ತಿತಿಮತಿಯಲ್ಲಿ ರೈತ ಸಂಘದ ಶಾಖೆ ಉದ್ಘಾಟನೆ
ಕೊಡಗು

ತಿತಿಮತಿಯಲ್ಲಿ ರೈತ ಸಂಘದ ಶಾಖೆ ಉದ್ಘಾಟನೆ

October 30, 2018

ಗೋಣಿಕೊಪ್ಪಲು: ಸ್ಥಳೀಯ ಸಮಸ್ಯೆಗಳನ್ನು ಹೋರಾಟ ಮಾರ್ಗದ ಮೂಲಕ ಬಗೆ ಹರಿಸಿಕೊಳ್ಳಲು ರೈತ ಸಂಘ ದಲ್ಲಿ ವಿಫುಲ ಅವಕಾಶವಿದೆ ಎಂದು ಕರ್ನಾ ಟಕ ರಾಜ್ಯ ರೈತ ಸಂಘದ ಮೈಸೂರು ಭಾಗದ ರೈತ ಮುಖಂಡ ಅಶ್ವತ್ ನಾರಾಯಣ ಅರಸ್ ಅವರು ಅಭಿಪ್ರಾಯಪಟ್ಟರು.

ತಿತಿಮತಿಯ ಕಾವೇರಿ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ರೈತ ಸಂಘಕ್ಕೆ ನೂತನ ಸದಸ್ಯರ ಸೇರ್ಪಡೆ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತ ಸಂಘಕ್ಕೆ ತನ್ನದೇ ಆದ ಇತಿಹಾಸವಿದ್ದು ಆರಂಭದಿಂದಲೂ ಹಲವು ಹೋರಾಟಗಳ ಮೂಲಕವೇ ರೈತರ ಸಮಸ್ಯೆಗಳನ್ನು ಬಗೆ ಹರಿಸಿಕೊಂಡಿದ್ದೇವೆ. ಈ ಭಾಗದ ಸ್ಥಳೀಯ ಸಮಸ್ಯೆಗಳಾದ ಆನೆ ಮಾನವ ಸಂಘರ್ಷ ತಡೆಯಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈಲು ಕಂಬಿ ಅಳವಡಿಕೆ, ರೈತರು ಬೆಳೆಸಿದ ಮರ ಗಳನ್ನು ಸ್ವಂತ ಉಪಯೋಗಕ್ಕೆ ಬಳಸಿ ಕೊಳ್ಳುವ ಬಗ್ಗೆ ಹೋರಾಟಗಳು ಆರಂಭ ವಾಗಬೇಕು. ಆ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಂದ ನ್ಯಾಯ ಪಡೆಯಬಹು ದೆಂದು ಹೇಳಿದರು.

ಇದೇ ಮೊದಲ ಬಾರಿಗೆ ರೈತ ಸಂಘಕ್ಕೆ ಗ್ರಾಮೀಣ ಭಾಗವಾದ ತಿತಿಮತಿ, ಮರ ಪಾಲ, ಮರೂರು, ಭದ್ರಗೊಳ, ಕೋಣಕಟ್ಟೆ, ಮಾಯಮುಡಿ ಭಾಗದ ರೈತರು ಸ್ಥಳೀಯ ರೈತ ಮುಖಂಡರಾದ ಚೆಪ್ಪುಡೀರ ಕಾರ್ಯಪ್ಪ ಮುಂದಾಳತ್ವದಲ್ಲಿ ಸೇರ್ಪಡೆಗೊಂಡರು.

ಕೊಡಗು ಜಿಲ್ಲಾ ರೈತ ಸಂಘದ ಜಿಲ್ಲಾ ಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮನು ಸೋಮಯ್ಯ ಕೊಡಗು ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಿಂದ ರೈತ ಸಂಘ ಹಂತ ಹಂತವಾಗಿ ಬೆಳವಣಿಗೆ ಕಾಣುತ್ತಿದೆ. ರೈತ ಸಂಘದಿಂದ ರೈತರ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಲು ಅವ ಕಾಶವಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸಂಘಟನೆಯೊಂದಿಗೆ ಗುರುತಿಸಿಕೊಳ್ಳಬೇಕು. ಹೋರಾಟದಲ್ಲಿ ಭಾಗಿಗಳಾಗಬೇಕೆಂದು ಕರೆ ನೀಡಿದರು.

ರಾಜ್ಯ ರೈತ ಸಂಘದ ಮುಖಂಡರಾದ ಜಿ.ಟಿ.ರಾಮಸ್ವಾಮಿ, ಹೊಸಕೋಟೆ ಬಸವರಾಜ್, ಬೆಳಗೋಳ ಸುಬ್ರಮಣ್ಯ ಮಾತ ನಾಡಿದರು. ಹೊಸಕೋಟೆ ಬಸವರಾಜ್ ಪ್ರತಿಜ್ಞಾವಿಧಿ ಬೋಧಿಸಿದರು. ಸ್ಥಳೀಯ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚೆಪ್ಪುಡೀರ ಕಾರ್ಯಪ್ಪ ಗಮನ ಸೆಳೆದರು. ಮುಂದಿನ ತಿಂಗಳಿನಲ್ಲಿ ಸಮಸ್ಯೆಗಳ ಬಗ್ಗೆ ಹೋರಾಟ ಕೈಗೊಳ್ಳುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ರೈತ ಮುಖಂಡರಾದ ಚೆಪ್ಪುಡೀರ ಕಾರ್ಯಪ್ಪ ಸ್ವಾಗತಿಸಿದರು. ರೈತ ಮುಖಂಡರಾದ ಚೋನಿರ ಸತ್ಯ, ಪುಚ್ಚಿಮಾಡ ಸುಭಾಶ್, ಭದ್ರಗೊಳದ ಉಮೇಶ್, ವಿಎಸ್ ಎಸ್‍ಎನ್ ಬ್ಯಾಂಕಿನ ರಾಮಕೃಷ್ಣ, ಪುಚ್ಚಿಮಾಡ ಸುನೀಲ್,ತೀತರಮಾಡ ರಾಜ,ಬೋಡಂಗಡ ಅಶೋಕ್, ಮಂಡೇ ಪಂಡ ಪ್ರವೀಣ್, ಸಭಿತಾ ಮುಂತಾ ದವರು ಹಾಜರಿದ್ದರು. ರೈತ ಮಹಿಳೆ ರೇಖಾ ಪ್ರಾರ್ಥಿಸಿದರು.

Translate »