ಮೈಸೂರು: ವಿದ್ಯುತ್ ವಿತರಣಾ ಕಂಪೆನಿಗಳ ಪ್ರಮುಖ ಕಾರ್ಯಕ್ರಮಗಳು, ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಗಳು, ಸೋಲಾರ್, ಎಲ್ಇಡಿ ದೀಪ ಬಳಸಿ ವಿದ್ಯುತ್ ಉಳಿಸಿ, ವಿದ್ಯುತ್ ಸುರಕ್ಷತಾ ಮತ್ತು ವಿದ್ಯುತ್ ಉಳಿತಾಯದ ಮಾರ್ಗ ಸೂಚಿ ನಾಮಫಲಕಗಳು ಅನಾವರಣಗೊಂಡಿವೆ. ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಸೇವ್ ಎನರ್ಜಿ, ಅರ್ಥ್ ಅಂಡ್ ಗ್ರೀನ್ ಶೀರ್ಷಿಕೆಯಡಿ ಇಂಧನ ಇಲಾಖೆ ತೆರೆದಿ ರುವ ಮಳಿಗೆಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ತಮ್ಮ ವ್ಯಾಪ್ತಿಯ ಹಾಸನ, ಕೊಡಗು, ಮೈಸೂರು, ಮಂಡ್ಯ ಹಾಗೂ ಚಾಮ ರಾಜನಗರ ಜಿಲ್ಲೆಗಳಲ್ಲಿ…
ನನ್ನ ಶವವೂ ಬಿಜೆಪಿಗೆ ಹೋಗಲ್ಲ, ಬಿಜೆಪಿ ಮುಗಿಸಿಯೇ ತೀರುತ್ತೇನೆ ಎಂದ ಬಿಎಸ್ವೈ, ಶ್ರೀರಾಮುಲು ಈಗೆಲ್ಲಿದ್ದಾರೆ: ಮುಖ್ಯಮಂತ್ರಿ ಕುಮಾರಸ್ವಾಮಿ ಟಾಂಗ್
October 24, 2018ಬೆಂಗಳೂರು: ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಮಯ ಸಾಧಕತನ, ದೇವೇಗೌಡ-ಸಿದ್ದರಾಮಯ್ಯ ಹಗಲುವೇಷ ಹಾಕುತ್ತಿದ್ದಾರೆ ಎಂದು ಟೀಕಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಈ ಹಿಂದೆ ತಮ್ಮ ಪಕ್ಷದ ನಾಯಕರಿಂದಲೇ ಟೀಕೆಗೆ ಗುರಿಯಾಗಿದ್ದನ್ನು ನೆನಪಿಸಿಕೊಳ್ಳಲಿ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿರುಗೇಟು ನೀಡಿದ್ದಾರೆ. ಪ್ರೆಸ್ಕ್ಲಬ್-ಬೆಂಗಳೂರು ವರದಿಗಾರರ ಕೂಟ ಆಯೋ ಜಿಸಿದ್ದ ಸುದ್ದಿಗಾರರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಕೆಜೆಪಿ ಕಟ್ಟಿದ ಸಂದರ್ಭದಲ್ಲಿ, ನನ್ನ ಶವವೂ ಬಿಜೆಪಿ ಬಾಗಿಲಿಗೆ ಹೋಗುವುದಿಲ್ಲ ಎಂದಿದ್ದರು. ನಂತರ ಆಗಿದ್ದೇನು? ಎಂದು ಪ್ರಶ್ನಿಸಿದರು. ಶ್ರೀರಾಮುಲು…
`ರಸ್ತೆ ಗುಂಡಿಗಳನ್ನು ಮುಚ್ಚಲಾಗದಿದ್ದರೆ ಪಾಲಿಕೆಯನ್ನೇ ಮುಚ್ಚಿಸುತ್ತೇವೆ’ ಬಿಬಿಎಂಪಿಗೆ ಖಡಕ್ ಎಚ್ಚರಿಕೆ ನೀಡಿದ ಹೈಕೋರ್ಟ್
October 24, 2018ಬೆಂಗಳೂರು: `ಬಿಬಿಎಂಪಿ ಕೆಲಸ ನಡೆಸದಿದ್ದರೆ ಬೆಂಗಳೂರೇನೂ ಸ್ಥಗಿತವಾಗುವುದಿಲ್ಲ. ನೀವು ಮಾಡುತ್ತಿರುವ ಅಭಿವೃದ್ಧಿ ಕೆಲಸಗಳೂ ಅಷ್ಟರಲ್ಲೇ ಇದೆ. ರಸ್ತೆ ಗುಂಡಿಗಳನ್ನು ಮುಚ್ಚಲು ಹೆಚ್ಚು ಜವಾಬ್ದಾರಿ ತೆಗೆದುಕೊಳ್ಳದಿದ್ದರೆ ಬಿಬಿಎಂಪಿಯನ್ನೇ ಮುಚ್ಚಿಸಲಾಗುವುದು’ ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಗಳನ್ನು ಮುಚ್ಚುವ ವಿಚಾರವಾಗಿ ಇಂದು ಮತ್ತೆ ಹೈಕೋರ್ಟ್ ನ್ಯಾಯಮೂರ್ತಿ ಗಳು ಪಾಲಿಕೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಬಗೆಯಿದು. ಈ ಮೊದಲೂ ಅನೇಕ ಬಾರಿ ಇದೇ ವಿಷಯಕ್ಕೆ ಹೈ ಕೋರ್ಟ್ ವಿಭಾಗೀಯ ಪೀಠದ ನ್ಯಾಯ ಮೂರ್ತಿಗಳ ಮುಂದೆ ಕೈ ಕಟ್ಟಿ, ತಲೆ ತಗ್ಗಿಸಿ ನಿಂತಿದ್ದ…
ಅಭಿವೃದ್ಧಿಗೊಂಡ ರಸ್ತೆಯಲ್ಲಿ ಅರೆನಗ್ನ ಜಾಹೀರಾತು ಪ್ರದರ್ಶನ
October 24, 2018ಮೈಸೂರು: ಮೈಸೂರು-ಹುಣಸೂರು ರಸ್ತೆ, ಕಲಾ ಮಂದಿರದಿಂದ ವಾಲ್ಮೀಕಿ ರಸ್ತೆ ಜಂಕ್ಷನ್ ವರೆಗೆ ಇತ್ತೀಚೆಗಷ್ಟೇ ಸಂಸದ ಪ್ರತಾಪ ಸಿಂಹ ಅವರ ಮುತುವರ್ಜಿಯಿಂದ ಅಭಿವೃದ್ಧಿಗೊಂಡಿದ್ದು, ಇದೀಗ ಈ ಮಾರ್ಗದಲ್ಲಿ ಅಶ್ಲೀಲ ಜಾಹೀರಾತುಗಳು ರಾರಾಜಿಸುತ್ತಿದ್ದು, ಮೈಸೂರು ಸುಸಂಸ್ಕೃತ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರು-ಹುಣಸೂರು ರಸ್ತೆಯನ್ನು ಕಲಾಮಂದಿರದಿಂದ ಪಡುವಾರಹಳ್ಳಿ ಜಂಕ್ಷನ್ ವರೆಗೆ ಅಗಲೀಕರಣಗೊಳಿಸಿ, ರಸ್ತೆಯ ಎರಡೂ ಬದಿಯಲ್ಲೂ ಪಾದಚಾರಿ ಮಾರ್ಗವನ್ನು ಅಭಿವೃದ್ಧಿಪಡಿಸಲಾಗಿತ್ತು. ಆದರೆ, ಜಲದರ್ಶಿನಿ ಅತಿಥಿ ಗೃಹ ಸಮೀಪದ ರಂಗಾಯಣ ಸಿಬ್ಬಂದಿ ವಸತಿಗೃಹಗಳ ಬಳಿ ಪುರುಷ, ಸ್ತ್ರೀ ಅರೆನಗ್ನ ಜಾಹೀರಾತು ಫಲಕವುಳ್ಳ ಹೋರ್ಡಿಂಗ್…
ಸಮ್ಮಿಶ್ರ ಸರ್ಕಾರ ದಿವಾಳಿಯಾಗಿದ್ದು, ಅಭಿವೃದ್ಧಿ ಕುಂಠಿತಗೊಂಡಿವೆ ಬಿಜೆಪಿ ಮುಖಂಡ ಆರ್.ಅಶೋಕ್ ಟೀಕೆ
October 24, 2018ಕೆ.ಆರ್.ನಗರ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದೇ ವೇದಿಕೆಗೆ ಬಂದರೆಂದರೆ ಯಾರನ್ನೂ ನಂಬಲು ಸಾಧ್ಯವಿಲ್ಲ. ಈ ಸರ್ಕಾರಕ್ಕೆ ಭದ್ರತೆ ಎಲ್ಲಿದೆ? ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಆರ್.ಅಶೋಕ್ ಟೀಕಿಸಿದರು. ಪಟ್ಟಣದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ದಿವಾಳಿಯಾಗಿದ್ದು, ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. 38 ಸ್ಥಾನಗಳನ್ನು ಗಳಿಸಿರುವ ಜೆಡಿಎಸ್ ಆಡಳಿತ ನಡೆಸುತ್ತಿದ್ದರೆ, 78 ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್ ಪಕ್ಷದ ಮುಖಂಡರು ಅಧಿಕಾರ…
ಸೋಮನಾಥಪುರ ಜಿ.ಪಂ ಕ್ಷೇತ್ರ ಜಾ.ದಳ ಭದ್ರಕೋಟೆ
October 24, 2018ತಿ.ನರಸೀಪುರ: ಸೋಮನಾಥಪುರ ಜಿ.ಪಂ ಕ್ಷೇತ್ರ ಜಾತ್ಯಾತೀತ ಜನತಾದಳದ ಭದ್ರಕೋಟೆ. ಎಲ್ಲಾ ವರ್ಗದ ಜನರ ಬೆಂಬಲದಿಂದ ಉಪ ಚುನಾವಣೆ ಯಲ್ಲಿ ಗೆಲ್ಲುವ ಸಂಪೂರ್ಣ ನಂಬಿಕೆಯಿದೆ ಎಂದು ಜೆಡಿಎಸ್ ಅಭ್ಯರ್ಥಿ ಎಸ್.ವಿ. ಜಯಪಾಲ್ ಭರಣಿ ಹೇಳಿದರು. ಜಿ.ಪಂ ಉಪ ಚುನಾವಣೆಯ ಹಿನ್ನೆಲೆ ಯಲ್ಲಿ ತಾಲೂಕಿನ ಸೋಮನಾಥಪುರ ಗ್ರಾಮ ದಲ್ಲಿ ಮಂಗಳವಾರ ಸಂಜೆ ಪಾದಯಾತ್ರೆ ನಡೆಸಿ, ಮನೆ ಮನೆಗೆ ತೆರಳಿ ಮತಯಾಚಿಸಿ ಮಾತನಾಡಿದ ಅವರು, ಜಿ.ಪಂ ಸದಸ್ಯರಾಗಿ ಆಯ್ಕೆಗೊಂಡ ನಂತರ ಗ್ರಾಮೀಣ ಪ್ರದೇಶ ಗಳ ರಸ್ತೆಗಳನ್ನು ಅಭಿವೃದ್ಧಿಪಡಿಸಿ, ಸ್ವಚ್ಛತೆಗೆ ಆದ್ಯತೆ ಕೊಟ್ಟು…
ನಂಜನಗೂಡಿನಲ್ಲಿಂದು ಅದ್ಧೂರಿ ವಾಲ್ಮೀಕಿ ಜಯಂತಿ
October 24, 2018ನಂಜನಗೂಡು: ತಾಲೂಕು ನಾಯಕರ ಸಂಘ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ನಾಳೆ(ಅ.24) ಬುಧವಾರ ನಗರದಲ್ಲಿ ಅದ್ಧೂರಿ ಮತ್ತು ವೈಶಿಷ್ಟ್ಯ ಪೂರ್ಣವಾಗಿ ವಾಲ್ಮೀಕಿ ಜಯಂತಿಯನ್ನು ಆಚರಿಸಲು ಸರ್ವ ಸಿದ್ದತೆಗಳಾಗಿವೆ ಎಂದು ತಾಲೂಕು ನಾಯಕರ ಸಂಘದ ಗೌರವಾಧ್ಯಕ್ಷ ಹಾಗೂ ಜಿ.ಪಂ ಮಾಜಿ ಸದಸ್ಯ ಸಿ.ಚಿಕ್ಕರಂಗ ನಾಯಕ ತಿಳಿಸಿದ್ದಾರೆ. ಮಂಗಳವಾರ ಪತ್ರಿಕಾ ಭವನದಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡುತ್ತಾ, ಬೆಳಿಗ್ಗೆ 9 ಗಂಟೆಗೆ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಿಂದ ಶ್ರೀಕಂಠೇಶ್ವರಸ್ವಾಮಿ ದೇಗುಲದವರೆಗೂ ಮೆರವಣಿಗೆ ನಡೆ ಯಲಿದೆ. ನಂತರ ಪಕ್ಕದ…
ತಲೆ ಮೇಲೆ ಹರಿದ ಬಸ್ ಚಕ್ರ: ವೃದ್ಧೆ ಸ್ಥಳದಲ್ಲೇ ಸಾವು
October 24, 2018ನಂಜನಗೂಡು: ಕೆಎಸ್ಆರ್ಟಿಸಿ ಬಸ್ ಸ್ಕೂಟರ್ಗೆ ಡಿಕ್ಕಿ ಹೊಡೆದಾಗ ಕೆಳಕ್ಕೆ ಬಿದ್ದ ವೃದ್ಧೆ ತಲೆ ಮೇಲೆಯೇ ಬಸ್ನ ಚಕ್ರ ಹರಿದಿದೆ. ನಗರದ ಎಂಜಿಎಸ್ ರಸ್ತೆಯ ಶ್ರೀಕಂಠೇಶ್ವರ ಟಿವಿ ಸೆಂಟರ್ ಬಳಿ ಮಂಗಳವಾರ ನಡೆದ ಈ ಭೀಕರ ಅಪಘಾತದಲ್ಲಿ ವೃದ್ಧೆ ಸ್ಥಳದಲ್ಲೇ ದಾರುಣವಾಗಿ ಸಾವಿಗೀಡಾದರು. ತಾಲೂಕಿನ ತಾಂಡವಪುರ ಗ್ರಾಮದ ಬಸವೇಗೌಡರವರ ಪತ್ನಿ ಮರಮ್ಮ(65) ಸಾವನ್ನಪ್ಪಿದ ದುರ್ದೈವಿ. ಕೆನರಾ ಬ್ಯಾಂಕಿನಲ್ಲಿ ಕೆಲಸ ಮುಗಿಸಿಕೊಂಡು ಗ್ರಾಮದತ್ತ ತೆರಳುತ್ತಿದ್ದ ಸಂದರ್ಭದಲ್ಲಿ ಆಟೋ ವೊಂದನ್ನು ಹಿಂದಿಕ್ಕಲು ಹೋಗಿ ಹುಲ್ಲಹಳ್ಳಿ ವೃತ್ತದ ಕಡೆಯಿಂದ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್,…
ರೈತರ ಸಾಲ ಮನ್ನಾಕ್ಕೆ ರಾಷ್ಟ್ರೀಕೃತ ಬ್ಯಾಂಕ್ಗಳ ಸಮ್ಮತಿ
October 23, 2018ಬೆಂಗಳೂರು: ರಾಜ್ಯ ಸರ್ಕಾ ರದ ಒತ್ತಡಕ್ಕೆ ಮಣಿದ ರಾಷ್ಟ್ರೀಕೃತ ಬ್ಯಾಂಕ್ಗಳು ರೈತರ ಬೆಳೆ ಸಾಲ ಮನ್ನಾಕ್ಕೆ ಕೊನೆಗೂ ಸಮ್ಮತಿಸಿವೆ. 15 ರಾಷ್ಟ್ರೀಕೃತ ಬಾಂಕ್ಗಳು 10 ಲಕ್ಷ ರೈತರು ಪಡೆದಿರುವ ಸಾಲದ ಪೂರ್ಣ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಿವೆ. ಉಳಿದ ಬೆರಳೆಣಿಕೆಯಷ್ಟು ಬಾಂಕ್ ಗಳು ರೈತರು ಸಾಲ ಪಡೆದ ಮಾಹಿತಿ ನೀಡಬೇಕಿದೆ. ಸರ್ಕಾರಕ್ಕೆ ಲಭ್ಯವಿರುವ ಮಾಹಿತಿ ಅನ್ವಯ ಕೃಷಿ ಸಾಲಗಳನ್ನು ಮನ್ನಾ ಮಾಡಲು ಅರ್ಜಿ ನಮೂನೆ ರೂಪಿಸಿದೆ. ಮುದ್ರಾಂಕ ಮತ್ತು ಶುಲ್ಕ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ…
ಮೈಸೂರು ಅರಮನೆ ದಸರಾ ಸಂಪನ್ನ
October 23, 2018ಮೈಸೂರು: ರಾಜಮಾತೆ ಪ್ರಮೋದಾದೇವಿ ಒಡೆಯರ್ ತಾಯಿ ಪುಟ್ಟರತ್ನಮ್ಮಣ್ಣಿ ಹಾಗೂ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸಹೋದರಿ ವಿಶಾಲಾಕ್ಷಿದೇವಿ ಅವರ ನಿಧನದಿಂದಾಗಿ ಮುಂದೂಡಲ್ಪಟ್ಟಿದ್ದ ವಿಜಯಯಾತ್ರೆ ಹಾಗೂ ಶಮಿ ಪೂಜೆಯನ್ನು ಸೋಮವಾರ ವಿಧಿವಿಧಾನದಂತೆ ಅರಮನೆಯ ಆವರಣದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನೆರವೇರಿಸಿದರು. ಅ.18-19ರಂದು ಅರಮನೆ ಆವರಣದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಯುಧಪೂಜೆ, ವಿಜಯ ಯಾತ್ರೆ ಹಾಗೂ ಶಮಿಪೂಜೆ ನೆರವೇರಿಸಬೇಕಾಗಿತ್ತು. ಆದರೆ ರಾಜಮನೆತನದ ಪ್ರಮುಖರಿಬ್ಬರ ಸಾವಿನ ಹಿನ್ನೆಲೆಯಲ್ಲಿ ರಾಜಪುರೋ ಹಿತರ ಸೂಚನೆಯ ಮೇರೆಗೆ ಕೆಲವು ಧಾರ್ಮಿಕ ಕಾರ್ಯಕ್ರಮಗಳನ್ನು 3…