ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನ ಕೃಷ್ಣರಾಜ ಬುಲೆವಾರ್ಡ್ ರಸ್ತೆಯಲ್ಲಿ ಶನಿವಾರ ಏರ್ಪಡಿಸಿದ್ದ ‘ಓಪನ್ ಸ್ಟ್ರೀಟ್ ಫೆಸ್ಟಿವಲ್’ನಲ್ಲಿ ಯುವ ಸಮುದಾಯದ್ದು ಸಂಭ್ರಮವೋ ಸಂಭ್ರಮ. ಈ ರಸ್ತೆಯಲ್ಲಿ ಪಾಶ್ಚಿಮಾತ್ಯ ಸಂಪ್ರದಾಯದ ಡಿಜೆ ಜೊತೆಗೆ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಜಾನಪದ ಕಲೆಯು ಅನಾವರಣಗೊಂಡು ಮೈಸೂರಿಗರು ಮಾತ್ರ ವಲ್ಲದೆ, ಪ್ರವಾಸಿಗರನ್ನು ಮುದಗೊಳಿಸಿತು. ಇಂದು ಬೆಳಿಗ್ಗೆ 7 ಗಂಟೆಗೆ ಓಪನ್ ಸ್ಟ್ರೀಟ್ ಫೆಸ್ಟಿವಲ್ ಆರಂಭವಾಯಿತಾದರೂ ಬೆಳಿಗ್ಗೆ 11 ಗಂಟೆಯ ನಂತರ ಸಂಪೂರ್ಣ ಕಳೆ ಕಟ್ಟಿತು. ಈ ರಸ್ತೆಯಲ್ಲಿ ಸೂಕ್ತ ಬೀದಿ ದೀಪ ವ್ಯವಸ್ಥೆ…
ಯುವ ದಸರಾದಲ್ಲಿ ಮುಂದುವರೆದ ಹಾಡು, ಕುಣಿತದ ಸಂಭ್ರಮ
October 14, 2018ಮೈಸೂರು: ಬಾಲಿವುಡ್ ಗಾಯಕರಾದ ಬಾದ್ಶಾ, ಅಸ್ಥ ಗಿಲ್ ಹಾಗೂ ವಿವಿಧ ತಂಡ ಗಳ ಸಂಗೀತ ಝೇಂಕಾರ ಯುವ ದಸರಾದ ರಂಗು ಹೆಚ್ಚಿಸಿತ್ತು.ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಯುವ ದಸರಾದ 2ನೇ ದಿನವಾದ ಶನಿವಾರ, ಪ್ರೇಕ್ಷಕರು ಕಿಕ್ಕಿರಿದಿದ್ದರು. ಮೈದಾನ ತುಂಬಿ, ಸುತ್ತಮುತ್ತಲಿನ ಸ್ಥಳಗಳಲ್ಲೂ ನಿಂತು ಕಾರ್ಯಕ್ರಮ ಸವಿದರು. ಬಾದ್ಶಾ ಹಾಗೂ ಅಸ್ಥ ಗಿಲ್ ಅವರ ಕಾರ್ಯಕ್ರಮ ತಡವಾಗಿ ಆರಂಭ ವಾದರೂ ಪ್ರೇಕ್ಷಕರು ಎತ್ತಲೂ ಕದಲದೆ ಕಾದು ಕುಳಿತಿದ್ದರು. ರಾತ್ರಿ ಸುಮಾರು 10 ಗಂಟೆಗೆ ವೇದಿಕೆ ಏರಿದ ಇವರು,…
ರಫೆಲ್ ಯುದ್ಧ ವಿಮಾನ ಖರೀದಿ: ರಿಲೆಯನ್ಸ್ ಕಂಪನಿ ಹಿತ ಕಾಯಲು ಎಚ್ಎಎಲ್ಗೆ ಕೇಂದ್ರ ಅವಮಾನ
October 14, 2018ಬೆಂಗಳೂರು: ಸಮರ ವಿಮಾನ ತಯಾರಿಕೆಯಲ್ಲಿ ಅನುಭವ ಹೊಂದಿದ ಸಾರ್ವಜನಿಕ ಸ್ವಾಮ್ಯದ ಎಚ್ಎಎಲ್ ಸಂಸ್ಥೆ ಹಿತವನ್ನು ಬಲಿಕೊಟ್ಟು, ಮುಳುಗುತ್ತಿದ್ದ ರಿಲೆಯನ್ಸ್ ಕಂಪನಿ ಮೇಲೆತ್ತಲು ರಫೆಲ್ ಯುದ್ಧ ವಿಮಾನ ಖರೀದಿಗೆ ಕೇಂದ್ರ ಸರ್ಕಾರ ಅವಕಾಶ ಮಾಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದಿಲ್ಲಿ ಬಲವಾದ ಆರೋಪ ಮಾಡಿದ್ದಾರೆ. ನಗರದ ಕಬ್ಬನ್ ಪಾರ್ಕ್ ಬದಿಯಲ್ಲಿನ ಮಿನ್ಸ್ ವೃತ್ತ ದಲ್ಲಿ ಎಚ್ಎಎಲ್ನ ಹಾಲಿ ಮತ್ತು ಮಾಜಿ ನೌಕರರ ಜೊತೆ ಸಂವಾದ ನಂತರ ಸುದ್ದಿಗಾರರೊಂದಿಗೆ ಪ್ರತ್ಯೇಕ ವಾಗಿ ಮಾತನಾಡಿದ ಅವರು, ಇಂತಹ ಒಪ್ಪಂದದಿಂದ…
ಇಂದು ದಸರಾ ಸಾಂಸ್ಕøತಿಕ ಮೆರವಣಿಗೆ
October 14, 2018ಮೈಸೂರು: ಇದೇ ಮೊದಲ ಬಾರಿಗೆ ಆಯೋಜಿಸಿರುವ ದಸರಾ ಸಾಂಸ್ಕøತಿಕ ಮೆರವಣಿಗೆಗೆ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರು ಅ.14ರಂದು ಮಧ್ಯಾಹ್ನ 2ಗಂಟೆಗೆ ಕೋಟೆ ಆಂಜ ನೇಯ ಸ್ವಾಮಿ ದೇವಸ್ಥಾನದ ಮುಂಭಾಗ ನಂದಿಧ್ವಜಕ್ಕೆ ಪೂಜೆ ನೆರವೇರಿಸುವರು.ಈ ಭವ್ಯ ಸಾಂಸ್ಕøತಿಕ ಮೆರವಣಿಗೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸುವರು. ಈ ಮೆರ ವಣಿಗೆಯಲ್ಲಿ ಆನೆಗಳು ಸೇರಿದಂತೆ ಹಲವು ಪ್ರಕಾರದ ಕಲಾ ಮತ್ತು ಜನಪದ ನೃತ್ಯ ತಂಡಗಳು, ಯುವ…
ಬಹುಮಾನಗಳನ್ನು ಬಾಚಿದ ಹುಣಸೂರು ತಾಲೂಕಿನ ರೈತರು
October 14, 2018ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ರೈತ ದಸರಾ ಉಪ ಸಮಿತಿ ಮೈಸೂರಿನ ಜೆ.ಕೆ.ಮೈದಾನದಲ್ಲಿ ಶನಿವಾರ ರೈತರಿಗಾಗಿ ಆಯೋಜಿಸಿದ್ದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಹುಣಸೂರು ತಾಲೂಕಿನ ರೈತರು ಹೆಚ್ಚಿನ ಬಹುಮಾನಗಳನ್ನು ಬಾಚಿಕೊಂಡಿದ್ದಾರೆ. ರೈತ ದಸರಾ ಉಪ ಸಮಿತಿ ಕಾರ್ಯಾಧ್ಯಕ್ಷರೂ ಆದ ಜಂಟಿ ಕೃಷಿ ನಿರ್ದೇಶಕ ಮಹಂತೇಶಪ್ಪ ನೇತೃತ್ವದಲ್ಲಿ ನಡೆದ ಕ್ರೀಡಾ ಸ್ಪರ್ಧೆಗಳಲ್ಲಿ ರೈತ ಪುರುಷರು, ಮಹಿಳೆಯರು ಗೆಲ್ಲಲೇಬೇಕೆಂಬ ಹಠದಲ್ಲಿ ಓಡಿದರು, ಬಿದ್ದು ಮತ್ತೆ ಎದ್ದು ಓಡಿದರು. 50 ಕೆ.ಜಿ ಗೊಬ್ಬರದ ಮೂಟೆ ಹೊತ್ತು ಓಡುವಾಗ ಸ್ಪರ್ಧಿಯೊಬ್ಬರು…
ಮೈಸೂರಲ್ಲಿ ಪ್ರವಾಸಿಗರ ಜಾತ್ರೆ ಎತ್ತ ನೋಡಿದರೂ ಟ್ರಾಫಿಕ್ ಜಾಮ್
October 14, 2018ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ದಿನೇ ದಿನೆ ಕಳೆ ಗಟ್ಟುತ್ತಿದ್ದು, 2ನೇ ಶನಿವಾರವಾದ ಇಂದು ಲಕ್ಷಾಂತರ ಪ್ರವಾಸಿಗರು ಲಗ್ಗೆ ಇಟ್ಟು ಮೈಸೂರಿನ ಸೊಬಗನ್ನು ಆಸ್ವಾದಿಸಿದ್ದಾರೆ. ಇದರ ಪರಿಣಾಮವಾಗಿ ಮೈಸೂರು ಹೃದಯ ಭಾಗ ಮಾತ್ರವಲ್ಲದೆ, ಹೊರವಲಯದಲ್ಲೂ ಕೂಡ ಸಂಚಾರ ದಟ್ಟಣೆ ಮಿತಿ ಮೀರಿತ್ತು. ಇಂದು ಬೆಳಿಗ್ಗೆಯಿಂದಲೇ ಓಪನ್ ಸ್ಟ್ರೀಟ್ ಫೆಸ್ಟಿವಲ್ ಕಾರಣದಿಂದಾಗಿ ಕೃಷ್ಣರಾಜ ಬುಲೆ ವಾರ್ಡ್ ರಸ್ತೆ ಪ್ರವಾಸಿಗರೂ ಮತ್ತು ಸ್ಥಳೀಯರಿಂದ ಕಿಕ್ಕಿರಿದು ತುಂಬಿತ್ತು. ಸಂಜೆಯ ನಂತರ ಇದೇ ರಸ್ತೆಯಲ್ಲಿರುವ ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾ…
ದಸರಾ ಯೋಗ ಚಾರಣಕ್ಕೆ ಉತ್ತಮ ಪ್ರತಿಕ್ರಿಯೆ
October 14, 2018ಮೈಸೂರು: ಯೋಗ ದಸರಾ ಉಪಸಮಿತಿಯಿಂದ ಇಂದು ಏರ್ಪಡಿಸಿದ್ದ ಯೋಗ ಚಾರಣ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹಾಗೂ ಯೋಗಪಟುಗಳಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು. ಇಂದು ಬೆಳಿಗ್ಗೆ 6.10 ಗಂಟೆಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಆರಂಭವಾದ ಯೋಗ ಚಾರಣ ಬೆಟ್ಟ ಹತ್ತುವ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಹಸಿರು ನಿಶಾನೆ ತೋರಿಸಿದರು. ನಂತರ ಸಚಿವರು, ಯೋಗ ಶಿಕ್ಷಣ ಸಂಸ್ಥೆಗಳ ಪ್ರಮುಖರು, ಯೋಗ ಶಿಕ್ಷಕರು, ಯೋಗಪಟುಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳೂ ಸೇರಿ ಸುಮಾರು 1 ಸಾವಿರ ಮಂದಿಯೊಂದಿಗೆ ಮೆಟ್ಟಿಲುಗಳ ಮೂಲಕ…
ಆಗಸದಲ್ಲಿ ಮೈಸೂರು ಪ್ರದಕ್ಷಿಣೆ ‘ಹೆಲಿ ರೈಡ್’ ಆರಂಭ
October 14, 2018ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ನಗರದ ಸೌಂದರ್ಯವನ್ನು ಆಗಸದಿಂದ ಕಣ್ತುಂಬಿಕೊಳ್ಳಲು ಸ್ಥಳೀಯರು ಹಾಗೂ ಪ್ರವಾಸಿಗರಿಗೆ ಸದವಕಾಶವನ್ನು ಪ್ರವಾಸೋದ್ಯಮ ಇಲಾಖೆ ಕಲ್ಪಿಸಿದ್ದು, 2399 ರೂ. ಪಾವತಿಸಿ ಲಲಿತಮಹಲ್ ಹೆಲಿಪ್ಯಾಡ್ನಿಂದ 10 ನಿಮಿಷಗಳ ಕಾಲ ಆಗಸದಲ್ಲಿ ಮೈಸೂರು ಪ್ರದಕ್ಷಿಣೆ ಹಾಕಬಹುದು. ಕಳೆದ ಕೆಲ ವರ್ಷದಿಂದ ದಸರಾ ಮಹೋತ್ಸವದಲ್ಲಿ ಹೆಲಿ ಕಾಪ್ಟರ್ ರೈಡ್ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಸಾರ್ವಜನಿಕರು ಹಾಗೂ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದಿನಿಂದ ಅ.19ರವರೆಗೆ ಎರಡು ಹೆಲಿಕಾಪ್ಟರ್ ಗಳು ಮೈಸೂರಿನ ಸೌಂದರ್ಯವನ್ನು ಪ್ರವಾಸಿಗರು ಹಾಗೂ ಸ್ಥಳೀಯರಿಗೆ…
ಮೊದಲ 3 ಸ್ಥಾನ ಗಳಿಸಿದ ಮಹಿಳಾ ಕುಸ್ತಿಪಟುಗಳಿಗೆ ತಲಾ 10 ಸಾವಿರ ನಗದು ಬಹುಮಾನ
October 14, 2018ಮೈಸೂರು: ದಸರಾ ಮಹಿಳಾ ಕುಸ್ತಿಯ ಎಲ್ಲಾ ವಿಭಾಗಗಳಲ್ಲಿ ಮೊದಲ 3 ಸ್ಥಾನಗಳನ್ನು ಪಡೆದ ಸ್ಪರ್ಧಿ ಗಳಿಗೆ ತಲಾ 10 ಸಾವಿರ ರೂ. ನಗದು ಬಹುಮಾನ ನೀಡಲಾಗು ವುದು ಎಂದು ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾ ಮೂರ್ತಿ ಪ್ರಕಟಿಸಿದರು. ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮಹಿಳೆಯರ ರಾಜ್ಯಮಟ್ಟದ ಪಾಯಿಂಟ್ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕುಸ್ತಿಯಲ್ಲಿ ಗೆಲುವು ಪಡೆದವರ ವಿಳಾಸ ಮತ್ತು ಇತರ ಮಾಹಿತಿಗಳನ್ನು ಕಳುಹಿಸಿಕೊಡುವಂತೆ ಸಂಘಟಕರಿಗೆ ಸೂಚಿಸಿದರಲ್ಲದೆ, ಮಹಿಳಾ ಕುಸ್ತಿಪಟುಗಳಿಗೆ ಉತ್ತೇಜನ…
ಇಂದು ಸಂಜೆ ಅರಮನೆ ಆವರಣದಲ್ಲಿ ಪೊಲೀಸ್ ಸಮೂಹ ವಾದ್ಯಮೇಳ
October 14, 2018ಮೈಸೂರು: ದಸರಾ ಮಹೋತ್ಸವದ ಅಂಗ ವಾಗಿ ನಾಳೆ(ಅ.14) ಮೈಸೂರಿನ ಅರಮನೆ ಆವರಣದಲ್ಲಿ ಪೊಲೀಸ್ ಸಮೂಹ ವಾದ್ಯಮೇಳ(ಒಚಿss ಃಚಿಟಿಜ) ನಡೆಯಲಿದೆ. ಭಾನುವಾರ ಸಂಜೆ 6ರಿಂದ ರಾತ್ರಿ 8 ಗಂಟೆವರೆಗೆ ನಡೆಯಲಿರುವ ಪೊಲೀಸ್ ಸಮೂಹ ವಾದ್ಯಮೇಳದಲ್ಲಿ ಗೃಹಮಂತ್ರಿಗಳೂ ಆದ ಉಪಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್ ಮುಖ್ಯ ಅತಿಥಿಗಳಾಗಿ ಭಾಗವಹಿಸು ತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋ ದ್ಯಮ ಸಚಿವ ಸಾ.ರಾ.ಮಹೇಶ್ ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು ಭಾಗವಹಿಸುವರು. ಜುಗಲ್ಬಂದಿ, ಕರ್ನಾಟಕ ಮತ್ತು ಇಂಗ್ಲೀಷ್ ಬ್ಯಾಂಡ್ ವಾದನ…