ಮೈಸೂರು, ಮಾ.23(ಆರ್ಕೆ)-ಬೋಗಾದಿ ಬಳಿ ಪೊಲೀಸರಿಂದ ವಾಹನ ತಪಾಸಣೆ ವೇಳೆ ಅಮಾ ಯಕ ಬಲಿಯಾಗಿದ್ದಾನೆ. ಈ ಬೈಕ್ ಸವಾರನ ಸಾವಿಗೆ ಪೊಲೀಸರ ಅವೈಜ್ಞಾನಿಕ ವಾಹನ ತಪಾಸಣೆ ವಿಧಾನವೇ ಕಾರಣ. ಸಂಬಂಧಿಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಂತ್ರಸ್ತನ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕು. ಇನ್ನು ಮುಂದೆ ಈ ರೀತಿಯ ಅವೈಜ್ಞಾನಿಕ ತಪಾಸಣೆ ನಿಲ್ಲಿಸಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಮಂಗಳವಾರ ಬೆಳಗ್ಗೆ ಹಿನಕಲ್ ಬಳಿ ರಿಂಗ್ ರೋಡ್ ಜಂಕ್ಷನ್ನಲ್ಲಿ ಪ್ರತಿ ಭಟನೆ ನಡೆಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಪೊರೇಟರ್ ಕೆ.ವಿ….
ಮೈಸೂರಿನ ಕಲ್ಪನಾ ಕುಟ್ಟಪ್ಪ ಭಾಗಿ
March 24, 2021ಇಲ್ಲಿ ಆಯ್ಕೆಯಾದರೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಅರ್ಹತೆ ಮೈಸೂರು,ಮಾ.23(ಪಿಎಂ)- ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಹಲವು ಚಿನ್ನದ ಪದಕ ಗಳಿಸುವ ಮೂಲಕ ಉತ್ತಮ ಸಾಧನೆಗೈದ ಮೈಸೂರಿನ ಕಲ್ಪನಾ ಕುಟ್ಟಪ್ಪ ಏ.4ರಿಂದ 10ರವರೆಗೆ ಚಂಡೀಗಢದಲ್ಲಿ ನಡೆಯುವ ರಾಷ್ಟ್ರೀಯ ಸ್ಕೇಟಿಂಗ್ ಚಾಂಪಿಯನ್ಶಿಪ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿದ್ದಾಳೆ. ತನ್ನ 5ನೇ ವಯಸ್ಸಿನಲ್ಲಿಯೇ ಸ್ಕೇಟಿಂಗ್ ಅಭ್ಯಾಸ ಪ್ರಾರಂಭಿ ಸಿದ್ದ ಕಲ್ಪನಾ ಕುಟ್ಟಪ್ಪ, ಮೊದಲಿಗೆ ವಿಜಯನಗರದ ಮುನಿಸ್ವಾಮಿ ರೆಡ್ಡಿ ಎಂಬುವರ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಿದಳು. ಬೆಂಗಳೂರಿನ ಪ್ರತೀಕ್ರಾಜ್ ಅವರಲ್ಲಿ ಉನ್ನತ ತರಬೇತಿ ಪಡೆದ…
‘ಆಯಿಷ್’ನಿಂದ ಎಲ್ಇಡಿ ಬೃಹತ್ ಪರದೆ ಮೂಲಕ ಜನಜಾಗೃತಿ
March 24, 2021ಮೈಸೂರು, ಮಾ.23(ಎಂಕೆ)- ಮೈಸೂರಿನಲ್ಲಿ ರುವ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯು (ಆಯಿಷ್) ಬೃಹತ್ ಎಲ್ಇಡಿ ಪರದೆಯಲ್ಲಿ ತನ್ನೆಲ್ಲಾ ಕಾರ್ಯಚಟುವಟಿಕೆಗಳನ್ನು ಪ್ರಸಾರ ಮಾಡುವ ಮೂಲಕ ಸಾರ್ವಜನಿಕರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಮಾ.3ರ ವಿಶ್ವ ಶ್ರವಣ ದಿನದಂಗವಾಗಿ ಆಯಿಷ್ ಸಂಸ್ಥೆ ಆವರಣಕ್ಕೆ ಹೊಂದಿಕೊಂಡಂತಿರುವ ಶಂಕರ್ ನಾಗ್ ವೃತ್ತ(ಆಯಿಷ್ ವೃತ್ತ)ದ ಸಿಗ್ನಲ್ ಸಮೀಪ 6 ಲಕ್ಷ ರೂ. ವೆಚ್ಚದಲ್ಲಿ ಬೃಹತ್ ಎಲ್ಇಡಿ ಪರದೆ ಅಳವಡಿಸಿದ್ದು, ನಿತ್ಯ ಬೆಳಿಗ್ಗೆಯಿಂದ ರಾತ್ರಿ ವರೆಗೂ ವಾಕ್ ಮತ್ತು ಶ್ರವಣ ದೋಷ ಸಂಬಂ ಧಿತ ಮಾಹಿತಿ ಹಾಗೂ…
ಕೋವಿಶೀಲ್ಡ್ ಲಸಿಕೆ ಅಡ್ಡ ಪರಿಣಾಮವಿಲ್ಲ; ಎಲ್ಲರೂ ಪಡೆಯಿರಿ
March 24, 2021ಪೀಪಲ್ಸ್ ಅಸೋಸಿಯೇಷನ್ ಫಾರ್ ಜೆರಿಯಾಟ್ರಿಕ್ ಎಂಪವರ್ಮೆಂಟ್ ಸಲಹೆ ಮೈಸೂರು,ಮಾ.23(ಆರ್ಕೆಬಿ)- ಕೊರೊನಾ ಸೋಂಕು ಇರಲಿ, ಇಲ್ಲದಿರಲಿ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಾರ ಕೋವಿ ಶೀಲ್ಡ್ ಲಸಿಕೆಯನ್ನು ಎಲ್ಲರೂ ಪಡೆಯ ಬಹುದು. ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲ ಎಂದು ಮೈಸೂರಿನ ಪೀಪಲ್ಸ್ ಅಸೋಸಿಯೇಷನ್ ಫಾರ್ ಜೆರಿಯಾಟ್ರಿಕ್ ಎಂಪವರ್ಮೆಂಟ್ (ಪೇಜ್) ಮೈಸೂರು ಶಾಖೆ ಸಲಹೆ ನೀಡಿದೆ. ಮೈಸೂರು ಪತ್ರಕರ್ತರ ಭವನದಲ್ಲಿ ಮಂಗಳ ವಾರ ಕೋವಿಡ್ ಲಸಿಕೆಯ ಬಗ್ಗೆ ಇರುವ ಅಪನಂಬಿಕೆ ಮತ್ತು ನಿಜ ಚಿತ್ರಣ’ ಕುರಿತ `ಸಂವಾದ’ ಕಾರ್ಯಕ್ರಮದಲ್ಲಿ ಪೇಜ್…
ಮಾರ್ಚ್ 29ರಿಂದ ಮೈಸೂರು-ಚೆನ್ನೈ ನಡುವೆ ಮತ್ತೊಂದು ವಿಮಾನ ಹಾರಾಟ
March 24, 2021ಮೈಸೂರು, ಮಾ.23(ಆರ್ಕೆ)- ಮಾರ್ಚ್ 29ರಿಂದ ಮೈಸೂರು ಮತ್ತು ಚೆನ್ನೈ ನಗರಗಳ ನಡುವೆ ಮತ್ತೊಂದು ವಿಮಾನ ಹಾರಾಟ ಆರಂಭಿಸಲಿದೆ. ಪ್ರಯಾಣಿಕರಿಂದ ಬೇಡಿಕೆ ಹೆಚ್ಚಾಗಿರುವುದರಿಂದ ಈಗಾಗಲೇ ಕಾರ್ಯಾಚರಣೆ ನಡೆಯುತ್ತಿರುವ ವಿಮಾ ನದ ಜೊತೆಗೆ ಮೈಸೂರು-ಚೆನ್ನೈ ನಡುವೆ ಮತ್ತೊಂದು ವಿಮಾನ ಸೇವೆಯನ್ನು ಪರಿಚಯಿಸುತ್ತಿದೆ ಎಂದು ಮೈಸೂರಿನ ವಿಮಾನ ನಿಲ್ದಾಣ ನಿರ್ದೇಶಕ ಆರ್.ಮಂಜುನಾಥ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಮಾರ್ಚ್ 29ರಿಂದ ವಾರದಲ್ಲಿ ಮೂರು ದಿನ ಮೈಸೂರಿನಿಂದ ಚೆನ್ನೈಗೆ ವಿಮಾನ ಹಾರಾಟ ನಡೆಸಲು ಇಂಡಿಗೋ ಏರ್ಲೈನ್ಸ್ ಸಂಸ್ಥೆ ನಿರ್ಧರಿಸಿದೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್…
ಟಿಪ್ಪರ್ ಹರಿದು ಬೈಕ್ ಸವಾರ ದುರ್ಮರಣ
March 23, 2021ಮೈಸೂರು,ಮಾ.22-ಪೊಲೀಸರ ವಾಹನ ತಪಾ ಸಣೆ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಬೈಕ್ ಸವಾರನ ಮೇಲೆ ಟಿಪ್ಪರ್ ಹರಿದು ಆತ ಸ್ಥಳದಲ್ಲೇ ಮೃತಪಟ್ಟಿ ರುವ ಘಟನೆ ಮೈಸೂರಿನಲ್ಲಿ ಸೋಮವಾರ ಸಂಜೆ ನಡೆದಿದೆ. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಸ್ಥಳದಲ್ಲಿದ್ದ ಪೊಲೀಸರನ್ನು ಮನಸ್ಸೋ ಇಚ್ಛೆ ಥಳಿಸಿದ್ದಲ್ಲದೆ, ಗರುಡ ವಾಹನವನ್ನು ಉರುಳಿಸಿ, ಜಖಂಗೊಳಿಸಿದ್ದಾರೆ. ಮೈಸೂರಿನ ಬೋಗಾದಿ-ಹಿನಕಲ್ ಮಾರ್ಗ ಮಧ್ಯೆ ರಿಂಗ್ರಸ್ತೆಯಲ್ಲಿ ಆರ್ಎಂಪಿ ಕ್ವಾಟ್ರರ್ಸ್ ಸರ್ಕಲ್ ಬಳಿ ಈ ದುರ್ಘಟನೆ ಸಂಭವಿಸಿದ್ದು, ಮೂಲತಃ ಹೆಚ್.ಡಿ.ಕೋಟೆ ತಾಲೂಕು, ಕೆ.ಕನ್ನೇನಹಳ್ಳಿಯ ನಿವಾಸಿ ದೇವರಾಜು(42) ಸ್ಥಳ ದಲ್ಲೇ ಮೃತಪಟ್ಟಿದ್ದಾರೆ. ಹಿಂಬದಿ…
ನಾಳೆ ಗಾನ ಗಂಧರ್ವ ಎಸ್ಪಿಬಿಗೆ ಗೀತನಮನ
March 23, 2021ಮೈಸೂರು,ಮಾ.22(ಎಂಟಿವೈ)-ಹಿರಿಯ ಗಾಯಕ, ಗಾನ ಗಂಧರ್ವ ಡಾ.ಎಸ್.ಪಿ.ಬಾಲಸುಬ್ರ ಹ್ಮಣ್ಯಂ ಸ್ಮರಣಾರ್ಥ ಮಾ.24ರಂದು ಸಂಜೆ 4.30ಕ್ಕೆ ನಾದಬ್ರಹ್ಮ ಸಂಗೀತ ಸಭಾದಲ್ಲಿ `ನೂರೊಂದು ನೆನಪು ಹಾಡಾಗಿ ಬಂತು’ ಗೀತ ನಮನ ಹಾಗೂ ಸಾಧಕರಿಗೆ `ಜನ ಚೈತನ್ಯ’ ಪುರಸ್ಕಾರ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ಜನ ಚೈತನ್ಯ ಫೌಂಡೇಷನ್ ಅಧ್ಯಕ್ಷ ಆರ್.ಲಕ್ಷ್ಮಣ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಗಾಯಕ ಡಾ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಗೀತ ನಮನದ ಮೂಲಕ ಗೌರವ ಸಮರ್ಪಿ…
ಮೈಸೂರಲ್ಲಿ ಶೀಘ್ರ ಚಿತ್ರನಗರಿ ನಿರ್ಮಾಣಕ್ಕೆ ನಟ ಜೆಪಿ ಮನವಿ
March 23, 2021ಮೈಸೂರು,ಮಾ.22(ಎಂಟಿವೈ)-ಸಾಂಸ್ಕೃತಿಕ ನಗರಿ ಮೈಸೂರಲ್ಲೇ ಚಿತ್ರ ನಗರಿ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿರುವುದು ಸ್ವಾಗತಾರ್ಹ ಸಂಗತಿಯಾಗಿದ್ದು, ತ್ವರಿತವಾಗಿ ಚಿತ್ರನಗರಿ ನಿರ್ಮಾಣ ಕಾರ್ಯ ಆರಂಭಿಸುವಂತೆ ನಟ, ನಿರ್ಮಾ ಪಕ ಎಸ್.ಜಯಪ್ರಕಾಶ್ ಮನವಿ ಮಾಡಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕರುನಾಡಿನ ಸಾಂಸ್ಕøತಿಕ ನಗರಿ ಎಂದೇ ಪ್ರಸಿದ್ಧಿ ಪಡೆದಿರುವ ಮೈಸೂರಲ್ಲೇ ಫಿಲಂ ಸಿಟಿ(ಚಿತ್ರನಗರಿ) ಸ್ಥಾಪಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮ ತಿಸಿರುವುದು ಹರ್ಷದಾಯಕ ಬೆಳವಣಿಗೆ. ಕನ್ನಡ ಚಲನ ಚಿತ್ರೋದ್ಯಮದ ಚಟುವಟಿಕೆಗಳಿಗೆ ಮೈಸೂರು ನಗರವೂ ಅತ್ಯುತ್ತಮವಾದ ವಾತಾವರಣದಿಂದ ಕೂಡಿದೆ….
ವೀರ ಭಗತ್ಸಿಂಗ್ರನ್ನು ಎಡಪಂಥೀಯರಂತೆ ಚಿತ್ರಿಸುವ ಪ್ರಯತ್ನ: ವೆಂಕಟರಾಮ್ ಬೇಸರ
March 23, 2021ಮೈಸೂರು, ಮಾ.22(ಆರ್ಕೆಬಿ)- ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ವೀರ ಭಗತ್ಸಿಂಗ್ ಅವರನ್ನು ಎಡಪಂಥೀಯರಂತೆ ಚಿತ್ರಿಸುವ ಪ್ರಯತ್ನ ನಡೆದಿದೆ ಎಂದು ಆರ್ಎಸ್ಎಸ್ ಮೈಸೂರು ಮತ್ತು ಮಂಗಳೂರು ಪ್ರಾಂತದ ಪ್ರಮುಖ ವೆಂಕಟರಾಮ್ ಬೇಸರ ವ್ಯಕ್ತಪಡಿಸಿದರು. ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಅನಾ ಥಾಲಯದಲ್ಲಿ ವೀರ ಸಾವರ್ಕರ್ ಯುವ ಬಳಗದಿಂದ ಏರ್ಪಡಿಸಿದ್ದ ಹುತಾತ್ಮರ ದಿನದಲ್ಲಿ ಹುತಾತ್ಮ ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ಅವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಬಳಿಕ ಮಾತನಾಡಿದರು. ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿರುವ ಮಹಾನ್ ವ್ಯಕ್ತಿಗಳನ್ನು ಯಾವುದೇ…
ಸಿಡಿ ಪ್ರಕರಣ: ತಪ್ಪಿತಸ್ಥರಿಗೆ ಶಿಕ್ಷೆಯಾಗಲು
March 23, 2021ಸಿಬಿಐ ತನಿಖೆ ಅನಿವಾರ್ಯ: ಶಿವರಾಮೇಗೌಡ ಮೈಸೂರು,ಮಾ.22(ಎಂಟಿವೈ)-ಸಮಾಜದಲ್ಲಿ ರಾಜಕಾರಣಿಗಳಿಗೆ ಗೌರವ ಹಾಗೂ ವಿಶೇಷ ಸ್ಥಾನ ಮಾನವಿರುತ್ತದೆ. ಆದರೆ ಸಿಡಿ ಪ್ರಕರಣದಿಂದಾಗಿ ನಾವು ಇಂತಹ ಪರಿಸ್ಥಿತಿಯಲ್ಲಿ ಇದ್ದೇವಾ ಎಂಬ ಜಿಜ್ಞಾಸೆ ಕಾಡುತ್ತಿದೆ. ಮಾಜಿ ಸಚಿವ ರಮೇಶ್ ಜಾರಕಿಹೋಳಿ ಸಿಡಿ ಪ್ರಕರಣದ ಸತ್ಯಾಸತ್ಯತೆ ತಿಳಿದು, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮಾಜಿ ಸಂಸದ ಎಲ್. ಆರ್.ಶಿವರಾಮೇಗೌಡ ಒತ್ತಾಯಿಸಿದ್ದಾರೆ. ಮೈಸೂರಲ್ಲಿ ಸೋಮವಾರ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಸರ್ಕಾರದ ನಡೆಯನ್ನು ಗಮನಿಸಿದರೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ…










