ಸೋಮವಾರಪೇಟೆಯಲ್ಲಿ ಮತದಾನ ಜಾಗೃತಿ
ಕೊಡಗು

ಸೋಮವಾರಪೇಟೆಯಲ್ಲಿ ಮತದಾನ ಜಾಗೃತಿ

April 4, 2019

ಸೋಮವಾರಪೇಟೆ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗ, ಸ್ವೀಪ್ ನೇತೃತ್ವದಲ್ಲಿ ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾ ವೇದಿಕೆ ವತಿಯಿಂದ ಮತದಾನದ ಮಹತ್ವ ಕುರಿತು ಬೀದಿ ನಾಟಕದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಬುಧವಾರ ಮತದಾನ ನಮ್ಮ ಹಕ್ಕು, ಅದನ್ನು ಯಾವುದೇ ಆಸೆ, ಆಮಿಷಗಳಿಗೆ ಮಾರಿಕೊಳ್ಳಬೇಡಿ, ಮತವನ್ನು ಮಾರಿಕೊಂಡರೆ ಮನೆಯ ಮಗಳನ್ನು ಮಾರಿಕೊಂಡಂತೆ ಎಂಬ ಸಂದೇಶ ಸಾರುವ ನಾಟಕವನ್ನು ಕಲಾವಿದರು ಅಭಿನಯಿಸುವ ಮೂಲಕ ಸಾರ್ವಜನಿಕರಲ್ಲಿ ಮತದಾನ ಮಹತ್ವದ ಕುರಿತು ಜಾಗೃತಿ ಮೂಡಿಸಿದರು. ಕಾರ್ಯಕ್ರಮಕ್ಕೆ ತಾಲೂಕು ಯುವ ವೇದಿಕೆ ಸ್ಥಾಪಕ ಅಧ್ಯಕ್ಷ ಉದಯಕುಮಾರ್ ಚಾಲನೆ ನೀಡಿದರು. ಈ ಸಂದರ್ಭ ತೋಳೂ ರುಶೆಟ್ಟಳ್ಳಿ ಗ್ರಾಮದ ಸುಧಾಕರ ಉಪಸ್ಥಿತರಿದ್ದರು. ಕಲಾ ವೇದಿಕೆಯ ಈ. ರಾಜು, ಚಂದ್ರಪ್ಪ, ಎಂ. ರಾಜು, ಶಿವಕುಮಾರ್, ಯಶೋಧ ನಾಟಕ ಪ್ರಸ್ತುತಪಡಿಸಿದರು.

Translate »