ಮೈಸೂರು ದಸರಾ

ಮೈಸೂರಿಗೆ ಲಗ್ಗೆಯಿಟ್ಟಿದ್ದಾರೆ ದೇಶದ  ನಾನಾ ಭಾಗದ ವ್ಯಾಪಾರಿಗಳು
ಮೈಸೂರು, ಮೈಸೂರು ದಸರಾ

ಮೈಸೂರಿಗೆ ಲಗ್ಗೆಯಿಟ್ಟಿದ್ದಾರೆ ದೇಶದ  ನಾನಾ ಭಾಗದ ವ್ಯಾಪಾರಿಗಳು

October 13, 2018

ಮೈಸೂರು: ನಾಡಹಬ್ಬ ಬಂತೆಂದರೆ ಸಾಂಸ್ಕೃತಿಕ ನಗರಿ ಕಳೆ ಕಟ್ಟುತ್ತದೆ. ವಿವಿಧೆಡೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು, ದೀಪಾಲಂಕಾರ ಮೆರಗು ನೀಡಿದರೆ, ವಿವಿಧೆಡೆಗಳಿಂದ ಆಗಮಿಸಿರುವ ನಾನಾ ರೀತಿಯ ಆಟಿಕೆಗಳ ಮಾರಾಟಗಾರರು ಹಬ್ಬದ ವೈಭವವನ್ನು ಮತ್ತಷ್ಟು ಹೆಚ್ಚಿಸುತ್ತಿದ್ದಾರೆ. ಪ್ರತಿ ವರ್ಷ ನವರಾತ್ರಿಯ ಹಿನ್ನೆಲೆಯಲ್ಲಿ ನಡೆಯಲಿರುವ ಕಾರ್ಯಕ್ರಮಗಳ ಸ್ಥಳಗಳು, ಜನದಟ್ಟಣೆ ಇರುವ ರಸ್ತೆಗಳಲ್ಲಿ ಬಲೂನು, ಪೀಪಿ, ಮುಖವಾಡ, ಆಟಿಕೆಗಳು, ಹೇರ್ ಬ್ಯಾಂಡ್, ಕೈ ಬಂದಿ ಸೇರಿದಂತೆ ವಿವಿಧ ವಸ್ತುಗಳನ್ನು ಮಾರಾಟ ಮಾಡಲೆಂದು ದೂರ ದೂರದ ಊರುಗಳಿಂದ ವ್ಯಾಪಾರಿಗಳು ಆಗಮಿಸಿದ್ದಾರೆ. ಪ್ರತಿ ವರ್ಷದಂತೆ ಈ…

ಮೈಸೂರಲ್ಲಿ ಗಮನ ಸೆಳೆದ ದಸರಾ ಕರಾಟೆ ಮ್ಯಾರಥಾನ್
ಮೈಸೂರು, ಮೈಸೂರು ದಸರಾ

ಮೈಸೂರಲ್ಲಿ ಗಮನ ಸೆಳೆದ ದಸರಾ ಕರಾಟೆ ಮ್ಯಾರಥಾನ್

October 13, 2018

ಮೈಸೂರು:  ದಸರಾ ಅಂಗವಾಗಿ ಮೈಸೂರು ಕರಾಟೆ ಅಸೋಸಿ ಯೇಷನ್ ವತಿಯಿಂದ ಶುಕ್ರವಾರ ಮೈಸೂ ರಿನಲ್ಲಿ ದಸರಾ ಕರಾಟೆ ಮ್ಯಾರಥಾನ್ ನಡೆಸ ಲಾಯಿತು. ರಾಮಸ್ವಾಮಿ ವೃತ್ತದಿಂದ ಚಾಮರಾಜ ಜೋಡಿ ರಸ್ತೆ, ಗನ್‍ಹೌಸ್ ಮೂಲಕ ಮೈಸೂರು ಅರಮನೆ ಆವರಣ ದವರೆಗೆ ನೂರಾರು ಕರಾಟೆ ಪಟುಗಳು ಓಡಿದರು. ದಸರಾ ಸಂಭ್ರಮದಲ್ಲಿ ತಾವು ಭಾಗವಹಿಸಿರುವುದಾಗಿ ತಿಳಿಸಿದರು. ಬಳಿಕ ಅರಮನೆ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಕರಾಟೆ ಮ್ಯಾರಥಾನ್ ನಲ್ಲಿ ಜಯಗಳಿಸಿದ ಕ್ರಮವಾಗಿ ವಿಜೇತ ರಾದ ಲೋಕೇಶ್, ಕಿಶಲಿಯಾ ಹಾಗೂ ಧಮ ಕಟ್ಟಿ ಅವರಿಗೆ ಕ್ರಮವಾಗಿ…

ನಾಟಿ ಕೋಳಿ ಸಾರಲ್ಲಿ ಮುದ್ದೆ ಉಣ್ಣುವಲ್ಲಿ  ಶ್ರೀರಂಗಪಟ್ಟಣದ ಕೌಶಿಕ್ ತ್ರಿವಿಕ್ರಮ
ಮೈಸೂರು, ಮೈಸೂರು ದಸರಾ

ನಾಟಿ ಕೋಳಿ ಸಾರಲ್ಲಿ ಮುದ್ದೆ ಉಣ್ಣುವಲ್ಲಿ ಶ್ರೀರಂಗಪಟ್ಟಣದ ಕೌಶಿಕ್ ತ್ರಿವಿಕ್ರಮ

October 13, 2018

ಮೈಸೂರು:  ಆಹಾರ ಉಪ ಸಮಿತಿ ವತಿಯಿಂದ ಆಯೋಜಿಸಿದ್ದ ನಾಟಿ ಕೋಳಿ ಸಾರು-ಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಶ್ರೀರಂಗಪಟ್ಟಣದ ಕೌಶಿಕ್ ಪ್ರಥಮ ಬಹುಮಾನ ಪಡೆದುಕೊಂಡರು. ನಗರದ ಸ್ಕೌಟ್ಸ್ ಹಾಗೂ ಗೈಡ್ಸ್ ಮೈದಾನದಲ್ಲಿ ಆಯೋಜಿಸಿರುವ ಆಹಾರ ಮೇಳದಲ್ಲಿ ಶುಕ್ರವಾರ ಪುರುಷರಿಗಾಗಿ ಆಯೋಜಿಸಿದ್ದ ನಾಟಿಕೋಳಿ ಸಾರು-ಮುದ್ದೆ ಉಣ್ಣುವ ಸ್ಪರ್ಧೆ ನಡೆಯಿತು. ಪ್ರತಿ ಸ್ಪರ್ಧಿಗಳಿಗೆ ಒಂದೂವರೆ ಕೆ.ಜಿ ತೂಕದ 4 ಮುದ್ದೆಗಳನ್ನು ನೀಡಲಾಗಿತ್ತು. ಸ್ಪರ್ಧೆ ಆರಂಭವಾಗುತ್ತಿದ್ದಂತೆ ತಮ್ಮ ಮುಂದಿಟ್ಟಿದ್ದ ಮುದ್ದೆಗಳನ್ನು ಬಿರುಸಾಗಿ ನುಂಗಲು ಕೆಲವರು ಪರದಾಡಿದರೆ, ಮತ್ತೆ ಕೆಲವರು ಸರಾಗವಾಗಿ ತಿಂದು ಮುಗಿಸಿದರು. ಈ…

ದಸರಾ ಕವಿಗೋಷ್ಠಿಗೆ ನಾಡೋಜ ಡಾ.ಹಂಪ ನಾಗರಾಜಯ್ಯ ಚಾಲನೆ
ಮೈಸೂರು, ಮೈಸೂರು ದಸರಾ

ದಸರಾ ಕವಿಗೋಷ್ಠಿಗೆ ನಾಡೋಜ ಡಾ.ಹಂಪ ನಾಗರಾಜಯ್ಯ ಚಾಲನೆ

October 13, 2018

ಮೈಸೂರು:  `ನಾಜೂಕಿನ ನಾರಿ ಜನಜಂಗುಳಿ ಇರುವಲ್ಲಿ ಮೈ ತೋರಿ… ಗಾಳಿಗೂ ಎದುರಿ ತುಳುಕುವಳು ಮಾದ ಕತೆಯ ಬೀರಿ…’ ಈ ರೀತಿ ತಮ್ಮದೇ ಕವನವನ್ನು ವಾಚಿಸುವ ಮೂಲಕ ಹಿರಿಯ ಸಾಹಿತಿ ನಾಡೋಜ ಡಾ.ಹಂಪ ನಾಗರಾಜಯ್ಯ ಸಭಿಕ ರನ್ನು ನಗೆಗಡಲಲ್ಲಿ ತೇಲಿಸಿ ಚಂದುಳ್ಳಿ ಚೆಲುವೆಯೂ ಸಭಾಂ ಗಣದಲ್ಲಿ ಸುಳಿದಾಡುವಂತೆ ಮಾಡಿ ಪುಳಕವಿಟ್ಟರು. ಮೈಸೂರಿನ ಮಾನಸ ಗಂಗೋತ್ರಿಯ ಮೈಸೂರು ವಿವಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶುಕ್ರವಾರ ದಸರಾ ಕವಿಗೋಷ್ಠಿ ಉಪ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮೂರು ದಿನಗಳ ಕಾಲ ನಡೆಯುವ…

ದಸರಾ ಕುಸ್ತಿಯಲ್ಲಿ ಪಾರದರ್ಶಕತೆ ಇಲ್ಲ
ಮೈಸೂರು, ಮೈಸೂರು ದಸರಾ

ದಸರಾ ಕುಸ್ತಿಯಲ್ಲಿ ಪಾರದರ್ಶಕತೆ ಇಲ್ಲ

October 13, 2018

ಮೈಸೂರು: ಮೈಸೂರು ಕುಸ್ತಿಯೆಂದರೆ ರಾಜ್ಯದ ಕುಸ್ತಿ ಕುಲಬಾಂಧವರಿಗೆಲ್ಲಾ ಹಬ್ಬವಿದ್ದಂತೆ. ಆದರೆ, ವರ್ಷ ದಿಂದ ದಸರಾ ಕುಸ್ತಿಯಲ್ಲಿ ಪಾರದರ್ಶಕತೆ ಕಡಿಮೆಯಾಗಿದ್ದು, ಇದರಿಂದ ಕುಸ್ತಿಪಟುಗಳ ಸಂಖ್ಯೆಯೂ ಕಡಿಮೆಯಾಗಿದೆ ಎಂದು ಅಂತಾರಾಷ್ಟ್ರೀಯ ಮಾಜಿ ಕುಸ್ತಿಪಟು ಬೆಳ ಗಾವಿಯ ಪೈ.ರತನ್ ಮಠಪತಿ ಬೇಸರ ವ್ಯಕ್ತಪಡಿಸಿದರು. ಡಿ.ದೇವರಾಜ ಅರಸು ವಿವಿ ಧೋದ್ದೇಶ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ರಾಜ್ಯಮಟ್ಟದ ಗ್ರೀಕೊ ರೋಮನ್ ಕುಸ್ತಿ ಪಂದ್ಯಾವಳಿಯ 63 ಕೆಜಿ ವಿಭಾಗದ ಕುಸ್ತಿ ನಡೆಯುವ ವೇಳೆ ತೀರ್ಪುಗಾರರು 2 ಅಂಕ ನೀಡುವ ಬದಲಾಗಿ 4 ಅಂಕಗಳನ್ನು ನೀಡಿದರು. ಈ…

ಇಂದಿನಿಂದ ದಸರಾ ಮೆಗಾ  ಇವೆಂಟ್ `ಯುವ ದಸರಾ’
ಮೈಸೂರು, ಮೈಸೂರು ದಸರಾ

ಇಂದಿನಿಂದ ದಸರಾ ಮೆಗಾ  ಇವೆಂಟ್ `ಯುವ ದಸರಾ’

October 12, 2018

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಸಾಂಸ್ಕೃತಿಕ ಹಾಗೂ ಯುವ ಸಮುದಾಯದ ಬಹು ನಿರೀಕ್ಷಿತ ಕಾರ್ಯಕ್ರಮವೂ ಆಗಿರುವ ಯುವ ದಸರಾ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಾಳೆ (ಅ.12) ಸಂಜೆಯಿಂದ ಆರಂಭವಾಗಿ ಅ.17ರವರೆಗೆ ನಡೆಯಲಿದೆ ಎಂದು ದಸರಾ ಉಪ ವಿಶೇಷಾಧಿಕಾರಿಗಳೂ ಆದ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ತಿಳಿಸಿದ್ದಾರೆ. ಯುವ ದಸರಾ ನಡೆಯಲಿರುವ ಮಹಾರಾಜ ಕಾಲೇಜು ಮೈದಾನದಲ್ಲಿ ಗುರುವಾರ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಸಾಲಿನ ಯುವ ದಸರಾ ಕಾರ್ಯಕ್ರಮವನ್ನು…

ರೂ.999ರಲ್ಲಿ ಮೈಸೂರು-ಬೆಂಗಳೂರು ವಿಮಾನ ಪ್ರಯಾಣ
ಮೈಸೂರು, ಮೈಸೂರು ದಸರಾ

ರೂ.999ರಲ್ಲಿ ಮೈಸೂರು-ಬೆಂಗಳೂರು ವಿಮಾನ ಪ್ರಯಾಣ

October 12, 2018

ಮೈಸೂರು:  ನಾಡಹಬ್ಬ ದಸರಾ ಮಹೋತ್ಸವಕ್ಕೆ ಆಗಮಿಸುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ರಾಜ್ಯ ಪ್ರವಾಸೋದ್ಯಮ ಇಲಾಖೆ `ಆಕಾಶ ಅಂಬಾರಿ’ ವಿಮಾನ ಸೇವೆ ಆರಂಭಿಸಿದ್ದು, ಗುರುವಾರ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಈ ವಿಮಾನದಲ್ಲಿ ಪ್ರಯಾಣಿಸುವುದರೊಂದಿಗೆ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ `ಆಕಾಶ ಅಂಬಾರಿ’ಯಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸುವ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಾ.ರಾ.ಮಹೇಶ್, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಬರುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆ,…

ಮೈಸೂರಲ್ಲಿ ಸಾಂಪ್ರದಾಯಿಕ ಉಡುಗೆ-ತೊಡುಗೆಯೊಂದಿಗೆ ಪಾರಂಪರಿಕ ನಡಿಗೆ
ಮೈಸೂರು, ಮೈಸೂರು ದಸರಾ

ಮೈಸೂರಲ್ಲಿ ಸಾಂಪ್ರದಾಯಿಕ ಉಡುಗೆ-ತೊಡುಗೆಯೊಂದಿಗೆ ಪಾರಂಪರಿಕ ನಡಿಗೆ

October 12, 2018

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗುರುವಾರ ದಸರಾ ಮಹೋತ್ಸವದ ಹಿನ್ನೆಲೆ ಯಲ್ಲಿ ಏರ್ಪಡಿಸಿದ್ದ ಪಾರಂಪರಿಕ ನಡಿಗೆಯಲ್ಲಿ ಸಾರ್ವಜನಿಕರಲ್ಲದೆ ಪ್ರವಾಸಿಗರು, ವಿದ್ಯಾರ್ಥಿಗಳು ನೂರಾರು ಮಂದಿ ಸಾಂಪ್ರದಾಯಿಕ ಉಡುಗೆ-ತೊಡುಗೆ ತೊಟ್ಟು, ಪಾರಂಪರಿಕ ಕಟ್ಟಡಗಳನ್ನು ವೀಕ್ಷಿಸುವುದರೊಂದಿಗೆ ಕುತೂಹಲದಿಂದ ಅವುಗಳ ಇತಿಹಾಸ ಕೇಳಿ ಅರಿತರು. ನಾಡಹಬ್ಬದ ಅಂಗವಾಗಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಪಾರಂಪರಿಕ ನಡಿಗೆಯನ್ನು ಇಂದು ಬೆಳಿಗ್ಗೆ ಪುರಭವನದ ಆವರಣದಲ್ಲಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹಸಿರು ನಿಶಾನೆ ತೋರಿದರು. ಶರ್ಟ್, ಪಂಚೆ ಧರಿಸಿ ಆಗಮಿ ಸಿದ್ದ ಸಚಿವರು…

ಮೈಸೂರು ದಸರಾ ಮಹೋತ್ಸವ-2018: ವಿವಿಧ ವೇದಿಕೆಯಲ್ಲಿ ವಿಭಿನ್ನ ಸಂಗೀತ ಗಾಯನ, ನೃತ್ಯ ರಸದೌತಣ
ಮೈಸೂರು, ಮೈಸೂರು ದಸರಾ

ಮೈಸೂರು ದಸರಾ ಮಹೋತ್ಸವ-2018: ವಿವಿಧ ವೇದಿಕೆಯಲ್ಲಿ ವಿಭಿನ್ನ ಸಂಗೀತ ಗಾಯನ, ನೃತ್ಯ ರಸದೌತಣ

October 12, 2018

ಮೈಸೂರು:  ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮೈಸೂರು ಅರಮನೆ ವೇದಿಕೆ ಸೇರಿದಂತೆ ನಗರದ ವಿವಿಧ ವೇದಿಕೆಗಳಲ್ಲಿ ಆಯೋಜಿಸಿದ್ದ 2ನೇ ದಿನದ ಸಾಂಸ್ಕøತಿಕ ಕಾರ್ಯಕ್ರಮ ಗಳು ಪ್ರವಾಸಿಗರ ಮನಸೂರೆಗೊಂಡವು. ಮೈಸೂರು ಅಂಬಾವಿಲಾಸ ಅರಮನೆ ಮುಂಭಾಗದ ವೇದಿಕೆಯಲ್ಲಿ ವಿದ್ವಾನ್ ಎ.ವಿ.ದತ್ತಾತ್ರೇಯ ತಂಡದಿಂದ ಶಾಸ್ತ್ರೀಯ ಮ್ಯಾಂಡೋಲಿನ್ ವಾದನ, ಕೊಳಲು ವಾದಕ ಸಮೀರ್‍ರಾವ್ ಮತ್ತು ವಂಶಿಧರ್ ನಡೆಸಿಕೊಟ್ಟ ಕೊಳಲು ವಾದನದ ಜುಗಲ್ ಬಂದಿ, ಬೆಂಗಳೂರಿನ ಗಾಯಕ ರವಿ ಮುರೂರು ಮತ್ತು ನಾಗಚಂದ್ರಿಕ ಭಟ್ ನಡೆಸಿ ಕೊಟ್ಟ ಗೀತಾಗಾಯನ ಹಾಗೂ ನೃತ್ಯ ಕಲಾವಿದೆ…

ಗನ್‍ಹೌಸ್ ಆವರಣದಲ್ಲಿ ಮತ್ತೊಂದು ‘ಆಹಾರ ಮೇಳ’
ಮೈಸೂರು, ಮೈಸೂರು ದಸರಾ

ಗನ್‍ಹೌಸ್ ಆವರಣದಲ್ಲಿ ಮತ್ತೊಂದು ‘ಆಹಾರ ಮೇಳ’

October 12, 2018

ಮೈಸೂರು:  ನಾಡ ಹಬ್ಬ ದಸರಾ ಅಂಗವಾಗಿ ಎರಡು ಕಡೆ ಆಹಾರ ಮೇಳದ ಆಯೋಜಿಸಿದ್ದು, ಆಹಾರ ಪ್ರಿಯರಿಗೆ ಇನ್ನಷ್ಟು ಖಾದ್ಯಗಳನ್ನು ಉಣಬಡಿಸಲು ಗನ್‍ಹೌಸ್ ಆವರಣ ದಲ್ಲೂ ಆಹಾರ ಮೇಳಕ್ಕೆ ಚಾಲನೆ ನೀಡಲಾಯಿತು. ನಾಗಾರ್ಜುನ್ ಗ್ರೂಪ್ ವತಿಯಿಂದ ಆಯೋಜಿಸಿರುವ ಆಹಾರಮೇಳಕ್ಕೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಚಾಲನೆ ನೀಡಿದರು. ಕೋಡಿಮಠದ ಶಿವಯೋಗಿ ಶಿವಾನಂದ ಸ್ವಾಮೀಜಿ, ಸಾಯಿ ಅವಧೂತ ಅರ್ಜುನ್ ಗುರೂಜಿ, ಮಾಜಿ ಸಚಿವ ಎ.ಮಂಜು, ಶಾಸಕ ಎಸ್.ಎ.ರಾಮದಾಸ್, ನಗರ ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ನಾಗಾರ್ಜುನ್ ಗ್ರೂಪ್‍ನ ಮುಖ್ಯಸ್ಥೆ ಸುನಂದ ಗಿರೀಶ್ ಉಪಸ್ಥಿತರಿದ್ದರು….

1 4 5 6 7 8 9
Translate »