ಇಂದಿರಾ ಕ್ಯಾಂಟಿನ್ ಕಾಮಗಾರಿ ವಿಳಂಬ ವಿರೋಧಿಸಿ ತಮಟೆ ಚಳವಳಿ
ಕೊಡಗು

ಇಂದಿರಾ ಕ್ಯಾಂಟಿನ್ ಕಾಮಗಾರಿ ವಿಳಂಬ ವಿರೋಧಿಸಿ ತಮಟೆ ಚಳವಳಿ

February 12, 2019

ಸೋಮವಾರಪೇಟೆ: ಪಟ್ಟಣ ದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಾಣ ಕಾಮಗಾರಿ ವಿಳಂಬ ವಿರೋಧಿಸಿ, ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಅಭಿಮಾನಿ ಗಳ ಸಂಘದ ವತಿಯಿಂದ ಮಂಗಳವಾರ ಪಟ್ಟಣ ಪಂಚಾಯಿತಿ ಕಚೇರಿ ಎದುರು ತಮಟೆ ಚಳುವಳಿ ನಡೆಯಿತು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಇಂದಿರಾ ಕ್ಯಾಂಟಿನ್ ಕಟ್ಟಡ ಕಾಮಗಾರಿಗೆ ಹಣ ಬಿಡುಗಡೆಗೊಳಿಸಿ ದ್ದಾರೆ. ರಾಜ್ಯದ ಪ್ರತಿ ತಾಲೂಕಿನಲ್ಲೂ ಇಂದಿರಾ ಕ್ಯಾಂಟಿನ್ ಕಾರ್ಯನಿರ್ವಹಿಸುತ್ತಿದೆ. ಈಗಾ ಗಲೇ ಆರು ತಿಂಗಳುಗಳು ಕಳೆದರೂ, ಕಾಮ ಗಾರಿ ಪೂರ್ಣಗೊಳಿಸಿಲ್ಲ ಎಂದು ಸಂಘದ ಅಧ್ಯಕ್ಷ ಹೆಚ್.ಎ.ನಾಗರಾಜು ತಿಳಿಸಿದ್ದಾರೆ. ಪಟ್ಟಣ ಪಂಚಾಯಿತಿ ಆಡಳಿತ ವ್ಯವ ಸ್ಥೆಯ ವಿರುದ್ಧ ಸಂಘದ ಪದಾಧಿಕಾರಿ ಗಳು ಘೋಷಣೆ ಕೂಗಿದರು. ನಂತರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಟರಾಜ್ ರವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಸಂಘದ ಪದಾ ಧಿಕಾರಿಗಳಾದ ಪಳನಿಸ್ವಾಮಿ, ಪ್ರಕಾಶ, ಪಿ.ಕೆ ಆನಂದ, ರಾಜಪ್ಪ, ಹಸನಬ್ಬ ಮತ್ತಿ ತರರು ಪಾಲ್ಗೊಂಡಿದ್ದರು.

 

Translate »