ಮೈಸೂರು ದಸರಾ

ದಸರಾ ಕ್ರೀಡಾಕೂಟ: ಕಬಡ್ಡಿಯಲ್ಲಿ ವಿಜಯ ಬ್ಯಾಂಕ್, ಬೆಂಗಳೂರು ಕೇಶವ ಸ್ಪೋಟ್ರ್ಸ್ ಕ್ಲಬ್ ಚಾಂಪಿಯನ್ಸ್
ಮೈಸೂರು, ಮೈಸೂರು ದಸರಾ

ದಸರಾ ಕ್ರೀಡಾಕೂಟ: ಕಬಡ್ಡಿಯಲ್ಲಿ ವಿಜಯ ಬ್ಯಾಂಕ್, ಬೆಂಗಳೂರು ಕೇಶವ ಸ್ಪೋಟ್ರ್ಸ್ ಕ್ಲಬ್ ಚಾಂಪಿಯನ್ಸ್

October 14, 2018

ಮೈಸೂರು:  ಚಾಮುಂಡಿ ವಿಹಾರ ಕ್ರೀಡಾಂಗಣ ದಲ್ಲಿ ಶನಿವಾರ ನಡೆದ ಕಬಡ್ಡಿ ಪಂದ್ಯದಲ್ಲಿ ವಿಜಯ ಬ್ಯಾಂಕ್ ಮತ್ತು ಬೆಂಗಳೂರಿನ ಕೇಶವ ಸ್ಪೋರ್ಟ್ಸ್ ಕ್ಲಬ್ ತಂಡಗಳು ಕ್ರಮವಾಗಿ ಪುರುಷ- ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದವು. ಪುರುಷರ ವಿಭಾಗ: ಫೈನಲ್‍ನಲ್ಲಿ ವಿಜಯ ಬ್ಯಾಂಕ್ ತಂಡವು ಹೆಚ್‍ಎಎಲ್ ತಂಡವನ್ನು 29-17ರಿಂದ ಮಣಿಸಿತು. ಮೊದಲಾರ್ಧದಲ್ಲಿ 19-11ರಲ್ಲಿ ಮುನ್ನಡೆ ಸಾಧಿಸಿದ್ದ ವಿಜಯಿ ತಂಡಕ್ಕೆ ರೋಹಿತ್ ಮಾರ್ಲ ಹೆಚ್ಚು ಪಾಯಿಂಟ್‍ಗಳನ್ನು ತಂದುಕೊಟ್ಟರು. 3ನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಎಎಸ್‍ಸಿ ತಂಡವು ಕೊಡಗು ತಂಡವನ್ನು 42-25ರಿಂದ ಸೋಲಿಸಿತು….

ಬಗೆ ಬಗೆ ತಿಂಡಿ ತಿನಿಸುಗಳ ಸ್ಪರ್ಧೆ, ಪ್ರತ್ಯಕ್ಷ ಪ್ರಾತಕ್ಷಿಕೆ
ಮೈಸೂರು, ಮೈಸೂರು ದಸರಾ

ಬಗೆ ಬಗೆ ತಿಂಡಿ ತಿನಿಸುಗಳ ಸ್ಪರ್ಧೆ, ಪ್ರತ್ಯಕ್ಷ ಪ್ರಾತಕ್ಷಿಕೆ

October 14, 2018

ಮೈಸೂರು: ರುಚಿಯಾದ ವೆಜ್‍ಪ್ರೈಡ್ ರೈಸ್ ಮತ್ತು ಸಲಾಡ್ ತಯಾರಿಸಿದ ಯುವಕರಿಗೆ ಪ್ಲೇಟ್ ಪಾನಿ ಪೂರಿಯನ್ನು ಕೆಲವೇ ನಿಮಿಷದಲ್ಲಿ ಗುಳುಂ ಮಾಡಿ ಸೆಡ್ಡು ಹೊಡೆದ ನಾರಿಯರು. ಆಹಾರ ಮೇಳದ ಅಂಗಳದಲ್ಲಿ ಮೋಡಿ ಮಾಡಿದ ಸಿಹಿಕಹಿ ಚಂದ್ರು ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು. ನಗರದ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಆಹಾರ ಮೇಳ ಉಪಸಮಿತಿ ವತಿಯಿಂದ ಆಯೋಜಿಸಿದ್ದ ವೆಜ್‍ಪ್ರೈಡ್ ರೈಸ್ ಮತ್ತು ಸಲಾಡ್ ತಯಾರಿಸುವ ಸ್ಪರ್ಧೆ, ಪಾನಿಪೂರಿ ತಿನ್ನುವ ಸ್ಪರ್ಧೆ ಹಾಗೂ ಅಡುಗೆ ತಯಾರಿಕೆ ಪ್ರತ್ಯಕ್ಷ ಪಾತಕ್ಷಿಕೆಯಲ್ಲಿ…

ಮೆಗಾ ಇವೆಂಟ್ ಯುವ ದಸರಾಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ
ಮೈಸೂರು, ಮೈಸೂರು ದಸರಾ

ಮೆಗಾ ಇವೆಂಟ್ ಯುವ ದಸರಾಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ

October 13, 2018

ಮೈಸೂರು:  ಮೈಸೂರು ದಸರಾ ಮಹೋತ್ಸವದಲ್ಲಿ ಯುವ ಸಮೂಹ ವನ್ನು ಒಗ್ಗೂಡಿಸಿ ರಸದೌತಣ ನೀಡುವ ಸಂಭ್ರಮದ `ಯುವ ದಸರಾ’ಗೆ ಶುಕ್ರವಾರ ಮುಖ್ಯಮಂತ್ರಿ ಕುಮಾರಸ್ವಾಮಿ, ವಿದ್ಯುಕ್ತ ಚಾಲನೆ ನೀಡಿದರು. ಮೈಸೂರಿನ ಮಹಾರಾಜ ಕಾಲೇಜು ಮೈದಾನದ ಭವ್ಯ ವೇದಿಕೆಯಲ್ಲಿ ಇಂದಿನಿಂದ ಅ.17ರವರೆಗೆ ನಡೆಯಲಿರುವ `ಯುವ ದಸರಾ’ಗೆ ದೀಪ ಬೆಳಗುವ ಮೂಲಕ ಚಾಲನೆ ನೀಡಿದ ಸಿಎಂ ಕುಮಾರ ಸ್ವಾಮಿ, ತಾಯಿ ಚಾಮುಂಡೇಶ್ವರಿ ನಾಡಿನ ಎಲ್ಲಾ ಕುಟುಂಬಗಳಿಗೆ ಒಳಿತು ಮಾಡಲಿ ಎಂದು ಪ್ರಾರ್ಥಿಸಿ, ದಸರಾ ಹಬ್ಬದ ಶುಭಾಶಯ ಕೋರಿದರು. ಉನ್ನತ ಶಿಕ್ಷಣ ಸಚಿವರೂ ಆದ…

ನಾಳೆ ಮೈಸೂರಲ್ಲಿ ದಸರಾ ಏರ್ ಷೋ
ಮೈಸೂರು, ಮೈಸೂರು ದಸರಾ

ನಾಳೆ ಮೈಸೂರಲ್ಲಿ ದಸರಾ ಏರ್ ಷೋ

October 13, 2018

ಮೈಸೂರು: ದಸರಾ ಮಹೋತ್ಸವದ ಆಕರ್ಷಣೆಗಳಲ್ಲೊಂದಾದ ಏರ್ ಷೋ ಭಾನುವಾರ ಬೆಳಿಗ್ಗೆ 11 ಗಂಟೆಗೆ ಮೈಸೂರಿನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆಯಲಿದೆ. ಭಾರತೀಯ ವಾಯುದಳ (Indian Air Force) ಏರ್ ಷೋ ನಡೆಸಲು ಗ್ರೀನ್ ಸಿಗ್ನಲ್ ನೀಡಿದ್ದು, ನಾಳೆ (ಅ.13) ಬೆಳಿಗ್ಗೆ 11 ಗಂಟೆಗೆ ಬನ್ನಿಮಂಟಪದ ಟಾರ್ಚ್‍ಲೈಟ್ ಪರೇಡ್ ಮೈದಾನದಲ್ಲಿ ಏರ್ ಷೋ ತಾಲೀಮು ನಡೆಯಲಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ. ಭಾನುವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಪೂರ್ಣ ಪ್ರಮಾಣದ ಪ್ರದರ್ಶನದಲ್ಲಿ ಪೆಟಲ್…

ರೈತ ದಸರಾ: ಜೋಡೆತ್ತಿನ ಗಾಡಿಯಲ್ಲಿ ಅನ್ನದಾತನ ಅದ್ಧೂರಿ ಮೆರವಣಿಗೆ
ಮೈಸೂರು, ಮೈಸೂರು ದಸರಾ

ರೈತ ದಸರಾ: ಜೋಡೆತ್ತಿನ ಗಾಡಿಯಲ್ಲಿ ಅನ್ನದಾತನ ಅದ್ಧೂರಿ ಮೆರವಣಿಗೆ

October 13, 2018

ಮೈಸೂರು:  ದಸರಾ ಅಂಗವಾಗಿ ರೈತ ದಸರಾ ಉಪ ಸಮಿತಿ ವತಿಯಿಂದ ಶುಕ್ರವಾರ ರೈತ ದಸರಾ ಮೆರವಣಿಗೆ ಮೈಸೂರಿನಲ್ಲಿ ಅದ್ಧೂರಿಯಿಂದ ನಡೆಯಿತು. ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ರೈತರು ಸಂಭ್ರಮ ದಿಂದ ಪಾಲ್ಗೊಂಡಿದ್ದರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರೊಂದಿಗೆ ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ, ಮೈಸೂರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ, ಬಳಿಕ ನಗಾರಿ ಬಾರಿಸುವ ಮೂಲಕ ಅದ್ಧೂರಿ ರೈತ ದಸರಾ ಮೆರವಣಿಗೆಯನ್ನು…

ಮೈಸೂರು ದಸರೆಗೆ ಹೈಟೆಕ್ ಮೊಬೈಲ್ ಕಮಾಂಡ್ ಭದ್ರತೆ
ಮೈಸೂರು, ಮೈಸೂರು ದಸರಾ

ಮೈಸೂರು ದಸರೆಗೆ ಹೈಟೆಕ್ ಮೊಬೈಲ್ ಕಮಾಂಡ್ ಭದ್ರತೆ

October 13, 2018

ಮೈಸೂರು: ಈ ಬಾರಿ ದಸರೆಗೆ ಭಾರೀ ಬಿಗಿ ಭದ್ರತೆ ಮಾಡಿರುವ ಪೊಲೀಸರು, ಮೊದಲ ಬಾರಿಗೆ ಹೈಟೆಕ್ ಮೊಬೈಲ್ ಕಮಾಂಡ್ ಕಣ್ಗಾವಲು ವ್ಯವಸ್ಥೆಯೊಂದಿಗೆ ಕಟ್ಟೆಚ್ಚರ ವಹಿಸಿದ್ದಾರೆ. ಲಕ್ಷಾಂತರ ಮಂದಿ ಒಂದೆಡೆ ಸೇರುವ ಸ್ಥಳದಲ್ಲಿ ಉಂಟಾಗುವ ಅಹಿತಕರ ಘಟನೆಗಳ ನಿಯಂತ್ರಿಸಿ, ನಿರ್ವಹಣೆ ಮಾಡುವ ಸಲುವಾಗಿ ಕಳೆದ 5 ತಿಂಗಳ ಹಿಂದೆ ಸರ್ಕಾರ ಮೈಸೂರು ನಗರಕ್ಕೆ ಮೊಬೈಲ್ ಕಮಾಂಡ್ ಸೆಂಟರ್ ಹೈಟೆಕ್ ಸಾಧನಗಳನ್ನು ಹೊಂದಿರುವ ವಾಹನವನ್ನು ನೀಡಿದೆ. ಈ ವಾಹನವು ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸಿಎಆರ್ ಮೈದಾನದಲ್ಲಿರುತ್ತದೆ. ಗಣ್ಯರ ಸಮಾವೇಶಗಳು, ರಾಜಕೀಯ…

ಮೈಸೂರಿನ 13 ಕಡೆ ದಸರಾ ಯೋಗ ಪ್ರದರ್ಶನ
ಮೈಸೂರು, ಮೈಸೂರು ದಸರಾ

ಮೈಸೂರಿನ 13 ಕಡೆ ದಸರಾ ಯೋಗ ಪ್ರದರ್ಶನ

October 13, 2018

ಮೈಸೂರು:  ಬೆಳಂಬೆಳಿಗ್ಗೆಯ ಪ್ರಶಾಂತಮಯ ವಾತಾವರಣದಲ್ಲಿ ನಾನಾ ಯೋಗಾಸನ ಭಂಗಿಗಳನ್ನು ಪ್ರದರ್ಶಿ ಸಿದ ನೂರಾರು ಮಂದಿ ಯೋಗದ ಮಹತ್ವವನ್ನು ಸಾರಿದರು. ಏಕ ಕಾಲದಲ್ಲಿ ಮೈಸೂರು ನಗರದ 13 ಸ್ಥಳಗಳಲ್ಲಿ ಪ್ರತ್ಯೇಕವಾಗಿ ಯೋಗಾ ಸನ ಪ್ರದರ್ಶಿಸಿಸುವ ವಿನೂತನ ಕಾರ್ಯಕ್ರಮವನ್ನು ಈ ಬಾರಿಯ ದಸರಾ ಮಹೋತ್ಸವ ಅಂಗವಾಗಿ ಯೋಗ ದಸರಾ ಉಪಸಮಿತಿ ವತಿ ಯಿಂದ ಆಯೋಜಿಸಿದ್ದು, ಇದಕ್ಕೆ ಶುಕ್ರವಾರ ಚಾಲನೆ ಪಡೆಯಿತು. ಮೈಸೂರಿನ ಕುವೆಂಪುನಗರದ ಸೌಗಂಧಿಕ ಉದ್ಯಾನವನದಲ್ಲಿ ಇಂದು ಬೆಳಿಗ್ಗೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ…

ತೆರೆದ ಬಸ್‍ನಲ್ಲಿ ಸಿಎಂ ಕುಮಾರಸ್ವಾಮಿ ದಸರಾ ದರ್ಶನ
ಮೈಸೂರು, ಮೈಸೂರು ದಸರಾ

ತೆರೆದ ಬಸ್‍ನಲ್ಲಿ ಸಿಎಂ ಕುಮಾರಸ್ವಾಮಿ ದಸರಾ ದರ್ಶನ

October 13, 2018

ಮೈಸೂರು:  ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತೆರೆದ ಬಸ್ (ಓಪನ್ ಟಾಪ್ ಬಸ್)ನಲ್ಲಿ ಮೈಸೂರು ಸುತ್ತು ಹಾಕಿ, ದೀಪಾಲಂಕಾರವನ್ನು ಕಣ್ತುಂಬಿ ಕೊಂಡರಲ್ಲದೆ, ಮಹಾರಾಜ  ಮೈದಾನದವರೆಗೂ ಅದೇ ಬಸ್‍ನಲ್ಲಿ ತೆರಳಿ, ಯುವ ದಸರಾ ಉದ್ಘಾಟಿಸಿದರು. ಸರ್ಕಾರಿ ಅತಿಥಿ ಗೃಹದಿಂದ ಇರ್ವಿನ್ ರಸ್ತೆ, ಸಯ್ಯಾಜಿರಾವ್ ರಸ್ತೆ, ಕೆ.ಆರ್.ವೃತ್ತ, ಚಾಮರಾಜ ಒಡೆಯರ್ ವೃತ್ತ, ಜಯ ಚಾಮರಾಜ ಒಡೆಯರ್ ವೃತ್ತ, ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಕಾಲೇಜುವೃತ್ತ(ಗನ್‍ಹೌಸ್), ಚಾಮರಾಜ ನೂರಡಿ ಜೋಡಿ ರಸ್ತೆ, ರಾಮ ಸ್ವಾಮಿ ವೃತ್ತದ ಮೂಲಕ ಮಹಾರಾಜ ಕಾಲೇಜು ಮೈದಾನಕ್ಕೆ ತೆರೆದ ಬಸ್‍ನಲ್ಲಿ…

ಪುಟಾಣಿಗಳ ಹಾಡು, ಕುಣಿತ: ನೆರೆದವರ ಕಣ್ಣಿಗೆ ಹಬ್ಬ
ಮೈಸೂರು, ಮೈಸೂರು ದಸರಾ

ಪುಟಾಣಿಗಳ ಹಾಡು, ಕುಣಿತ: ನೆರೆದವರ ಕಣ್ಣಿಗೆ ಹಬ್ಬ

October 13, 2018

ಮೈಸೂರು:  ದೊಡ್ಡ ವೇದಿಕೆಯಲ್ಲಿ ಪುಟಾಣಿಗಳ ಕಲರವ, ಚಿಣ್ಣರ ನೃತ್ಯೋತ್ಸವಕ್ಕೆ ಮನಸೋತ ಪ್ರೇಕ್ಷಕರು ಸಿಳ್ಳೆ, ಚಪ್ಪಾಳೆ ಮೂಲಕ ಪ್ರೋತ್ಸಾಹ ನೀಡಿದರು. ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ ಜೆಕೆ ಮೈದಾನದಲ್ಲಿ ಆಯೋಜಿಸಿದ್ದ ಚಿಣ್ಣರ ಮೇಳದಲ್ಲಿ ವಿಶೇಷ ಉಡುಗೆ ತೊಟ್ಟ ಚಿಣ್ಣರು ಜಾನಪದ, ಸಿನಿಮಾ ಹಾಡುಗಳಿಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರೆ, ಪ್ರೇಕ್ಷಕರು ಮಕ್ಕಳ ನೃತ್ಯವನ್ನು ಕಣ್ತುಂಬಿಕೊಂಡು ಸಂತೋಷಪಟ್ಟರು. ಮೊದಲಿಗೆ ಬಿಳಿಕೆರೆ ತಂಡವು ‘ಚನ್ನಪ್ಪ ಚನ್ನೇಗೌಡ ಕುಂಬಾರ ಮಾಡಿದ ಕೊಡನವ್ವ’ ಜಾನಪದ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಎಲ್ಲರ ಮೆಚ್ಚುಗೆ…

ಮೈಸೂರಿನ ವಿವಿಧ ವೇದಿಕೆಗಳಲ್ಲಿ ನಾನಾ ರೀತಿಯ ಸಂಗೀತ ಸಂಭ್ರಮ
ಮೈಸೂರು, ಮೈಸೂರು ದಸರಾ

ಮೈಸೂರಿನ ವಿವಿಧ ವೇದಿಕೆಗಳಲ್ಲಿ ನಾನಾ ರೀತಿಯ ಸಂಗೀತ ಸಂಭ್ರಮ

October 13, 2018

ಮೈಸೂರು: ಮೈಸೂರು ಅರಮನೆ ವೇದಿಕೆಯಲ್ಲಿ ಬೆಂಗಳೂರಿನ ಮಂಜುಳಾ ಪರಮೇಶ್ ನೇತೃತ್ವದ ತಂಡ ಪ್ರಸ್ತುತಪಡಿಸಿದ ಸಮೂಹ ಗೀತೆಗಳ `ನೃತ್ಯ ರೂಪಕ’ ಪ್ರೇಕ್ಷಕರ ಮನಸೂರೆಗೊಂಡಿತು. ದಸರಾ ಮಹೋತ್ಸವದ ಅಂಗವಾಗಿ ಮೈಸೂರು ಅರಮನೆ ವೇದಿಕೆ ಸೇರಿದಂತೆ ನಗರದ ವಿವಿಧ ವೇದಿಕೆಗಳಲ್ಲಿ ಆಯೋಜಿಸಿದ್ದ 3ನೇ ದಿನದ ವಿವಿಧ ಸಾಂಸ್ಕøತಿಕ ಕಾರ್ಯ ಕ್ರಮಗಳು ಪ್ರೇಕ್ಷಕರ ಮನ ಸೆಳೆದವು. ಅರಮನೆ ವೇದಿಕೆ ಯಲ್ಲಿ ಮೊದಲಿಗೆ ವಿನಾಯಕನ ಕುರಿತಾದ ನೃತ್ಯ, ಮಹಿಷಾ ಮರ್ಧಿನಿ ನೃತ್ಯ, ಕೆ.ಎಸ್. ನರ ಸಿಂಹಸ್ವಾಮಿ ರಚಿತ ದೀಪವು ನನ್ನದೇ, ಗಾಳಿಯು ನಿನ್ನದೇ ಹಾಡಿಗೆ…

1 3 4 5 6 7 9
Translate »