ದಲಿತರ ನಿಜವಾದ ಶತ್ರು ಬಿಎಸ್‍ಪಿ
ಮೈಸೂರು

ದಲಿತರ ನಿಜವಾದ ಶತ್ರು ಬಿಎಸ್‍ಪಿ

March 24, 2019

ಮೈಸೂರು: ಜಾತ್ಯಾ ತೀತ ಹಾಗೂ ದಲಿತ ಸಮುದಾಯದ ಮತ ಗಳನ್ನು ಒಡೆಯುವ ಸಂಚಿನಲ್ಲಿ ಬಿಜೆಪಿ ಹಾಗೂ ಬಿಎಸ್‍ಪಿ ರಹಸ್ಯ ಒಪ್ಪಂದ ಮಾಡಿ ಕೊಂಡಿವೆ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ. ಮಹೇಶ್ ಚಂದ್ರಗುರು ಆರೋಪಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಕರ್ನಾಟಕ ದಲಿತ ವೆಲ್‍ಫೇರ್ ಟ್ರಸ್ಟ್, ಕರ್ನಾಟಕ ರಾಜ್ಯ ಪ್ರಗತಿಪರ ಚಿಂತ ಕರ ವೇದಿಕೆ ಹಾಗೂ ಸಂವಿಧಾನ ಸಂರ ಕ್ಷಣಾ ಹೋರಾಟ ಸಮಿತಿ ಸಂಯುಕ್ತಾ ಶ್ರಯದಲ್ಲಿ ಶನಿವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಪ್ರಸ್ತುತ ದಲಿತರ ನಿಜವಾದ ಶತ್ರು ಬಿಎಸ್‍ಪಿ ಯಾಗಿದ್ದು, ಬಿಎಸ್‍ಪಿ ಮುಖ್ಯಸ್ಥೆ ಮಾಯಾ ವತಿ ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡು ದಲಿತರ ಮತ ವಿಭಜನೆ ಮಾಡಲು ಮುಂದಾಗಿದ್ದಾರೆ. ದೇಶದ ಹಿತದೃಷ್ಟಿಯಿಂದ ಬಿಜೆಪಿಯೇತರ ಜಾತ್ಯಾತೀತ ಸಂಘಟನೆಗಳು ಅಧಿಕಾರಕ್ಕೆ ಬರಬೇಕು. ಈ ಹಿನ್ನೆಲೆಯಲ್ಲಿ ಮಹಾ ಮೈತ್ರಿ ಯಶಸ್ವಿಯಾಗಬೇಕು ಎಂದರು.
ಪ್ರಸ್ತುತ ದೇಶವನ್ನು ಆರ್ಥಿಕ ಸಾಮ್ರಾಜ್ಯ ಶಾಹಿಗಳು ಆಳುತ್ತಿದ್ದು, ಮಾನವ ಹಕ್ಕು ಗಳಿಗೆ ಬೆಲೆ ಇಲ್ಲದಂತಾಗಿದೆ. ದುರ್ಬಲ ವರ್ಗಗಳ ಮಾರಣಹೋಮ ನಡೆಯು ತ್ತಿದೆ. ಮತ್ತೆ ಅವರೇ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವ ಕೊನೆಗೊಂಡು ಅಧ್ಯಕ್ಷೀಯ ಮಾದರಿ ಆಡಳಿತ ವ್ಯವಸ್ಥೆ ಜಾರಿಯಾಗ ಲಿದೆ. ಆದ್ದರಿಂದ ಮಹಾಘಟಬಂಧÀನ್ ಗೆಲ್ಲಬೇಕು. ಮಂಡ್ಯ ಲೋಕಸಭಾ ಕ್ಷೇತ್ರ ದಲ್ಲಿ ಜನತೆ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಬೆಂಬಲಿಸ ಬೇಕೆಂದು ಮನವಿ ಮಾಡಿದರು. ದಲಿತ ವೆಲ್‍ಫೇರ್ ಟ್ರಸ್ಟ್‍ನ ಅಧ್ಯಕ್ಷ ಶಾಂತರಾಜು, ಪ್ರಗತಿಪರ ಸಂಘಟನೆಗಳ ಮುಖಂಡ ರಾದ ಎಸ್.ಮಹೇಶ್, ಪ್ರೊ.ಟಿ.ಎಂ.ಮಹೇಶ್, ಪ್ರೊ.ಶಬೀರ್ ಮುಸ್ತಾಫಾ, ಮಹದೇವ್ ಮೂರ್ತಿ ಗೋಷ್ಠಿಯಲ್ಲಿದ್ದರು.

Translate »