ಮಂಡ್ಯ

ರಾಹುಲ್‍ಗೆ ತಾಯಿ ಬಲ ಮಂಡ್ಯ ಜಿಲ್ಲೆಯ ಯಾತ್ರೆಯಲ್ಲಿ ಕೆಲ ದೂರ ಸಾಗಿದ ಸೋನಿಯಾಗಾಂಧಿ
ಮಂಡ್ಯ

ರಾಹುಲ್‍ಗೆ ತಾಯಿ ಬಲ ಮಂಡ್ಯ ಜಿಲ್ಲೆಯ ಯಾತ್ರೆಯಲ್ಲಿ ಕೆಲ ದೂರ ಸಾಗಿದ ಸೋನಿಯಾಗಾಂಧಿ

October 7, 2022

ಪಾಂಡವಪುರ/ನಾಗಮಂಗಲ, ಅ.6-ಆಯುಧ ಪೂಜೆ ಮತ್ತು ವಿಜಯ ದಶಮಿ ಹಿನ್ನೆಲೆಯಲ್ಲಿ ಎರಡು ದಿನಗಳ ವಿರಾಮದ ನಂತರ ಗುರುವಾರ ಪಾಂಡವ ಪುರ ತಾಲೂಕಿನಲ್ಲಿ ಆರಂಭವಾದ ಭಾರತ ಐಕ್ಯತಾ ಯಾತ್ರೆಯಲ್ಲಿ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪುತ್ರ ರಾಹುಲ್ ಗಾಂಧಿ ಹಾಗೂ ರಾಜ್ಯ ಕಾಂಗ್ರೆಸ್ ಪ್ರಮುಖ ಮುಖಂಡರು, ಅಪಾರ ಕಾರ್ಯಕರ್ತರೊಂದಿಗೆ ಸುಮಾರು 3 ಕಿಲೋಮೀಟರ್ ಹೆಜ್ಜೆ ಹಾಕುವ ಮೂಲಕ ಪುತ್ರನ ಮಹತ್ವದ ಯಾತ್ರೆಗೆ ಶಕ್ತಿ ತುಂಬಿದರು. ಸೋನಿಯಾ ಗಾಂಧಿಯವರು ಯಾತ್ರೆಯಲ್ಲಿ ಪಾಲ್ಗೊಂಡ ಹಿನ್ನೆಲೆ ಇಂದು ಯಾತ್ರೆಯನ್ನು ಕೇವಲ 10 ಕಿ.ಮೀ.ಗೆ…

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಐದು ಕೋಟಿ ರೂ. ದುರ್ಬಳಕೆ ಪ್ರಕರಣ ಕಾಂಗ್ರೆಸ್ ಮುಖಂಡ ಸೇರಿ ಐವರಿಗೆ ಜೈಲು ಶಿಕ್ಷೆ
ಮಂಡ್ಯ

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಐದು ಕೋಟಿ ರೂ. ದುರ್ಬಳಕೆ ಪ್ರಕರಣ ಕಾಂಗ್ರೆಸ್ ಮುಖಂಡ ಸೇರಿ ಐವರಿಗೆ ಜೈಲು ಶಿಕ್ಷೆ

September 10, 2022

ಮಂಡ್ಯ, ಸೆ.9- ಮಂಡ್ಯ ನಗರಾಭಿವೃದ್ಧಿ ಪ್ರಾಧಿ ಕಾರದ (ಮುಡಾ) ಐದು ಕೋಟಿ ರೂ.ಗಳನ್ನು ದುರುಪಯೋಗ ಪಡಿಸಿಕೊಂಡ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಕೆಬ್ಬಳ್ಳಿ ಆನಂದ್ ಸೇರಿದಂತೆ ಐವರಿಗೆ 7 ವರ್ಷ ಜೈಲು ಹಾಗೂ ಒಟ್ಟು 5,02,75000 ರೂ. ದಂಡ ವಿಧಿಸಿ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಈ ಹಿಂದೆ ಮಂಡ್ಯ ಜಿಲ್ಲಾ ಕಾಂಗ್ರೆಸ್‍ನ ಕಿಸಾನ್ ವಿಭಾಗದ ಅಧ್ಯಕ್ಷನಾಗಿದ್ದ ಕೆ.ಆನಂದ್ ಅಲಿಯಾಸ್ ಕೆಬ್ಬಳ್ಳಿ ಆನಂದ್, ಮೂಲತಃ ಮಳ ವಳ್ಳಿ ತಾಲೂಕು ಡಿ.ಹಲಸಹಳ್ಳಿ ಗ್ರಾಮದವನಾ ಗಿದ್ದು, ಬೆಂಗಳೂರಿನ ಫ್ಯೂಚರ್…

ಮಳವಳ್ಳಿ ಬಳಿ ಪಂಪ್‍ಹೌಸ್‍ಗೆ ನುಗ್ಗಿದ ನೀರು ಬೆಂಗಳೂರಿಗೆ ಸದ್ಯಕ್ಕೆಕಾವೇರಿ ನೀರು ಬಂದ್
ಮಂಡ್ಯ

ಮಳವಳ್ಳಿ ಬಳಿ ಪಂಪ್‍ಹೌಸ್‍ಗೆ ನುಗ್ಗಿದ ನೀರು ಬೆಂಗಳೂರಿಗೆ ಸದ್ಯಕ್ಕೆಕಾವೇರಿ ನೀರು ಬಂದ್

September 6, 2022

ಮಂಡ್ಯ, ಸೆ.5- ಕಳೆದ 15 ದಿನಗಳಿಂದ ಜಿಲ್ಲಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಭಾನುವಾರ ರಾತ್ರಿ ಸುರಿದ ಭಾರೀ ಮಳೆ ಯಿಂದ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಬಳಿಯ ಭೀಮೇಶ್ವರಿ ನದಿ ಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ನದಿ ನೀರು ತೊರೆಕಾಡನಹಳ್ಳಿ (ಟಿ.ಕೆ.ಹಳ್ಳಿ) ಯಲ್ಲಿರುವ ಜಲಮಂಡಳಿಯ ಜಲರೇಚಕ ಯಂತ್ರಾಗಾರಕ್ಕೆ (ಪಂಪ್‍ಸ್ಟೇಷನ್) ನುಗ್ಗಿದ ಪರಿಣಾಮ ಬೆಂಗಳೂರಿಗೆ ಕಾವೇರಿ ನೀರು ಕಲ್ಪಿಸುವ ಎರಡು ಪಂಪ್‍ಹೌಸ್ ಸಂಪೂರ್ಣ ಜಲಾವೃತವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಿಂದ 80 ಕಿ.ಮೀ. ದೂರದಲ್ಲಿರುವ ಟಿ.ಕೆ.ಹಳ್ಳಿಯ ಈ ಪಂಪ್‍ಸ್ಟೇಷನ್‍ನಿಂದ ಪ್ರತಿದಿನ ಬೆಂಗ…

ಕೆಆರ್‍ಎಸ್‍ನಲ್ಲಿ ಸುರಕ್ಷತೆ ಅನುಮಾನ; ಸಿಸಿ ಟಿವಿ ಕ್ಯಾಮರಾಗಳು ಕೆಟ್ಟಿವೆ, ಲೈಟ್‍ಗಳು, ಮೆಟಲ್  ಡಿಟೆಕ್ಟರ್‍ಗಳು, ಲಗೇಜ್ ಸ್ಕ್ಯಾನರ್‍ಗಳು ಹಾಳಾಗಿವೆ
ಮಂಡ್ಯ

ಕೆಆರ್‍ಎಸ್‍ನಲ್ಲಿ ಸುರಕ್ಷತೆ ಅನುಮಾನ; ಸಿಸಿ ಟಿವಿ ಕ್ಯಾಮರಾಗಳು ಕೆಟ್ಟಿವೆ, ಲೈಟ್‍ಗಳು, ಮೆಟಲ್ ಡಿಟೆಕ್ಟರ್‍ಗಳು, ಲಗೇಜ್ ಸ್ಕ್ಯಾನರ್‍ಗಳು ಹಾಳಾಗಿವೆ

August 26, 2022

ಶ್ರೀರಂಗಪಟ್ಟಣ, ಆ.25(ವಿನಯ್ ಕಾರೇಕುರ)- ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯ ಕಾಲದಲ್ಲಿ ನಿರ್ಮಾಣವಾದ ತಾಲೂ ಕಿನ ಪ್ರಸಿದ್ಧ ಕೆಆರ್‍ಎಸ್ ಜಲಾಶಯಕ್ಕೆ ಸೂಕ್ತ ಭದ್ರತೆ ಇಲ್ಲದಂತಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಎದುರಾಗಿದೆ. ಮಂಡ್ಯ ಜಿಲ್ಲೆಯ ಲಕ್ಷಾಂತರ ಹೆಕ್ಟೇರ್ ಕೃಷಿ ಭೂಮಿ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಕುಡಿಯುವ ನೀರು ಪೂರೈಸುವ ಮೂಲಕ ಕೋಟ್ಯಾಂತರ ಜನರಿಗೆ ಆಸರೆಯಾಗಿರುವ ಕೆಆರ್‍ಎಸ್ ಜಲಾ ಶಯದಲ್ಲಿ ಇತ್ತೀಚಿನ ದಿನಗಳಲ್ಲಿ ಭದ್ರತೆ ಮರೀಚಿಕೆ ಯಾಗಿದ್ದು, ಆಡಳಿತ ವರ್ಗ, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ….

ಚಿನ್ನಾಭರಣಕ್ಕೆ ಮಹಿಳೆ ಕೊಲೆ; ಆದರೆ  ಹಂತಕರಿಗೆ ಸಿಕ್ಕಿದ್ದು, ಕೇವಲ 10 ರೂ.
ಮಂಡ್ಯ

ಚಿನ್ನಾಭರಣಕ್ಕೆ ಮಹಿಳೆ ಕೊಲೆ; ಆದರೆ ಹಂತಕರಿಗೆ ಸಿಕ್ಕಿದ್ದು, ಕೇವಲ 10 ರೂ.

August 23, 2022

ಮಂಡ್ಯ, ಆ.22- ವರ್ಷದ ಹಿಂದೆ ನಡೆದಿದ್ದ ಮಹಿಳೆ ಕೊಲೆ ಪ್ರಕರಣವನ್ನು ಭೇದಿಸಿರುವ ಹಲಗೂರು ಠಾಣೆಯ ಪೊಲೀಸರು ಬೆಂಗಳೂರಿನ ಮಹಿಳೆ ಹಾಗೂ ಆಕೆಯ ಪ್ರಿಯತಮನನ್ನು ಬಂಧಿಸಿದ್ದಾರೆ. ಬೆಂಗಳೂರಿನ ಬನಶಂಕರಿ 3ನೇ ಹಂತದ ನಿವಾಸಿ ಜಿ.ನಾರಾಯಣ ಅಲಿಯಾಸ್ ನಾಣಿ ಮತ್ತು ಆತನ ಪ್ರಿಯತಮೆ ಮೂಲತಃ ಚನ್ನಪಟ್ಟಣ ತಾಲೂಕು ಹೊನ್ನಿಗನಹಳ್ಳಿ ಗ್ರಾಮದವಳಾಗಿದ್ದು, ಬೆಂಗಳೂರಿನ ಚಳ್ಳಘಟ್ಟದಲ್ಲಿ ವಾಸಿಸುತ್ತಿದ್ದ ಲಕ್ಷ್ಮೀ ಬಂಧಿತ ರಾಗಿದ್ದು, ಇವರು ಚಂದ್ರಕಲಾ ಅಲಿಯಾಸ್ ಶೋಭಾ (42) ಎಂಬಾಕೆಯನ್ನು 2021ರ ಜುಲೈ 28ರಂದು ಆಟೋದಲ್ಲಿ ಮಳ ವಳ್ಳಿ ತಾಲೂಕು ಹಲಗೂರು ಪೊಲೀಸ್…

ಮೈಷುಗರ್ ಮತ್ತೆ ಆರಂಭ
ಮಂಡ್ಯ

ಮೈಷುಗರ್ ಮತ್ತೆ ಆರಂಭ

August 12, 2022

ಮಂಡ್ಯ, ಆ.11- ಕಳೆದ ನಾಲ್ಕು ವರ್ಷ ಗಳಿಂದ ಸ್ಥಗಿತಗೊಂಡಿದ್ದ ದೇಶದ ಮೊದಲ ಸರ್ಕಾರಿ ಕಾರ್ಖಾನೆ ಎಂಬ ಹೆಗ್ಗಳಿಕೆ ಪಡೆ ದಿರುವ ಮೈಷುಗರ್ ಸಕ್ಕರೆ ಕಾರ್ಖಾನೆ ಗುರುವಾರದಿಂದ ಪುನರಾರಂಭಗೊಂಡಿದೆ. ಬೆಳಗ್ಗೆಯಿಂದಲೇ ಕಾರ್ಖಾನೆಯ ಆವರಣದಲ್ಲಿ ಹೋಮ-ಹವನ, ಸತ್ಯನಾರಾಯಣ ಪೂಜೆ ಸೇರಿದಂತೆ ವಿಶೇಷ ಪೂಜೆಗಳು ಜರುಗಿದವು. 11.35ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ರೇಷ್ಮೆ ಹಾಗೂ ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಹಾಗೂ ಶಾಸಕ ಎಂ.ಶ್ರೀನಿವಾಸ್ ಅವರು ಬಾಯ್ಲರ್‍ಗೆ ಅಗ್ನಿಸ್ಪರ್ಶ ಮಾಡುವ ಮೂಲಕ ಚಾಲನೆ ನೀಡಿದರು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ…

ಅರಣ್ಯ ಸಿಬ್ಬಂದಿ ಮೇಲೆ ಹರಿಹಾಯ್ದ ಶಾಸಕ ಸುರೇಶ್‍ಗೌಡ
ಮಂಡ್ಯ

ಅರಣ್ಯ ಸಿಬ್ಬಂದಿ ಮೇಲೆ ಹರಿಹಾಯ್ದ ಶಾಸಕ ಸುರೇಶ್‍ಗೌಡ

August 6, 2022

ನಾಗಮಂಗಲ, ಆ.5-ತಮ್ಮ ಇಲಾಖೆಗೆ ಸೇರಿದ ಜಾಗದ ರಕ್ಷಣೆಗಾಗಿ ಪೊಲೀಸರ ಸಹಕಾರದೊಂದಿಗೆ ಟ್ರಂಚ್ ತೋಡುತ್ತಿದ್ದ ಅರಣ್ಯಾಧಿಕಾರಿಗಳ ಮೇಲೆ ನಾಗಮಂಗಲ ಶಾಸಕ ಸುರೇಶ್‍ಗೌಡ ಗಲಾಟೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಬೆದರಿಕೆ ಹಾಕಿದ ಘಟನೆ ತಾಲೂಕಿನ ಮಾಲತಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಮಾಲತಿ ಗ್ರಾಮದ ಸರ್ವೆ ನಂ.135 ಅರಣ್ಯ ಇಲಾಖೆಗೆ ಸೇರಿದ್ದು ಎನ್ನಲಾ ಗಿದ್ದು, ಈ ಭೂಮಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸೆಸಿ ನೆಟ್ಟು ಪೋಷಿಸಿಕೊಂಡು ಬರುತ್ತಿದ್ದಾರೆ. ಇತ್ತೀಚೆಗೆ ಕೆಲ ರೈತರು ಅಲ್ಲಿನ ಮರಗಳನ್ನು ಕಡಿದು ರಾತ್ರೋ ರಾತ್ರಿ…

ಮಂಡ್ಯ ಜಿಲ್ಲೆಯಲ್ಲಿ ಕೊಂಚ ತಗ್ಗಿದ ವರುಣನ ಆರ್ಭಟ
ಮಂಡ್ಯ

ಮಂಡ್ಯ ಜಿಲ್ಲೆಯಲ್ಲಿ ಕೊಂಚ ತಗ್ಗಿದ ವರುಣನ ಆರ್ಭಟ

August 6, 2022

ಮಂಡ್ಯ,ಆ.5- ಕಳೆದ ಒಂದು ವಾರದಿಂದ ಅಬ್ಬರಿಸುತ್ತಿದ್ದ ವರುಣನ ಆರ್ಭಟ ನಿನ್ನೆ ಸಂಜೆಯಿಂದ ಕೊಂಚ ತಗ್ಗಿದೆ. ಮಂಡ್ಯ ಜಿಲ್ಲೆಯಾದ್ಯಂತ ಜನ ನೆಮ್ಮದಿಯಿಂದ ವರ ಮಹಾಲಕ್ಷ್ಮಿ ಹಬ್ಬ ಆಚರಿಸಿದ್ದಾರೆ. ಕಳೆದ ಹಲವು ದಿನಗಳಿಂದ ಕೇವಲ ರಾತ್ರಿ ಸಂದರ್ಭ ದಲ್ಲಿ ಮಾತ್ರ ಅಬ್ಬರಿಸುತ್ತಿದ್ದ ಮಳೆ ನಿನ್ನೆ ಗುರುವಾರ ಬೆಳಿಗ್ಗೆ ಹತ್ತರಿಂದ ಸಂಜೆ 5ರ ವರೆಗೆ ನಿರಂತರವಾಗಿ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಆದರೆ ನಿನ್ನೆ ಸಂಜೆಯಿಂದ ಇಂದು ರಾತ್ರಿಯವರೆಗೆ ತುಂತುರು ಮಳೆ ಬೀಳುತ್ತಿದೆ. ಜಿಲ್ಲೆಯಲ್ಲಿ ನಿರಂತರ ಮಳೆಗೆ ಕೆರೆ ಕೋಡಿ ಗಳು…

ಹಣ, ಆಭರಣಕ್ಕಾಗಿ ಮಹಿಳೆಯರ ಕೊಂದು ರುಂಡ-ಮುಂಡ ಬೇರ್ಪಡಿಸುತ್ತಿದ್ದ ಸೀರಿಯಲ್ ಕಿಲ್ಲರ್ ಜೋಡಿ ಬಂಧನ
ಮಂಡ್ಯ

ಹಣ, ಆಭರಣಕ್ಕಾಗಿ ಮಹಿಳೆಯರ ಕೊಂದು ರುಂಡ-ಮುಂಡ ಬೇರ್ಪಡಿಸುತ್ತಿದ್ದ ಸೀರಿಯಲ್ ಕಿಲ್ಲರ್ ಜೋಡಿ ಬಂಧನ

August 5, 2022

ಮಂಡ್ಯ, ಆ.4-ಇಬ್ಬರು ಮಹಿಳೆಯರನ್ನು ಹತ್ಯೆ ಮಾಡಿ ರುಂಡ-ಮುಂಡವನ್ನು ಬೇರ್ಪ ಡಿಸಿ ನಾಲೆಗೆ ಬಿಸಾಕಿದ್ದ ಪ್ರಕರಣವನ್ನು ಭೇದಿಸಿ ರುವ ಮಂಡ್ಯ ಜಿಲ್ಲಾ ಪೊಲೀಸರು, ಸೀರಿಯಲ್ ಕಿಲ್ಲರ್ ಹಾಗೂ ಆತನ ಪ್ರೇಯಸಿಯನ್ನು ಬಂಧಿ ಸುವಲ್ಲಿ ಯಶಸ್ವಿಯಾಗಿದ್ದಾರೆ. ಪಾಂಡವಪುರ ಹಾಗೂ ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ನಾಲೆಗಳಲ್ಲಿ ಇಬ್ಬರು ಮಹಿಳೆಯರ ಮುಂಡ ಮಾತ್ರ ಕಳೆದ ಎರಡು ತಿಂಗಳ ಹಿಂದೆ ಪತ್ತೆಯಾಗಿತ್ತು. ಈ ಪ್ರಕರಣ ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಇಂಗ್ಲಿಷ್ ಪತ್ತೇದಾರಿ ಸಿನೆಮಾ `ಶೆರ್ಲಾಕ್ಸ್ ಹೋಮ್ಸ್’ನ ಹೀರೋನಂತೆ ಹಲವಾರು ಕ್ಲಿಷ್ಟಕರ ಪ್ರಕರಣ ಗಳನ್ನು…

ವರುಣಾರ್ಭಟಕ್ಕೆ ನಲುಗಿದ ಮಂಡ್ಯ
ಮಂಡ್ಯ

ವರುಣಾರ್ಭಟಕ್ಕೆ ನಲುಗಿದ ಮಂಡ್ಯ

August 3, 2022

ಮಂಡ್ಯ, ಆ.2- ಸೋಮವಾರ ರಾತ್ರಿ ಸುರಿದ ಕುಂಭದ್ರೋಣ ಮಳೆಗೆ ಸಕ್ಕರೆ ನಾಡು ಮಂಡ್ಯ ಅಕ್ಷರಶಃ ನಲುಗಿ ಹೋಗಿದ್ದು, ನಗರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಜಿಲ್ಲೆಯ ವಿವಿಧೆಡೆ ಮನೆಗಳಿಗೆ ನೀರು ನುಗ್ಗಿದ್ದು, ಜನರು ತತ್ತರಿಸಿದ್ದಾರೆ. ಮಂಡ್ಯದಲ್ಲಿ ಒಂದೇ ದಿನ ದಾಖಲೆಯ ಮಳೆಯಾಗಿದೆ. ನಿನ್ನೆ (ಸೋಮವಾರ) ರಾತ್ರಿ ಮಂಡ್ಯ ಜಿಲ್ಲೆಯಾದ್ಯಂತ 61.0 ಮಿಮೀ ಮಳೆಯಾಗಿದೆ. ನಗರದ ಹಲವೆಡೆ ಮನೆಗಳಿಗೆ ನೀರು ನುಗ್ಗಿ ದವಸ ಧಾನ್ಯ, ಬಟ್ಟೆಗಳು, ಪಾತ್ರೆ ಪಗಡೆಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳು ಸಂಪೂರ್ಣ ಹಾಳಾಗಿವೆ. ಅಲ್ಲದೆ, ಕುಟುಂಬಸ್ಥರು ಮಳೆಯ ನೀರನ್ನು ಮನೆಯಿಂದ…

1 2 3 4 5 108
Translate »