಸಲು ಮುಂದಾಗಿದ್ದ ಮಹತ್ವದ ಕಾಂಗ್ರೆಸ್ ಸಮಾನ ಮನಸ್ಕರ ಸಭೆ ಹಠಾತ್ ರದ್ದಾಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊಣೆ ಹೊತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸಭೆ ಕರೆದವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುತ್ತಿದ್ದಂತೆ ಆಯೋಜಕರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಬಿಡಿಎ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್ನ ಹಿರಿಯ ಶಾಸಕ ಎಸ್.ಟಿ. ಸೋಮಶೇಖರ್ ನಾಳೆ ಪಂಚತಾರಾ ಹೋಟೆಲ್ನಲ್ಲಿ ಸಮಾನ ಮನಸ್ಕರ ಸಭೆ ಕರೆದಿದ್ದರು. ಇದು…
ಮೈಸೂರಲ್ಲಿ ಸುಗಮವಾಗಿ ನಡೆದ ಸಿಇಟಿ
April 30, 2019ಮೈಸೂರು: ಇಂಜಿನಿಯರಿಂಗ್ ಸೇರಿದಂತೆ ಇನ್ನಿತರ ವೃತ್ತಿಪರ ಕೋರ್ಸ್ಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮೈಸೂರಿನ 21 ಕೇಂದ್ರಗಳಲ್ಲಿ ಸೋಮವಾರ ಸುಗಮವಾಗಿ ನಡೆಯಿತು. ಮೈಸೂರಿನ 21 ಕೇಂದ್ರಗಳಲ್ಲಿ ಒಟ್ಟು 10,463 ಮಂದಿ ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದಾರೆ. ಇಂದು ಬೆಳಿಗ್ಗೆ 10.30ರಿಂದ 11.50ರವರೆಗೆ ಜೀವಶಾಸ್ತ್ರ ಹಾಗೂ ಮಧ್ಯಾಹ್ನ 2.30ರಿಂದ 3.50ರವರೆಗೆ ಗಣಿತ ವಿಷಯಗಳಿಗೆ ಪರೀಕ್ಷೆ ಸುಸೂತ್ರವಾಗಿ ನಡೆದಿದೆ. ಇಂದು ನಡೆದ ಪರೀಕ್ಷೆಯಲ್ಲಿ ಶೇ.10ರಿಂದ 20ರಷ್ಟು ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು ಎಂದು ಹೇಳಲಾಗಿದೆ. ನಾಳೆ (ಏ.30) ಬೆಳಿಗ್ಗೆ 10.30ರಿಂದ 11.50ರವರೆಗೆ ಭೌತಶಾಸ್ತ್ರ…
ಲೋಕಸಭಾ ಚುನಾವಣೆ: 4ನೇ ಹಂತದಲ್ಲಿ ಶೇ.64 ಮತದಾನ
April 30, 2019ನವದೆಹಲಿ: ಲೋಕಸಭಾ ಚುನಾವಣೆಯ 4ನೇ ಹಂತದ ಮತದಾನ ಸಣ್ಣಪುಟ್ಟ ಗಲಾಟೆ ಹೊರತುಪಡಿಸಿದರೆ ಬಹುತೇಕ ಶಾಂತಿ ಯುತವಾಗಿ ನಡೆದಿದೆ. ದೇಶದ 9 ರಾಜ್ಯಗಳ 72 ಲೋಕಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟಾರೆ ಶೇಕಡ 64ರಷ್ಟು ಮತದಾನ ದಾಖಲಾಗಿದೆ. ಕೇಂದ್ರ ಸಚಿವರಾದ ಗಿರಿರಾಜ್ ಸಿಂಗ್, ಸುಭಾಷ್ ಭಾಮ್ರೆ, ಎಸ್ಎಸ್ ಅಹ್ಲುವಾಲಿಯಾ ಮತ್ತು ಬಿಜೆಪಿಯ ಬಾಬುಲ್ ಸುಪ್ರಿಯೊ ಹಾಗೂ ಕೇಂದ್ರ ಮಾಜಿ ಸಚಿವರಾದ ಕಾಂಗ್ರೆಸ್ನ ಸಲ್ಮಾನ್ ಖುರ್ಷಿದ್, ಅಧೀರ್ ರಂಜನ್ ಚೌಧರಿ, ಕನ್ನಯ್ಯ ತರಹದ ಘಟಾನುಘಟಿಗಳು ಕಣದಲ್ಲಿದ್ದಾರೆ. ಅಲ್ಲದೇ ಮುಂದಿನ ತಿಂಗಳು…
ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ `ಪದ್ಮಶ್ರೀ’ ಪ್ರಶಸ್ತಿ ಪ್ರದಾನ
April 30, 2019ಮೈಸೂರು: ಖ್ಯಾತ ಸರೋದ್ವಾದಕ ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ಸಂದಿರುವ 2019ನೇ ಸಾಲಿನ `ಪದ್ಮಶ್ರೀ’ ಪ್ರಶಸ್ತಿಯನ್ನು ಸೋಮವಾರ ಪ್ರದಾನ ಮಾಡಲಾಯಿತು. ನವದೆಹಲಿಯಲ್ಲಿ 2019ರ ಮಾ.16 ರಂದು ನಡೆದ ಸಮಾರಂಭದಲ್ಲಿ ರಾಷ್ಟ್ರ ಪತಿ ಅವರು ಎಲ್ಲಾ ಗಣ್ಯರಿಗೆ ಪದ್ಮಶ್ರೀ ಪ್ರಶಸ್ತಿ ಗಳನ್ನು ಪ್ರದಾನ ಮಾಡಿದ್ದರು. ಅಂದು ಶ್ರೀ ರಾಜೀವ್ ತಾರಾನಾಥ್ ಅವರು ಕಾರ ಣಾಂತರಗಳಿಂದ ಆ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಈ ಪ್ರಶಸ್ತಿಯನ್ನು ಸೋಮವಾರ ಶ್ರೀ ರಾಜೀವ್ ತಾರಾ ನಾಥ್ ಅವರ ಕುವೆಂಪುನಗರದ ಸ್ವಗೃಹ ದಲ್ಲೇ…