ಮೈಸೂರು

ಇನ್‍ಫೋಸಿಸ್ ನಾರಾಯಣಮೂರ್ತಿ-ಡಾ.ಸುಧಾಮೂರ್ತಿ 800 ರೂ.ಗಳ ಯಶಸ್ವಿ ದಾಂಪತ್ಯ!!
ಮೈಸೂರು

ಇನ್‍ಫೋಸಿಸ್ ನಾರಾಯಣಮೂರ್ತಿ-ಡಾ.ಸುಧಾಮೂರ್ತಿ 800 ರೂ.ಗಳ ಯಶಸ್ವಿ ದಾಂಪತ್ಯ!!

February 3, 2019

ಸುತ್ತೂರು: ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಡಾ.ಸುಧಾಮೂರ್ತಿ ತಮ್ಮ ದಾಂಪತ್ಯ ಜೀವನ ಆರಂಭದ ಅಪರೂಪ ಕ್ಷಣಗಳ ವಿವರಿಸಿದರು. ಹೆಣ್ಣು ಹುಟ್ಟಿದ ತಕ್ಷಣ ಅಪ್ಪ-ಅಮ್ಮ ಯೋಚನೆ ಮಾಡುತ್ತಾರೆ. ಮಗಳಿಗೆ ಮದುವೆ ಮಾಡಲು ಹಣ ಹೊಂದಿಸುವುದು ಹೇಗಪ್ಪಾ, ಬೇರೆ ಮಕ್ಕಳ ಓದನ್ನು ನಿಲ್ಲಿಸಿಯಾದ್ರು ಮದುವೆ ಮಾಡುತ್ತಾರೆ. ಅದರಲ್ಲೂ ಅದ್ಧೂರಿ ಮದುವೆಗೆ ಮುಂದಾಗುತ್ತಾರೆ. ಅದ್ಧೂರಿ ಹಾಗೂ ಆಡಂಬರದ ಮದುವೆಯಿಂದ ಆರ್ಥಿಕ ಸಮಸ್ಯೆಗೆ ಸಾಮಾನ್ಯ ಜನರು ತುತ್ತಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಸಾಮೂಹಿಕ, ಸರಳ ವಿವಾಹಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು…

ಶಾಲಾ ವಿದ್ಯಾರ್ಥಿಗಳ ಅದ್ಭುತ ಮಾದರಿಗಳು ಅಚ್ಚರಿ ಮೂಡಿಸುತ್ತಿವೆ!
ಮೈಸೂರು

ಶಾಲಾ ವಿದ್ಯಾರ್ಥಿಗಳ ಅದ್ಭುತ ಮಾದರಿಗಳು ಅಚ್ಚರಿ ಮೂಡಿಸುತ್ತಿವೆ!

February 3, 2019

ಸುತ್ತೂರು: ಶಿವರಾತ್ರೀಶ್ವರ ಶಿವ ಯೋಗಿಗಳವರ ಜಾತ್ರಾ ಮಹೋತ್ಸವ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಜೆಎಸ್‍ಎಸ್ ಸಾಮಾನ್ಯ ಶಿಕ್ಷಣ ವಿಭಾಗದ ವತಿಯಿಂದ ಏರ್ಪಡಿಸಲಾಗಿರುವ ಶೈಕ್ಷಣಿಕ ಹಾಗೂ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಒಟ್ಟು 10 ವಿಭಾಗಗಳಲ್ಲಿ 152 ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದ್ದಾರೆ. ಅವುಗಳಲ್ಲಿ ಸುತ್ತೂರು ಶಾಲೆಯ ವಿದ್ಯಾರ್ಥಿಗಳು, ತಾವು ತಯಾರಿಸಿರುವ ರಾಕೆಟ್ (ಪಿ.ಎಸ್.ಎಲ್.ವಿ) ಉಡಾವಣೆ ಮತ್ತು ಅದರ ಉಪಯೋಗವನ್ನು ತಿಳಿಸಿ ದರು. ಅಜ್ಜೀಪುರ ಶಾಲೆಯ ವಿದ್ಯಾರ್ಥಿ ಗಳು ಸ್ವಯಂಚಾಲಿತ ಬೀದಿದೀಪ ಮಾದ ರಿಯ ಮೂಲಕ ಸಮಯದ ಉಳಿತಾಯ ಹಾಗೂ ಶಕ್ತಿಯ ಅಪವ್ಯಯ ತಪ್ಪಿಸು…

ಎಲ್ಲಾ ಕುಟುಂಬಕ್ಕೂ ಸೂರು ಕಲ್ಪಿಸುವುದು ಮೋದಿ ಕನಸು
ಮೈಸೂರು

ಎಲ್ಲಾ ಕುಟುಂಬಕ್ಕೂ ಸೂರು ಕಲ್ಪಿಸುವುದು ಮೋದಿ ಕನಸು

February 2, 2019

ಹುಣಸೂರು: ಎರಡು ಸಾವಿರದ ಇಪ್ಪತ್ತೆರಡಕ್ಕೆÉ್ಕ ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸುವ ವಜ್ರ ಮಹೋತ್ಸವದ ಅಚರಣೆ ಸಂದರ್ಭದಲ್ಲಿ ದೇಶದಲ್ಲಿನ ಯಾವುದೇ ಕುಟುಂಬಗಳು ಸ್ವಂತ ಸೂರಿನಿಂದ ವಂಚಿತರಾಗಿರಬಾರದು ಎಂಬುದು ಪ್ರಧಾನಿ ಮೋದಿ ಅವರ ಕನಸಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಅವಾಸ್ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಸಂಸದ ಪ್ರತಾಪ್‍ಸಿಂಹ ತಿಳಿಸಿದರು. ನಗರದ ಪೌರಕಾರ್ಮಿಕರ ಕಾಲೋನಿಯಲ್ಲಿ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಲಿಯಿಂದ ನಗರದ ಪೌರಕಾರ್ಮಿಕರ ಕಾಲೋನಿ, ಸರಸ್ವತಿಪುರಂ, ರೆಹಮತ್ ಮೊಹಲ್ಲಾ…

ಆದಾಯ ತೆರಿಗೆ ಮಿತಿ 5ಲಕ್ಷಕ್ಕೆ ಏರಿಕೆ
ಮೈಸೂರು

ಆದಾಯ ತೆರಿಗೆ ಮಿತಿ 5ಲಕ್ಷಕ್ಕೆ ಏರಿಕೆ

February 2, 2019

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ, ಮಧ್ಯಮ ವರ್ಗದವರು, ರೈತರು, ಮಹಿಳೆಯರು, ಅಸಂಘಟಿತ ವಲಯದ ಶ್ರಮಿಕರ ಓಲೈಕೆಗೆ 5 ವರ್ಷಗಳ ಆಡಳಿತದ ಕೊನೆಯ ಓವರ್‍ನಲ್ಲಿ ಭರ್ಜರಿ ಸಿಕ್ಸರ್‍ಗಳನ್ನೇ ಸಿಡಿಸಿದೆ. ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಿಸುವಂತೆ ಬಹಳ ಕಾಲದಿಂದ ಕೇಳುತ್ತಲೇ ಇದ್ದ ಮಧ್ಯಮ ವರ್ಗದವರಿಗೆ ಭರಪೂರ ಕೊಡುಗೆಯನ್ನೇ ನೀಡಲಾಗಿದೆ. ಅರುಣ್ ಜೇಟ್ಲಿ ಅವರಿಗೆ ಬದಲಿಯಾಗಿ ತಾತ್ಕಾಲಿಕವಾಗಿ ಕೇಂದ್ರ ಹಣಕಾಸು ಹೊಣೆ ಹೊತ್ತಿರುವ ಪಿಯೂಷ್ ಗೋಯಲ್ ಅವರು ಶುಕ್ರವಾರ ಮಂಡಿಸಿದ ಈ ಮಧ್ಯಂತರ ಬಜೆಟ್‍ನಲ್ಲಿ ಕೃಷಿ…

ಸುತ್ತೂರು ಜಾತ್ರಾ ಮಹೋತ್ಸವ ಆರಂಭ
ಮೈಸೂರು

ಸುತ್ತೂರು ಜಾತ್ರಾ ಮಹೋತ್ಸವ ಆರಂಭ

February 2, 2019

ಮೈಸೂರು:ಶ್ರೀಮತ್ಸುತ್ತೂರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಸಂಸ್ಥಾಪನಾಚಾರ್ಯ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವವು ಮೈಸೂರು ಜಿಲ್ಲೆ, ಸುತ್ತೂರು ಶ್ರೀ ಕ್ಷೇತ್ರದಲ್ಲಿ ಇಂದಿನಿಂದ ಆರಂಭವಾಯಿತು. ಫೆಬ್ರವರಿ 6ರವರೆಗೆ ನಡೆ ಯಲಿರುವ ಜಾತ್ರಾ ಮಹೋತ್ಸವವನ್ನು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಜಗದ್ಗುರು ಡಾ.ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳು ಇಂದು ಸುತ್ತೂರು ಶ್ರೀ ಕ್ಷೇತ್ರದಲ್ಲಿ ಉದ್ಘಾಟಿಸಿದರು. ಸುತ್ತೂರು ಮಠಾಧೀಶ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ತಿರುವಂತನಪುರದ ಶಿವಗಿರಿ ಮಠದ ಅಧ್ಯಕ್ಷ ಶ್ರೀ ಸ್ವಾಮಿ ವಿಶುದ್ದಾ ನಂದಜೀ, ಆದಿಚುಂಚನಗಿರಿ ಮೈಸೂರು ಶಾಖಾ…

ಕೊನೆಗೂ ನರಭಕ್ಷಕ ಹುಲಿ ಸೆರೆ
ಮೈಸೂರು

ಕೊನೆಗೂ ನರಭಕ್ಷಕ ಹುಲಿ ಸೆರೆ

February 2, 2019

ಹೆಚ್.ಡಿ.ಕೋಟೆ: ತಾಲೂಕಿನ ನಾಗರಹೊಳೆ ಅಭಯಾರಣ್ಯದ ಡಿ.ಬಿ.ಕುಪ್ಪೆ ಕಾಡಂಚಿನ ಗ್ರಾಮಗಳಲ್ಲಿ ಮೂವರನ್ನು ಬಲಿ ಪಡೆದಿದ್ದ ನರ ಭಕ್ಷಕ ಹುಲಿಯನ್ನು ಇಂದು ಮಧ್ಯಾಹ್ನ ಸೇಬಿನಕೊಲ್ಲಿ ಎಂಬಲ್ಲಿ ಸೆರೆ ಹಿಡಿಯುವಲ್ಲಿ ಅರಣ್ಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಮೊದಲು ಮಾನಿಮೂಲೆ ಹಾಡಿಯ ಮಧು ಎಂಬಾತನನ್ನು ಬಲಿ ಪಡೆದಿದ್ದ ವ್ಯಾಘ್ರ, ಜ.28ರಂದು ಹುಲ್ಮಟ್ಟು ಗ್ರಾಮದ ಚಿನ್ನಪ್ಪ ಮತ್ತು ಜ.31ರಂದು ಸಂಜೆ ಹೊಸೂರು ಹಾಡಿಯ ಕೆಂಚ ಅವರನ್ನು ಕೊಂದು ಹಾಕಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆಯಿಂದ ಹೆಚ್ಚಿನ ಸಿಬ್ಬಂದಿಯೊಂದಿಗೆ ಹುಲಿ ಸೆರೆ ಕಾರ್ಯಾಚರಣೆಯನ್ನು ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ…

ಮೈಸೂರಲ್ಲಿ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಆಚರಣೆ
ಮೈಸೂರು

ಮೈಸೂರಲ್ಲಿ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಆಚರಣೆ

February 2, 2019

ಮೈಸೂರು: ಸಮಾಜದ ಕಟ್ಟ ಕಡೆಯ ಸಮುದಾಯಗಳಲ್ಲಿ ಒಂದಾಗಿರುವ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ, ಸಾಮಾ ಜಿಕ ನ್ಯಾಯ ಕಲ್ಪಿಸಿಕೊಡುವ ಅಗತ್ಯವಿದ್ದು, ಈ ಸಂಬಂಧ ಮುಖ್ಯಮಂತಿಗಳ ಗಮ ನಕ್ಕೆ ತರುವುದಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಭರವಸೆ ನೀಡಿದ್ದಾರೆ. ಮೈಸೂರಿನ ಕಲಾಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಶ್ರೀ ಮಡಿವಾಳ ಮಾಚಿ ದೇವರ ಜಯಂತ್ಯೋತ್ಸವ ಸಮಿತಿ ಸಂಯು ಕ್ತಾಶ್ರಯದಲ್ಲಿ ನಡೆದ `ಶ್ರೀ ಮಡಿವಾಳ ಮಾಚಿದೇವರ ಜಯಂತಿ’…

ಮೈಸೂರು ವಾರಿಯರ್ಸ್-ಕಲಿಸು ಫೌಂಡೇಶನ್  ಸಹಯೋಗದಲ್ಲಿ 6ನೇ ಜ್ಞಾನಾಲಯ
ಮೈಸೂರು

ಮೈಸೂರು ವಾರಿಯರ್ಸ್-ಕಲಿಸು ಫೌಂಡೇಶನ್ ಸಹಯೋಗದಲ್ಲಿ 6ನೇ ಜ್ಞಾನಾಲಯ

February 2, 2019

ಮೈಸೂರು: ಎನ್‍ಆರ್ ಸಮೂ ಹದ ಒಡೆತನದ ಕೆಪಿಎಲ್ ತಂಡವಾಗಿ ರುವ ಮೈಸೂರು ವಾರಿಯರ್ಸ್, ಕಲಿಸು ಫೌಂಡೇಶನ್ ಸಹಯೋಗದೊಂದಿಗೆ ಹುಡ್ಕೊ ಬನ್ನಿಮಂಟಪ ಶಾಲೆಯಲ್ಲಿ ಆರನೇ ಜ್ಞಾನಾಲಯ ಆರಂಭಿಸಿದೆ. ಈ ಜ್ಞಾನಾಲಯದ ಪರಿಕಲ್ಪನೆಯಲ್ಲಿ ಮೈಸೂರು ವಾರಿಯರ್ಸ್ ತಂಡದೊಂ ದಿಗೆ ಕಲಿಸು ಫೌಂಡೇಶನ್ ಕೂಡ ಪ್ರಮುಖ ಪಾತ್ರ ವಹಿಸಿದೆ. ನೂತನ ಜ್ಞಾನ ಕೇಂದ್ರ ವನ್ನು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರು ವಾರಿಯರ್ಸ್‍ನ ಮಾಲೀಕರೂ ಆದ ಎನ್‍ಆರ್ ಸಮೂ ಹದ ಪಾಲುದಾರ ಪವನ್‍ರಂಗ ಉದ್ಘಾ ಟಿಸಿದರು. ಕಲಿಸು ಫೌಂಡೇಶನ್ ಸಿಇಒ ನಿಖಿಲೇಶ…

ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಇಳುವರಿ ವೃದ್ಧಿಸಿ: ಶ್ರೀ ನಿರ್ಮಲಾನಂದ ಸ್ವಾಮೀಜಿ ಸಲಹೆ
ಮೈಸೂರು

ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಇಳುವರಿ ವೃದ್ಧಿಸಿ: ಶ್ರೀ ನಿರ್ಮಲಾನಂದ ಸ್ವಾಮೀಜಿ ಸಲಹೆ

February 2, 2019

ಮೈಸೂರು: ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಬೆಳೆಯ ಇಳುವರಿ ಹೆಚ್ಚಿಸಿಕೊಳ್ಳುವ ಮೂಲಕ ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳು ವಂತೆ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಜಗದ್ಗುರು ಶ್ರೀ ನಿರ್ಮಲಾನಂದ ಮಹಾ ಸ್ವಾಮೀಜಿ ಅವರು ರೈತರಿಗೆ ಸಲಹೆ ನೀಡಿದ್ದಾರೆ. ಮೈಸೂರು ಜಿಲ್ಲೆ ಸುತ್ತೂರಿನಲ್ಲಿ ಇಂದು ಆರಂಭಗೊಂಡ ಆದಿ ಜಗದ್ಗುರು ಶ್ರೀ ಶಿವ ರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ದೇಶದ ಜನ ಸಂಖ್ಯೆಯಲ್ಲಿ ಶೇಕಡ 70 ರಷ್ಟಿರುವ ರೈತರು ಕೃಷಿ ಚಟುವಟಿಕೆ ಯಲ್ಲಿ ತೊಡಗಿಸಿರುವುದರಿಂದ ಆರ್ಥಿಕ…

ಹೊಸತನದ ಹುಡುಕಾಟದಲ್ಲಿ ದೇಸಿ ಕಲೆ, ಸಂಸ್ಕøತಿ ಮರೆಯುತ್ತಿದ್ದೇವೆ: ಡಿ.ಸಿ.ತಮ್ಮಣ್ಣ
ಮೈಸೂರು

ಹೊಸತನದ ಹುಡುಕಾಟದಲ್ಲಿ ದೇಸಿ ಕಲೆ, ಸಂಸ್ಕøತಿ ಮರೆಯುತ್ತಿದ್ದೇವೆ: ಡಿ.ಸಿ.ತಮ್ಮಣ್ಣ

February 2, 2019

ನಂಜನಗೂಡು: ಹೊಸತನದ ಹುಡುಕಾಟದಲ್ಲಿ ನಾವು ನಮ್ಮ ಪುರಾತನ ಸಂಸ್ಕøತಿ, ಜಾನಪದ ಕಲೆಯನ್ನು ಮರೆತು ನಮ್ಮ ತನವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು. ಅವರು ಶ್ರೀ ಕ್ಷೇತ್ರ ಸುತ್ತೂರು ಶಿವರಾತ್ರೀ ಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ದೇಸಿ ಆಟಗಳ ಸ್ಪರ್ಧೆ ದೋಣಿ ವಿಹಾರ, ರಂಗೋಲಿ, ಸೋಬಾನೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಸಂಸ್ಕøತಿಯನ್ನು ಮರೆಯುತ್ತಿರುವುದ ರಿಂದ ಅನಾಥ ಪ್ರಜ್ಞೆ ಎಲ್ಲರನ್ನೂ ಕಾಡು ತ್ತಿದೆ. ಪುರಾತನ ಸಂಸ್ಕøತಿ, ಕಲೆ, ದೇಸಿ ಆಟೋಟಗಳ ಅನುಸರಿಸುವಿಕೆಯಿಂದ ಸುಖ ವಾಗಿ ಬದುಕಲು…

1 1,145 1,146 1,147 1,148 1,149 1,611
Translate »