ಮೈಸೂರು, ಮಾ.25(ಆರ್ಕೆಬಿ)- ಕೊಯ ಮತ್ತೂರಿನ ಇಶಾ ಫೌಂಡೇಷನ್ ಸಂಸ್ಥಾ ಪಕ ಮುಖ್ಯಸ್ಥ ಸದ್ಗುರು ಜಗ್ಗಿ ವಾಸುದೇವ್ ಗುರುವಾರ ಮೈಸೂರಿನ ಚಾಮುಂಡಿಬೆಟ್ಟ ಪಾದದ ಬಳಿಯ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದುಕೊಂಡರು. ಕಪ್ಪು ಪ್ಯಾಂಟ್, ನೀಲಿ ಪೂರ್ಣ ತೋಳಿನ ಶರ್ಟ್ ಮತ್ತು ಕಪ್ಪು ಬಣ್ಣದ ಮಾಸ್ಕ್ ಧರಿಸಿದ್ದ ಜಗ್ಗಿ ವಾಸುದೇವ್ ತಮ್ಮ ದುಕಾಟಿ ಬೈಕ್ನಲ್ಲಿ ಬೆಂಗಳೂರಿನಿಂದ ಮುಂಜಾನೆ 5 ಗಂಟೆಗೆ ಹೊರಟು, ಬೆಳಿಗ್ಗೆ 8.20ರ ವೇಳೆಗೆ ಸುತ್ತೂರು ಮಠಕ್ಕೆ ಆಗ…
ಭೂಮಿಗೀತದಲ್ಲಿ ಪರ್ವ ರಂಗಪ್ರಸ್ತುತಿ
March 26, 2021ಮೈಸೂರು, ಮಾ.25(ವೈಡಿಎಸ್)- 3 ದಿನಗಳ ಯಶಸ್ವಿ ಪ್ರದರ್ಶನಗೊಂಡ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಮೇರು ಕೃತಿ `ಪರ್ವ’ ಕಾದಂಬರಿ ಆಧರಿಸಿದ ನಾಟ ಕದ ಮೊದಲ ಸಂಚಿಕೆ `ಆದಿಪರ್ವ’ ಗುರು ವಾರ ರಂಗಾಯಣದ ಭೂಮಿಗೀತದಲ್ಲಿ ಪ್ರದರ್ಶನಗೊಂಡಿತು. ಮಾ.26ರ ನಿಯೋಗ ಪರ್ವ, ಮಾ.27ರಂದು `ಯುದ್ಧಪರ್ವ’ ನಾಟಕ ಪ್ರದರ್ಶನಗೊಳ್ಳಲಿದೆ. ಮಾ.28ರ ಬೆಳಗ್ಗೆ 10ಕ್ಕೆ `ಪರ್ವ’ ಪೂರ್ಣ ರಂಗ ಪ್ರಯೋಗ ಏರ್ಪಡಿಸಲಾಗಿದೆ. ರಂಗಾಯಣ, ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಸಹಯೋಗದಲ್ಲಿ ರೂಪು ಗೊಂಡ ಈ ನಾಟಕವನ್ನು `ಆದಿ ಪರ್ವ’, `ನಿಯೋಗ ಪರ್ವ’ ಮತ್ತು…
ವಾಹನ ತಪಾಸಣೆ ವೇಳೆ ಬೈಕ್ ಸವಾರ ಸಾವು ಪ್ರಕರಣ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಪರಿಷತ್ ಸದಸ್ಯ ವಿಶ್ವನಾಥ್
March 26, 2021ಮೈಸೂರು,ಮಾ.25(ಎಂಟಿವೈ)- ವಾಹನ ತಪಾಸಣಾ ನೆಪದಲ್ಲಿ ಬೈಕ್ ಸವಾರನ ಸಾವಿಗೆ ಕಾರಣರಾದ ಪೆÇಲೀಸರಿಗೆ ಪ್ರಶಂಸನಾ ಪತ್ರ ಕೊಡ್ತಿರಾ? ನೀವು ಯಾವ ಸೀಮೆ ಪೆÇಲೀಸ್ ಕಮಿಷನರಯ್ಯ? ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ನಗರ ಪೊಲೀಸ್ ಆಯುಕ್ತರ ವಿರುದ್ಧ ಹರಿಹಾಯ್ದಿದ್ದಾರೆ. ಮೈಸೂರಿನ ಜಲದರ್ಶಿನಿ ಅತಿಥಿ ಗೃಹ ದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೈಸೂರು ರಿಂಗ್ರೋಡ್ನಲ್ಲಿ ಸಂಚಾರಿ ಪೆÇಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ದ್ವಿಚಕ್ರ ವಾಹನ ಸವಾರ, 45 ವರ್ಷದ ಇಂಜಿನಿಯರ್ ಮೃತಪಟ್ಟಿರುವ ಘಟನೆ ಖಂಡನೀಯ. ಮೃತರ ಕುಟುಂಬದ ಸದಸ್ಯರ ಪಾಡೇನು?…
ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ ಸ್ಥಗಿತಕ್ಕೆ ಆಗ್ರಹಿಸಿ ರೈಲ್ವೆ ಮಜ್ದೂರ್ ಯೂನಿಯನ್ ಪ್ರತಿಭಟನೆ
March 26, 2021ಮೈಸೂರು, ಮಾ.25(ಆರ್ಕೆಬಿ)- ರೈಲ್ವೆಯಲ್ಲಿ ನೂತನವಾಗಿ ಅಳವಡಿಸಿರುವ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (ಹ್ಯೂಮನ್ ರಿಸೋರ್ಸ್ ಮ್ಯಾನೇಜ್ಮೆಂಟ್ ಸಿಸ್ಟಂ)ಯಿಂದಾಗಿ ರೈಲ್ವೆ ನೌಕರರಿಗೆ ಆಗುತ್ತಿರುವ ತೊಂದರೆಗಳನ್ನು ವಿರೋಧಿಸಿ ನೈರುತ್ಯ ರೈಲ್ವೆ ಮಜ್ದೂರ್ ಯೂನಿಯನ್ ಆಶ್ರಯದಲ್ಲಿ ಗುರು ವಾರ ಮೈಸೂರಿನ ರೈಲ್ವೆ ವಿಭಾಗೀಯ ತಾಂತ್ರಿಕ ವಿಭಾಗದ ಕಚೇರಿ ಎದುರು ಘೋಷಣೆ ಕೂಗಿ ಪ್ರತಿಭಟನೆ ನಡೆಸಲಾಯಿತು. ನೈರುತ್ಯ ರೈಲ್ವೆ ವಲಯದಲ್ಲಿ ನೂತನವಾಗಿ ಅಳವಡಿಸಿರುವ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ ಕಳೆದ 6 ತಿಂಗ ಳಿಂದಲೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ವ್ಯವಸ್ಥೆ ಯಡಿ ಕಂಪ್ಯೂಟರ್ಗಳಲ್ಲಿ…
ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ತ್ಯಜಿಸಿ, ಬಟ್ಟೆ ಕೈಚೀಲ ಬಳಸಿ
March 26, 2021ಮೈಸೂರು, ಮಾ.25(ಎಂಟಿವೈ)- ಮೈಸೂರು ನಗರದಲ್ಲಿ ಏ.5ರಿಂದ ಪ್ಲಾಸ್ಟಿಕ್ ಬಳಕೆ ನಿಷೇಧಿಸಲು ಜಿಲ್ಲಾಡಳಿತ ನಿರ್ಧ ರಿಸಿರುವ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯಿಂದ ಮೈಸೂರಿನ ಹೃದಯ ಭಾಗದ ವಾಣಿಜ್ಯ ಮಳಿಗೆಗಳ ಮಾಲೀಕರು ಹಾಗೂ ತಳ್ಳುವ ಗಾಡಿ ವ್ಯಾಪಾರಿಗಳಿಗೆ ಕಡ್ಡಾಯವಾಗಿ ಬಟ್ಟೆ ಬ್ಯಾಗ್ ಬಳಸುವಂತೆ ಗುರುವಾರ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ದೇವರಾಜ ಅರಸು ರಸ್ತೆ, ಸಂತೆಪೇಟೆ, ಸಯ್ಯಾಜಿರಾವ್ ರಸ್ತೆ, ವಿನೋಬಾ ರಸ್ತೆ ಮತ್ತಿತರೆಡೆಯ ಮಳಿಗೆಗಳಲ್ಲಿ ಅಧಿಕ ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆ ಯಾಗುತ್ತಿರುವುದನ್ನು ಮನಗಂಡ ಪಾಲಿಕೆ ಸಿಬ್ಬಂದಿ, ಪ್ಲಾಸ್ಟಿಕ್ ಬಳಕೆ ನಿಷೇಧ…
ಭಾರತ್ ಬಂದ್ಗೆ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಬೆಂಬಲ
March 26, 2021ಮೈಸೂರು,ಮಾ.25-ರೈತ ಸಂಘಟನೆಗಳು ಶುಕ್ರವಾರ ಕರೆ ನೀಡಿರುವ ಭಾರತ್ ಬಂದ್ಗೆ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇ ಗೌಡ ಬೆಂಬಲ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ರೈತರು ನಡೆ ಸುತ್ತಿರುವ ಹೋರಾಟ ಪ್ರಾರಂಭ ವಾಗಿ ಮಾ.26ಕ್ಕೆ 4 ತಿಂಗಳು ಪೂರ್ಣಗೊಳ್ಳಲಿದೆ. ಆದರೆ ಪ್ರಧಾನಿ ಮೋದಿ ಅವರು, ಪ್ರತಿಭಟನಾ ನಿರತ ಸ್ಥಳಕ್ಕೆ ಭೇಟಿ ನೀಡದೆ, ಸಂಘಟನಾ ನಾಯಕರ ಜೊತೆ ಒಮ್ಮೆಯೂ ನೇರ ಮಾತುಕತೆ ನಡೆಸದೆ ಇರುವುದು ದುರ್ದೈವದ ಸಂಗತಿ. ಅಲ್ಲದೆ ಮರಣ ಹೊಂದಿದ ಚಳವಳಿ ನಿರತ ರೈತರಿಗೆ ಸಂತಾಪ ಸೂಚಿಸಲಿಲ್ಲ. ಅವರ ಕುಟುಂಬಸ್ಥರಿಗೆ ಸಾಂತ್ವನ…
ಮೈಸೂರು ವಿಜಯನಗರದ ಪಾರ್ಕ್ನಲ್ಲಿ ಪಕ್ಷಿಗಳ ಶಂಕಾಸ್ಪದ ಸಾವು
March 26, 2021ಕಾರಣ ತಿಳಿಯಲು ಪ್ರಯೋಗಾಲಯಕ್ಕೆ ಸ್ಯಾಂಪಲ್ ರವಾನೆ ಮೈಸೂರು,ಮಾ.25(ಆರ್ಕೆ)-ಮೈಸೂರಿನ ವಿಜಯನಗರ ಮೊದಲ ಹಂತದ ಕೊಡವ ಸಮಾಜ ಸಮೀಪದ ಪಾರ್ಕ್ನಲ್ಲಿ ಪಕ್ಷಿಗಳು ಶಂಕಾಸ್ಪದ ರೀತಿ ಸಾವನ್ನಪ್ಪಿರುವುದು ಕಂಡು ಬಂದಿದೆ. ಕಳೆದ 4 ದಿನಗಳ ಹಿಂದೆ 3 ಪಾಂಡಹೆರಾನ್ಸ್ ಪಕ್ಷಿಗಳು ಮೃತಪಟ್ಟಿರು ವುದರ ಬಗ್ಗೆ ವಾಯುವಿಹಾರಿಗಳು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಇವುಗಳ ಸಾವಿಗೆ ಕಾರಣ ತಿಳಿಯಲು ಸ್ಯಾಂಪಲ್ ಅನ್ನು ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ಪಾರ್ಕ್ನ ಒಂದು ಬದಿಯಲ್ಲಿ ಒಳಚರಂಡಿ ನೀರು ನಿಂತಿದ್ದು, ಮೈಸೂರು ಪಾಲಿಕೆ…
ಕ್ರೀಡಾ ಪ್ರತಿಭಾನ್ವೇಷಣೆ; 280 ‘ಉತ್ಸಾಹಿ’ ವಿದ್ಯಾರ್ಥಿಗಳು ಭಾಗಿ
March 26, 2021ಮೈಸೂರು,ಮಾ.25(ಎಂಟಿವೈ)-ಕ್ರೀಡಾ ಚಟು ವಟಿಕೆಗಳ ಮೂಲಕ ಮಕ್ಕಳಲ್ಲಿರುವ ಸಾಮಥ್ರ್ಯ, ಪ್ರತಿಭೆ ಗುರುತಿಸುವ ನಿಟ್ಟಿನಲ್ಲಿ ಮೈಸೂರಿನ ನಜರಬಾದ್ನಲ್ಲಿ ರುವ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆರಂಭ ವಾದ 2 ದಿನಗಳ `ಕ್ರೀಡಾ ಪ್ರತಿಭಾನ್ವೇಷಣೆ’ (ಟಾಲೆಂಟ್ ಸರ್ಚ್) ಶಿಬಿರದಲ್ಲಿ 280 ವಿದ್ಯಾರ್ಥಿಗಳು ಉತ್ಸಾಹ ದಿಂದ ಪಾಲ್ಗೊಂಡು ಕ್ರೀಡಾಸಕ್ತಿ ಪ್ರದರ್ಶಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬೆಂಗಳೂರಿನ ಕ್ರೀಡಾ ವಿಜ್ಞಾನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನಡೆದ ಕ್ರೀಡಾ ಪ್ರತಿಭಾನ್ವೇಷಣೆ ಶಿಬಿರದಲ್ಲಿ ಮೈಸೂರು ನಗರದ ವಿವಿಧೆಡೆಯ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ 8-15 ವರ್ಷ…
ಮೈಸೂರಿನ ಭಾರತೀಯ ವಿದ್ಯಾ ಭವನ ವಿದ್ಯಾರ್ಥಿ ಟಿ.ಕೆ.ಬೋಪಣ್ಣ ಖೇಲೋ ಇಂಡಿಯಾಕ್ಕೆ ಆಯ್ಕೆ
March 25, 2021ಮೈಸೂರು,ಮಾ.24-ಮೈಸೂರಿನ ವಿಜಯನಗರದ ಭಾರತೀಯ ವಿದ್ಯಾ ಭವನ ಶಾಲೆಯ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿ ರುವ ಟಿ.ಕೆ.ಬೋಪಣ್ಣ ಖೇಲೋ ಇಂಡಿಯಾಗೆ ಆಯ್ಕೆಯಾಗಿದ್ದಾರೆ. ಮ್ಯಾರಥಾನ್ ಓಟಗಾರನಾಗಿ ಸಾಧನೆ ಮಾಡಿದ್ದ ಕ್ರೀಡಾಪಟು ಟಿ.ಕೆ.ಬೋಪಣ್ಣ ಅವರನ್ನು ಭಾರತೀಯ ವಿದ್ಯಾ ಭವನ ಶಾಲೆ ಯಲ್ಲಿ ಗೌರವಿಸಲಾಯಿತು. 36ನೇ ಕರ್ನಾಟಕ ರಾಜ್ಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ 800 ಮೀಟರ್ ಓಟದಲ್ಲಿ ಚಿನ್ನದ ಪದಕ. ಕರ್ನಾಟಕ ರಾಜ್ಯ ಕ್ರಾಸ್ ಕಂಟ್ರಿ ಚಾಂಪಿಯನ್ ಶಿಪ್ -2021 ನಡೆಸಿದ 2 ಕಿ.ಮೀ ಕ್ರಾಸ್ ಕಂಟ್ರಿ ರೇಸ್ನಲ್ಲಿ ಚಿನ್ನದ ಪದಕ. ಅಸ್ಸಾಂನ…
ಪರಂಪರಾಗತ ಆಹಾರ ಪದ್ಧತಿ ಕುರಿತ ಪ್ರಾತ್ಯಕ್ಷಿಕೆ, ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ
March 25, 2021ಮೈಸೂರು, ಮಾ.24(ಆರ್ಕೆಬಿ)-ರಾಷ್ಟ್ರೀಯ ಪೋಷಣೆ ಅಭಿಯಾನದಡಿ ಬುಧವಾರ ಮೈಸೂರಿನ ಜಿಪಂ ಸಭಾಂಗಣದ ಆವರಣದಲ್ಲಿ ಪರಂಪರಾಗತ ಅಹಾರ ಪದ್ಧತಿಗಳ ಕುರಿತ ಪ್ರಾತ್ಯಕ್ಷಿಕೆ ಮತ್ತು ಜಾಗೃತಿ ಕಾರ್ಯಕ್ರಮ ನಡೆಯಿತು. ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋ ಜಿಸಿದ್ದ ಕಾರ್ಯಕ್ರಮಕ್ಕೆ ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ ಚಾಲನೆ ನೀಡಿದರು. ಗರ್ಭಿಣಿಯರು ಮತ್ತು ಮಕ್ಕಳಲ್ಲಿ ಉಂಟಾಗುವ ರಕ್ತಹೀನತೆ ಹೋಗಲಾಡಿಸುವ ನಿಟ್ಟಿನಲ್ಲಿ ಪೋಷಕಾಂಶವುಳ್ಳ ಆಹಾರದ ಬಗ್ಗೆ ಜನಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು. ವಿವಿಧ ಅಂಗನವಾಡಿ ಶಿಕ್ಷಕಿಯರು ತಾವೇ ತಯಾರಿಸಿದ ಕೋಸಂಬರಿ,…










