ಹುಣಸೂರು, ಮೇ 5(ಕೆಕೆ)-ಸಂಸದ ಪ್ರತಾಪ್ಸಿಂಹ ಅವರ ಶ್ರಮದ ಫಲವಾಗಿ ಹುಣಸೂರು ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಕೇಂದ್ರದಿಂದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 26. 87 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಜಿಲ್ಲಾ ಬಿಜೆಪಿ ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಯೋಗಾನಂದ ತಿಳಿಸಿದರು. ನಗರದ ಪತ್ರಿಕಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆದ ಅವರು, ಸಂಸದರು ತಾಲೂಕಿನಲ್ಲಿ ಪ್ರವಾಸ ಮಾಡಿ ಹದಗೆಟ್ಟಿದ್ದ ರಸ್ತೆಗಳನ್ನು ಗುರುತಿಸಿ, ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಸದ್ಯ ಇದಕ್ಕೆ ಅನುಮೋದನೆ ದೊರೆತು ಅನುದಾನ ಮಂಜುರಾಗಿದೆ. ತಾಲೂಕಿನ ಕಲ್ಲಹಳ್ಳಿ,…
ಆಟೋ ಚಾಲಕರು, ಕೂಲಿ ಕಾರ್ಮಿಕರಿಗೆ ಮಾಜಿ ಶಾಸಕ ಎಂಕೆಎಸ್ ದಿನಸಿ ಕಿಟ್ ವಿತರಣೆ
May 5, 2020ಮೈಸೂರು, ಮೇ 4(ಆರ್ಕೆಬಿ)- ಲಾಕ್ಡೌನ್ನಿಂದಾಗಿ ಸಂಕಷ್ಟದಲ್ಲಿರುವ ಕೂಲಿ ಕಾರ್ಮಿಕರಿಗೆ ನಿರಂತರವಾಗಿ ಆಹಾರ ಪೂರೈಸುತ್ತಿರುವ ಕೃಷ್ಣರಾಜ ಕ್ಷೇತ್ರದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಸೋಮವಾರವೂ ತಮ್ಮ 41ನೇ ದಿನದ ಕಾರ್ಯಕ್ರಮ ದಲ್ಲಿ ನೂರಾರು ಮಂದಿ ಬಡ ಕಾರ್ಮಿಕರಿಗೆ ದಿನಸಿ ಕಿಟ್ಗಳನ್ನು ವಿತರಿಸಿದರು. ಕುರು ಬಾರಹಳ್ಳಿ, ಜೆ.ಸಿ.ನಗರ ಆಟೋ ಚಾಲಕರಿಗೆ, ಬಡ ಕೂಲಿ ಕಾರ್ಮಿಕರಿಗೆ ಹಾಗೂ ಮನೆ ಕೆಲಸ ಮಾಡುವ ಮಹಿಳೆಯರಿಗೆ ಅಕ್ಕಿ, ತೊಗರಿಬೇಳೆ, ಉಪ್ಪು, ಅಡುಗೆ ಎಣ್ಣೆ, ರವೆ, ಗೋಧಿ ಹಿಟ್ಟು ಇನ್ನಿತರೆ ದಿನಸಿ ಪದಾರ್ಥಗಳಿರುವ ಕಿಟ್ ವಿತರಿಸಿದರು. ಈ…
ಅಶಕ್ತರಿಗೆ ಉಳ್ಳವರು ನೆರವಾಗಬೇಕು: ಶಾಸಕ ಎಂ.ಅಶ್ವಿನ್ಕುಮಾರ್
May 5, 2020ತಿ.ನರಸೀಪುರ, ಮೇ 4(ಎಸ್ಕೆ)-ಲಾಕ್ ಡೌನ್ನಿಂದ ಸಂಕಷ್ಟಕ್ಕೀಡಾಗಿರುವ ಅಶಕ್ತರಿಗೆ ಉಳ್ಳವರು ನೆರವಾಗಬೇಕು ಎಂದು ಶಾಸಕ ಎಂ.ಅಶ್ವಿನ್ಕುಮಾರ್ ಮನವಿ ನೀಡಿದರು. ಪಟ್ಟಣದ ಭಾರತ್ ಗ್ಯಾಸ್ ಏಜೆನ್ಸಿ ಯಿಂದ ಅಶಕ್ತರಿಗೆ ನೀಡಲಾಗುವ ದಿನಸಿ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ತಾಲೂಕು ಕಚೇರಿ ಮುಂಭಾಗ ಚಾಲನೆ ನೀಡಿ ಅವರು ಮಾತನಾಡಿದರು. ಕಳೆದ 50 ದಿನಗ ಳಿಂದಲೂ ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಬಡವರು, ಅಶಕ್ತರು ಹಾಗೂ ನಿರಾಶ್ರಿತರು ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ. ಅಲ್ಲದೆ ಬಹುತೇಕ ಬಡವರು ಕೂಲಿ ಕಾರ್ಮಿಕ ರಾಗಿರುವುದರಿಂದ ಕೆಲಸವಿಲ್ಲದೇ ಆರ್ಥಿಕ…
ದೇಗುಲ ನೌಕರರ ಸಂಘದ ಅಧ್ಯಕ್ಷರಿಂದ ದಿನಸಿ ವಿತರಣೆ
May 5, 2020ನಂಜನಗೂಡು ಮೇ 4(ರವಿ)-ನಗರದ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ನೌಕರರ ಸಂಘದ ಅಧ್ಯಕ್ಷ ಶ್ರೀಕಂಠ ಅವರು ಸೋಮವಾರ ದೇವಾಲಯದ 250 ಮಂದಿ ನೌಕರರಿಗೆ ದಿನಸಿ ಕಿಟ್ ವಿತರಿಸಿದರು. ನಂಜನಗೂಡಿನ ಶ್ರೀಕಂಠೇಶ್ವರ ದೇವಾ ಲಯದ ಮುಂಭಾಗ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ರೈತ ಸಂಘದ ಅಧ್ಯಕ್ಷ ವಿದ್ಯಾಸಾಗರ್, ಸಂಘದ ಅಧ್ಯಕ್ಷ ಶ್ರೀಕಂಠ ತನ್ನ ಉಳಿತಾಯದ ಹಣದಲ್ಲಿ ತಮ್ಮ ಸಹೋದ್ಯೋಗಿ-ನೌಕರ ರಿಗೆ ಸಂಕಷ್ಟ ಕಾಲದಲ್ಲಿ ದಿನಸಿ ಹಾಗೂ ಅಗತ್ಯ ವಸ್ತು ಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿ…
ನಂಜನಗೂಡಲ್ಲಿ ಮದ್ಯ ಖರೀದಿ ಜೋರು
May 5, 2020ನಂಜನಗೂಡು, ಮೇ 4 (ರವಿ)- ಸೋಮವಾರ ದಿಂದ ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಹಿನ್ನೆಲೆ ಯಲ್ಲಿ ನಂಜನಗೂಡು ನಗರದ ಮದ್ಯದ ಅಂಗಡಿ ಮಾಲೀಕರು ಪೂಜೆ ಸಲ್ಲಿಸಿ ವ್ಯಾಪಾರ ಆರಂಭಿಸಿದರೆ, ಸರತಿ ಸಾಲಿನಲ್ಲಿ ಕಾದು ಮದ್ಯಪ್ರಿಯರಿಗೆ ಮದ್ಯ ಖರೀದಿಸಿದರು. ಲಾಕ್ಡೌನ್ನಿಂದ ತಿಂಗಳಿಂದಲೂ ಮದ್ಯ ಪ್ರಿಯರಿಗೆ ಮದ್ಯ ಸಿಗದೆ ಚಿಂತಿತರಾಗಿದ್ದರು. ಇಂದಿನಿಂದ ಸರ್ಕಾರವೇ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದರಿಂದ ಬೆಳಿಗ್ಗೆಯಿಂದ ವೈನ್ ಶಾಪ್ಗಳ ಮುಂದೆ ಸರತಿಯಲ್ಲಿ ಸಾಗಿ ಮದ್ಯ ಖರೀದಿಸಿದ ಮದ್ಯ ಪ್ರಿಯರು ಬಾಟಲು ಗಳನ್ನು…
ಹುಣಸೂರಲ್ಲಿ ಲಾಕ್ಡೌನ್ ನಿರ್ಬಂಧ ಸಡಿಲಿಕೆ: ತಹಸೀಲ್ದಾರ್
May 5, 2020ಹುಣಸೂರು, ಮೇ 4(ಕೆಕೆ)-ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ದೇಶಾ ದ್ಯಂತ ವಿಧಿಸಿದ ಸತತ 42 ದಿನಗಳ ಲಾಕ್ ಡೌನ್ ನಿರ್ಬಂಧದ ಎರಡು ಹಂತ ಗಳನ್ನು ಮುಗಿಸಿ, ಸೋಮವಾರದಿಂದ ಮೂರನೇ ಹಂತ ಪ್ರಾರಂಭವಾಗಿದೆ. ಜಿಲ್ಲಾಡಳಿತದ ನಿರ್ದೇಶನದಂತೆ ಲಾಕ್ ಡೌನ್ ನಿರ್ಬಂಧದಲ್ಲಿ ಕೆಲ ಸಡಿಲಿಕೆ ಮಾಡಲಾಗಿದೆ ಎಂದು ತಹಸೀಲ್ದಾರ್ ಬಸವರಾಜು ಮಾಹಿತಿ ನೀಡಿದರು. ನಗರದ ತಾಪಂ ಸಭಾಂಗಣದಲ್ಲಿ ಇಂದು ತಾಲೂಕು ಮಟ್ಟದ ಅಧಿಕಾರಿಗಳ ಟಾಸ್ಕ್ ಫೋರ್ಸ್ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, 3ನೇ ಹಂತದ ಲಾಕ್ಡೌನ್ನಲ್ಲಿ ಸೊಂಕು ಹರಡ…
ಎತ್ತಿನಗಾಡಿ ಕೂಲಿ ಕಾರ್ಮಿಕರ ಸಂಘದಿಂದ ದಿನಸಿ ಕಿಟ್ ವಿತರಣೆ
May 5, 2020ತಿ.ನರಸೀಪುರ, ಮೇ 4(ಎಸ್ಕೆ)-ಕೊರೊನಾ ಸೋಂಕು ತಡೆಗಟ್ಟಲು ಹಗಲಿರುಳು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರು ಹಾಗೂ ದಾದಿಯರಿಗೆ ಎತ್ತಿನಗಾಡಿ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ತಿರುಮಕೂಡಲು ಪುಟ್ಟು ದಿನಸಿ ಕಿಟ್ ವಿತರಿಸಿದರು. ತಿರುಮಕೂಡಲಿನ ಮಂಟೇಸ್ವಾಮಿ ದೇವಸ್ಥಾನದ ಮುಂಭಾಗ ಕಿಟ್ಗಳನ್ನು ಗ್ರಾಮದ ಮುಖಂಡರ ಸಮ್ಮುಖದಲ್ಲಿ ವಿತರಿಸಿ ಮಾತನಾಡಿದ ಅವರು, ಕೊರೊನಾ ವಾರಿಯರ್ಸ್ಗಳಂತೆ ಇವರು ಸಲ್ಲಿಸಿರುವ ಸೇವೆ ಸ್ಮರಣೀಯ ಎಂದು ಶ್ಲಾಘಿಸಿದರು. ಸಮುದಾಯ ಆರೋಗ್ಯ ಅಧಿಕಾರಿ ಎಸ್. ರೂಪಶ್ರೀ ಮಾತನಾಡಿ, ಗ್ರಾಮದ ಮುಖಂಡರು ನಮ್ಮ ಆತ್ಮಸ್ಥೈರ್ಯ ಹೆಚ್ಚಿಸಲು ಆಹಾರದ ಕಿಟ್ ನೀಡಿ ಮಾನವೀಯತೆ…
ತಿ.ನರಸೀಪುರ ವಿವಿಧ ಗ್ರಾಮದ ಬಡವರಿಗೆ ದವಸ-ಧಾನ್ಯ ವಿತರಣೆ
May 4, 2020ತಿ.ನರಸೀಪುರ, ಮೇ 3(ಎಸ್ಕೆ)- ಸರ್ಕಾರಿ ಉದ್ಯೋಗಿಗಳು ಸೇರಿದಂತೆ ನಿವೃತ್ತ ನೌಕರರು, ಆರ್ಥಿಕ ಶಕ್ತಿಯುಳ್ಳವರು, ಗುತ್ತಿಗೆ ದಾರರು ಹಾಗೂ ಕಟ್ಟಡ ಕಾರ್ಮಿಕರ ನೆರವು ಪಡೆದು ಸಂಗ್ರಹಿಸಿದ್ದ ಆಹಾರ ಪದಾರ್ಥ ಗಳ ಕಿಟ್ ಹಾಗೂ ತರಕಾರಿಗಳನ್ನು ಲಾಕ್ ಡೌನ್ನಿಂದ ತೊಂದರೆಗೆ ಸಿಲುಕಿರುವ ಬಡವ ರಿಗೆ ಭಾನುವಾರ ಪಟ್ಟಣದ ಭೈರಾಪುರದ ಶ್ರೀ ರಾಚಪ್ಪಾಜಿ ದೇವಾಲಯದಲ್ಲಿ ಯಜ ಮಾನರು ಹಾಗೂ ಮುಖಂಡರು ವಿತರಿಸಿದರು. ಈ ವೇಳೆ ಮಾತನಾಡಿದ ಪುರಸಭಾ ಸದಸ್ಯ ಎಲ್.ಮಂಜುನಾಥ್, ಕೊರೊನಾ ಹಿನ್ನೆಲೆಯಲ್ಲಿ ಗ್ರಾಮದ ಜನತೆ ಸಂಕಷ್ಟಕ್ಕೀ ಡಾಗಿದ್ದು, ಲಾಕ್ಡೌನ್ ತೆರವಾಗುವವರೆಗೆ…
ಆಲದಮರಕ್ಕೆ ಮರುಜೀವ ನೀಡಿದ ಯುವ ಬ್ರಿಗೇಡ್
May 4, 2020ನಂಜನಗೂಡು, ಮೇ 3(ರವಿ)- ಹೆದ್ದಾರಿ ಕಾಮಗಾರಿಗಾಗಿ ಉರುಳಿಸ ಲಾಗಿದ್ದ ಬೃಹದಾಕಾರದ ಆಲದಮರಕ್ಕೆ ಯುವ ಬ್ರಿಗೆಡ್ ಕಾರ್ಯಕರ್ತರು ಮರು ಜೀವ ನೀಡಬೇಕೆಂಬ ಆಶಯ- ಶ್ರಮಕ್ಕೆ ಫಲ ದೊರೆತಿದ್ದು, ಬುಡ ಸಮೇತ ಸ್ಥಳಾಂ ತರಿಸಿ ಸಲಹಿದ ಪರಿಣಾಮ ಮರದಲ್ಲಿ ಎಲೆ ಗಳು ಚಿಗುರೊಡೆದು ಮೈತಳೆದು ನಿಂತಿದೆ. ನಂಜನಗೂಡು ತಾಲೂಕಿನ ಗೋಳೂರು ಸಮೀಪ ಜೇವರ್ಗಿ-ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ-150`ಎ’ ಅಭಿವೃದ್ಧಿ ಕಾಮಗಾರಿಗಾಗಿ ಇತ್ತೀಚೆಗೆ ರಸ್ತೆಬದಿಯಲ್ಲಿದ್ದ ಬೃಹತ್ ಆಲದಮರವನ್ನು ರೆಂಬೆ ಕೊಂಬೆ ಗಳನ್ನು ಕತ್ತರಿಸುವ ಮೂಲಕ ಬುಡ ಸಮೇತ ಉರುಳಿಸಲಾಗಿತ್ತು. ಇದನ್ನು ಕಂಡು ಮರುಗಿದ…
ಹಾವು ಕಚ್ಚಿ ರೈತ ಸಾವು
May 4, 2020ನಂಜನಗೂಡು, ಮೇ 3(ರವಿ)- ಹೆದ್ದಾರಿ ಕಾಮಗಾರಿಗಾಗಿ ಉರುಳಿಸ ಲಾಗಿದ್ದ ಬೃಹದಾಕಾರದ ಆಲದಮರಕ್ಕೆ ಯುವ ಬ್ರಿಗೆಡ್ ಕಾರ್ಯಕರ್ತರು ಮರು ಜೀವ ನೀಡಬೇಕೆಂಬ ಆಶಯ- ಶ್ರಮಕ್ಕೆ ¥ಮಲ್ಕುಂಡಿ, ಮೇ 3(ಚನ್ನಪ್ಪ)-ಹಾವು ಕಚ್ಚಿ ರೈತ ಸಾವನ್ನಪ್ಪಿ ರುವ ಘಟನೆ ಸಮೀಪ ದ ಎಂ.ಕೊಂಗಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಗ್ರಾಮದ ಚಿಕ್ಕಜವರೇಗೌಡ(50) ಮೃತರು. ಇವರು ತಮ್ಮ ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಹಾವು ಕಚ್ಚಿದೆ. ಪರಿಣಾಮ ತೀವ್ರ ಅಸ್ವಸ್ಥಗೊಂಡಿದ್ದಾರೆ. ವಿಷಯ ತಿಳಿದು ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ರೈತ ಚಿಕ್ಕಜವರೇಗೌಡ ಕೊನೆ…