ಮೈಸೂರು: ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ್ದ ವಿಂಟೇಜ್ ಕಾರುಗಳು ಸೋಮವಾರ ದಸರಾ ಆನೆಗಳ ತಾಲೀಮಿನಲ್ಲಿ ಅರಮನೆ ಆವರಣದಿಂದ ಕೆ.ಆರ್.ವೃತ್ತದವರೆಗೆ ಪಾಲ್ಗೊಂಡು ಗಮನ ಸೆಳೆದವು. ಈ ಹಿಂದೆ ನಿಗದಿಯಾಗಿದ್ದ ಸಮಯಕ್ಕಿಂತ ಒಂದು ಗಂಟೆ ತಡವಾಗಿ 12 ವಿಂಟೇಜ್ ಕಾರುಗಳು ಅರಮನೆಗೆ ಆಗಮಿಸಿದವು. ಎಂದಿನಂತೆ 7.30ಕ್ಕೆ ತಾಲೀಮಿಗೆ ಹೊರಡ ಬೇಕಾಗಿದ್ದ ಆನೆಗಳು ವಿಂಟೇಜ್ ಕಾರು ಗಳ ಆಗಮನಕ್ಕಾಗಿ ಕಾಯುತ್ತ ಅರಮನೆಯ ಆವರಣದಲ್ಲಿಯೇ ನಿಂತಿದ್ದವು. ಅಂತಿಮವಾಗಿ ಒಂದು ಗಂಟೆ ತಡವಾಗಿ ಬಲರಾಮ ದ್ವಾರದಿಂದ ಆರು ವಿಂಟೇಜ್ ಕಾರುಗಳ…
ಔಷಧೀಯ ಗಿಡಗಳಿಂದ ಉತ್ತಮ ಆದಾಯ ಗಳಿಸಬಹುದು
October 2, 2018ಮೈಸೂರು: ಔಷಧೀಯ ಸಸ್ಯಗಳಿಗೆ ಉತ್ತಮ ಬೇಡಿಕೆ ಇದ್ದು, ಸೂಕ್ತ ಬೆಲೆಯೂ ಲಭ್ಯವಾಗುವ ಹಿನ್ನೆಲೆಯಲ್ಲಿ ರೈತರು ಈ ಸಸ್ಯಗಳ ಕೃಷಿಗೆ ಮುಂದಾಗುವ ಮೂಲಕ ಉತ್ತಮ ಆದಾಯ ಗಳಿಸಲು ಸಾಧ್ಯವಿದೆ ಎಂದು ಕೇರಳ ಅರಣ್ಯ ಇಲಾಖೆಯ ಅರಣ್ಯ ಪಡೆಯ ನಿವೃತ್ತ ಮುಖ್ಯಸ್ಥ ಹಾಗೂ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಡಾ.ಹೆಚ್.ನಾಗೇಶ್ ಪ್ರಭು ಅಭಿಪ್ರಾಯಪಟ್ಟರು. ಕೇಂದ್ರದ ಆಯುಷ್ ಸಚಿವಾಲಯದ ರಾಷ್ಟ್ರೀಯ ಔಷಧೀಯ ಸಸ್ಯಗಳ ಮಂಡಳಿಯ ಪ್ರಾದೇಶಿಕ ಹಾಗೂ ಸಹಾಯಪ್ರಧಾನ ಕೇಂದ್ರ (ದಕ್ಷಿಣ ವಲಯ/ಎನ್ಎಂಪಿಬಿ),…
ನಟ ದುನಿಯಾ ವಿಜಯ್ ಸೇರಿ ನಾಲ್ವರಿಗೆ ಷರತ್ತುಬದ್ಧ ಜಾಮೀನು
October 2, 2018ಬೆಂಗಳೂರು: ಜಿಮ್ ತರಬೇತುದಾರ ಮಾರುತಿ ಗೌಡ ಎಂಬಾತನನ್ನು ಅಪಹರಿಸಿ ಹಲ್ಲೆ ನಡೆ ಸಿದ ಆರೋಪ ಪ್ರಕರಣ ದಲ್ಲಿ ನಟ ದುನಿಯಾ ವಿಜಯ್ ಸೇರಿ ನಾಲ್ವರಿಗೆ ಬೆಂಗಳೂರಿನ ಸೆಷನ್ಸ್ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಇಂದಿಲ್ಲಿ ಆದೇಶ ನೀಡಿದೆ. ಒಂದು ಲಕ್ಷ ರೂಪಾಯಿ ಬಾಂಡ್, ಇಬ್ಬರ ಶ್ಯೂರಿಟಿ, ತನಿಖೆಗೆ ಸಹಕರಿಸಬೇಕು, ಸಾಕ್ಷಿಗಳಿಗೆ ಬೆದರಿಕೆ ಒಡ್ಡಬಾರದು, ಸಾಕ್ಷ್ಯ ನಾಶಮಾಡಬಾರದು ಎಂಬ ಷರತ್ತು ವಿಧಿಸಿ ನ್ಯಾಯಾಧೀಶರಾದ ಟಿ.ಪಿ. ರಾಮ ಲಿಂಗೇ ಗೌಡರು ಜಾಮೀನು ಮಂಜೂರು ಮಾಡಿ ತೀರ್ಪು ನೀಡಿದರು. ಸೆಲಿಬ್ರಿಟಿಗಳು…
ಇಂದಿನಿಂದ ಬಿ.ವಿ.ಕಾರಂತ ಕಾಲೇಜು ರಂಗೋತ್ಸವ
October 2, 2018ಮೈಸೂರು: ಮೈಸೂರು ರಂಗಾಯಣದ ವತಿಯಿಂದ ಅ.2ರಿಂದ 18 ರವರೆಗೆ ವನರಂಗದಲ್ಲಿ ಬಿ.ವಿ. ಕಾರಂತ ಕಾಲೇಜು ರಂಗೋತ್ಸವ ಏರ್ಪಡಿಸಲಾಗಿದೆ. ವನರಂಗದಲ್ಲಿ ನಾಳೆ ಸಂಜೆ 6 ಗಂಟೆಗೆ ಕವಯತ್ರಿ ಶ್ರೀಮತಿ ಪ್ರತಿಭಾ ನಂದ ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ರಂಗಾಯಣ ನಿರ್ದೇಶಕಿ ಭಾಗೀರಥಿ ಬಾಯಿ ಕದಂ ಅಧ್ಯಕ್ಷತೆ ವಹಿಸು ವರು. ಅ.2ರಿಂದ 18ರವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ವನರಂಗದಲ್ಲಿ ನಾಟಕಗಳು ಪ್ರದರ್ಶನಗೊಳ್ಳಲಿವೆ. ಅಕ್ಟೋಬರ್ 2 : ಸೆಂಟ್ ಜೋಸೆಫ್ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ರೂಪಾಂತರ ನಾಟಕ ಪ್ರದರ್ಶನ. ರಚನೆ…
ಮುಕ್ತ ವಿವಿ ಕೋರ್ಸ್ಗಳಿಗೆ ಪ್ರವೇಶಾತಿ ಅವಧಿ ವಿಸ್ತರಣೆ
October 2, 2018ಮೈಸೂರು: ವಿಶ್ವವಿದ್ಯಾನಿಲಯವು 2018- 19ನೇ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದಂತೆ ಯುಜಿಸಿಯಿಂದ ಮಾನ್ಯತೆ ದೊರೆತಿರುವ ಎಲ್ಲಾ ಕೋರ್ಸ್ ಗಳಿಗೆ ಈಗಾಗಲೇ ಪ್ರವೇಶಾತಿಯನ್ನು ಪ್ರಾರಂಭಿಸಿದ್ದು, ವಿವಿ ಕೇಂದ್ರ ಕಚೇರಿ ಹಾಗೂ ತನ್ನ ಎಲ್ಲಾ ಪ್ರಾದೇಶಿಕ ಕೇಂದ್ರಗಳಲ್ಲಿ ಪ್ರವೇಶಾತಿ ಪ್ರಕ್ರಿಯೆಗಳು ನಡೆಯುತ್ತಿದೆ. ಪ್ರವೇಶಾತಿಯ ಅಂತಿಮ ದಿನಾಂಕವನ್ನು ದಂಡ ಶುಲ್ಕದೊಂದಿಗೆ ಅ.20ರವರೆಗೆ ವಿಸ್ತರಿಸಲಾಗಿದೆ ಎಂದು ಕುಲಸಚಿವರು ತಿಳಿಸಿದ್ದಾರೆ. ವಿವಿಗೆ ವಿದ್ಯಾರ್ಥಿಗಳು ವಿವಿಧ ಕೋರ್ಸ್ಗಳಿಗೆ ಪ್ರವೇಶಾತಿ ಕೋರಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದಿನಾಂಕ ವಿಸ್ತರಿಸುವಂತೆ ಕುಲಪತಿಯವರು ಯುಜಿಸಿಗೆ ಪತ್ರ ಬರೆದು ಕೋರಿದ್ದರು. ಈ…
ಕರ್ನಾಟಕ ಜೀವರಕ್ಷಕರ ಮಸೂದೆಗೆ ರಾಷ್ಟ್ರಪತಿ ಅಂಕಿತ
October 1, 2018ನವದೆಹಲಿ: ದೇಶ ದಲ್ಲಿಯೇ ಪ್ರಥಮ ಬಾರಿಗೆ ಜಾರಿ ಗೊಳ್ಳಲಿರುವ ಕರ್ನಾಟಕ ಜೀವ ರಕ್ಷಕರ ಕಾನೂನು ರಕ್ಷಣಾ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ. ಇದರಿಂದಾಗಿ ಕರ್ನಾಟಕದಲ್ಲಿ ರಸ್ತೆ ಅಪಘಾತಕ್ಕೀಡಾದ ಗಾಯಾಳುಗಳನ್ನು ರಕ್ಷಿಸುವ ಜೀವರಕ್ಷಕ ರಿಗೆ ಇನ್ನು ಮುಂದೆ ಕಾನೂನಿನ ರಕ್ಷಣೆ ದೊರೆಯಲಿದೆ. ಜೀವರಕ್ಷಕರಿಗೆ ಕಾನೂನು ರಕ್ಷಣೆ ಒದಗಿಸಿದ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಲಿದೆ. 2016ರಲ್ಲಿ 1,50,785 ಜನರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕರ್ನಾಟಕ ಜೀವ…
ಶಾಂತಿ ಮುಖ್ಯ, ಆದರೆ ಆತ್ಮ ಗೌರವ ಬಲಿ ಕೊಡಲ್ಲ
October 1, 2018ನವದೆಹಲಿ: ಭಾರತಕ್ಕೆ ಶಾಂತಿ ಮುಖ್ಯ, ಆದರೆ ನಮ್ಮ ಆತ್ಮಗೌರವವನ್ನು ಬಲಿ ಕೊಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದು ತಮ್ಮ ಮನ್ ಕಿ ಬಾತ್ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಶಾಂತಿಯನ್ನು ಬಯಸುತ್ತದೆ. ಆದರೆ ಅದಕ್ಕಾಗಿ ನಮ್ಮ ಆತ್ಮಗೌರವವನ್ನು ಬಲಿ ಕೊಡುವುದಿಲ್ಲ. ಬಹುಶಃ ಈಗ ಎಲ್ಲರಿಗೂ ಅರ್ಥವಾಗಿರುತ್ತದೆ. ನಮ್ಮ ಸೈನಿಕರು ಯಾವುದೇ ಪರಿಸ್ಥಿತಿಗೂ ಸೂಕ್ತ ಉತ್ತರ ನೀಡಲಿದ್ದಾರೆ ಎಂದು. ಎಂತ ಹುದೇ ಪರಿಸ್ಥಿತಿಯಲ್ಲಿ ಭಾರತದ ಶಾಂತಿ ಕದಡಲು ನಮ್ಮ ಸೈನಿಕರು ಅನುವು ಮಾಡಿಕೊಡುವುದಿಲ್ಲ. ಶಾಂತಿಗೆ ನಾವು…
ಕಂದಾಯ ಇಲಾಖೆ ಕಾರ್ಯದರ್ಶಿಗಳಿಂದಲೇ ಆದೇಶ ಬರಬೇಕಾಗಿದೆ ಎಂದ ಡಿಸಿ ಅಭಿರಾಮ್ ಜಿ.ಶಂಕರ್
October 1, 2018ಮೈಸೂರು: ಮೈಸೂರಿನ ಕುರುಬಾರಹಳ್ಳಿ ಸರ್ವೆ ನಂ.4 ಮತ್ತು ಆಲನ ಹಳ್ಳಿ ಸರ್ವೆ ನಂ.41ಕ್ಕೆ ಒಳಪಟ್ಟ ಸಿಐಟಿಬಿ ಮತ್ತು ಮುಡಾ ಬಡಾವಣೆಗಳನ್ನು ಬಿ-ಖರಾಬಿನಿಂದ ಕೈಬಿಡುವಂತೆ ಕಂದಾಯ ಇಲಾಖೆಯಿಂದ ಮುಡಾಗೆ ಆದೇಶ ರವಾನಿಸುವ ಕಾರ್ಯಕ್ಕೆ ಶೀಘ್ರವೇ ಚಾಲನೆ ದೊರೆಯಬೇಕಾಗಿದೆ. ಈ ಸರ್ವೆ ನಂಬರ್ಗಳ ವ್ಯಾಪ್ತಿಗೆ ಸೇರಿದ ಸಿದ್ಧಾರ್ಥನಗರ, ವಿದ್ಯಾನಗರ, ಕೆ.ಸಿ.ಬಡಾ ವಣೆ, ಜೆ.ಸಿ.ಬಡಾವಣೆ ಮತ್ತು ಕಂದಾಯ ಬಡಾವಣೆಗಳನ್ನು ಬಿ-ಖರಾಬಿನಿಂದ ಕೈಬಿಡಲು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ವಿಧಾನಸಭಾ ಚುನಾವಣೆ ಎದುರಾದ ಕಾರಣ…
ಸಾಂಸ್ಕೃತಿಕ ನಗರಿಯಲ್ಲಿ ವಿಂಟೇಜ್ ಕಾರುಗಳ ಕಲರವ
October 1, 2018ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ಬೆಂಗಳೂರಿಂದ ಮೈಸೂರಿಗೆ ಆಗಮಿಸಿದ ವಿವಿಧ ದೇಶಗಳ 50 ವಿಂಟೇಜ್ ಕಾರ್ಗಳು ನಗರದ ಪ್ರಮುಖ ರಸ್ತೆಗೆ ಇಳಿದು, ಸಾರ್ವಜನಿಕರು, ಪ್ರವಾಸಿಗರ ಮನಸೊರೆ ಗೊಂಡವು. ಅಂತೆಯೇ ಮಾನಿನಿಯರ ಮೊಬೈಲ್ ನಲ್ಲಿ ಸೆಲ್ಫಿಗೆ ಸೆರೆಯಾದ ದೃಶ್ಯ ಸಾಮಾನ್ಯವಾಗಿತ್ತು. ಲಲಿತಮಹಲ್ ಪ್ಯಾಲೇಸ್ ಹೋಟೆಲ್ ಮುಂಭಾಗದಲ್ಲಿ ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಫೆಡರೇಷನ್ ಆಫ್ ಹಿಸ್ಟಾರಿಕ್ ವೆಹಿಕಲ್ ಆಫ್ ಇಂಡಿಯಾ ಸಹಯೋಗದಲ್ಲಿ ಆಯೋಜಿಸಿದ್ದ ವಿಂಟೇಜ್ ಕಾರ್ ರ್ಯಾಲಿ ಜನರನ್ನು ಆಕರ್ಷಿಸಿದ ಪರಿಯಿದು. 1925ನೇ…
ಸಿದ್ದರಾಮಯ್ಯ ದಿನಕ್ಕೆ 4 ಪ್ಯಾಕ್ ಸಿಗರೇಟ್ ಸೇದುತ್ತಿದ್ದರಂತೆ!!
October 1, 2018ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಿನಕ್ಕೆ 4 ಪ್ಯಾಕ್ ಸಿಗರೇಟ್ ಸೇದುತ್ತಿದ್ದರಂತೆ. ಅವರ ಸಿಗರೇಟ್ ಬ್ರ್ಯಾಂಡ್ ಯಾವುದು ಗೊತ್ತಾ? ಅದು ವಿಲ್ಸ್ ಸಿಗರೇಟ್. ಇದನ್ನು ಸ್ವತಃ ಅವರೇ ಮನಬಿಚ್ಚಿ ಹಂಚಿಕೊಂಡರಲ್ಲದೆ, ಸಿಗರೇಟ್ ಬಿಟ್ಟ ಸಂಗತಿಯನ್ನು ಪ್ರಸ್ತಾಪಿಸಿದ ಅವರು, ದುಶ್ಚಟಗಳನ್ನು ಬಿಡಲು ದೃಢ ಸಂಕಲ್ಪ ಇರಬೇಕು. ಅದೊಂದಿದ್ದರೆ ಯಾವುದು ಕಷ್ಟಸಾಧ್ಯವಲ್ಲ ಎಂದರು. ಸೆನೆಟ್ ಭವನದಲ್ಲಿ ಭಾನುವಾರ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ಯಾನ್ಸರ್ ಬರಲು ಮುಖ್ಯ ಕಾರಣ ತಂಬಾಕು ಎಂದು ಹೇಳಲಾಗಿದೆ. ಕೆಲವರು ಸಿಗರೇಟು…