ಶ್ರೀರಂಗಪಟ್ಟಣ, ಆ.25(ವಿನಯ್ ಕಾರೇಕುರ)- ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯ ಕಾಲದಲ್ಲಿ ನಿರ್ಮಾಣವಾದ ತಾಲೂ ಕಿನ ಪ್ರಸಿದ್ಧ ಕೆಆರ್ಎಸ್ ಜಲಾಶಯಕ್ಕೆ ಸೂಕ್ತ ಭದ್ರತೆ ಇಲ್ಲದಂತಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಎದುರಾಗಿದೆ. ಮಂಡ್ಯ ಜಿಲ್ಲೆಯ ಲಕ್ಷಾಂತರ ಹೆಕ್ಟೇರ್ ಕೃಷಿ ಭೂಮಿ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಕುಡಿಯುವ ನೀರು ಪೂರೈಸುವ ಮೂಲಕ ಕೋಟ್ಯಾಂತರ ಜನರಿಗೆ ಆಸರೆಯಾಗಿರುವ ಕೆಆರ್ಎಸ್ ಜಲಾ ಶಯದಲ್ಲಿ ಇತ್ತೀಚಿನ ದಿನಗಳಲ್ಲಿ ಭದ್ರತೆ ಮರೀಚಿಕೆ ಯಾಗಿದ್ದು, ಆಡಳಿತ ವರ್ಗ, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ….
ಚಿನ್ನಾಭರಣಕ್ಕೆ ಮಹಿಳೆ ಕೊಲೆ; ಆದರೆ ಹಂತಕರಿಗೆ ಸಿಕ್ಕಿದ್ದು, ಕೇವಲ 10 ರೂ.
August 23, 2022ಮಂಡ್ಯ, ಆ.22- ವರ್ಷದ ಹಿಂದೆ ನಡೆದಿದ್ದ ಮಹಿಳೆ ಕೊಲೆ ಪ್ರಕರಣವನ್ನು ಭೇದಿಸಿರುವ ಹಲಗೂರು ಠಾಣೆಯ ಪೊಲೀಸರು ಬೆಂಗಳೂರಿನ ಮಹಿಳೆ ಹಾಗೂ ಆಕೆಯ ಪ್ರಿಯತಮನನ್ನು ಬಂಧಿಸಿದ್ದಾರೆ. ಬೆಂಗಳೂರಿನ ಬನಶಂಕರಿ 3ನೇ ಹಂತದ ನಿವಾಸಿ ಜಿ.ನಾರಾಯಣ ಅಲಿಯಾಸ್ ನಾಣಿ ಮತ್ತು ಆತನ ಪ್ರಿಯತಮೆ ಮೂಲತಃ ಚನ್ನಪಟ್ಟಣ ತಾಲೂಕು ಹೊನ್ನಿಗನಹಳ್ಳಿ ಗ್ರಾಮದವಳಾಗಿದ್ದು, ಬೆಂಗಳೂರಿನ ಚಳ್ಳಘಟ್ಟದಲ್ಲಿ ವಾಸಿಸುತ್ತಿದ್ದ ಲಕ್ಷ್ಮೀ ಬಂಧಿತ ರಾಗಿದ್ದು, ಇವರು ಚಂದ್ರಕಲಾ ಅಲಿಯಾಸ್ ಶೋಭಾ (42) ಎಂಬಾಕೆಯನ್ನು 2021ರ ಜುಲೈ 28ರಂದು ಆಟೋದಲ್ಲಿ ಮಳ ವಳ್ಳಿ ತಾಲೂಕು ಹಲಗೂರು ಪೊಲೀಸ್…
ಮೈಷುಗರ್ ಮತ್ತೆ ಆರಂಭ
August 12, 2022ಮಂಡ್ಯ, ಆ.11- ಕಳೆದ ನಾಲ್ಕು ವರ್ಷ ಗಳಿಂದ ಸ್ಥಗಿತಗೊಂಡಿದ್ದ ದೇಶದ ಮೊದಲ ಸರ್ಕಾರಿ ಕಾರ್ಖಾನೆ ಎಂಬ ಹೆಗ್ಗಳಿಕೆ ಪಡೆ ದಿರುವ ಮೈಷುಗರ್ ಸಕ್ಕರೆ ಕಾರ್ಖಾನೆ ಗುರುವಾರದಿಂದ ಪುನರಾರಂಭಗೊಂಡಿದೆ. ಬೆಳಗ್ಗೆಯಿಂದಲೇ ಕಾರ್ಖಾನೆಯ ಆವರಣದಲ್ಲಿ ಹೋಮ-ಹವನ, ಸತ್ಯನಾರಾಯಣ ಪೂಜೆ ಸೇರಿದಂತೆ ವಿಶೇಷ ಪೂಜೆಗಳು ಜರುಗಿದವು. 11.35ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ರೇಷ್ಮೆ ಹಾಗೂ ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಹಾಗೂ ಶಾಸಕ ಎಂ.ಶ್ರೀನಿವಾಸ್ ಅವರು ಬಾಯ್ಲರ್ಗೆ ಅಗ್ನಿಸ್ಪರ್ಶ ಮಾಡುವ ಮೂಲಕ ಚಾಲನೆ ನೀಡಿದರು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ…
ಅರಣ್ಯ ಸಿಬ್ಬಂದಿ ಮೇಲೆ ಹರಿಹಾಯ್ದ ಶಾಸಕ ಸುರೇಶ್ಗೌಡ
August 6, 2022ನಾಗಮಂಗಲ, ಆ.5-ತಮ್ಮ ಇಲಾಖೆಗೆ ಸೇರಿದ ಜಾಗದ ರಕ್ಷಣೆಗಾಗಿ ಪೊಲೀಸರ ಸಹಕಾರದೊಂದಿಗೆ ಟ್ರಂಚ್ ತೋಡುತ್ತಿದ್ದ ಅರಣ್ಯಾಧಿಕಾರಿಗಳ ಮೇಲೆ ನಾಗಮಂಗಲ ಶಾಸಕ ಸುರೇಶ್ಗೌಡ ಗಲಾಟೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಬೆದರಿಕೆ ಹಾಕಿದ ಘಟನೆ ತಾಲೂಕಿನ ಮಾಲತಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಮಾಲತಿ ಗ್ರಾಮದ ಸರ್ವೆ ನಂ.135 ಅರಣ್ಯ ಇಲಾಖೆಗೆ ಸೇರಿದ್ದು ಎನ್ನಲಾ ಗಿದ್ದು, ಈ ಭೂಮಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸೆಸಿ ನೆಟ್ಟು ಪೋಷಿಸಿಕೊಂಡು ಬರುತ್ತಿದ್ದಾರೆ. ಇತ್ತೀಚೆಗೆ ಕೆಲ ರೈತರು ಅಲ್ಲಿನ ಮರಗಳನ್ನು ಕಡಿದು ರಾತ್ರೋ ರಾತ್ರಿ…
ಮಂಡ್ಯ ಜಿಲ್ಲೆಯಲ್ಲಿ ಕೊಂಚ ತಗ್ಗಿದ ವರುಣನ ಆರ್ಭಟ
August 6, 2022ಮಂಡ್ಯ,ಆ.5- ಕಳೆದ ಒಂದು ವಾರದಿಂದ ಅಬ್ಬರಿಸುತ್ತಿದ್ದ ವರುಣನ ಆರ್ಭಟ ನಿನ್ನೆ ಸಂಜೆಯಿಂದ ಕೊಂಚ ತಗ್ಗಿದೆ. ಮಂಡ್ಯ ಜಿಲ್ಲೆಯಾದ್ಯಂತ ಜನ ನೆಮ್ಮದಿಯಿಂದ ವರ ಮಹಾಲಕ್ಷ್ಮಿ ಹಬ್ಬ ಆಚರಿಸಿದ್ದಾರೆ. ಕಳೆದ ಹಲವು ದಿನಗಳಿಂದ ಕೇವಲ ರಾತ್ರಿ ಸಂದರ್ಭ ದಲ್ಲಿ ಮಾತ್ರ ಅಬ್ಬರಿಸುತ್ತಿದ್ದ ಮಳೆ ನಿನ್ನೆ ಗುರುವಾರ ಬೆಳಿಗ್ಗೆ ಹತ್ತರಿಂದ ಸಂಜೆ 5ರ ವರೆಗೆ ನಿರಂತರವಾಗಿ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಆದರೆ ನಿನ್ನೆ ಸಂಜೆಯಿಂದ ಇಂದು ರಾತ್ರಿಯವರೆಗೆ ತುಂತುರು ಮಳೆ ಬೀಳುತ್ತಿದೆ. ಜಿಲ್ಲೆಯಲ್ಲಿ ನಿರಂತರ ಮಳೆಗೆ ಕೆರೆ ಕೋಡಿ ಗಳು…
ಹಣ, ಆಭರಣಕ್ಕಾಗಿ ಮಹಿಳೆಯರ ಕೊಂದು ರುಂಡ-ಮುಂಡ ಬೇರ್ಪಡಿಸುತ್ತಿದ್ದ ಸೀರಿಯಲ್ ಕಿಲ್ಲರ್ ಜೋಡಿ ಬಂಧನ
August 5, 2022ಮಂಡ್ಯ, ಆ.4-ಇಬ್ಬರು ಮಹಿಳೆಯರನ್ನು ಹತ್ಯೆ ಮಾಡಿ ರುಂಡ-ಮುಂಡವನ್ನು ಬೇರ್ಪ ಡಿಸಿ ನಾಲೆಗೆ ಬಿಸಾಕಿದ್ದ ಪ್ರಕರಣವನ್ನು ಭೇದಿಸಿ ರುವ ಮಂಡ್ಯ ಜಿಲ್ಲಾ ಪೊಲೀಸರು, ಸೀರಿಯಲ್ ಕಿಲ್ಲರ್ ಹಾಗೂ ಆತನ ಪ್ರೇಯಸಿಯನ್ನು ಬಂಧಿ ಸುವಲ್ಲಿ ಯಶಸ್ವಿಯಾಗಿದ್ದಾರೆ. ಪಾಂಡವಪುರ ಹಾಗೂ ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ನಾಲೆಗಳಲ್ಲಿ ಇಬ್ಬರು ಮಹಿಳೆಯರ ಮುಂಡ ಮಾತ್ರ ಕಳೆದ ಎರಡು ತಿಂಗಳ ಹಿಂದೆ ಪತ್ತೆಯಾಗಿತ್ತು. ಈ ಪ್ರಕರಣ ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಇಂಗ್ಲಿಷ್ ಪತ್ತೇದಾರಿ ಸಿನೆಮಾ `ಶೆರ್ಲಾಕ್ಸ್ ಹೋಮ್ಸ್’ನ ಹೀರೋನಂತೆ ಹಲವಾರು ಕ್ಲಿಷ್ಟಕರ ಪ್ರಕರಣ ಗಳನ್ನು…
ವರುಣಾರ್ಭಟಕ್ಕೆ ನಲುಗಿದ ಮಂಡ್ಯ
August 3, 2022ಮಂಡ್ಯ, ಆ.2- ಸೋಮವಾರ ರಾತ್ರಿ ಸುರಿದ ಕುಂಭದ್ರೋಣ ಮಳೆಗೆ ಸಕ್ಕರೆ ನಾಡು ಮಂಡ್ಯ ಅಕ್ಷರಶಃ ನಲುಗಿ ಹೋಗಿದ್ದು, ನಗರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಜಿಲ್ಲೆಯ ವಿವಿಧೆಡೆ ಮನೆಗಳಿಗೆ ನೀರು ನುಗ್ಗಿದ್ದು, ಜನರು ತತ್ತರಿಸಿದ್ದಾರೆ. ಮಂಡ್ಯದಲ್ಲಿ ಒಂದೇ ದಿನ ದಾಖಲೆಯ ಮಳೆಯಾಗಿದೆ. ನಿನ್ನೆ (ಸೋಮವಾರ) ರಾತ್ರಿ ಮಂಡ್ಯ ಜಿಲ್ಲೆಯಾದ್ಯಂತ 61.0 ಮಿಮೀ ಮಳೆಯಾಗಿದೆ. ನಗರದ ಹಲವೆಡೆ ಮನೆಗಳಿಗೆ ನೀರು ನುಗ್ಗಿ ದವಸ ಧಾನ್ಯ, ಬಟ್ಟೆಗಳು, ಪಾತ್ರೆ ಪಗಡೆಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳು ಸಂಪೂರ್ಣ ಹಾಳಾಗಿವೆ. ಅಲ್ಲದೆ, ಕುಟುಂಬಸ್ಥರು ಮಳೆಯ ನೀರನ್ನು ಮನೆಯಿಂದ…
ವರದಕ್ಷಿಣೆ ಕಿರುಕುಳ: 10 ತಿಂಗಳ ಹಸುಗೂಸು ಕೊಂದು ಮಂಡ್ಯ ಜಿಪಂ ಮಾಜಿ ಸದಸ್ಯೆ ಪುತ್ರಿ ಆತ್ಮಹತ್ಯೆ
August 2, 2022ನಾಗಮಂಗಲ, ಆ.1- ಪ್ರೀತಿಸಿ ವಿವಾಹವಾಗಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಪುತ್ರಿ ವರದಕ್ಷಿಣೆ ಕಿರುಕುಳದಿಂದಾಗಿ ಡೆತ್ನೋಟ್ ಬರೆದಿಟ್ಟು 10 ತಿಂಗಳ ಮಗುವನ್ನು ಕೊಂದು ತಾನೂ ನೇಣಿಗೆ ಶರಣಾದ ಘಟನೆ ನಾಗಮಂಗಲ ತಾಲೂಕು ಕೆಂಚೇಗೌಡನ ಕೊಪ್ಪಲು ಗ್ರಾಮದಲ್ಲಿ ಸೋಮವಾರ ನಡೆದಿದೆ. ಜಿಪಂ ಮಾಜಿ ಸದಸ್ಯೆ ಸುನಂದಾ ದೊರೆಸ್ವಾಮಿ ಪುತ್ರಿ ಬಿಂದು(25) ತನ್ನ ಪುತ್ರಿ 10 ತಿಂಗಳ ಜಾಹ್ನವಿ ಯನ್ನು ಕೊಂದು ನೇಣಿಗೆ ಶರಣಾದವಳಾಗಿದ್ದಾಳೆ. ವಿವರ: ಬಿಂದು ಮೈಸೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ವೇಳೆ ತನ್ನದೇ ಗ್ರಾಮ ದವನಾದ ಖಾಸಗಿ…
ಪಾಲಿಶ್ ಮಾಡಿ ಅಧಿಕ ಬೆಲೆಗೆ ಮಾರಾಟ ಮಾಡುವ ದಂಧೆ ಮಂಡ್ಯ ಬಳಿ ಭಾರೀ ಪ್ರಮಾಣದ ಪಡಿತರ ಅಕ್ಕಿ ವಶ
July 26, 2022ಮಂಡ್ಯ, ಜು.25- ರೈಸ್ಮಿಲ್ವೊಂದರ ಮೇಲೆ ದಾಳಿ ನಡೆಸಿದ ಆಹಾರ ಇಲಾಖೆ ಅಧಿಕಾರಿ ಗಳು 16.60 ಲಕ್ಷ ರೂ. ಮೌಲ್ಯದ 635 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡು ರೈಸ್ ಮಿಲ್ಗೆ ಬೀಗಮುದ್ರೆ ಹಾಕಿದ್ದಾರೆ. ಸುದ್ದಿವಾಹಿನಿಯೊಂದು ನೀಡಿದ ಮಾಹಿತಿ ಮೇರೆಗೆ ಬೆಂಗಳೂರು- ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತಿರುವ ಮಂಡ್ಯ ತಾಲೂಕು ಹಲಸಗೆರೆ ಗ್ರಾಮದ ಬಾಲಾಜಿ ರೈಸ್ಮಿಲ್ ಮೇಲೆ ಜು.21 ರಂದು ಆಹಾರ ನಿರೀಕ್ಷಕಿ ಪವಿತ್ರಾ, ತಹಸೀಲ್ದಾ ರರು ಹಾಗೂ ಇತರೆ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ಎರಡು ದಿನಗಳ ಕಾಲ ಸುದೀರ್ಘ…
ಕೆಆರ್ಎಸ್ನಿಂದ 85 ಸಾವಿರ ಕ್ಯೂಸೆಕ್ ನೀರು ಬಿಡುಗಡೆ
July 15, 2022ಶ್ರೀರಂಗಪಟ್ಟಣ, ಜು.14- ಕೊಡಗು ಹಾಗೂ ಕಾವೇರಿ ಜಲಾನಯನ ಪ್ರದೇಶ ದಲ್ಲಿ ವ್ಯಾಪಕ ಮಳೆಯಾಗುತ್ತಿರುವುದ ರಿಂದ ಕೆಆರ್ಎಸ್ ಜಲಾಶಯಕ್ಕೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ 85 ಸಾವಿರ ಕ್ಯೂಸೆಕ್ಗೂ ಹೆಚ್ಚು ನೀರು ಬಿಡುಗಡೆ ಮಾಡಲಾಗು ತ್ತಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ನದಿ ಪಾತ್ರದ ಪ್ರವಾಸಿ ತಾಣಗಳಲ್ಲಿ 144 ಸೆಕ್ಷನ್ ಜಾರಿಗೊಳಿಸಿ, ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ತಾಲೂಕಿನ ವ್ಯಾಪ್ತಿಯ ಕಾವೇರಿ ನದಿ ಪಾತ್ರದ ಪ್ರವಾಸಿ ತಾಣ ಗಳು ಜಲಾವೃತವಾಗಿರುವುದರಿಂದ ಪ್ರವಾಹದ ಭೀತಿ ಉಂಟಾಗಿದೆ. ಪ್ರವಾಸಿ ಗರು ಹಾಗೂ…