ಚಪ್ಪಲಿಯಲ್ಲಿ ಹೊಡೆದವರಿಗೆ ಫಲಿತಾಂಶ ಸೂಕ್ತ ಉತ್ತರ
ಮಂಡ್ಯ

ಚಪ್ಪಲಿಯಲ್ಲಿ ಹೊಡೆದವರಿಗೆ ಫಲಿತಾಂಶ ಸೂಕ್ತ ಉತ್ತರ

December 10, 2019

ಕೆ.ಆರ್.ಪೇಟೆ,ಡಿ.9(ಶ್ರೀನಿವಾಸ್/ನಾಗಯ್ಯ)- ತಮ್ಮ ಜನ್ಮ ಭೂಮಿಯಲ್ಲಿ ಬಿಜೆಪಿ ಗೆಲ್ಲಿಸಬೇಕು ಎಂಬುದು ಸಿಎಂ ಬಿ.ಎಸ್.ಯಡಿಯೂರಪ್ಪರಿಗೆ ಬಹಳ ವರ್ಷಗಳ ಕನಸು, ಅದು ಈಗ ನನಸಾಗಿದೆ. ಅವರು ಮುಖ್ಯಮಂತ್ರಿಗಳಾಗಿದ್ದರಿಂದ ನನ್ನ ಗೆಲುವು ಸುಲಭವಾಯಿತು ಎಂದು ವಿಜೇತ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಹೇಳಿದರು.

ಪಟ್ಟಣದ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರಿಂದ ಪ್ರಮಾಣ ಪತ್ರವನ್ನು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬೇಕು ಎಂಬುದು ನನ್ನ ಹಂಬಲವಾಗಿತ್ತು. ಕೆ.ಆರ್.ಪೇಟೆಯನ್ನು ಎರಡನೇ ಶಿಕಾರಿ ಪುರ ಮಾಡಬೇಕು ಎಂಬುದು ಮುಖ್ಯಮಂತ್ರಿಗಳ ಕನಸಾಗಿತ್ತು. ಅದಕ್ಕೆ ನಾನು ಅವರಿಗೆ ಕೈ ಜೋಡಿಸಿದೆ. ಅವರ ಕೈ ಕಾಲು ಹಿಡಿದು ಮೂರು ವರ್ಷದಲ್ಲಿ ಕ್ಷೇತ್ರವನ್ನು ಅಭಿವೃದ್ದಿ ಮಾಡು ತ್ತೇನೆ. ನನ್ನನ್ನು ಬಾಂಬೆಗೆ ಕಳುಹಿಸುತ್ತೇನೆ ಎಂದು ಹೇಳುತ್ತಿದ್ದ ಜೆಡಿಎಸ್ ನಾಯಕರಿಂದ ಅದು ಸಾಧ್ಯ ವಾಗಲಿಲ್ಲ. ಅವರು ನನ್ನ ಬಗ್ಗೆ ಏನಾದರೂ ಮಾತನಾ ಡಲಿ. ನಾನು ಅವರ ಹಂತಕ್ಕೆ ಇಳಿದು ಮಾತನಾಡು ವುದಿಲ್ಲ ಎಂದ ಅವರು, ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಜವಾಬ್ದಾರಿಯನ್ನು ಹೊರುತ್ತೇನೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕನಿಷ್ಠ ನಾಲ್ಕು ಕ್ಷೇತ್ರದಲ್ಲಿ ಕಮಲ ಅರಳಿಸುತ್ತೇನೆ. ಗೆಲುವನ್ನು ಸಿಎಂ ಯಡಿಯೂರಪ್ಪ ಮತ್ತು ಮತದಾರರಿಗೆ ಅರ್ಪಿಸುತ್ತೇನೆ. ಕ್ಷೇತ್ರ ಜೆಡಿಎಸ್ ಭದ್ರಕೋಟೆ ಎಂದು ಬೀಗುತ್ತಿದ್ದ ಜೆಡಿಎಸ್ ನಾಯಕರಿಗೆ ತಾಲೂಕಿನ ಮತದಾರರು ತಕ್ಕ ಉತ್ತರ ಕೊಟ್ಟಿದ್ದಾರೆ. ನನ್ನ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದರು ಆದರೆ ದೇವರು ಹಾಗೂ ಮತದಾರರು ನನ್ನನ್ನು ಕೈಬಿಡಲಿಲ್ಲ ಭರ್ಜರಿ ಗೆಲುವು ನೀಡುವ ಮೂಲಕ ಚಪ್ಪಲಿಯಲ್ಲಿ ಹೊಡೆದವರಿಗೆ ಸೂಕ್ತ ಉತ್ತರ ನೀಡಿದ್ದಾರೆ ಎಂದು ಹೇಳಿದರು.

Translate »