ಮೈಸೂರು,ಅ.15(ಆರ್ಕೆಬಿ)- ಕೊರೊನಾ ಆತಂಕದಿಂದ ಸರಳ ದಸರಾ ಹಿನ್ನೆಲೆಯಲ್ಲಿ ಜಂಬೂಸವಾರಿ ಮೆರವಣಿಗೆ ಅರಮನೆ ಆವರಣಕ್ಕೆ ಸೀಮಿತಗೊಳಿಸಿದ್ದರಿಂದ ಶುಕ್ರವಾರ ಮೈಸೂರಿನತ್ತ ಹೆಚ್ಚು ಜನ ಬರಲಿಲ್ಲ. ಗ್ರಾಮಾಂ ತರ ಮತ್ತು ನಗರ ಸಾರಿಗೆ ಬಸ್ಗಳೆಲ್ಲವೂ ಎಂದಿನಂತೆಯೇ ಓಡಾಡಿದರೂ ಜನರ ಒತ್ತಡ ಇರಲಿಲ್ಲ. ಸಂಜೆಯ ನಂತರ ಸಿಡಿಲು, ಗುಡುಗಿನ ಸಹಿತ ಮಳೆಯ ಆರ್ಭಟ ಜೋರಾಗಿಯೇ ಇತ್ತು. ಪ್ರತೀ ವರ್ಷ ದಸರಾ ಜಂಬೂಸವಾರಿ ಮೆರವಣಿಗೆ ದಿನದಂದು ಮೈಸೂರಿಗೆ ಲಕ್ಷಾಂತರ ಮಂದಿ ಬಂದು ಸೇರುತ್ತಿದ್ದರು. ನಗರದ ತುಂಬೆಲ್ಲಾ ಜನ, ವಾಹನ. ಎಲ್ಲಾ ರಸ್ತೆಗಳಲ್ಲೂ ಜನರು ಪ್ರವಾಹ…
ಸೊರಗಿದ್ದ ಬೀದಿಬದಿ ವ್ಯಾಪಾರಿಗಳ ಮೊಗದಲ್ಲಿ ಅಂತೂ ಸಂತಸ
October 16, 2021ಮೈಸೂರು, ಅ.15(ವೈಡಿಎಸ್)- ಕೊರೊನಾದಿಂದಾಗಿ ವ್ಯಾಪಾರವಿಲ್ಲದೆ ನಿರಾಶೆ ಗೊಂಡಿದ್ದ ಬೀದಿಬದಿ ವ್ಯಾಪಾರಿಗಳು ಶುಕ್ರವಾರ ಅರಮನೆ ಸುತ್ತ-ಮುತ್ತ ಭರ್ಜರಿ ವ್ಯಾಪಾರ ನಡೆಸಿದರು. ಕಡಲೆಕಾಯಿ, ಚುರುಮುರಿ, ಸೌತೆ ಕಾಯಿ, ಬೊಂಬಾಯಿ ಮಿಠಾಯಿ, ಐಸ್ಕ್ರೀಮ್ ಮತ್ತಿತರೆ ವ್ಯಾಪಾರಿಗಳು ಜೀವನ ನಡೆಸುವುದೇ ದುಸ್ತರ ವಾಗಿತ್ತು. ಲಾಕ್ಡೌನ್ ಸಡಿಲಿಕೆಯಿಂದಾಗಿ ಈಗಷ್ಟೇ ಜೀವನ ನಿರ್ವಹಣೆಗೆ ದಾರಿ ಹುಡುಕುತ್ತಿ ದ್ದರು. ಈ ದಸರಾದಲ್ಲೂ ಹೆಚ್ಚಿನ ವ್ಯಾಪಾರವಾಗದಿದ್ದರೂ ಜೀವನ ನಿರ್ವಹಣೆಗೆ ತೊಂದರೆ ಇಲ್ಲ ಎಂದು ಬಾಂಬೆ ಮಿಠಾಯಿ ವ್ಯಾಪಾರಿ ಲಕ್ಷ್ಮಣ್ ಸಮಾಧಾನಪಟ್ಟರು. ಸೌತೆಕಾಯಿ ವ್ಯಾಪಾರಿ ಸವಿತಾ ಮಾತನಾಡಿ, 2 ವರ್ಷದ…
ಮುಡಾ ಗುಂಪು ಮನೆ ಯೋಜನೆಗೆ ಉತ್ತಮ ಪ್ರತಿಕ್ರಿಯೆ
October 16, 2021ಮೈಸೂರು, ಅ.15(ಎಂಕೆ)- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಮಹತ್ವಾಕಾಂಕ್ಷೆಯ ‘ಗುಂಪು ಮನೆ ಯೋಜನೆ’ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತಿದ್ದು, 35 ಸಾವಿರಕ್ಕೂ ಹೆಚ್ಚು ಮಂದಿ ಬೇರೆ ಬೇರೆ ವಿಧಾನದಲ್ಲಿ ಅಭಿಪ್ರಾಯ ನೀಡಿದ್ದಾರೆ ಎಂದು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದ್ದಾರೆ. ಗುಂಪು ಮನೆ ಯೋಜನೆಗೆ ಮುಡಾದಿಂದ ಡಿಪಿಆರ್ ಸಿದ್ದವಾಗಿದ್ದು, ಸರ್ಕಾರದ ಅನುಮೋದನೆ ಬಳಿಕ ಚಾಲನೆ ದೊರಕ ಲಿದೆ. ವಿಜಯನಗರ 2ನೇ ಹಂತದ ರಿಂಗ್ ರಸ್ತೆ ಬಳಿ 4 ಎಕರೆ ಜಾಗದಲ್ಲಿ 560 ಮನೆ, ದಟ್ಟಗಳ್ಳಿಯ 3.08 ಎಕರೆ ಜಾಗದಲ್ಲಿ…
ಜಂಬೂಸವಾರಿ ಮುಕ್ತಾಯದ ಬೆನ್ನ ಹಿಂದೆಯೇ ಮೈಸೂರಲ್ಲಿ ಭಾರೀ ಮಳೆ
October 16, 2021ಮೈಸೂರು, ಅ.15(ಎಸ್ಬಿಡಿ)- ವಿಜಯದಶಮಿ ಮೆರವಣಿಗೆ ಮುಕ್ತಾಯವಾದ ಬೆನ್ನಲ್ಲೇ ಮೈಸೂರಿನಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿಯಿತು. ಜಂಬೂ ಸವಾರಿ ವೇಳೆಯೇ ಕಾರ್ಮೋಡ ಕವಿದಿತ್ತಾದರೂ ಸದ್ಯ ಮಳೆ ಬರಲಿಲ್ಲ. ಆದರೆ ಸಂಜೆ ಸುಮಾರು 6.30ಕ್ಕೆ ಆರಂಭ ವಾದ ಮಳೆ 2 ಗಂಟೆಗಳ ಕಾಲ ಎಡೆಬಿಡದೆ ಧೋ.. ಎಂದು ಸುರಿಯಿತು. ಒಂದೇ ಸಮನೆ ಜೋರು ಮಳೆ ಸುರಿದ ಪರಿ ಣಾಮ ರಸ್ತೆಗಳೆಲ್ಲವೂ ಜಲಾವೃತವಾದವು. ಇಕ್ಕೆಲಗಳಲ್ಲಿ ಕಾಲುವೆ ಮಾದರಿಯಲ್ಲಿ ನೀರು ಹರಿದು, ತಗ್ಗು ಪ್ರದೇಶಗಳು ಕೆರೆಯಂ ತಾಗಿದ್ದವು. ಪರಿಣಾಮ ದ್ವಿಚಕ್ರ ವಾಹನ…
ಅರಮನೆಯಲ್ಲಿ ಯದುವೀರ್ ಸರಸ್ವತಿ ಪೂಜೆ
October 13, 2021ಮೈಸೂರು, ಅ.12(ಎಂಟಿವೈ)-ನವರಾತ್ರಿ ಹಿನ್ನೆಲೆಯಲ್ಲಿ ಮಂಗಳವಾರ ಮೈಸೂರು ಅರಮನೆಯಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸರಸ್ವತಿ ಪೂಜೆ ನೆರವೇರಿಸಿದರು. ಅರಮನೆಯ ಕನ್ನಡಿ ತೊಟ್ಟಿಯಲ್ಲಿ ಆಶ್ವಯುಜ ಮಾಸ, ಶುಕ್ಲ ಪಕ್ಷ ಸಪ್ತಮಿ ದಿನವಾದ ಮಂಗಳವಾರ ಬೆಳಗ್ಗೆ 10.57ರಿಂದ 11.05ರವರೆಗೆ ಸಂದ ಧನುರ್ ಲಗ್ನದಲ್ಲಿ ಅವರು ಸರಸ್ವತಿ ಪೂಜೆ ನೆರವೇರಿಸಿದರು. ಸರಸ್ವತಿ ಪೂಜೆ ಆರಂಭಕ್ಕೂ ಮುನ್ನ ರಾಜ ವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರು ಕನ್ನಡಿ ತೊಟ್ಟಿಗೆ ಆಗಮಿಸಿ ನಮಸ್ಕರಿಸಿದರು. ಬಳಿಕ ರಾಜಪುರೋಹಿತರೊಂದಿಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗಣಪತಿ ಪೂಜೆ,…
ದಸರಾ ವೇಳೆ ಮೈಸೂರು ಬೆಳಗಲು ಹಲವು ಖಾಸಗಿ ಸಂಸ್ಥೆ, ಉದ್ಯಮಗಳ ಸಾಥ್…
October 13, 2021ಮೈಸೂರು, ಅ.12(ಎಂಕೆ)-ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋ ತ್ಸವಕ್ಕೆ ಕೊರೊನಾ ಮಹಾಮಾರಿ ನಡು ವೆಯೂ ವೈಭವದ ಮೆರಗು ತಂದ ವಿದ್ಯುತ್ ದೀಪಾಲಂಕಾರಕ್ಕೆ ಮೈಸೂರಿನ ಹಲವು ಖಾಸಗಿ ಸಂಸ್ಥೆಗಳು ಕೈಜೋಡಿಸಿವೆ. ನಗರದ ಹಲವಾರು ವೃತ್ತಗಳಿಗೆ ಹಾಗೂ ಪ್ರಮುಖ ರಸ್ತೆಗಳಿಗೆ ವಿಶೇಷ ದೀಪಾ ಲಂಕಾರದ ಪ್ರಾಯೋಜಕತ್ವ ಪಡೆಯುವ ಮೂಲಕ ಹಲವು ಖಾಸಗಿ ಸಂಸ್ಥೆಗಳು ದಸರಾ ವೈಭವವನ್ನು ಇಮ್ಮಡಿಗೊಳಿಸಲು ಸಹಕರಿಸಿವೆ. ಹಾರ್ಡಿಂಜ್ ವೃತ್ತದ ದೀಪಾ ಲಂಕಾರ, ವೃತ್ತದ ಬದಿಯಲ್ಲಿ ವಿಶೇಷ ಎಲ್ಇಡಿ ಪರದೆ ಅಳವಡಿಸಲು ‘ಟಿವಿಎಸ್ ಕಂಪನಿ’, ಪ್ರಾಯೋಜಕತ್ವ ಪಡೆದರೆ, ಜಯಚಾಮರಾಜ…
ಅರಮನೆ ಆವರಣದಲ್ಲಿ ಮುಂದುವರಿದ ಜಂಬೂಸವಾರಿ ತಾಲೀಮು
October 13, 2021ಮೈಸೂರು, ಅ.12(ಎಂಟಿವೈ)- ಜಂಬೂಸವಾರಿ ಮೆರವಣಿಗೆಗೆ ದಿನಗಣನೆ ಆರಂಭವಾಗಿದ್ದು, ಅರಮನೆ ಆವರಣ ದಲ್ಲಿ ದಸರಾ ಗಜಪಡೆ, ಅಶ್ವಪಡೆ ಹಾಗೂ ಪೊಲೀಸ್ ತುಕಡಿಗಳಿಗೆ ಮಂಗಳವಾರ ಪೂರ್ಣ ಪ್ರಮಾಣದ ಜಂಬೂಸವಾರಿ ತಾಲೀಮು ನಡೆಸಲಾಯಿತು. ಸೋಮವಾರದಿಂದ ಆರಂಭಿಸಲಾಗಿ ರುವ ಜಂಬೂಸವಾರಿ ತಾಲೀಮು ಎರಡನೇ ದಿನವೂ ಮುಂದುವರೆಯಿತು. ನಾಳೆ(ಅ.13)ಯೂ ತಾಲೀಮು ನಡೆಯ ಲಿದ್ದು, ಅಂತಿಮ ಸಿದ್ಧತೆ ನಡೆಸಲಾಗುತ್ತಿದೆ. ಎರಡನೇ ದಿನದ ಜಂಬೂಸವಾರಿ ತಾಲೀಮು ಯಶಸ್ವಿಯಾಗಿ ನಡೆಯಿತು. ಗಜಪಡೆ ಹಾಗೂ ಅಶ್ವಪಡೆ ಶಿಸ್ತುಬದ್ಧವಾಗಿ ಹೆಜ್ಜೆ ಹಾಕುವ ಮೂಲಕ ಭರವಸೆ ಮೂಡಿ ಸಿದವು. ಇದರೊಂದಿಗೆ ಪೊಲೀಸ್ ತುಕಡಿ…
ಮೈಸೂರು ಅರಮನೆ ಅಂಗಳದಲ್ಲಿ ಗಾಯನ, ವಾದನ ಆಸ್ವಾದಿಸಿದ ಸಂಗೀತ ಪ್ರೇಮಿಗಳು
October 13, 2021ಮೈಸೂರು, ಅ.12(ಎಸ್ಬಿಡಿ)- ಸುಮಧುರ ಸುಗಮ ಸಂಗೀತ, ಇಂಪಾದ ಹಿಂದೂಸ್ತಾನಿ ಹಾಗೂ ಕೊಳಲು ವಾದನದ ಜುಗಲ್ಬಂದಿ ಸಮ್ಮಿಳಿತದಲ್ಲಿ ಸಂಗೀತ ಪ್ರೇಮಿಗಳು ಮಿಂದೆದ್ದರು. ಮೈಸೂರು ದಸರಾ ಮಹೋತ್ಸವದ ಸಾಂಸ್ಕøತಿಕ ವೇದಿಕೆಯಲ್ಲಿ ಆರನೇ ದಿನ ವಾದ ಸೋಮವಾರ, ಸಂಗೀತ ಲೋಕವೇ ಸೃಷ್ಟಿಯಾಗಿತ್ತು. ಮಳೆಯ ಆತಂಕದ ನಡುವೆಯೂ ನೆರೆದಿದ್ದ ಕಲಾಪ್ರೇಮಿಗಳು ವಿದ್ಯುತ್ ದೀಪಾಲಂಕಾರದಿಂದ ಪ್ರಜ್ವ ಲಿಸುತ್ತಿದ್ದ ಅರಮನೆ ಮುಂಭಾಗ ಸಂಗೀತ ಸಾಗರದಲ್ಲಿ ತೇಲಿದರು. ತಂದೆ-ಮಗ ಜುಗಲ್ಬಂದಿ: ತುಂತುರು ಮಳೆಯಲ್ಲಿ ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಹಾಗೂ ಅವರ ಪುತ್ರ ಷಡಜ್ ಗೋಡ್ಖಿಂಡಿ…
ಅ.16ರಿಂದ 31ರವರೆಗೆ ಮೈಸೂರು ಲಿಟರರಿ ಫೆಸ್ಟಿವಲ್
October 13, 2021ಮೈಸೂರು,ಅ.12(ಪಿಎಂ)-ಮೈಸೂರು ಲಿಟರರಿ ಫೆÇೀರಂ ಚಾರಿಟಬಲ್ ಟ್ರಸ್ಟ್ ಮತ್ತು ಮೈಸೂರು ಬುಕ್ ಕ್ಲಬ್ ಜಂಟಿ ಆಶ್ರಯದಲ್ಲಿ ಅ.16ರಿಂದ 31ರವ ರೆಗೆ `ಮೈಸೂರು ಸಾಹಿತ್ಯ ಸಂಭ್ರಮ-2021 (ಮೈಸೂರು ಲಿಟರರಿ ಫೆಸ್ಟಿವಲ್) ವಚ್ರ್ಯುಯಲ್ ಆಗಿ ನಡೆಯಲಿದೆ. ಬಹುತೇಕ ಸಾಹಿತ್ಯ ಗೋಷ್ಠಿಗಳು ಆನ್ಲೈನ್ನಲ್ಲಿ ನಡೆದರೆ, ಕೆಲವು ವಚ್ರ್ಯುಯಲ್ ಜೊತೆಗೆ ಭೌತಿಕವಾಗಿಯೂ ನಡೆಯಲಿವೆ. ಮೈಸೂರಿನ ನಜರ್ಬಾದಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಅ.5 ರಂದು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆ ಯರ್ ಮೈಸೂರು ಲಿಟರರಿ ಫೆಸ್ಟಿವಲ್ಗೆ ಮುಂಗಡವಾಗಿ ಚಾಲನೆ ನೀಡಿ ದರು. ಈ…
ಅರ್ಜಿ ಹಾಕಿ ಪ್ರಶಸ್ತಿ ಪಡೆಯುವ ವ್ಯವಸ್ಥೆ ಇರಬಾರದು
October 13, 2021ಮೈಸೂರು,ಅ.12(ಪಿಎಂ)-ಪ್ರಶಸ್ತಿಗೆ ಅರ್ಜಿ ಹಾಕುವ ವ್ಯವಸ್ಥೆ ಬದಲು ನಿಜವಾದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುವ ವ್ಯವಸ್ಥೆ ಇರಬೇಕೆಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ ಅಭಿಪ್ರಾಯಪಟ್ಟರು. ಮೈಸೂರಿನ ಚಾಮುಂಡಿಪುರಂನ ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ ಶ್ರೀ ಅಭಯಂ ಫೌಂಡೇಷನ್ ವತಿಯಿಂದ ಮಂಗಳವಾರ ಹಮ್ಮಿ ಕೊಂಡಿದ್ದ `ಕಲಾವಿದರ ದಸರಾ’ ಮತ್ತು ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಕಲಾವಿದರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾ ಡಿದರು. ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುವಂತಹ ವ್ಯವಸ್ಥೆ ಇರಬೇಕು. ರಾಜ್ಯೋತ್ಸವ ಪ್ರಶಸ್ತಿಗೆ…










