ದಕ್ಷಿಣ ವಲಯ ಐಜಿಪಿಯಾಗಿ  ಉಮೇಶ್‍ಕುಮಾರ್ ಅಧಿಕಾರ
ಮೈಸೂರು

ದಕ್ಷಿಣ ವಲಯ ಐಜಿಪಿಯಾಗಿ ಉಮೇಶ್‍ಕುಮಾರ್ ಅಧಿಕಾರ

February 24, 2019

ಮೈಸೂರು: ಮೈಸೂರಿನ ದಕ್ಷಿಣ ವಲಯ ಐಜಿಪಿಯಾಗಿ ವರ್ಗಾವಣೆಗೊಂಡಿರುವ ಐಪಿಎಸ್ ಅಧಿಕಾರಿ ಉಮೇಶ್‍ಕುಮಾರ್ ಅವರು ಇಂದು ಅಧಿಕಾರ ವಹಿಸಿ ಕೊಂಡರು.

ಕೆ.ವಿ. ಶರತ್‍ಚಂದ್ರ ಅವರ ವರ್ಗಾವಣೆ ನಂತರ ಪ್ರಭಾರ ಜವಾಬ್ದಾರಿ ನಿರ್ವಹಿಸುತ್ತಿದ್ದ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಅವರು ನೂತನ ಐಜಿಪಿ ಉಮೇಶ್‍ಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಈ ಸಂದರ್ಭ ಮಾತನಾಡಿದ ಉಮೇಶ್‍ಕುಮಾರ್, ದಕ್ಷಿಣ ವಲಯದ ವ್ಯಾಪ್ತಿಗೆ ಬರುವ ಜಿಲ್ಲೆಗಳಲ್ಲಿ ಪೊಲೀಸ್ ವ್ಯವಸ್ಥೆ ಯನ್ನು ಸದೃಢಗೊಳಿಸಿ ಕಾನೂನು-ಸುವ್ಯವಸ್ಥೆ ನಿರ್ವಹಣೆ ಅಪ ರಾಧ ತಡೆ ಮತ್ತು ಪತ್ತೆ ಕಾರ್ಯವನ್ನು ಪರಿಣಾಮಕಾರಿಯಾಗಿ ಮಾಡಲು ಆದ್ಯತೆ ನೀಡಲಾಗುವುದು ಎಂದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಗಳ ಎಸ್ಪಿ, ಎಎಸ್ಪಿಗಳು ಹಾಗೂ ಡಿವೈಎಸ್ಪಿಗಳೊಂದಿಗೆ ಸಭೆ ನಡೆಸಿ ಅಗತ್ಯ ಮಾಹಿತಿ ಪಡೆದು ಅಗತ್ಯ ಸೂಚನೆ ನೀಡುತ್ತೇನೆಂದು ಉಮೇಶ್‍ಕುಮಾರ್ ತಿಳಿಸಿದರು.

Translate »